Tag: ಅಕ್ಷತಾ

  • ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

    ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

    ಬಿಗ್ ಬಾಸ್ ನೀಡಿದ ಆಟಗಳು ಸಖತ್ ಮಜಾ ಕೊಟ್ಟಿದೆ. ಫನ್ ಎನಿಸುವ ಈ ಆಟದಲ್ಲಿ ಮನೆಯ ಸದಸ್ಯರ ನೆನಪಿನ ಶಕ್ತಿಯನ್ನು ಪರೀಕ್ಷಿಸುವುನ್ನು ನೀಡಡಲಾಗಿತ್ತು. ಅದರಲ್ಲಿ ಪವರ್ ಸ್ಟಾರ್ ಟೀಂ 110, ಟೀಂ ಜಿಂಕಾಲಕ ಟೀಂ ಪಡೆದುಕೊಂಡಿದ್ದು 20 ಅಂಕ. ಈ ಆಟದಲ್ಲಿ ಟೀಂ ಪವರ್ ಸ್ಟಾರ್ ನಿಂದ ಜಯಶ್ರೀ ಬಂದಿದ್ದರು. ಹೆಚ್ಚು ಉತ್ತರವನ್ನು ಅವರೇ ನೀಡಿದ್ದರು.

    ಗೆದ್ದ ಬಳಿಕ ಚೈತ್ರಾ ಬಳಿ ಆ ಖುಷಿಯನ್ನು ವ್ಯಕ್ತಪಡಿಸಿದರು. ಒಬ್ಬರಿಗೆ ಶಕ್ತಿ ಕೊಟ್ಟರೆ ಇನ್ನೊಬ್ಬರಿಗೆ ಯುಕ್ತಿ ಕೊಟ್ಟಿರುತ್ತಾನೆ ಎಂದು ಅವತ್ತೇ ಹೇಳಿದ್ದೆ ಅಂತ ಕುಣಿದು ಕುಪ್ಪಳಿಸಿದ್ದಾಳೆ. ಬಳಿಕ ದೇವರ ಬಳಿ ಹೋಗಿ ತನ್ನ ಕೋರಿಕೆ ಈಡೇರಿಸಿದ್ದಕ್ಕಾಗಿ ಖುಷಿ ವ್ಯಕ್ತಪಡಿಸುತ್ತಿದ್ದರು. ಈ ಗೆಲುವು ತುಂಬಾ ಮುಖ್ಯವಾಗಿತ್ತು ಬೇಕೆ ಬೇಕು ಅಂತ. ದೇವರು ನಂಗೆ ಆ ಗೆಲುವು ಕೊಟ್ಟ. ಥ್ಯಾಂಕ್ಯೂ ಥ್ಯಾಂಕ್ಯೂ ಅಂತ ಮೂರ್ನಾಲ್ಕು ಸಲ ಹೇಳಿದ ಜಯಶ್ರೀ, ಲೈಫ್ ನಲ್ಲಿ ಸೋತವರಿಗೆ ಹಠ ಇರುತ್ತೆ ಅಂತ ನಾನು ಎಲ್ಲರನ್ನು ಕರೆದುಕೊಂಡೆ. ನಾನು ಸದಸ್ಯರನ್ನು ಸೆಲೆಕ್ಟ್ ಮಾಡಿದಾಗ ಇವಳು ದಡ್ಡಿ, ಅವಳು ಬುದ್ಧಿವಂತೆ, ಇನ್ಯಾರೋ ಕ್ಲೆವರ್, ದಡ್ಡತನ ಮಾಡಿಕೊಂಡಳು ಅಂತ ಇನ್ಯಾರೋ ಮಾತನಾಡಿಕೊಂಡರು ಎಂದು ಜಯಶ್ರೀ ಹೇಳಿದ್ದೇ ತಡ ದೊಡ್ಡ ಗಲಾಟೆಯೇ ನಡೆದಿದೆ.

    ಅಲ್ಲಿಯೇ ಇದ್ದ ಅಕ್ಷತಾ ಅದಕ್ಕೆ ಕ್ಲಾರಿಟಿ ಕೊಡುವುದಕ್ಕೆ ಬಂದಾಗ, ಜಯಶ್ರೀ ತಿರುಗೇಟು ನೀಡಿದ್ದಾಳೆ. ನಾನು ಖುಷಿಯಲ್ಲಿದ್ದೀನಿ. ಆ ಖುಷಿ ಮೂಮೆಂಟ್ ಎಂಜಾಯ್ ಮಾಡಬೇಕು. ನಿನ್ನ ಮಾತು ಕೇಳುವುದಕ್ಕೆ ಇಷ್ಟಪಡಲ್ಲ ಎಂದು ಕಿವಿ ಮುಚ್ಚಿಕೊಂಡಿದ್ದಾಳೆ. ಇದು ಸ್ಟುಪ್ಪಿಡಿಟಿ. ಆಕೆ ಬೆಳಗ್ಗೆನೆ ಮೆನ್ಶನ್ ಮಾಡಿದ್ದಳು. ಸೋನುನು ಏನೂ ಇಲ್ಲ. ಒಂದು ಟಾಸ್ಕ್ ಅಷ್ಟೆ ವಿನ್ ಆಗಿರೋದು ಅಂತ ಹೇಳಿದ್ದಳು ಎಂದಾಗ ಮತ್ತೆ ಜಯಶ್ರೀ ತಿರುಗಿಬಿದ್ದಿದ್ದಾಳೆ. ಬೇರೆಯವರನ್ನ ದಡ್ಡರು ಅಂತ ಹೇಳಿಲ್ಲ ಹೋಗಮ್ಮ ಸುಮ್ಮನೆ ಎಂದು ರೇಗಿದ್ದಾಳೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಆದರೆ ಇಷ್ಟಕ್ಕೆ ಅಕ್ಷತಾ ಬಿಡಬೇಕಲ್ಲ. ನೋವೇ ಚಾನ್ಸೆ ಇಲ್ಲ. ನನ್ನ ಖುಷಿ ಮೂಮೆಂಟ್ ನ ಎಂಜಾಯ್ ಮಾಡುವುದಕ್ಕೆ ಬಿಡು ಅಂತ ಕಿವಿ ಮುಚ್ಚಿಕೊಂಡು ಓಡಿ ಹೋಗಿದ್ದ ಜಯಶ್ರೀ ಹಿಂದೆ ಹಿಂದೆಯೇ ಅಕ್ಷತಾ ಹೋಗಿದ್ದಾಳೆ. ಮಾತನಾಡುವಾಗ ಯೋಚನೆ ಮಾಡಿ ಮಾತಾಡು ಜಯಶ್ರೀ. ನಾನು ಖುಷಿನೇ ಪಟ್ಟಿದ್ದೀನಿ. ಅದರೆ ಅದನ್ನು ಅಷ್ಟು ದೊಡ್ಡದ್ದನ್ನು ಮಾಡಿ ಮಾತಾಡುವ ಅವಶ್ಯಕತೆ ಇಲ್ಲ ಎಂದು ಅಕ್ಷತಾ ಹೇಳಿದ್ದಾಳೆ. ಇನ್ನು ಜಯಶ್ರೀ ಕೂಡ ಅದೇ ಸ್ಟೈಲ್ ನಲ್ಲಿ ಮನೆಯಲ್ಲೆಲ್ಲಾ ಓಡಾಡಿ, ನಾನು ದೇವರ ಹತ್ತಿರ ಮಾತನಾಡುವುದಕ್ಕೂ ಬಿಡಲ್ಲ ಎಂದು ಗೋಳಾಡಿದ್ದಾಳೆ.

    ಇತ್ತ ಸೋನು ಮತ್ತು ರಾಕೇಶ್ ಕುಳಿತಿದ್ದಾಗ ಅಕ್ಷತಾ ನಡೆದ್ದನ್ನು ಹೇಳಿದ್ದಾಳೆ. ದೇವರತ್ರ ನಿಂತು ಎಲ್ಲಾ ಹೇಳುತ್ತಿದ್ದಳು. ಕ್ಲೆವರ್ ಚಾಯ್ಸ್ ಬಗ್ಗೆ ಹೇಳುತ್ತಿದ್ದಳು. ಆ ಮಾತನ್ನು ನನಗೆ ಹೇಳಿದ್ದು. ಎಲ್ಲಾರು ನನ್ನ ಡಬ್ಬ ಅಂತ ಅಂದುಕೊಂಡಿದ್ದರು ಅಂತ ಬೇರೆ ಬೇರೆ ಮಾತು ಬಂತು. ಆಗ ನಾನು ಹೋಗಿ ಹೇಳಿದೆ. ಜಯಶ್ರೀ ಅದು ಹಂಗ್ ಇರಲಿಲ್ಲ. ನೀನು ಸೋನು ಇದ್ದರೂ ನಡೆಯುತ್ತೆ. ಇಲ್ಲದೆ ಇದ್ದರೂ ನಡೆಯುತ್ತೆ ಅಂತ ಬೆಳಗ್ಗೆ ಹೇಳಿದ್ದೆ. ಅದನ್ನು ಓಪನ್ ಮಾಡಿರಲಿಲ್ಲ ಈಗ ಓಪನ್ ಮಾಡಿದೆ ಎಂದಿದ್ದೆ ತಡ, ಅಕ್ಷತಾ ಮಾತಿಗೆ ಆ ಕಡೆ ಸೋನು ಕೆಂಡಾಮಂಡಲವಾಗಿದ್ದಾಳೆ. ಇತ್ತ ಜಯಶ್ರೀ, ಚೈತ್ರಾ, ನಂದಿನಿ ಮುಂದೆ ಎಲ್ಲಾ ಅಳುತ್ತಲೇ ಹೇಳಿದ್ದಾಳೆ. ನಾನು ಖುಷಿಯಲ್ಲಿದ್ದಾಗ ಬಂದಿದ್ದಾಳೆ. ನಂದೊಂದು ಎಲ್ಲಿ ಇಡಲಿ ಅಂತ ಬರುತ್ತಾಳೆ ಎಂದಾಗ ನಂದಿನಿ ಕೂಡ ಜಯಶ್ರೀಗೆ ಸಮಾಧಾನ ಮಾಡಿದ್ದಾಳೆ.

    Live Tv
    [brid partner=56869869 player=32851 video=960834 autoplay=true]

  • ಸೋನು ಶ್ರೀನಿವಾಸ್ ಗೌಡಗೆ ಫೀಡಿಂಗ್ ಬಾಟಲ್ ಕೊಟ್ಟು ‘ಬಾಯಲ್ಲಿ ಇಟ್ಕೋ ಶಾಂತವಾಗ್ತಿಯಾ’ ಎಂದು ಬುದ್ದಿ ಹೇಳಿದ ಅಕ್ಷತಾ

    ಸೋನು ಶ್ರೀನಿವಾಸ್ ಗೌಡಗೆ ಫೀಡಿಂಗ್ ಬಾಟಲ್ ಕೊಟ್ಟು ‘ಬಾಯಲ್ಲಿ ಇಟ್ಕೋ ಶಾಂತವಾಗ್ತಿಯಾ’ ಎಂದು ಬುದ್ದಿ ಹೇಳಿದ ಅಕ್ಷತಾ

    ಇಂದು ಬಿಗ್ ಬಾಸ್ ಮನೆಯಲ್ಲಿ ಇಷ್ಟಕಷ್ಟ ಎನ್ನುವ ಆಟವೊಂದನ್ನು ಏರ್ಪಡಿಸಲಾಗಿತ್ತು. ಈ ಆಟಕ್ಕಾಗಿಯೇ ಹಲವು ವಸ್ತುಗಳನ್ನು ಬಾಕ್ಸ್ ನಲ್ಲಿ ತಂದಿರಿಸಲಾಗಿತ್ತು. ಆ ಬಾಕ್ಸ್ ನಲ್ಲಿ ಗೊಂಬೆ, ಹಾರ್ಟ್, ಫೀಡಿಂಗ್ ಬಾಟಲ್ ಸೇರಿದಂತೆ ಹಲವು ವಸ್ತುಗಳು ಇದ್ದವು. ಆ ವಸ್ತುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು, ತಮಗಿಷ್ಟ ಪಟ್ಟವರಿಗೆ ಅದನ್ನು ಕೊಡುವುದು ಈ ಆಟದ ಉದ್ದೇಶವಾಗಿತ್ತು. ಅಲ್ಲದೇ, ಅದನ್ನು ಯಾಕೆ ಆಯ್ಕೆ ಮಾಡಿಕೊಂಡರು ಮತ್ತು ಅದನ್ನು ಇಷ್ಟದವರಿಗೆ ಕೊಡುವುದಕ್ಕೆ ಕಾರಣವನ್ನೂ ಹೇಳಬೇಕಿತ್ತು.

    ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರದ್ದೇ ಮಾತು. ಅತೀ ಹೆಚ್ಚು ಮಾತನಾಡುವ ಸ್ಪರ್ಧಿ ಎಂದು ಕೆಲವರು ಮನೆಯಲ್ಲೇ ಬೇಸರ ಮಾಡಿಕೊಂಡಿದ್ದಾರೆ. ಫಿಲ್ಟರ್ ಇಲ್ಲದೇ ಮಾತನಾಡುತ್ತಾರೆ ಎನ್ನುವ ಕಾರಣಕ್ಕಾಗಿ ಸುದೀಪ್ ಅವರಿಂದಲೂ ಸೋನು ಬುದ್ದಿ ಹೇಳಿಕೊಂಡಿದ್ದಾರೆ. ಅಂತಹ ಸೋನುಗೆ ಫೀಡಿಂಗ್ ಬಾಟಲು ಕೊಟ್ಟು ಅಚ್ಚರಿ ಮೂಡಿಸಿದ್ದಾರೆ ಅಕ್ಷತಾ. ಈ ಮನೆಯಲ್ಲಿ ಸೋನು ಮಾತಾಡೋ ಮಾತುಗಳು ಎಫೆಕ್ಟ್ ಆಗ್ತಾವು. ಮಾತಾಡ್ಬೇಕು ಅನಿಸ್ತಾಗ ಈ ಬಾಟ್ಲು ಬಾಯಲ್ಲಿ ಇಟ್ಕೋ ಶಾಂತಾಗ್ತಿಯಾ ಎಂದು ಬುದ್ದಿ ಹೇಳಿದ್ದಾರೆ. ಇದನ್ನೂ ಓದಿ:ತಮಿಳು ಮತ್ತು ತೆಲುಗಿಗೆ ರಿಮೇಕ್ ಆಗಲಿದೆ ಶಶಾಂಕ್ ನಿರ್ದೇಶನದ ‘ಲವ್ 360’ ಸಿನಿಮಾ

    ಸೋನು ಶ್ರೀನಿವಾಸ್ ಗೌಡ ಆ ಮಾತನ್ನು ಅನುಮೋದಿಸಿದ್ದೇನೆ ಎನ್ನುವಂತೆ ಬಾಟಲು ಪಡೆದುಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ಏನು ಕೊಟ್ಟಿದ್ದಾರೆ ಎನ್ನುವುದು ವಿಶೇಷ. ಸದ್ಯ ಅಪ್ ಲೋಡ್ ಆಗಿರುವ ವಿಡಿಯೋದಲ್ಲಿ ಅಕ್ಷತಾ ಬಾಟಲ್ ಎತ್ತಿಕೊಳ್ಳುವ ಮತ್ತು ಅದನ್ನು ಸೋನುಗೆ ಕೊಡುವ ದೃಶ್ಯ ಮಾತ್ರ ರಿಲೀಸ್ ಆಗಿದ್ದು, ಸೋನು ಗೌಡ ಅದಕ್ಕೆ ಕೊಟ್ಟ ಉತ್ತರ ಏನು ಅನ್ನುವುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • 50 ದಿನ ಪ್ರೀತಿಸಿದ್ದ ಅಕ್ಷತಾ-ರಾಕಿ ಬ್ರೇಕಪ್ ಆಗಿದ್ದೇಕೆ? ಮುರಳಿ ಉತ್ತರ ಹೀಗಿತ್ತು

    50 ದಿನ ಪ್ರೀತಿಸಿದ್ದ ಅಕ್ಷತಾ-ರಾಕಿ ಬ್ರೇಕಪ್ ಆಗಿದ್ದೇಕೆ? ಮುರಳಿ ಉತ್ತರ ಹೀಗಿತ್ತು

    ಬೆಂಗಳೂರು: 15 ವಿವಿಧ ಮನಸ್ಸುಗಳನ್ನು ಒಂದೇ ಮನೆಯಲ್ಲಿರಿಸುವುದು. ಬಾಹ್ಯ ಜಗತ್ತಿನೊಂದಿಗೆ ಸಂಪರ್ಕವಿಲ್ಲದೆ ಅಲ್ಲಿರುವ ವಿಭಿನ್ನ ಜನರೊಂದಿಗೆ ಜೀವನ ನಡೆಸುವ ರಿಯಾಲಿಟಿ ಶೋ ಬಿಗ್‍ಬಾಸ್. ಈ ಕಾರ್ಯಕ್ರಮ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕನ್ನಡದ ಬಿಗ್‍ಬಾಸ್ ಸಹ 6ನೇ ಆವೃತ್ತಿಯ ಅಂತಿಮ ಘಟ್ಟಕ್ಕೆ ತಲುಪಿದೆ. ಶೋ ಆರಂಭವಾದಗಿನಿಂದಲೂ ಮನೆಯಲ್ಲಿರುವ ಅಕ್ಷತಾ ಪಾಂಡವಪುರ ಮತ್ತು ಎಂ.ಜೆ.ರಾಕೇಶ್ ಇಬ್ಬರ ಪ್ರೇಮ ಕಹಾನಿ ಬಹು ಜನರನ್ನು ಆಕರ್ಷಿಸಿತ್ತು.

    ಆರಂಭದ 50 ದಿನಗಳಲ್ಲಿ ಇಬ್ಬರ ಮಧ್ಯೆ ಪ್ರೀತಿ ಇತ್ತು ಎಂಬುದನ್ನು 11ನೇ ವಾರ ಮನೆಯಿಂದ ಹೊರ ಬಂದಿರುವ ಮುರಳಿ ಸಹ ಒಪ್ಪಿಕೊಳ್ಳುತ್ತಾರೆ. ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಕೆಲವು ವಿಚಾರಗಳನ್ನು ಹೊರಹಾಕಿರುವ ಮುರಳಿ, ಕೆಲ ಸ್ಪರ್ಧಿಗಳ ವರ್ತನೆ ಮತ್ತು ನಡವಳಿಕೆ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಕ್ಷತಾ ಬಗ್ಗೆ ಮಾತನಾಡುತ್ತಾ ಆಕೆ ಹುಡುಗಿ ಅಲ್ಲ ಹೆಂಗಸು ಎಂದು ಮಾತು ಆರಂಭಿಸಿದ ಮುರಳಿ, ಆಕೆ ಮಾಡ್ತೀರೋದು ಸರಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಅಮ್ಮ ರಾಕಿಯನ್ನ ಮಾತಾಡ್ಸು-ತಾಯಿ ಬಳಿ ಅಕ್ಷತಾ ಮನವಿ

    ಬ್ರೇಕಪ್ ಆಗಿದ್ದೇಕೆ?
    ಮೊದಲ 50 ದಿನ ಇಬ್ಬರು ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದರು. ಒಂದು ವಾರ ರಾಕೇಶ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾಗ ಬಿಗ್‍ಬಾಸ್ ಅಧಿಕಾರ ನೀಡಿತ್ತು. ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಒಬ್ಬರನ್ನು ಸೇವ್ ಮಾಡಬಹುದು ಎಂದು ಹೇಳಿತ್ತು. ಆ ವಾರ ನಾಮಿನೇಟ್ ಆದವರಲ್ಲಿ ಅಕ್ಷತಾ ಮತ್ತು ಮುರಳಿ ಸಹ ಇದ್ದರು. ಎಲ್ಲರೂ ಅಕ್ಷತಾಳನ್ನು ರಾಕೇಶ್ ಸೇವ್ ಮಾಡುತ್ತಾನೆ ಅಂದುಕೊಂಡಿದ್ದರು. ಆದ್ರೆ ಈ ಮನೆಗೆ ಮುರಳಿ ಅವರು ಅವಶ್ಯವಾಗಿದ್ದರು. ಹಾಗಾಗಿ ಮುರಳಿ ಅವರನ್ನು ಸೇವ್ ಮಾಡ್ತೀನಿ ಅಂತಾ ಹೇಳಿದ್ದರಿಂದ ಸಹಜವಾಗಿಯೇ ಅಕ್ಷತಾಗೆ ಬೇಸರವಾಯ್ತು ಅಂತಾ ಮುರಳಿ ಹೇಳಿದರು. ಇದನ್ನೂ ಓದಿ: ಬಿಗ್‍ಬಾಸ್ ಸ್ಪರ್ಧಿಗಳ ರಹಸ್ಯ ಬಿಚ್ಚಿಟ್ಟ ಮುರಳಿ

    ಇದಕ್ಕೂ ಮೊದಲು ಜೋಡಿ ನಾಮಿನೇಷನ್ ವೇಳೆ ಅಕ್ಷತಾ ತಾನು ನಾಮಿನೇಟ್ ಆಗುವ ಮೂಲಕ ರಾಕಿಯನ್ನು ಸೇವ್ ಮಾಡಿದ್ದಳು. ಒಂದು ರೀತಿ ಇಬ್ಬರ ಬ್ರೇಕಪ್ ಗೆ ನಾನೇ ಕಾರಣ ಅಂತ ಹೇಳಿ ಮುರಳಿ ನಕ್ಕರು. ಇದನ್ನೂ ಓದಿ:  ರಾಕೇಶ್ ಕೊಟ್ಟ ಗಿಫ್ಟನ್ನು ಲೈಟ್ ಆಫ್ ಆದ್ಮೇಲೆ ಪಡೆದ ಅಕ್ಷತಾ

    ದಿನವಿಡೀ ರಾಕೇಶ್ ಮತ್ತು ಅಕ್ಷತಾ ಜಗಳ ಆಡುತ್ತಾರೆ. ಬಿಗ್‍ಬಾಸ್ ಮನೆಯ ಲೈಟ್ ಆಫ್ ಆದಾಗ ಮಾತನಾಡಲು ಶುರು ಮಾಡುತ್ತಾರೆ. ಕೆಲವರು ತಮ್ಮ ಮುಖಕ್ಕೆ ತಾವೇ ಬಣ್ಣ ಬಳಿದುಕೊಂಡು ಆಟ ಆಡುತ್ತಿದ್ದಾರೆ. ಆದ್ರೆ ಮನೆಯಿಂದ ಹೊರ ಬಂದ ಮೇಲೆ ಜಗತ್ತು ಅದೇ ಬಣ್ಣವನ್ನು ನಂಬುತ್ತೆ. ಅಷ್ಟು ಬೇಗ ತಾವಾಗಿಯೇ ಹಾಕಿಕೊಂಡ ಬಣ್ಣವನ್ನು ತಾವೇ ಬೇಡ ಅಂದರೂ ಕಳಚಲ್ಲ. ರಿಯಲ್ ಮತ್ತು ರಿಯಾಲಿಟಿಗೂ ತುಂಬಾನೇ ವ್ಯತ್ಯಾಸವಿದೆ ಎಂಬುದನ್ನು ಅಲ್ಲಿರುವವರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಮುರಳಿ ಹೇಳಿದ್ದಾರೆ. ಇದನ್ನೂ ಓದಿ: ರಾಕೇಶ್ ಮೇಲೆ ಗುಡುಗಿದ ಅಕ್ಷತಾ – ಮೋಸ ಹೋದೆ ಎಂದು ಬಾತ್‍ರೂಮಿನಲ್ಲಿ ಚೀರಾಟ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮ್ಮ ರಾಕಿಯನ್ನ ಮಾತಾಡ್ಸು-ತಾಯಿ ಬಳಿ ಅಕ್ಷತಾ ಮನವಿ

    ಅಮ್ಮ ರಾಕಿಯನ್ನ ಮಾತಾಡ್ಸು-ತಾಯಿ ಬಳಿ ಅಕ್ಷತಾ ಮನವಿ

    -ಅಕ್ಷತಾ ತಾಯಿ ಕೊಟ್ಟ ಉತ್ತರ ಹೀಗಿತ್ತು
    -ಅಕ್ಷತಾ ತಾಯಿ ಬಳಿ ಕ್ಷಮೆಯಾಚಿದ ರಾಕೇಶ್

    ಬೆಂಗಳೂರು: ಬಿಗ್‍ಬಾಸ್ ಶೋಗೆ ಪ್ರತಿ ಸೀಸನ್ ನಲ್ಲೂ ಬಿಗ್ ಮನೆಗೆ ಸ್ಪರ್ಧಿಗಳ ಕುಟುಂಬದವರಲ್ಲಿ ಒಬ್ಬರನ್ನು ಕಳುಹಿಸಿ ಎಲ್ಲರಿಗೂ ಸರ್ಪ್ರೈಸ್ ಕೊಡುತ್ತಾರೆ. ಅದೇ ರೀತಿ ಬಿಗ್‍ಬಾಸ್ ಸೀಸನ್ 6ರಲ್ಲೂ ಮಂಗಳವಾರ ಪ್ರಸಾರವಾದ ಸಂಚಿಕೆಯಲ್ಲಿ ಸ್ಪರ್ಧಿಗಳ ಕುಟುಂಬದವರನ್ನು ಬಿಗ್ ಮನೆಗೆ ಕಳುಹಿಸಿದ್ದರು.

    ಮೊದಲಿಗೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಪಾಸ್ ಟಾಸ್ಕ್ ಕೊಟ್ಟಿರುತ್ತಾರೆ. ಅಂದರೆ ಬಿಗ್ ಬಾಸ್ ಪಾಸ್ ಎಂದು ಹೇಳಿದಾಗ ಸ್ಪರ್ಧಿಗಳು ಯಾರೇ ಬಂದರೂ ಮಾತನಾಡದೇ, ಅಲುಗಾಡದೇ ಸುಮ್ಮನೆ ನಿಲ್ಲಬೇಕಾಗುತ್ತದೆ. ಈ ವೇಳೆ ಮೊದಲ ಬಾರಿಗೆ ನವೀನ್ ಅವರ ಅಮ್ಮ ಬರುತ್ತಾರೆ. ನಂತರ ಶಶಿ ಮನೆಯವರು ಬರುತ್ತಾರೆ. ಅವರನ್ನು ಮನೆಯವರೆಲ್ಲಾ ಮಾತನಾಡಿಸಿ ಕಳುಹಿಸುತ್ತಾರೆ.

    ಮೂರನೇಯದಾಗಿ ಅಕ್ಷತಾ ಅಮ್ಮ ಬಿಗ್ ಮನೆಗೆ ಬರುತ್ತಾರೆ. ಅಮ್ಮನನ್ನು ನೋಡಿದ ಅಕ್ಷತಾ ತಕ್ಷಣ ಅವರನ್ನು ಅಪ್ಪಿಕೊಂಡು ಅಳುತ್ತಾರೆ. ಅಕ್ಷತಾ ತಾಯಿ ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ನೀನು ಚೆನ್ನಾಗಿ ಆಟವಾಡುತ್ತಿದ್ದೀಯಾ, ಗೆದ್ದು ಬಾ ಎಂದು ಅಕ್ಷತಾ ಕೈ ಹಿಡಿದುಕೊಂಡು ಹೇಳುತ್ತಾರೆ. ಆದರೆ ರಾಕೇಶ್ ಯಿಂದ ದೂರವಿರು ಎಂದು ಸಲಹೆ ನೀಡಿದ್ದಾರೆ.

    ಆಗ ಅಕ್ಷತಾ, ರಾಕೇಶ್ ಕೂಡ ಅಮ್ಮಂದಿರಿಗೆ ತುಂಬಾ ಗೌರವ ಕೊಡುತ್ತಾರೆ ಮಾತನಾಡಿಸು ಎಂದು ಹೇಳುತ್ತಾರೆ. ಆದರೂ ಅಕ್ಷತಾ ಅಮ್ಮ ಎಲ್ಲರನ್ನು ಮಾತನಾಡಿಸಿ ರಾಕೇಶ್ ಅವರನ್ನು ಮಾತನಾಡಿಸುವುದಿಲ್ಲ. ಈ ವೇಳೆ ರಾಕೇಶ್ ಅಲ್ಲೇ ಪಕ್ಕದಲ್ಲಿಯೇ ಕುಳಿತಿರುತ್ತಾರೆ. ಆಗ ಅಕ್ಷತಾ ರಾಕೇಶ್‍ ನ ಮಾತನಾಡಿಸಿ, ಇಲ್ಲಂದ್ರೆ ಬೇಜಾರ್ ಮಾಡಿಕೊಳ್ಳುತ್ತಾರೆ ಮಾತನಾಡಿಸಿ, ಸಮೀಪ ಕರೀಲಾ ಎಂದು ಕೇಳುತ್ತಾರೆ. ಆಗ ಅವರ ತಾಯಿ ಬೇಡ ಎಂದು ಸುಮ್ಮನಾಗುತ್ತಾರೆ.

    ಕೊನೆಗೆ ರಾಕೇಶ್ ಬಂದು ನನ್ನ ಮೇಲೆ ಕೋಪನಾ ಎಂದು ಅಕ್ಷತಾ ತಾಯಿಯನ್ನು ಮಾತನಾಡಿಸುತ್ತಾರೆ. ಆಗ ಅಕ್ಷತಾ ಅಮ್ಮ ಹಾಗೇನು ಇಲ್ಲ, ಆದರೆ ಹೊರಗಡೆ ಜನರು ಸುಮ್ಮನೆ ಮಾತನಾಡಿಕೊಳ್ಳುತ್ತಾರೆ. ನೀನು ನನ್ನ ಮಗನ ತರ ಎಂದು ಹೇಳುತ್ತಾರೆ. ಬಳಿಕ ರಾಕೇಶ್ ನನ್ನಿಂದ ಏನಾದರೂ ತಪ್ಪಾಗಿದ್ದರೆ  ಕ್ಷಮಿಸಿ ಎಂದು ಕೇಳಿದ್ದಾರೆ.

    ಇದೇ ವೇಳೆ ಅಕ್ಷತಾ ತಾಯಿ ಬಿಗ್ ಮನೆಯಿಂದ ಹೊರ ಬಂದಮೇಲೆ ಎಲ್ಲರನ್ನು ಕರೆದುಕೊಂಡು ಮನೆಗೆ ಬಾ ಎಂದು ಹೇಳಿರುತ್ತಾರೆ. ಆಗ ಅಕ್ಷತಾ ಎಲ್ಲರನ್ನೂ ಮನೆಗೆ ಕರೆದಿದ್ದಾರೆ. ನೀನು ಬಾ ಎಂದು ಹೇಳಿದ್ದಾರೆ.

    ಯಾರ ಜೊತೆ ಕಿರಿಕ್ ಮಾಡಬೇಡ, ಕೋಪ ಕಡಿಮೆ ಮಾಡಿಕೋ ಎಂದು ಬಿಗ್‍ಬಾಸ್ ಮನೆಯಲ್ಲಿ ಮಾಡಿದ್ದ ಟಾಸ್ಕ್ ಬಗ್ಗೆ ಮಾತನಾಡುತ್ತಾರೆ. ಕೊನೆಗೆ ಅವರ ಕೈಯಾರೆ ಮಟನ್ ಅಡುಗೆ ಮಾಡಿ ಎಲ್ಲರಿಗೂ ಕೊಟ್ಟು ಬಿಗ್ ಮನೆಯಿಂದ ಹೊರಹೋಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಕೇಶ್ ಕೊಟ್ಟ ಗಿಫ್ಟನ್ನು ಲೈಟ್ ಆಫ್ ಆದ್ಮೇಲೆ ಪಡೆದ ಅಕ್ಷತಾ

    ರಾಕೇಶ್ ಕೊಟ್ಟ ಗಿಫ್ಟನ್ನು ಲೈಟ್ ಆಫ್ ಆದ್ಮೇಲೆ ಪಡೆದ ಅಕ್ಷತಾ

    -ಬಿಗ್ ಮನೆಯಲ್ಲಿ ಯಾರಿಗೂ ಗೊತ್ತಾಗಲಿಲ್ಲ!

    ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಅಕ್ಷತಾ ಮತ್ತು ರಾಕೇಶ್ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅಕ್ಷತಾ ಅವರು ಕ್ರಿಸ್ ಮಸ್ ಪ್ರಯುಕ್ತ ರಾಕೇಶ್ ಕೊಟ್ಟ ಉಡುಗೊರೆಯನ್ನು ಮೊದಲು ನಿರಾಕರಿಸಿ ಬಳಿಕ ಎಲ್ಲರೂ ಮಲಗಿದ ನಂತರ ತೆಗೆದುಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಕ್ರಿಸ್‍ಮಸ್ ಪ್ರಯುಕ್ತ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆಲ್ಲರೂ ಸಾಂತಾ ಆಗಿದ್ದರು. ಆದ್ದರಿಂದ ಬಿಗ್‍ಬಾಸ್ ಸ್ಪರ್ಧಿಗಳೆಲ್ಲರಿಗೂ ಒಂದು ಟಾಸ್ಕ್ ಕೊಟ್ಟಿದ್ದರು. ಆ ಟಾಸ್ಕ್ ಎಂದರೆ ತಮ್ಮ ಬಳಿ ಇರುವ ಅಮೂಲ್ಯ ವಸ್ತುವನ್ನು ಇತರೆ ಸ್ಪರ್ಧಿಯೊಬ್ಬರಿಗೆ ಉಡುಗೊರೆ ರೂಪದಲ್ಲಿ ಕೊಡಬೇಕಿತ್ತು. ಉಡುಗೊರೆ ಕೊಟ್ಟ ಕಾರಣವನ್ನು ಎಲ್ಲರ ಮುಂದೆ ಹೇಳಿ ಕೊಡಬೇಕಿತ್ತು.

    ಅದೇ ರೀತಿ ಎಲ್ಲರೂ ತಮ್ಮ ಅಮೂಲ್ಯ ವಸ್ತುಗಳನ್ನು ಸ್ಪರ್ಧಿಗಳಿಗೆ ಕೊಟ್ಟಿದ್ದಾರೆ. ರಾಕೇಶ್, ರಶ್ಮಿ ಅವರಿಗೆ ಕ್ರಿಸ್‍ಮಸ್ ಗಿಫ್ಟ್ ಆಗಿ ಒಂದು ಬೆಲ್ಟ್ ಕೊಟ್ಟಿದ್ದರು. ಎಲ್ಲ ಸ್ಪರ್ಧಿಗಳಿಗೂ ಉಡುಗೊರೆ ಸಿಕ್ಕಿತ್ತು. ಆದರೆ ಅಕ್ಷತಾಗೆ ಯಾರಿಂದಲೂ ಉಡುಗೊರೆ ಸಿಗಲಿಲ್ಲ. ಇದರಿಂದ ಅಕ್ಷತಾ ಬೇಸರ ಮಾಡಿಕೊಂಡಿದ್ದರು. ಕೊನೆಗೆ ರಾಕೇಶ್ ಮೇಕಪ್ ರೂಮಿಗೆ ತೆರಳಿ ಅಕ್ಷತಾ ಸೂಟ್‍ಕೇಸ್ ಮೇಲೆ ಗಿಫ್ಟ್ ಇಟ್ಟು ಬಂದಿದ್ದರು.

    ಮೇಕಪ್ ರೂಮಿನಲ್ಲಿ ಇರಿಸಿದ ಗಿಫ್ಟ್ ನ್ನು ನಿವೇದಿತಾ ಗೌಡ ನೋಡಿದರು. ಗಿಫ್ಟ್ ಮೇಲೆ ಅಕ್ಷತಾ ಅಂತ ಬರೆಯಲಾಗಿತ್ತು. ಹಾಗಾಗಿ ನಿವೇದಿತಾ ಗೌಡ ನೇರವಾಗಿ ಅಕ್ಷತಾಗೆ ನೀಡಿದರು. ಆದರೆ ಅಕ್ಷತಾ ಉಡುಗೊರೆ ಮೇಲೆ ಬರೆದಿದ್ದ ಸಂದೇಶವನ್ನು ಇಟ್ಟುಕೊಂಡು ಕಾಣಿಕೆಯನ್ನು ರಾಕೇಶ್ ಸೂಟ್‍ಕೇಸ್ ನಲ್ಲಿ ವಾಪಸ್ ಇಟ್ಟಿದ್ದರು. ರಾಕೇಶ್ ತಮ್ಮ ಸ್ವೆಟರ್ ನ್ನು ಉಡುಗೊರೆಯಾಗಿ ಕೊಟ್ಟಿದ್ದರು.

    ಇದನ್ನು ನೋಡಿದ ರಾಕೇಶ್, ಇದು ಕ್ರಿಸ್ ಮಸ್ ಗಿಫ್ಟ್, ಯಾರು ಉಡುಗೊರೆಯನ್ನ ವಾಪಸ್ ಕೊಡಬಾರದು ಅಂತ ಪದೇ ಪದೇ ಅಕ್ಷತಾಗೆ ಹೇಳಿದರು. ಆದರೆ ಅಕ್ಷತಾ ನೀವು ಕನ್ನಡದಲ್ಲಿ ಬರೆದಿರುವ ಸಂದೇಶ ಸಾಕು ಎಂದು ಗಿಫ್ಟ್ ಪಡೆಯದೆ ಹೋದರು. ಬಳಿಕ ಬಿಗ್ ಮನೆಯಲ್ಲಿ ಲೈಟ್ ಆಫ್ ಆದ ಮೇಲೆ ಅಕ್ಷತಾ ರಾಕೇಶ್ ಕೊಟ್ಟ ಉಡುಗೊರೆಯನ್ನು ಪಡೆದುಕೊಂಡಿದ್ದಾರೆ.

    ರಾತ್ರಿ ವೇಳೆ ಅಕ್ಷತಾ ಗಿಫ್ಟ್ ತೆಗೆದುಕೊಂಡು ರಾಕೇಶ್ ಬರೆದ ಸಂದೇಶವನ್ನು ಬಿಗ್ ಬಾಸ್ ಕ್ಯಾಮೆರಾ ಮುಂದೆ ಓದಿ ಹೇಳಿದ್ದಾರೆ. “ಅಕ್ಷತಾ ನನಗೆ ಗೊತ್ತು, ಇದು ನಿನಗೆ ಬೇಕು ಅಂತ, ನೀನು ಇದನ್ನು ಕ್ಯಾಮೆರಾ ಮುಂದೆ ಬೇಕು ಎಂದು ಕೇಳುತ್ತಿದ್ದೆ. ನಮ್ಮ ಮಧ್ಯೆ ನಡೆಯುತ್ತಿರುವ ಕೋಲ್ಡ್ ವಾರ್ ಗೆ ಈ ಉಡುಗೊರೆಯಿಂದ ವಾವ್ ಸಿಗಲಿದೆ’ ಎಂದು ರಾಕೇಶ್ ಬರೆದಿದ್ದರು.

    ಅಕ್ಷತಾ ಬಿಗ್ ಮನೆಯಲ್ಲಿ ಕ್ಯಾಮೆರಾ ಮುಂದೆ ಹೋಗಿ ನನಗೆ ಸ್ವೆಟರ್ ಬೇಕು ಎಂದು ಕೇಳುತ್ತಿದ್ದರು. ಆದ್ದರಿಂದ ರಾಕೇಶ್ ಕ್ರಿಸ್‍ಮಸ್ ಪ್ರಯುಕ್ತ ಅಕ್ಷತಾಗೆ ಸ್ವೆಟರ್ ಕೊಟ್ಟಿದ್ದಾರೆ. ಕೊನೆಗೆ ಸ್ವೆಟರ್ ಕೊಟ್ಟ ರಾಕೇಶ್ ಗೆ ಅಕ್ಷತಾ ಧನ್ಯವಾದ ತಿಳಿಸಿದ್ದಾರೆ. ರಾತ್ರಿ ವೇಳೆ ಗಿಫ್ಟ್ ಪಡೆದುಕೊಂಡ ಕಾರಣ ಉಳಿದ ಸ್ಪರ್ಧಿಗಳಿಗೆ ಗೊತ್ತಾಗಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಕಿ-ಅಕ್ಷತಾ ನಡುವೆ ಜ್ವಾಲಾಮುಖಿ ಸ್ಫೋಟ

    ರಾಕಿ-ಅಕ್ಷತಾ ನಡುವೆ ಜ್ವಾಲಾಮುಖಿ ಸ್ಫೋಟ

    -ಹೋಗಲೋ ನಿನ್ನನ್ನ ಯಾರ್ ಮಾತಾಡಾಸ್ತಾರೆ: ಅಕ್ಷತಾ
    -ಅಯ್ಯೋ ಇದೇನಾಯ್ತು? ಇತರೆ ಸ್ಪರ್ಧಿಗಳೆಲ್ಲಾ ಕನ್ಫ್ಯೂಸ್

    ಬೆಂಗಳೂರು: ಬಿಗ್ ಬಾಸ್ 6ನೇ ಆವೃತ್ತಿಯ ಪ್ರೇಮ ಜೋಡಿಗಳೆಂದು ಗುರುತಿಸಿಕೊಂಡಿರುವ ಅಕ್ಷತಾ ಮತ್ತು ರಾಕೇಶ್ ನಡುವೆ ಮಹಾಯುದ್ಧವೇ ನಡೆದಿದೆ. ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ಅಕ್ಷತಾ ಮತ್ತು ರಾಕೇಶ್ ನಡುವೆ ದೊಡ್ಡ ಜಗಳವೇ ನಡೆದಿದೆ.

    ಈ ವಾರದ ಕ್ಯಾಪ್ಟನ್ ಆಗಿ ರಾಕೇಶ್ ಆಯ್ಕೆಯಾಗಿದ್ದರು. ನಾಮಿನೇಷನ್ ವೇಳೆ ಬಿಗ್‍ಬಾಸ್ ರಾಕೇಶ್ ಗೆ ವಿಶೇಷ ಅಧಿಕಾರ ನೀಡಿತ್ತು. ಅಕ್ಷತಾರನ್ನು ಉಳಿಸದೇ ಮುರುಳಿ ಅವರನ್ನು ರಾಕೇಶ್ ಸೇವ್ ಮಾಡಿದ್ದರು. ಇದರಿಂದ ಸಹಜವಾಗಿಯೇ ಅಕ್ಷತಾ ಜೋರಾಗಿ ಕೂಗಿ ಕಣ್ಣೀರು ಹಾಕಿದ್ದರು. ಕಳೆದ ಎರಡು ದಿನಗಳಿಂದ ಆರಂಭದ ದಿನಗಳಿಂದಲೂ ಅಕ್ಷತಾ ಅಡುಗೆ ಮನೆಯಲ್ಲಿ ಕೆಲಸ ಮಾಡ್ತಿದ್ದಾಳೆ. ಹಾಗಾಗಿ ಬೇರೆಯವರು ಅಡುಗೆ ಮಾಡಿ ಎಂದು ರಾಕೇಶ್ ಆದೇಶಿಸಿದ್ದರು. ಈ ವೇಳೆ ರಾಕೇಶ್, ಇದು ನನ್ನ ನಿರ್ಣಯ ಅಲ್ಲ, ಮನೆಯ ಇತರೆ ಸದಸ್ಯರ ಮನವಿಯ ಮೇರೆಗೆ ಅಡುಗೆ ಬೇರೆಯವರ ಮಾಡಲಿ ಎಂದು ಹೇಳ್ತಿದ್ದೇನೆ ಎಂದರು.

    ಇಷ್ಟಕ್ಕೆ ಸುಮ್ಮನಾಗದ ಅಕ್ಷತಾ ಎಲ್ಲರ ಬಳಿಯೂ ಹೋಗಿ, ನಾನು ಅಡುಗೆ ಯಾರು ಮಾಡಬಾರದೆಂದು ಎಂದು ಪ್ರಶ್ನೆ ಮಾಡಿದರು. ಈ ವೇಳೆ ಎಲ್ಲರೂ ನಾವು ಹೇಳಿಲ್ಲ, ನಿಮ್ಮ ಅಡುಗೆಯೇ ನಮಗಿಷ್ಟ ಅಂತಾ ಉತ್ತರ ನೀಡಿದ್ದಾರೆ. ಎಲ್ಲರ ಬಳಿ ಸ್ಪಷ್ಟನೆ ಪಡೆದುಕೊಂಡ ಅಕ್ಷತಾ, ನಾನು ಅಡುಗೆ ಮಾಡಬಾರದೆಂದು ಹೇಳಿದ್ಯಾರು ಎಂದು ರಾಕೇಶ್ ನನ್ನು ಪ್ರಶ್ನಿಸಿದರು. ನಾನು ಹೆಸರು ಹೇಳಲ್ಲ ಎಂದು ರಾಕೇಶ್ ವಾದಿಸಿದರು.

    ಹೀಗೆ ಇಬ್ಬರ ಮಾತುಕತೆ ಕೆಲ ಸಮಯ ನಡೆಯಿತು. ಕೊನೆಗೆ ನೀವು ನನ್ನನ್ನು ಬಿಟ್ಟುಬಿಡಿ. ನಿಮ್ಮಿಂದ ಹೊರಗಡೆ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬ ಅನುಮಾನ ಬರುತ್ತಿದೆ. ಈಗಾಗಲೇ ನಮ್ಮಿಬ್ಬರ ಸಂಬಂಧದ ಬಗ್ಗೆ ನಿಮ್ಮ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ನನ್ನೊಂದಿಗೆ ಪದೇ ಪದೇ ಮಾತನಾಡಬೇಡಿ ಎಂದು ರಾಕೇಶ್ ಮನವಿ ಮಾಡಿಕೊಂಡರು.

    ರಾಕೇಶ್ ಮನವಿಗೆ ಪ್ರತಿಕ್ರಿಯಿಸಿದ ಅಕ್ಷತಾ, ನನಗೆ ನಿಮ್ಮಿಂದ ಪರ್ಸನಲ್ ಡ್ಯಾಮೇಜ್ ಆಗ್ತಿದೆಯೇ ಹೊರತು ನಿಮಗೆ ಅಲ್ಲ. ಮೊದಲಿನಿಂದಲೂ ಬಿಗ್ ಬಾಸ್ ಮನೆಯ ಹೊರಗೆ ಒಳ್ಳೆಯ ಫ್ರೆಂಡ್ಸ್ ಎಂದು ಹೇಳಿದ್ದೇನೆ. ಕೂಡಲೇ ರಾಕೇಶ್ ನಾವಿಬ್ಬರು ಫ್ರೆಂಡ್ಸ್ ಅಲ್ಲ ಎಂದು ಜೋರಾಗಿ ಹೇಳಿದರು. ಕೋಪಗೊಂಡ ಅಕ್ಷತಾ, ಹೋಗಲೋ ನಿನ್ನನ್ನು ಯಾರ್ ಮಾತಾಡಾಸ್ತಾರೆ ಎಂದು ಗಾರ್ಡನ್ ಏರಿಯಾದಿಂದ ಮನೆಯೊಳಗೆ ಹೋದ್ರು.

    ಮನೆಯಲ್ಲಿದ್ದ ಇತರೆ ಸದಸ್ಯರು ಮೂಕವಿಸ್ಮಿತರಾಗಿ ಎಲ್ಲವನ್ನು ನೋಡಿ ಒಂದು ಕ್ಷಣ ಶಾಕ್ ಆದಂತೆ ತಬ್ಬಿಬಾದರು. ಅದ್ರೆ ಯಾವ ಸದಸ್ಯರು ಇಬ್ಬರನ್ನು ರಾಜಿ ಮಾಡಿಸುವ ಕೆಲಸಕ್ಕೆ ಮುಂದಾಗಲಿಲ್ಲ. ಮುರುಳಿ ಅವರನ್ನು ಸೇವ್ ಮಾಡಿದಾಗಲೂ ಇಬ್ಬರು ಇದೇ ರೀತಿ ಜಗಳ ಮಾಡಿಕೊಂಡು ದಿನವಿಡೀ ಕಿಡಿಕಾರಿ, ಮನೆಯ ಲೈಟ್ ಆಫ್ ಆಗ್ತಿದ್ದಂತೆ ಅಕ್ಷತಾ ಮತ್ತು ರಾಕೇಶ್ ತಮ್ಮ ಮಾತುಗಳನ್ನು ಆರಂಭಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏನ್ಗೊತ್ತಾ ಬಿಗ್‍ಬಾಸ್ ಮನೆಯ ಸೊಳ್ಳೆಗಳೆಲ್ಲಾ ಲೇಝಿ: ನಿವೇದಿತಾ ಗೌಡ

    ಏನ್ಗೊತ್ತಾ ಬಿಗ್‍ಬಾಸ್ ಮನೆಯ ಸೊಳ್ಳೆಗಳೆಲ್ಲಾ ಲೇಝಿ: ನಿವೇದಿತಾ ಗೌಡ

    – ಅಕ್ಷತಾ ಹೇಳಿದ ಮಾತಿನಿಂದ ಕಣ್ಣೀರಿಟ್ಟ ಬೊಂಬೆ

    ಬೆಂಗಳೂರು: ಬಿಗ್‍ಬಾಸ್ 6ನೇ ಆವೃತ್ತಿಗೆ ಅತಿಥಿಯಾಗಿ ಎಂಟ್ರಿ ಪಡೆದಿರುವ ನಿವೇದಿತಾ ಗೌಡ, ಬಿಗ್ ಮನೆಯಲ್ಲಿರುವ ಸೊಳ್ಳೆಗಳು ತುಂಬಾನೇ ಲೇಜಿ ಅಂತ ಹೇಳಿದ್ದಾರೆ.

    ಸೋಮವಾರ ಪ್ರಸಾರವಾದ ಸಂಚಿಕೆಯಲ್ಲಿ ಬಿಗ್‍ಬಾಸ್ ಮನೆಯ ಗಾರ್ಡನ್ ಏರಿಯಾದಲ್ಲಿ ನಿವೇದಿತಾ ಗೌಡ, ಜಯಶ್ರೀ ಮತ್ತು ಜೀವಿತಾ ಹರಟೆ ಹೊಡೆಯುತ್ತಿದ್ದರು. ಈ ವೇಳೆ ನಿವೇದಿತಾ ಗೌಡ, ಬಿಗ್‍ಬಾಸ್ ಮನೆಯ ಸೊಳ್ಳೆಗಳು ತುಂಬಾನೇ ಲೇಝಿ. ಅವುಗಳನ್ನು ಕೈಯಿಂದ ದೂರ ಹೋಗುವಂತೆ ಸನ್ನೆ ಮಾಡಿದ್ರು ಹೋಗಲ್ಲ. ನಮ್ಮ ಮನೆಯಲ್ಲಿ ಸ್ವಲ್ಪ ಕೈ ಶೇಕ್ ಮಾಡಿದ್ರು ಹಾರಿ ಹೋಗುತ್ತೆ. ಇವತ್ತು ಬಾತ್‍ರೂಮಿನಲ್ಲಿ ಸೊಳ್ಳೆಯೊಂದು ನನ್ನ ಕೈ ಮೇಲೆ ಕುಳಿತಿತ್ತು. ಕೈ ಅಲ್ಲಾಡಿಸಿದ್ರು ಹೋಗದೇ ಅಲ್ಲೇ ಪ್ರಾಣ ಬಿಡ್ತು ಎಂದು ನಿವೇದಿತಾ ಗೌಡ ಹೇಳಿ ನಕ್ಕರು.

    ಮನೆಯ ಸದಸ್ಯರಿಗೆ ಬಿಗ್‍ಬಾಸ್ ಹೊಸ ಟಾಸ್ಕ್ ನೀಡಿದ್ರು. ಎಲ್ಲರೂ ಹುಂಡಿಯಲ್ಲಿರುವ ಚೀಟಿ ತೆಗೆದು ಅದರಲ್ಲಿರುವ ಮೂರು ಪದಗಳು ಮನೆಯಲ್ಲಿ ಯಾರಿಗೆ ಹೊಂದಾಣಿಕೆ ಆಗುತ್ತೆ ಅಂತ ಹೇಳಿ ಸೂಕ್ತ ಕಾರಣ ತಿಳಿಸಬೇಕೆಂದು ಬಿಗ್‍ಬಾಸ್ ಆದೇಶಿಸಿದ್ದರು. ಅಕ್ಷತಾರಿಗೆ ಸಿಕ್ಕ ಚೀಟಿಯಲ್ಲಿ ಸಹೋದರ, ತಾಯಿ ಮತ್ತು ಕುಟುಂಬಕ್ಕೆ ಸೇರಲ್ಲ ಎಂಬ ಪದಗಳು ಸಿಕ್ಕಿದ್ದವು. ನವೀನ್ ಸಜ್ಜು ನನ್ನ ಸಹೋದರ, ರಾಕೇಶ್ ತಾಯಿ ಮತ್ತು ನಿವೇದಿತಾ ಗೌಡ ಕುಟುಂಬಕ್ಕೆ ಸೇರಲ್ಲ ಅಂತಾ ಹೇಳಿದ್ದರು.

    ಬೊಂಬೆ ಕಣ್ಣೀರು:
    ನಿವೇದಿತಾ ಮನೆಗೆ ಬಂದಾಗಿಂದಲೂ ನಮ್ಮೆಲ್ಲರ ಜೊತೆ ಹೊಂದಾಣಿಕೆ ಆಗ್ತಿಲ್ಲ. ಅವಳಿಗೆ ಹೆಲ್ಪಿಂಗ್ ನೇಚರ್ ಕಡಿಮೆ. ಕಳೆದ ಸೀಸನ್ ನಲ್ಲಿಯೂ ನಿವೇದಿತಾ ನಮ್ಮವಳು ಅಂತ ಅನ್ನಿಸಲಿಲ್ಲ. ನಮ್ಮ ಮನೆ ಹುಡುಗಿ, ನಮ್ಮ ಊರು ಹುಡುಗಿ ಅನ್ನೋ ಭಾವನೆ ನನಗೆ ಬರಲಿಲ್ಲ. ಹಾಗಾಗಿ ಕುಟುಂಬಕ್ಕೆ ಸೇರದ ವ್ಯಕ್ತಿ ನಿವೇದಿತಾ ಎಂಬ ಕಾರಣವನ್ನ ಅಕ್ಷತಾ ನೀಡಿದರು. ಸೀಸನ್ 5ರ ಮಾತು ಇಲ್ಲಿ ಬೇಡ. ನಾನು ಬಂದು ಮೂರು ದಿನ ಆಯ್ತು. ಕಳೆದ ಸೀಸನ್ ಬಗ್ಗೆ ಮಾತನಾಡೋದು ಸೂಕ್ತವಲ್ಲ ಎಂದು ನಿವೇದಿತಾ ಗೌಡ ಭಾವುಕರಾದ್ರು.

    ತಿರುಗೇಟು ಕೊಟ್ಟ ಬೊಂಬೆ:
    ಚೀಟಿ ಎತ್ತುವ ಸರದಿ ನಿವೇದಿತಾರಿಗೆ ಬಂದಿತ್ತು. ಚೀಟಿಯಲ್ಲಿ ಒಳ್ಳೆಯ ಮನಸ್ಸು, ಕೆಟ್ಟ ಮನಸ್ಸು ಮತ್ತು ಕೊಳಕು ಮನಸ್ಸು ಬಂದಿತ್ತು. ಧನರಾಜ್ ಒಳ್ಳೆಯ ಮನಸ್ಸು, ಆ್ಯಂಡಿ ಕೊಳಕು ಮನಸ್ಸು ಮತ್ತು ಅಕ್ಷತಾ ಕೆಟ್ಟ ಮನಸ್ಸು ಎಂಬ ಹೆಸರುಗಳನ್ನು ಸೂಚಿಸಿದ್ರು. ಅಕ್ಷತಾರಿಗೆ ನಾನು ಇದೂವರೆಗೂ ಪರ್ಸನಲ್ ಆಟ್ಯಾಕ್ ಮಾಡಿಲ್ಲ. ಅವರ ಬಗ್ಗೆ ನಾನು ಹಿಂದುಗಡೆ ಮಾತನಾಡಿಲ್ಲ. ಅಕ್ಷತಾರ ವಿಚಾರವನ್ನೇ ಇದೂವರೆಗೂ ಪ್ರಸ್ತಾಪ ಮಾಡಿಲ್ಲ. ಕಳೆದ ಸೀಸನ್ ಮಾತುಗಳು ಇಲ್ಲಿ ಬೇಕಾಗಿರಲಿಲ್ಲ. ಅನಾವಶ್ಯಕ ಮಾತು ಆಡಿದ್ದರಿಂದ ಅಕ್ಷತಾರಿಗೆ ಕೆಟ್ಟ ಮನಸ್ಸು ನೀಡುತ್ತೇನೆ ಎಂದು ಹೇಳುವ ಮೂಲಕ ನಿವೇದಿತಾ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಕೇಶ್ ಮೇಲೆ ಗುಡುಗಿದ ಅಕ್ಷತಾ – ಮೋಸ ಹೋದೆ ಎಂದು ಬಾತ್‍ರೂಮಿನಲ್ಲಿ ಚೀರಾಟ

    ರಾಕೇಶ್ ಮೇಲೆ ಗುಡುಗಿದ ಅಕ್ಷತಾ – ಮೋಸ ಹೋದೆ ಎಂದು ಬಾತ್‍ರೂಮಿನಲ್ಲಿ ಚೀರಾಟ

    ಬೆಂಗಳೂರು: ಬಿಗ್ ಬಾಸ್ ಸೀಸನ್ 6ರಲ್ಲಿ ರಾಕೇಶ್ ಮತ್ತು ಅಕ್ಷತಾ ಇಬ್ಬರ ನಡುವೆ ಪ್ರೀತಿ ಇದೆ ಎಂದು ಗಾಸಿಪ್ ಹರಿದಾಡುತ್ತಿದೆ. ಅದರಂತೆಯೇ ಅವರಿಬ್ಬರು ಬಿಗ್ ಬಾಸ್ ಮೆನಯಲ್ಲಿ ಯಾವಾಗಲೂ ಒಟ್ಟಿಗೆ ಇದ್ದು ಟಾಸ್ಕ್ ಮಾಡುತ್ತಿರುತ್ತಾರೆ.

    ಈ ವಾರ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅವರು ಕ್ಯಾಪ್ಟನ್ ಆಗಿದ್ದರು. ಆದರೆ ಮನೆಯಿಂದ ಹೊರ ಹೋಗಲು ರಾಕೇಶ್ ಕೂಡ ನಾಮಿನೇಟ್ ಆಗಿದ್ದರು. ಆದ ಕಾರಣ ಬಿಗ್ ಬಾಸ್ ಒಂದು ವಿಶೇಷವಾದ ಅಧಿಕಾರವನ್ನು ರಾಕೇಶ್‍ಗೆ ಕೊಟ್ಟಿದ್ದರು.

    ಈ ವಾರ ಜಯಶ್ರೀ, ಕವಿತಾ, ಆ್ಯಂಡಿ, ಮುರಳಿ, ಅಕ್ಷತಾ, ರಶ್ಮಿ ಮತ್ತು ರಾಕೇಶ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಬಿಗ್‍ಬಾಸ್ ಕೊಟ್ಟ ವಿಶೇಷ ಅಧಿಕಾರದಲ್ಲಿ ರಾಕೇಶ್, ನಾಮಿನೇಟ್ ಯಿಂದ ತಮ್ಮನ್ನು ಸೇವ್ ಮಾಡಿಕೊಳ್ಳಬಹುದಿತ್ತು ಅಥವಾ ನಾಮಿನೇಟ್ ಆಗಿದ್ದ ಸ್ಪರ್ಧಿಗಳಲ್ಲಿ ಒಬ್ಬರನ್ನು ಉಳಿಸಿಕೊಳ್ಳಬೇಕಿತ್ತು. ಆಗ ರಾಕೇಶ್ ಮುರಳಿ ಅವರನ್ನು ಸೇವ್ ಮಾಡಿದರು.

    ರಾಕೇಶ್ ಮುರಳಿಯನ್ನು ಸೇವ್ ಮಾಡಿದ ತಕ್ಷಣ ಬೇಸರ ಮಾಡಿಕೊಂಡ ಅಕ್ಷತಾ ಕೋಪಗೊಂಡು ಬಾತ್‍ರೂಮಿಗೆ ಹೋಗಿ ಜಯಶ್ರೀ ಅವರನ್ನು ಅಪ್ಪಿಕೊಂಡು ಗಳಗಳನೇ ಅತ್ತಿದ್ದಾರೆ. ಈ ವೇಳೆ ನಾನಾಗಿದ್ದರೆ ಅವರನ್ನೇ ಉಳಿಸುತ್ತಿದ್ದೆ ಎಂದು ಹೇಳಿಕೊಂಡು ಅತ್ತಿದ್ದಾರೆ.

    ರಾಕೇಶ್ ಸ್ಪರ್ಧಿಗಳಿಗಾಗಿ ಒಂದು ಆಟ ಆಡಿಸಲು ಎಲ್ಲರನ್ನು ಕರೆದಿದ್ದರು. ಆಗ ಅಕ್ಷತಾ ಸ್ನಾನಕ್ಕೆಂದು ಬಾತ್‍ರೂಮಿಗೆ ಹೋಗಿದ್ದರು. ರಾಕೇಶ್ ಕರೆಯಲು ಹೋಗಿದ್ದಾರೆ. ಆಗ ರಾಕೇಶ್ ಮೇಲೆ ಕೋಪಗೊಂಡು ಗುಡುಗಿದ್ದಾರೆ. ಕೆಲ ಸಮಯ ಬಾತ್‍ರೂಮಿನಲ್ಲಿಯೇ ಕುಳಿತ ಅಕ್ಷತಾ ಜೋರು ಜೋರಾಗಿ ಕೂಗಿ ಅತ್ತರು. ಕೊನೆಗೆ ಅಕ್ಷತಾ ಬಳಿ ಹೋದ ಆ್ಯಂಡಿ ಸಮಾಧಾನ ಮಾಡಿ ಹೊರ ತಂದರು. ನಾನು ಮನೆಯವರ ವಿರೋಧ ಕಟ್ಟಿಕೊಂಡಿದ್ದೇನೆ. ಒಮ್ಮೆ ಅಮ್ಮನನ್ನು ತಬ್ಬಿಕೊಂಡು ಕ್ಷಮೆ ಕೇಳಬೇಕು ಎಂದು ಬಿಗ್‍ಬಾಸ್ ಬಳಿ ಕೇಳಿಕೊಂಡರು.

    ದಿನಪೂರ್ತಿ ರಾಕೇಶ್ ಮೇಲೆ ಮುನಿಸಿಕೊಂಡಿದ್ದ ಅಕ್ಷತಾ, ಮನೆಯ ಲೈಟ್ ಆಫ್ ಆಗುತ್ತಿದ್ದಂತೆ ಮತ್ತೆ ಆತನೊಂದಿಗೆ ಗುಸು ಗುಸು ಚರ್ಚೆಯಲ್ಲಿ ಭಾಗಿಯಾದ್ರು. ನನ್ನನ್ನು ಯಾಕೆ ಸೇವ್ ಮಾಡಿಲ್ಲ ಅಂತ ಸೂಕ್ತವಾದ ಕಾರಣ ಕೊಡು ಎಂದು ಅಕ್ಷತಾ ಕೇಳಿದ್ರು. ತನ್ನ ನಿರ್ಣಯವನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನು ಬೆಳಗ್ಗೆಯಿಂದ ರಾಕೇಶ್ ಮಾಡತೊಡಗಿದ್ದು ಸಂಚಿಕೆಯಲ್ಲಿ ನೋಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೈ ಮುಗಿದು ತಪ್ಪಾಯ್ತೆಂದು ರಾಕೇಶ್ ಕಾಲಿಗೆ ಬಿದ್ದ ಅಕ್ಷತಾ

    ಕೈ ಮುಗಿದು ತಪ್ಪಾಯ್ತೆಂದು ರಾಕೇಶ್ ಕಾಲಿಗೆ ಬಿದ್ದ ಅಕ್ಷತಾ

    ಬೆಂಗಳೂರು: ಬಿಸ್‍ಬಾಸ್ ರಿಯಾಲಿಟಿ ಶೋ ಸ್ಪರ್ಧಿಗಳಾದ ರಾಕೇಶ್ ಮತ್ತು ಅಕ್ಷತಾ ಪ್ರತಿದಿನ ಸುದ್ದಿಯಲ್ಲಿರುತ್ತಾರೆ. ಈಗ ಮತ್ತೆ ಅಕ್ಷತಾ ರಾಕೇಶ್ ಕಾಲಿಗೆ ಬಿದ್ದು ಕ್ಷಮೆ ಕೇಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಬಿಗ್ ಮನೆಯ ಮಂದಿಗೆ ಬಿಗ್‍ಬಾಸ್ ಲಕ್ಷುರಿ ಬಜೆಟ್ ಟಾಸ್ಕ್ ಕೊಟ್ಟಿದ್ದರು. ಆ ಟಾಸ್ಕ್ ಹೆಸರು ‘ಮಡಿಕೆ ಒಡಿ, ಲಕ್ಷುರಿ ಪಡಿ’. ಇದರ ಅರ್ಥ ಮಡಿಕೆಯನ್ನು ಒಡೆದು ಬಜೆಟ್ ಗಳಿಸುವುದಾಗಿದೆ. ಈ ಟಾಸ್ಕ್ ನಲ್ಲಿ ಮಡಿಕೆ ಒಡೆಯುವ ಜವಾಬ್ದಾರಿಯನ್ನು ರಶ್ಮಿ ಪಡೆದಿದ್ದು, ಮಡಿಕೆ ಒಡೆದ ಬಳಿಕ ಅದರಲ್ಲಿರುವ ಚೀಟಿಗಳನ್ನು ಓದಿ ಅಕ್ಷತಾ ಹೇಳಬೇಕಾಗಿತ್ತು.

    ಕೃಪೆ: ಕಲರ್ಸ್ ಸೂಪರ್

    ಟಾಸ್ಕ್ ಶುರುವಾಗಿ ರಶ್ಮಿ ಕಣ್ಣಿಗೆ ಬಟ್ಟೆ ಕಟ್ಟಲಾಗಿದ್ದು, ಮಡಿಕೆ ಒಡೆಯುತ್ತಿದ್ದರು. ಉಳಿದ ಸ್ಪರ್ಧಿಗಳು ಅವರಿಗೆ ಗೈಡ್ ಮಾಡಲು ಎಲ್ಲರೂ ಕೂಗಾಡುತ್ತಿದ್ದರು. ಈ ನಡುವೆ ಅಕ್ಷತಾ ಮಡಿಕೆಯಲ್ಲಿ ಸಿಕ್ಕ ಚೀಟಿಗಳನ್ನು ಓದಿ ಪದಾರ್ಥಗಳ ಹೆಸರನ್ನು ಹೇಳುತ್ತಿದ್ದರು. ಅಕ್ಷತಾ ಹೇಳುವ ಪದಾರ್ಥವನ್ನು ಆಂಡಿ ಬರೆಯುತ್ತಿದ್ದರು. ಆದರೆ ಎಲ್ಲರೂ ಕೂಗಾಡುತ್ತಿದ್ದ ಕಾರಣ ಅಕ್ಷತಾ ಹೇಳುತ್ತಿದ್ದ ಪದಾರ್ಥಗಳ ಹೆಸರು ಕೇಳಿಸುತ್ತಿರಲಿಲ್ಲ.

    ಕೆಲವು ಬಾರಿ ಅಕ್ಷತಾ, ಆಂಡಿ ಬಳಿ ಬಂದು ಹೇಳುತ್ತಿದ್ದರು. ಈ ವೇಳೆ ಬಝರ್ ಶಬ್ಧ ಬಂತು. ಆಗ ಪಾಯಿಂಟ್ಸ್ ಇನ್ನೂ ಉಳಿದಿತ್ತು. ಹೀಗಾಗಿ ಕೋಪಗೊಂಡ ರಾಕೇಶ್, ಅಕ್ಷತಾ ವಿರುದ್ಧ ಕೂಗಾಡುತ್ತಿದ್ದರು. ಆಗ ರಾಕೇಶ್, ನೀನು ಹತ್ತಿರ ಬಂದು ಹೇಳಬೇಕಿತ್ತು. ಯಾಕಂದ್ರೆ ಇನ್ನು ಪಾಯಿಂಟ್ಸ್ ಇತ್ತು ಅಂತ ಅಕ್ಷತಾಗೆ ಹೇಳಿದ್ರು. ಆಗ ಅಕ್ಷತಾ, ಎಲ್ಲರೂ ಕೂಡಾಗುತ್ತಿದ್ದರು ಆದ್ದರಿಂದ ನನ್ನ ಧ್ವನಿ ಕೇಳಿಸುತ್ತಿರಲಿಲ್ಲ ಎಂದು ರಾಕೇಶ್‍ಗೆ ಉತ್ತರ ಕೊಟ್ಟರು.

    ಮಾತು ಮುಂದುವರಿಸಿದ ರಾಕೇಶ್, ನೀನು ಎಲ್ಲರ ಧ್ವನಿಗಿಂತ ಜೋರಾಗಿ ಕೇಳಿಸುವ ರೀತಿ ಹೇಳಬೇಕಿತ್ತು ಎಂದು ಅಕ್ಷತಾಗೆ ಹೇಳಿದರು. ಇದರಿಂದ ಬೇಸರಗೊಂಡ ಅಕ್ಷತಾ ತಪ್ಪು ನನ್ನದೆ, ಕ್ಷಮಿಸಿ ಎಂದು ಹೇಳಿ ಕೈ ಮುಗಿದು ರಾಕೇಶ್ ಕಾಲಿಗೆ ಬಿದ್ದಿದ್ದಾರೆ. ಬಳಿಕ ಇದೇ ವಿಚಾರಕ್ಕೆ ಅಕ್ಷತಾ ಮತ್ತು ರಾಕೇಶ್ ನಡುವೆ ಮಾತಿನ ಚಕಮಕಿ ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉದ್ದಿಶ್ಯ: ಮೃಗಾಲಯದಿಂದ ಮಾಂತ್ರಿಕ ಮಂಡಲದವರೆಗೆ ಥ್ರಿಲ್ಲಿಂಗ್ ಜರ್ನಿ!

    ಉದ್ದಿಶ್ಯ: ಮೃಗಾಲಯದಿಂದ ಮಾಂತ್ರಿಕ ಮಂಡಲದವರೆಗೆ ಥ್ರಿಲ್ಲಿಂಗ್ ಜರ್ನಿ!

    ಬೆಂಗಳೂರು: ಹಾಲಿವುಡ್ ಕಥೆಗಾರನ ಕಥೆ ಮತ್ತು ಒಂದಷ್ಟು ಹೊಸತನಗಳ ಜೊತೆಗೇ ಹೇಮಂತ್ ಕೃಷ್ಣಪ್ಪ ನಿರ್ದೇಶನದ ಉದ್ದಿಶ್ಯ ಚಿತ್ರ ತೆರೆಗೆ ಬಂದಿದೆ. ಪ್ರೇಕ್ಷಕರು ಮೃಗಾಲಯದಿಂದ ಮಾಂತ್ರಿಕ ಮಂಡಲದವರೆಗೆ ಥ್ರಿಲ್ಲಿಂಗ್ ಜರ್ನಿ ಮಾಡಿದ ಹಾರರ್ ಅನುಭವವೊಂದನ್ನು ಮನಸು ತುಂಬಿಕೊಂಡಿದ್ದಾರೆ!

    ಅಮೆರಿಕ ಕನ್ನಡಿಗ ಹೇಮಂತ್ ಕೃಷ್ಣಪ್ಪ ಅವರೇ ನಿರ್ಮಾಣ ಮಾಡಿ, ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ನಟಿಸಿರೋ ಚಿತ್ರ ಉದ್ದಿಶ್ಯ. ಆರಂಭದಿಂದಲೂ ಹೊಸತೇನೋ ಇದೆ ಎಂಬ ಕುತೂಹಲ ಕಾಯ್ದಿಟ್ಟುಕೊಂಡಿದ್ದ ಈ ಚಿತ್ರವೀಗ ಅದಕ್ಕೆ ತಕ್ಕುದಾದ ಫೀಲ್ ಒಂದನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಸಫಲವಾಗಿದೆ.

    ಮೈಸೂರು ಮೃಗಾಲಯದಲ್ಲಿ ಹಠಾತ್ತನೆ ಸತ್ತು ಬಿದ್ದ ಪ್ರಾಣಿಗಳು ಮತ್ತು ಕೆಲ ವ್ಯಕ್ತಿಗಳು. ಇದೊಂದು ಕೊಲೆ ಎಂಬುದು ಮೇಲು ನೋಟಕ್ಕೇ ಗೊತ್ತಾಗುವಂತಿದ್ದರೂ ಅದಕ್ಕೆ ಕಾರಣವೇನು, ಇದರ ಹಿಂದಿರೋರು ಯಾರೆಂಬುದು ಕಗ್ಗಂಟು. ಅದನ್ನು ಬಿಡಿಸಲು ಯಂಗ್ ಆಂಡ್ ಎನರ್ಜೆಟಿಕ್ ಸಿಐಡಿ ಆಫೀಸರ್ ಆಗಮನ. ಯಾವುದಕ್ಕೂ ಕೇರ್ ಮಾಡದ ಈ ಅಧಿಕಾರಿಯನ್ನು ತನಿಖೆಯ ಜಾಡು ಭೀಕರ ಮಾಂತ್ರಿಕನೊಬ್ಬನ ಮಾಂತ್ರಿಕ ಮಂಡಲಕ್ಕೆ ತಂದು ನಿಲ್ಲಿಸುತ್ತೆ. ಈತನ ಸುತ್ತ ಮೂವರು ಹುಡುಗೀರ ದರ್ಶನವೂ ಆಗುತ್ತೆ. ಅಲ್ಲಿಂದಲೇ ಹಾರರ್ ಕಥನವೂ ತೆರೆದುಕೊಳ್ಳುತ್ತೆ. ಆದರೆ ಈ ಹಾರರ್ ವಿಧಾನವೂ ತಾಂತ್ರಿಕ ಶ್ರೀಮಂತಿಕೆ ಹೊಂದಿದೆ ಎಂಬುದು ಈ ಚಿತ್ರದ ಅಸಲೀ ಶಕ್ತಿ.

    ಒಟ್ಟಾರೆಯಾಗಿ ಸಿಐಡಿ ಅಧಿಕಾರಿಯಾಗಿಯೂ ಅಬ್ಬರಿಸಿರುವ ಹೇಮಂತ್ ಕೃಷ್ಣಪ್ಪ, ಮಾಮೂಲಾದ ಕಥೆಯನ್ನೂ ಭಿನ್ನ ಬಗೆಯಲ್ಲಿ ನಿರೂಪಣೆ ಮಾಡಿದ್ದಾರೆ. ಈ ಮೂಲಕ ನಿರ್ದೇಶಕರಾಗಿಯೂ ಅವರ ಕೆಲಸ ಮುಖ್ಯವಾಗುತ್ತದೆ. ಇದಕ್ಕೆ ಎಲ್ಲ ಪಾತ್ರಧಾರಿಗಳೂ ಸಾಥ್ ನೀಡಿದ್ದಾರೆ. ಅರ್ಚನಾ ಗಾಯಕವಾಡ್, ಅಕ್ಷತಾ ಮತ್ತು ಇಚ್ಚಾ ಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ.

    ಹಿನ್ನೆಲೆ ಸಂಗೀತ ಇಡೀ ಚಿತ್ರಕ್ಕೆ ಶಕ್ತಿ ತುಂಬಿದರೆ ತಾಂತ್ರಿಕ ಶ್ರೀಮಂತಿಕೆ ಅದಕ್ಕೆ ಸಾಥ್ ನೀಡಿದೆ. ಒಂದಷ್ಟು ಕೊರತೆಗಳಿದ್ದರೂ ಒಂದೊಳ್ಳೆ ಚಿತ್ರ ನೋಡಿದ ಅನುಭವವನ್ನಂತೂ ಉದ್ದಿಶ್ಯ ನೀಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv