Tag: ಅಕ್ರಮ ಸಂಬಂಧ

  • ವಿವಾಹಿತ ಮಹಿಳೆಗೆ ಐ ಲವ್ ಯೂ ಅಂತಾ ಮೆಸೇಜ್ ಕಳುಹಿಸಿ ಬಲಿಯಾದ ಪ್ರೇಮಿ

    ವಿವಾಹಿತ ಮಹಿಳೆಗೆ ಐ ಲವ್ ಯೂ ಅಂತಾ ಮೆಸೇಜ್ ಕಳುಹಿಸಿ ಬಲಿಯಾದ ಪ್ರೇಮಿ

    – ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕೊಂದು ಸಿಕ್ಕಿಬಿದ್ದ ಪತಿ!

    ಬೆಂಗಳೂರು: ಒಪ್ಪಿತ ಅಕ್ರಮ ಸಂಬಂಧ ಅಪರಾಧವಲ್ಲ ಅಂತ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ ಪತಿಯೊಬ್ಬ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡು ಸಿನಿಮಿ ರೀತಿಯಲ್ಲಿ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿ ಪತಿ ಹಾಗೂ ಕೃತ್ಯಕ್ಕೆ ಸಹಾಯ ಮಾಡಿದ್ದ ಆತನ ಸ್ನೇಹಿತನ್ನು ಪೊಲೀಸರು ಬಂಧಿಸಿದ್ದಾರೆ.

    ಪತಿ ಗಂಗರಾಜ್ (28) ಹಾಗೂ ಆತನ ಸ್ನೇಹಿತ ಕೃಷ್ಣ ಬಂಧಿತ ಆರೋಪಿಗಳು. ಆಂಧ್ರಪ್ರದೇಶ ಮೂಲದ ಚಕ್ರಾಧರ (28) ಕೊಲೆಯಾದ ದುರ್ದೈವಿ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯ ಚಿಕ್ಕ ತೋಗೂರಿನಲ್ಲಿ ಇದೇ ತಿಂಗಳ 25ರಂದು ಅರೆನಗ್ನ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ತನಿಖೆ ಆರಂಭಿಸಿದ್ದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬುಧವಾರ ಆರೋಪಿಗಳನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?:
    ಕೊಲೆಯಾದ ಚಕ್ರಾಧರ ಖಾಸಗಿ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದು, ದೊಡ್ಡ ತೋಗೂರಿನಲ್ಲಿ ವಾಸವಾಗಿದ್ದ. ತಾನು ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಹೀಗೆ ಸುಮಾರು ದಿನಗಳಿಂದ ಇಬ್ಬರ ಮಧ್ಯ ಸಂಬಂಧ ನಡೆದಿತ್ತು. ಒಂದು ದಿನ ಚಕ್ರಾಧರ ಆಕೆಯ ಮೊಬೈಲ್‍ಗೆ ಐ ಲವ್ ಯೂ ಎಂದು ಮೆಸೇಜ್ ಮಾಡಿದ್ದ. ಇದನ್ನು ನೋಡಿದ್ದ ಮಹಿಳೆಯ ಪತಿ ಗಂಗರಾಜ್ ಕೆಂಡಾಮಂಡಲನಾಗಿ, ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದ್ದ.

    ಗಂಗರಾಜ್ ತನ್ನ ಪತ್ನಿಯ ಮೊಬೈಲ್‍ನಿಂದ ಚಕ್ರಾಧರನಿಗೆ ರಿಪ್ಲೈ ಮಾಡಿ ಮನೆಗೆ ಕರೆಸಿಕೊಂಡಿದ್ದ. ಕೊಲೆಗೆ ಸಂಚು ರೂಪಿಸಿದ್ದ ಗಂಗರಾಜ್ ತನ್ನ ಸ್ನೇಹಿತ ಕೃಷ್ಣ ಎಂಬವನನ್ನು ಮನೆಗೆ ಕರೆಸಿಕೊಂಡಿದ್ದ. ಇತ್ತ ಚಕ್ರಾಧರ ಪ್ರಿಯತಮೆಯ ಮೆಸೇಜ್ ನೋಡಿ ಖುಷಿಯಿಂದ ಮನೆಯತ್ತ ಓಡೋಡಿ ಬಂದಿದ್ದ. ಆದರೆ ಚಕ್ರಧರ ಮನೆ ಒಳಗೆ ಬರುತ್ತಿದ್ದಂತೆ ಆತನಿಗೆ ಆಘಾತವೇ ಕಾದಿತ್ತು.

    ಪ್ರಿಯತಮೆ ಬದಲಾಗಿ ಆಕೆಯ ಪತಿಯನ್ನು ಕಂಡ ಚಕ್ರಾಧರ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದ. ತಕ್ಷಣವೇ ಆತನ್ನು ಮನೆಯ ಒಳಗಡೆ ಎಳೆದುಕೊಂಡ ಗಂಗರಾಜ್ ಹಾಗೂ ಕೃಷ್ಣಾ ಹಿಗ್ಗಾಮುಗ್ಗಾ ಥಳಿಸಿ, ಗುಪ್ತಾಂಗಕ್ಕೆ ಹೊಡೆದು ಕೊಲೆಗೈದಿದ್ದರು. ಬಳಿಕ ಮೃತ ಚಕ್ರಾಧರ ದೇಹವನ್ನು ಚಿಕ್ಕತೋಗೂರಿನ ರಸ್ತೆಯಲ್ಲಿ ಬಿಸಾಡಿ ಹೋಗಿದ್ದರು. ಅರೆನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಸಿಕ್ಕಿಬಿದ್ದಿದ್ದು ಹೇಗೆ?:
    ಅರೆನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಚಕ್ರಾಧರನನ್ನು ಪರಿಶೀಲನೆ ನಡೆಸಿದಾಗ, ಆತನ ಬಳಿ ಇದ್ದ ವಸ್ತುಗಳನ್ನು ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದರು. ಚಕ್ರಾಧರ ಬಳಿ ಸಿಕ್ಕ ದಾಖಲೆಗಳ ಪ್ರಕಾರ ಆತ, ಆಂಧ್ರಪ್ರದೇಶ ಯುವಕ ಹಾಗೂ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಬಳಿಕ ಆತನ ಮೊಬೈಲ್ ನಲ್ಲಿ ಕಾಲ್ ಹಾಗೂ ಮೆಸೇಜ್ ಮಾಹಿತಿ ಪಡೆದ ಪೊಲೀಸರು, ಗಂಗರಾಜ್ ಪತ್ನಿಯನ್ನು ವಿಚಾರಣೆ ಮಾಡಿದ್ದಾರೆ. ಆಕೆಯ ಪತಿಯೇ ಈ ಕೃತ್ಯ ಎಸಗಿದ್ದಾನೆ ಅಂತ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆರೋಪಿ ನಡೆದ ಘಟನೆ ಹೇಳಿಕೊಂಡಿದ್ದಾನೆ. ಕೃತ್ಯಕ್ಕೆ ಸಹಾಯ ಮಾಡಿದ್ದ ಗಂಗರಾಜ್ ಸ್ನೇಹಿತ ಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪರ ಸ್ತ್ರೀ ಜೊತೆ ಪತಿಯ ಚಕ್ಕಂದ – ಕಾರ್ಯಾಚರಣೆ ನಡೆಸಿ ಹಿಡಿದ ಪತ್ನಿ!

    ಪರ ಸ್ತ್ರೀ ಜೊತೆ ಪತಿಯ ಚಕ್ಕಂದ – ಕಾರ್ಯಾಚರಣೆ ನಡೆಸಿ ಹಿಡಿದ ಪತ್ನಿ!

    ಮೈಸೂರು: ಪರ ಸ್ತ್ರೀ ಜೊತೆ ಚಕ್ಕಂದವಾಡುತ್ತಿದ್ದಾಗ ಸಿಕ್ಕಿಬಿದ್ದ ವ್ಯಕ್ತಿಯೊಬ್ಬನಿಗೆ ಗ್ರಾಮಸ್ಥರು ಗೂಸಾ ನೀಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಮೈಸೂರು ತಾಲೂಕಿನ ನಾಗನಗಳ್ಳಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಕಬ್ಬಾಳಮ್ಮ ದೇವಾಲಯದ ಗುಡ್ಡಪ್ಪ ದೇವರಾಜು ಗೂಸ ತಿಂದ ವ್ಯಕ್ತಿ. ಗುಡ್ಡಪ್ಪನ ಅಕ್ರಮ ಸಂಬಂಧ ಕಂಡುಹಿಡಿಯಲು ಆತನ ಪತ್ನಿಯಿಂದಲೇ ಕಾರ್ಯಾಚರಣೆ ನಡೆದಿದೆ. ಗುಡ್ಡಪ್ಪನ ಪತ್ನಿಯ ಕಾರ್ಯಾಚರಣೆಗೆ ಗ್ರಾಮಸ್ಥರು ನೆರವಾಗಿದ್ದರು. ಇದನ್ನೂ ಓದಿ: ಲವ್ವರ್ ಜೊತೆ ಸೆಕ್ಸ್ ನಲ್ಲಿದ್ದಾಗ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿ..!

    ಗಡ್ಡಪ್ಪನ ಪತ್ನಿಗೆ ಪತಿಯ ಅಕ್ರಮ ಸಂಬಂಧದ ಬಗ್ಗೆ ಅನುಮಾನ ಬಂದಿದೆ. ಅದೇ ರೀತಿ ಪತ್ನಿ ಪ್ರತಿದಿನ ಪತಿಯನ್ನು ಹಿಂಬಾಲಿಸಿದ್ದಾರೆ. ಕೊನೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮನೆಯ ಬಗ್ಗೆ ತಿಳಿದುಕೊಂಡು ಇಂದು ಗ್ರಾಮಸ್ಥರ ಜೊತೆ ಸೇರಿ ರೆಡ್ ಹ್ಯಾಂಡ್ ಆಗಿ ಹಿಡಿದ್ದಾರೆ.

    ಗ್ರಾಮಸ್ಥರ ದಾಳಿಗೆ ಹೆದರಿ ಗುಡ್ಡಪ್ಪ ಅಟ್ಟದ ಮೇಲೆ ಹತ್ತಿ ಅವಿತು ಕುಳಿತಿದ್ದು, ಅರೆಬೆತ್ತಲೆ ಸ್ಥಿತಿಯಲ್ಲಿ ದೇವರಾಜು ಸಿಕ್ಕಿಬಿದ್ದಿದ್ದಾನೆ. ಕೊನೆಗೆ ಪತ್ನಿಯ ಜೊತೆಗೆ ಗ್ರಾಮಸ್ಥರು ಗುಡ್ಡಪ್ಪನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೀತಿಸಿ ಮದ್ವೆಯಾಗಿ 2 ವರ್ಷದ ಮಗಳ ಎದುರೇ ಪತ್ನಿಯನ್ನ ಕೊಂದ

    ಪ್ರೀತಿಸಿ ಮದ್ವೆಯಾಗಿ 2 ವರ್ಷದ ಮಗಳ ಎದುರೇ ಪತ್ನಿಯನ್ನ ಕೊಂದ

    – ಶವದ ಜೊತೆ 24 ಗಂಟೆ ಕಳೆದು ಶರಣಾದ

    ದೆಹಲಿ: ತನ್ನ ಎರಡು ವರ್ಷದ ಮಗಳ ಎದುರೇ ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿದ ಘಟನೆ ಕೇಂದ್ರ ದೆಹಲಿಯ ಕಮಲಾ ಮಾರುಕಟ್ಟೆಯ ಬಡವಾಣೆಯಲ್ಲಿ ನಡೆದಿದೆ.

    22 ವರ್ಷದ ರೇಷ್ಮಾ ಕೊಲೆಯಾದ ನತದೃಷ್ಟೆ. 24 ವರ್ಷದ ಕಮಲಿ ತನ್ನ ಪತ್ನಿ ನಗರದ ಇಬ್ಬರು ಯುವಕರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

    ಶುಕ್ರವಾರ ರಾತ್ರಿಯೇ ಕಮಲಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಆದ್ರೆ ಮೃತ ದೇಹವನ್ನು ಮನೆಯಿಂದ ಸ್ಥಳಾಂತರಿಸಲು ಪ್ರಯತ್ನಿಸಿ ವಿಫಲವಾಗಿದ್ದಾನೆ. 24 ಗಂಟೆ ಮಗಳೊಂದಿಗೆ ಮನೆಯಲ್ಲಿಯೇ ಕುಳಿತಿದ್ದ ಕಮಲಿ ಭಾನುವಾರ ರಾತ್ರಿ ಸುಮಾರು 1 ಗಂಟೆಗೆ ಕಮಲಾ ಮಾರುಕಟ್ಟೆಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಆರೋಪಿಯ ಹೇಳಿಕೆ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದಾಗ ರೇಷ್ಮಾ ಮೃತದೇಹ ಪತ್ತೆಯಾಗಿದೆ ಎಂದು ಕೇಂದ್ರ ದೆಹಲಿಯ ಡಿಸಿಪಿ ಎಂ.ಎಸ್.ರಾಂಧವ್ ತಿಳಿಸಿದ್ದಾರೆ.

    ಅಂಬೇಡ್ಕರ್ ಯೂನಿವರ್ಸಿಟಿಯಲ್ಲಿ ಡಿ ಗ್ರೂಪ್ ನೌಕರನಾಗಿ ಕಮಲಿ ಕೆಲಸ ಮಾಡಿಕೊಂಡಿದ್ದನು. ಮೂರು ವರ್ಷಗಳ ಹಿಂದೆ ರೇಷ್ಮಾಳನ್ನು ಪ್ರೀತಿಸಿ ಮದುವೆಯಾಗಿ, ಕಮಲಾ ಮಾರುಕಟ್ಟೆ ಬಡಾವಣೆಯಲ್ಲಿ ಫ್ಲ್ಯಾಟ್ ಬಾಡಿಗೆ ಪಡೆದು ಜೀವನ ಸಾಗಿಸುತ್ತಿದ್ದನು. ಮದುವೆಯ ನಂತರ ಪತ್ನಿ ಸ್ನೇಹಿತರ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದನು. ಈ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು.

    ಪತಿಯೊಂದಿಗೆ ಜಗಳ ಮಾಡಿಕೊಂಡು ತವರು ಮನೆ ಸೇರಿದ್ದ ರೇಷ್ಮಾ ಶುಕ್ರವಾರ ಹಿಂದಿರುಗಿದ್ದಳು. ಮನೆಗೆ ಬಂದ ಪತ್ನಿಯೊಡನೇ ಕಮಲಿ ಮತ್ತೆ ಅದೇ ವಿಚಾರಕ್ಕೆ ಜಗಳ ಮಾಡಿದ್ದಾನೆ. ಕೊನೆಗೆ ಮದ್ಯದ ನಶೆಯಲ್ಲಿದ್ದ ಪತ್ನಿಯನ್ನು ಮಗಳ ಎದುರೇ ಕೊಲೆ ಮಾಡಿದ್ದಾನೆ. ಕಮಲಿ ಓರ್ವ ಮದ್ಯವ್ಯಸನಿ ಆಗಿದ್ದು, ರೇಷ್ಮಾಗೆ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದನು. ಹಣ ತರದೇ ಇದ್ದಾಗ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದನು ಎಂದು ರೇಷ್ಮಾ ಪೋಷಕರು ಆರೋಪಿಸುತ್ತಿದ್ದಾರೆ.

    ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತ ದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನವಜಾತ ಶಿಶುವನ್ನು ಬಕೆಟ್ ನಲ್ಲಿ ಮುಳುಗಿಸಿ ಕೊಂದಿದ್ದ ತಂದೆ, ತಾಯಿ, ಅಜ್ಜಿಯ ಬಂಧನ

    ನವಜಾತ ಶಿಶುವನ್ನು ಬಕೆಟ್ ನಲ್ಲಿ ಮುಳುಗಿಸಿ ಕೊಂದಿದ್ದ ತಂದೆ, ತಾಯಿ, ಅಜ್ಜಿಯ ಬಂಧನ

    -ಮಗಳ ಅಕ್ರಮ ಸಂಬಂಧ ಮುಚ್ಚಲು ತಾಯಿ ಪ್ರಯತ್ನ

    ಚೆನ್ನೈ: ಬಕೆಟ್ ನಲ್ಲಿ ನವಜಾತ ಹೆಣ್ಣು ಶಿಶುವನ್ನು ಮುಳುಗಿಸಿ ಕೊಲೆ ಮಾಡಿದ್ದ ತಂದೆ, ತಾಯಿ ಮತ್ತು ಅಜ್ಜಿಯನ್ನು ಪೊಲೀಸರು ಗುರುವಾರ ಸಂಜೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ನವಜಾತಶಿಶು ಕೊಂದ ಬಳಿಕ ತಿಪ್ಪೆಗುಂಡಿಯಲ್ಲಿ ಎಸೆದು ಪರಾರಿಯಾಗಿದ್ದರು. ಬೆಳಗ್ಗೆ ಕಾರ್ಪೋರೇಷನ್ ಸಿಬ್ಬಂದಿ ನವಜಾತ ಶಿಶುವಿನ ಶವವನ್ನು ನೋಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಒಂದು ತಿಂಗಳ ನಂತರ ಆರೋಪಿಗಳನ್ನು ಬಂಧಿಸಿದ್ದಾರೆ.

    ತಾಯಿ ವಾಸಂತಿ (22), ತಂದೆ ಜಯರಾಜ್(23), ಅಜ್ಜಿ ವಿಜಯಾ (50) ಬಂಧಿತ ಆರೋಪಿಗಳು. ಬಂಧಿತರು ಕನ್ನಿಗಪುರಂ ನಗರದ ಗುಂಡಿ ನಿವಾಸಿಗಳು. ಪೊಲೀಸರು ಮಗುವಿನ ಶವ ಸಿಕ್ಕ ಸ್ಥಳದಲ್ಲಿಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನಾಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಅಕ್ರಮ ಸಂಬಂಧ:
    ವಾಸಂತಿ ಕಳೆದ ಮೂರು ವರ್ಷಗಳಿಂದ ಜಯರಾಜ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದಳು. ಆರು ತಿಂಗಳ ಹಿಂದೆ ವಾಸಂತಿಗೆ ತಾನು ಗರ್ಭಿಣಿ ಎಂಬುವುದು ಗೊತ್ತಾಗಿದೆ. ತಾನು ಗರ್ಭಿಣಿ ಎಂಬುವುದನ್ನು ತಾಯಿ ವಿಜಯಾಗೆ ಹೇಳಿದ್ದಾಳೆ. ಮಗಳು ಮಾತು ಕೇಳಿದ ತಾಯಿ ನೇರವಾಗಿ ವಾಸಂತಿಗೆ ಗರ್ಭಪಾತ ಮಾಡಿಸಲು ಮುಂದಾಗಿದ್ದಾಳೆ. ಆದ್ರೆ ವೈದ್ಯರು ವಾಸಂತಿಗೆ ಗರ್ಭಪಾತ ಮಾಡುವುದು ಸೂಕ್ತವಲ್ಲ ಅಂತ ಸಲಹೆ ನೀಡಿದ್ದಾರೆ.

    ಆಸ್ಪತ್ರೆಯ ಹಿಂದಿರುಗಿ ಬಂದ ತಾಯಿ ವಿಜಯಾ, ಮಗಳನ್ನು ಮನೆಯಿಂದ ಹೊರಗಡೆ ಎಲ್ಲಿಯೂ ಕಳುಹಿಸಿಲ್ಲ. ತನ್ನ ಮನೆಗೆ ಯಾರು ಬರದಂತೆ ನೋಡಿಕೊಂಡಿದ್ದಳು. ಸೆಪ್ಟೆಂಬರ್ 16ರಂದು ವಾಸಂತಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ವಿಜಯಾ ಮಗಳನ್ನು ಸ್ಥಳೀಯ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾಳೆ. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ವಾಸಂತಿಯನ್ನು ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ದಾಖಲಾದ್ರೆ ಅಲ್ಲಿಯ ಸಿಬ್ಬಂದಿಗೆ ಎಲ್ಲ ಮಾಹಿತಿಯನ್ನು ನೀಡಬೇಕಾಗುತ್ತದೆ. ಮದುವೆಗೆ ಮುನ್ನವೇ ಮಗಳು ತಾಯಿ ಆಗುತ್ತಿರುವ ವಿಷಯ ಎಲ್ಲರಿಗೆ ತಿಳಿಯುತ್ತೆ ಎಂದು ಭಯಬೀತಳಾದ ವಿಜಯ ಮಗಳೊಂದಿಗೆ ಮನೆಗೆ ಹಿಂದಿರುಗಿದ್ದಾಳೆ.

    ಸೆಪ್ಟೆಂಬರ್ 16ರ ಬೆಳಗ್ಗೆ 10.30ಕ್ಕೆ ವಾಸಂತಿ ಮನೆಯಲ್ಲಿಯೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ವಿಜಯಾ ಮಗಳ ಗೆಳೆಯ ಜಯರಾಜನಿಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದಾಳೆ. ವಿಷಯ ತಿಳಿದು ಮನೆಗೆ ಬಂದ ಜಯರಾಜ, ಇಬ್ಬರೊಂದಿಗೆ ಮಾತನಾಡಿ, ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುವ ಪ್ಲಾನ್ ಮಾಡಿದ್ದಾರೆ. ರಾತ್ರಿ ಮೂವರು ಮಗುವನ್ನು ಕೊಲೆ ಮಾಡಿ, 11.30ರ ವೇಳೆಗೆ ವಿಜಯ ಕಂದಮ್ಮನ ಶವವನ್ನು ತಿಪ್ಪೆಗುಂಡಿಗೆ ಎಸೆದು ಬಂದಿದ್ದಾಳೆ.

    ಮರುದಿನ ಬೆಳಗ್ಗೆ ಕಸದ ಗುಂಡಿ ಸ್ವಚ್ಛಗೊಳಿಸುವ ವೇಳೆ ಪೌರ ಕಾರ್ಮಿಕರಿಗೆ ಬಟ್ಟೆಯಲ್ಲಿ ಸುತ್ತಿದ ಕಂದನ ಶವ ಸಿಕ್ಕಿದೆ. ಪೌರ ಕಾರ್ಮಿಕರು ಗುಂಡಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮರ್ಮಾಂಗವನ್ನ ಕತ್ತರಿಸಿಕೊಂಡು ಆಸ್ಪತ್ರೆಗೆ ದಾಖಲಾದ ಸಾಧು!

    ಮರ್ಮಾಂಗವನ್ನ ಕತ್ತರಿಸಿಕೊಂಡು ಆಸ್ಪತ್ರೆಗೆ ದಾಖಲಾದ ಸಾಧು!

    ಲಕ್ನೋ: 45 ವರ್ಷದ ಸಾಧು ಒಬ್ಬರು ಬ್ಲೇಡ್‍ನಿಂದ ತಮ್ಮ ಮರ್ಮಾಂಗವನ್ನು ಕತ್ತರಿಸಿಕೊಂಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶ ರಾಜ್ಯದ ಬಾಂದಾ ಜಿಲ್ಲೆಯ ಕಾಮಸಿನ್ ನಗರದಲ್ಲಿ ನಡೆದಿದೆ.

    ಮದನಿ ಬಾಬಾ ಮರ್ಮಾಂಗ ಕತ್ತರಿಸಿಕೊಂಡ ಸಾಧು. ಮದನಿ ಬಾಬಾ ಕಳೆದ ಹಲವು ವರ್ಷಗಳಿಂದ ಕಾಮಸಿನ್ ನಗರದ ಸರ್ಕಾರಿ ನಿವೇಶನದಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಗುರುವಾರ ನಗರದ ಕೆಲ ಮಹಿಳೆಯರು ಸಾಧು ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪದಿಂದ ಮನನೊಂದು ಸಾಧು ರಾತ್ರಿ ಬ್ಲೇಡ್ ನಿಂದ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರೇಪಿಸ್ಟ್ ಕಾಮಿ ಸ್ವಾಮೀಜಿಯ ಮರ್ಮಾಂಗವನ್ನೇ ಕಟ್ ಮಾಡಿದ್ಳು ಯುವತಿ!

    ಮದನಿ ಬಾಬಾರನ್ನ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದೇಹದಿಂದ ಮರ್ಮಾಂಗ ಶೇ.80 ರಷ್ಟು ಬೇರೆಯಾಗಿದೆ. ಸದ್ಯ ಸಾಧು ಅವರ ಆರೋಗ್ಯ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಾಧು ಮದನಿ ಬಾಬಾರಿಗೆ ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದ ಮೇರೆಗೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ಯುವತಿ ಅಲ್ಲ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದೆ: ಕಾಮಿ ಸ್ವಾಮೀಜಿ 

    2017ರಲ್ಲಿ ರಾಜಸ್ಥಾನದ 30 ವರ್ಷದ ಸ್ವಯಂಘೋಷಿತ ದೇವಮಾನವ ಸಂತೋಷ್ ದಾಸ್ ಅಕ್ರಮ ಸಂಬಂಧದ ಆರೋಪಕ್ಕೆ ಮನನೊಂದು ಮರ್ಮಾಂಗವನ್ನು ಕಟ್ ಮಾಡಿಕೊಂಡಿದ್ದ ಘಟನೆ ನಡೆದಿತ್ತು. ಕೇರಳದಲ್ಲಿ 23 ವರ್ಷದ ಕಾನೂನು ವಿದ್ಯಾರ್ಥಿನಿಯ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀ ಹರಿ ಅಲಿಯಾಸ್ ಗಣೇಶಾನಂದ ತೀರ್ಥಪಾದ ಸ್ವಾಮಿ ಮರ್ಮಾಂಗ ಕತ್ತರಿಸಿಕೊಂಡಿದ್ದ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು. ಇದನ್ನೂ ಓದಿ: ಅಕ್ರಮ ಸಂಬಂಧ ಆರೋಪಕ್ಕೆ ಮನನೊಂದು ಸ್ವಾಮೀಜಿ `ಅದನ್ನೇ’ ಕಟ್ ಮಾಡ್ಕೊಂಡ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಂಡನನ್ನು ಬಿಡಿಸಲು ಲಂಚ ಕೇಳಿದ್ದರಂತೆ ಪೊಲೀಸರು

    ಗಂಡನನ್ನು ಬಿಡಿಸಲು ಲಂಚ ಕೇಳಿದ್ದರಂತೆ ಪೊಲೀಸರು

    ಬೆಂಗಳೂರು: ವಿಚಾರಣೆಗೆಂದು ನನ್ನ ಗಂಡನನ್ನ ಠಾಣೆಗೆ ಕರೆಸಿ ಏಕಾಏಕಿ ಬಂಧಿಸಿಟ್ಟು, ಈಗ ಆತನನ್ನು ಬಿಡುಗಡೆಗೊಳಿಸಲು ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸಂತ್ರಸ್ತ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡುತ್ತಿದ್ದಾರೆ.

    ಬೆಂಗಳೂರು ಹೊರವಲಯ ಬಾಗಲಗುಂಟೆ ಪೊಲೀಸರ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಕಳೆದ ಮೂರು ದಿನಗಳ ಹಿಂದೆ ನಿಮ್ಮ ಮೇಲೆ ದೂರು ಬಂದಿದೆ ವಿಚಾರಣೆ ನಡೆಸಬೇಕು ಎಂದು ಸಂತ್ರಸ್ತೆ ಲಕ್ಷ್ಮೀಯ ಗಂಡ ಮಂಜುನಾಥ್ ಎಂಬವರನ್ನು ಪೊಲೀಸ್ ಠಾಣೆಗೆ ಕರೆಸಿದ್ದರಂತೆ. ವಿಚಾರಣೆಯ ನೆಪವೊಡ್ಡಿ ಬಂಧಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಮರುದಿನ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ನಿನ್ನ ಗಂಡನನ್ನು ಕಳುಹಿಸಬೇಕೆಂದರೆ ಬರೋಬ್ಬರಿ 25,000 ಹಣ ಕೇಳಿದರಂತೆ ಇಲ್ಲ ಅಂದದಕ್ಕೆ, ಎಷ್ಟಾಗುತ್ತೋ ಅಷ್ಟು ಕೊಟ್ಟು, ಎಲ್ಲಾ ಸೆಟ್ಲು ಮಾಡಿಕೊಂಡು ಹೋಗಿ ಎನ್ನುವುದರೊಂದಿಗೆ, 5,000 ರೂ. ಹಣ ಕೊಡು ಎಂದು ಬೇಡಿಕೆ ಇಟ್ಟಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

    ಠಾಣೆಗೆ ಹೋದ ವೇಳೆ ಮಹಿಳೆ ಎನ್ನುವುದನ್ನು ನೋಡದೆ ಅವಾಚ್ಯ ಶಬ್ಧಗಳಿಂದ ನಿಂದಿನೆ ಮಾಡಿದ್ದಾರೆ. ಅಲ್ಲದೆ ಮೂರು ದಿನಗಳ ನಂತರ ಕೇಳಿದಾಗ, ನಿನ್ನ ಗಂಡನ ಮೇಲೆ ಎಫ್‍ಐಆರ್ ದಾಖಲಿಸಿಕೊಂಡು ಜೈಲಿಗೆ ಕಳಿಸಿದ್ದೇವೆ ಎಂದು ಹೇಳುತ್ತಾರೆ. ಮೂರು ದಿನಗಳಿಂದ ಗಂಡನನ್ನು ಕಾಣದ ಮಹಿಳೆ, ಪೊಲೀಸರು ತೋರಿರುವ ನಡೆಯಿಂದ ಬೇಸತ್ತು ನನ್ನ ಗಂಡನನ್ನು ಕೊಡಿಸಿ ಎಂದು ಅಂಗಲಾಚಿದ್ದಾರೆ.

    ಮಂಜುನಾಥನಿಗೆ ದೂರುದಾರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಅವಳು ಈತನನ್ನು ಬಿಟ್ಟು ಮತ್ತೊಬ್ಬನ ಜೊತೆ ಸಂಸಾರ ಮಾಡುವುದಾಗಿ ತಿಳಿಸಿದ್ದು, ಈತ ಅದನ್ನು ನಿರಾಕರಿಸಿದ್ದಾನೆ. ಹೀಗಾಗಿ ದೂರುದಾರೆ ಮಹಿಳೆ ತನ್ನ ಮತ್ತೊಂದು ಹೊಸ ಸಂಬಂಧಕ್ಕೆ ಧಕ್ಕೆ ಉಂಟಾಗಬಾರದು ಎಂದು ಮಂಜುನಾಥನ ವಿರುದ್ಧ ದೂರು ನೀಡಿ ಠಾಣೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ದೂರುದಾರೆ ದೂರು ನೀಡುವ ಮೊದಲು ಮಂಜುನಾಥನಿಗೆ ಫೋನ್ ಮಾಡಿ, ತನ್ನ ಮತ್ತೊಂದು ಸಂಬಂಧದ ಬಗ್ಗೆ ನಿವೇದನೆ ಮಾಡಿಕೊಂಡಿರುವ ಆಡಿಯೋ ಸಹ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಾಯಿ ಮೇಲೆ ಪ್ರಿಯಕರ ಮಲಗಿದ್ದನ್ನ ಕಂಡ ಮಗ – ಅಪ್ಪನಿಗೆ ಹೇಳ್ತೀನಿ ಅಂದಿದ್ದೇ ತಪ್ಪಾಯ್ತು!

    ತಾಯಿ ಮೇಲೆ ಪ್ರಿಯಕರ ಮಲಗಿದ್ದನ್ನ ಕಂಡ ಮಗ – ಅಪ್ಪನಿಗೆ ಹೇಳ್ತೀನಿ ಅಂದಿದ್ದೇ ತಪ್ಪಾಯ್ತು!

    ಚಾಮರಾಜನಗರ: ತನ್ನ ಅಕ್ರಮ ಸಂಬಂಧದ ಬಗ್ಗೆ ಮಗನಿಗೆ ಗೊತ್ತಾಗುತ್ತಿದ್ದಂತೆ ತಾಯಿಯೊಬ್ಬಳು ಮಗನ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸಿಲ್ಕಲ್ ಪುರ ಗ್ರಾಮದಲ್ಲಿ ನಡೆದಿದೆ.

    ಪ್ರೀತಂ (7) ತಾಯಿಯಿಂದ ಕೊಲೆಯಾದ ದುರ್ದೈವಿ. ಬಾಲಕನ ತಾಯಿ ಸಾಕಮ್ಮ(31) ಪ್ರಿಯಕರ ನಾಗರಾಜು ಜೊತೆ ಸೇರಿ ಮಗನನ್ನೇ ಕೊಂದಿದ್ದಾಳೆ. ಈ ಘಟನೆ ಅಕ್ಟೋಬರ್ 6 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    “ಅಕ್ಟೋಬರ್ 5 ಶುಕ್ರವಾರ ರಾತ್ರಿ ಮನೆಯಲ್ಲಿ ನಾನು ಇರಲಿಲ್ಲ. ಮಲಗಿದ್ದ ಮಗ ಪ್ರೀತಂಗೆ ರಾತ್ರಿ 11 ಗಂಟೆಯ ವೇಳೆಗೆ ಎಚ್ಚರ ಆಗಿತ್ತು. ತನ್ನ ತಾಯಿ ಸಾಕಮ್ಮಳ ಮೇಲೆ ಪ್ರಿಯಕರ ನಾಗರಾಜು ಮಲಗಿದ್ದ. ಇದನ್ನು ನೋಡಿದ ಪ್ರೀತಂ, ಅಪ್ಪ ಬರಲಿ ಹೇಳುತ್ತೇನೆ. ಅಮ್ಮನ ಮೇಲೆ ಏಕೆ ಮಲಗಿದ್ದೀಯಾ ಎಂದು ಕೇಳಿದ್ದಾನೆ. ನಂತರ ಸಾಕಮ್ಮ ಆತನಿಗೆ ಹೊಡೆದು ಮಲಗಿಸಿ ಬಿಟ್ಟಿದ್ದಳು. ಮಗ ಮಲಗಿದ ನಂತರ ಇಬ್ಬರು ಸೇರಿ ಹೆತ್ತ ಮಗನನ್ನೇ ಕೊಲೆ ಮಾಡಲು ಪ್ಲಾನ್ ಮಾಡಿದ್ದರು” ಎಂದು ಬಾಲಕನ ತಂದೆ ನಂಜುಂಡಸ್ವಾಮಿ ಅವರು ಹೇಳಿದ್ದಾರೆ.

    ಮರುದಿನ ಶನಿವಾರ ಆಗಿದ್ದರಿಂದ ಪ್ರೀತಂ ಬೆಳಗ್ಗೆ ಶಾಲೆ ಮುಗಿಸಿಕೊಂಡು ಮನೆಗೆ ಬಂದು ಊಟ ಮಾಡಿ ಹೊರಗೆ ಆಟ ಆಡಲು ಹೋಗಿದ್ದನು. ಮನೆಗೆ ತಂದೆ ನಂಜುಂಡಸ್ವಾಮಿ ಬಂದಿರಲಿಲ್ಲ. ನಂಜುಂಡಸ್ವಾಮಿ ಶುಕ್ರವಾರ ರಾತ್ರಿ ಅಡುಗೆ ಕಾಂಟ್ರಾಕ್ಟ್ ಇದ್ದರಿಂದ ಕೆಲಸ ಮುಗಿಸಿ ಶನಿವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಮನೆಗೆ ಬಂದಿದ್ದಾನೆ. ಮನೆಗೆ ಬಂದಾಗ ಮಗ ಎಲ್ಲಿ ಎಂದು ಪತ್ನಿ ಸಾಕಮ್ಮಳನ್ನ ಕೇಳಿದ್ದಾನೆ. ಈ ವೇಳೆ ಮಗನಿಗೆ ಊಟ ಮಾಡಿಸಿದ್ದೇನೆ. ಹೊರಗೆ ಆಟ ಆಡಲು ಹೋಗುವುದಾಗಿ ಹೇಳಿ ಹೋಗಿದ್ದಾನೆ ಎಂದು ಹೇಳಿದ್ದಾಳೆ. ನಂತರ ಸಂಜೆಯಾದ್ರೂ ಮಗ ಮನೆಗೆ ಬರದೇ ಇದ್ದಾಗ ಇಬ್ಬರು ಸೇರಿ ಊರು, ಜಮೀನು ಹುಡುಕಿದ್ದಾರೆ. ಆದರೆ ಎಲ್ಲೂ ಪ್ರೀತಂ ಪತ್ತೆಯಾಗಿಲ್ಲ. ಭಾನುವಾರ ಕೊಳ್ಳೇಗಾಲ ಪೊಲೀಸ್ ಠಾಣೆಗೆ ಹೋಗಿ ನಂಜುಂಡಸ್ವಾಮಿ ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲು ಮಾಡಿದ್ದರು. ಅಕ್ಟೋಬರ್ 9 ಮಂಗಳವಾರ ಸಂಜೆ ವೇಳೆಗೆ ಸಿಲ್ಕಲ್ ಪುರ ಗ್ರಾಮದ ಕೆರೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ ಎಂದು ಬಾಲಕನ ಅಜ್ಜಿ ನಾಗಮ್ಮ ಹೇಳಿದ್ದಾರೆ.

    ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಮಗುವಿನ ಶವ ಸಿಗುತ್ತಿದ್ದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬುಧವಾರ ಮಗುವಿನ ಅಂತ್ಯಕ್ರೀಯೆ ನಡೆಸಿದ ಮರುದಿನ ಪೊಲೀಸರು ನಂಜುಂಡಸ್ವಾಮಿ ಮತ್ತು ಸಾಕಮ್ಮಳನ್ನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಾಕಮ್ಮ ಶುಕ್ರವಾರ ನಡೆದಿದ್ದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಗಂಡನಿಗೆ ಅನೈತಿಕ ಸಂಬಂಧ ತಿಳಿಯಬಾರದು ಎಂಬ ಉದ್ದೇಶದಿಂದ ಪ್ರಿಯಕರ ನಾಗರಾಜು ಜೊತೆಗೆ ಸೇರಿ ಮಗ ಪ್ರೀತಂನ ಕುತ್ತಿಗೆಯನ್ನ ಹಿಸುಕಿ ಕೊಲೆ ಮಾಡಿದ್ದೇವು. ಶನಿವಾರ ಶಾಲೆ ಮುಗಿಸಿಕೊಂಡು ಬಂದ ಪ್ರೀತಂ ನನ್ನ ಚಾಕ್ಲೇಟ್ ಕೊಡಿಸುವುದಾಗಿ ಜಮೀನಿನ ಬಳಿ ಕರೆದು ನಂತರ ಆತನನ್ನ ಕೊಲೆ ಮಾಡಿ ಗ್ರಾಮದ ಹೊರ ವಲಯದಲ್ಲಿದ್ದ ಕೆರೆಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರು ತಿಳಿಸಿದ್ದಾರೆ.

    ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರ ವಿಚಾರಣೆಯಿಂದ ಸತ್ಯ ಹೊರ ಬರುತ್ತಿದ್ದಂತೆ ಪ್ರಿಯಕರ ನಾಗರಾಜುನನ್ನ ಪೊಲೀಸರು ಬಂಧಿಸಿದ್ದಾರೆ. ನಂತರ ಕೊಲೆ ಮಾಡಿದ ಸ್ಥಳಗಳಿಗೆ ನಾಗರಾಜುನನ್ನು ಕರೆದುಕೊಂಡು ಹೋಗಿ ತನಿಖೆ ಮಾಡಿದ್ದಾರೆ. ಆರೋಪಿ ಸಾಕಮ್ಮಳನ್ನು ಮೈಸೂರಿನ ಜೈಲಿಗೆ ರವಾನಿಸಿದ್ದಾರೆ. ತಮ್ಮ ಕಾಮದಾಟಕ್ಕೆ ಹೆತ್ತ ಮಗನನ್ನೇ ಬಲಿ ಕೊಟ್ಟ ಆಕೆಗೆ ಕಠಿಣವಾದ ಶಿಕ್ಷೆ ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ನೇಹಿತನ ಪತ್ನಿಯ ಜೊತೆ ಲವ್ವಿಡವ್ವಿ – ಅಕ್ರಮ ಸಂಬಂಧ ಬಯಲು ಮಾಡಿದ್ದಕ್ಕೆ ಉಪನ್ಯಾಸಕಿಗೆ ಚೂರಿ ಇರಿದ!

    ಸ್ನೇಹಿತನ ಪತ್ನಿಯ ಜೊತೆ ಲವ್ವಿಡವ್ವಿ – ಅಕ್ರಮ ಸಂಬಂಧ ಬಯಲು ಮಾಡಿದ್ದಕ್ಕೆ ಉಪನ್ಯಾಸಕಿಗೆ ಚೂರಿ ಇರಿದ!

    ಬಳ್ಳಾರಿ: ಪಕ್ಕದ ಮನೆ ಉಪನ್ಯಾಸಕಿ ತನ್ನ ಅಕ್ರಮ ಸಂಬಂಧವನ್ನು ಸ್ನೇಹಿತನ ಬಳಿ ಬಯಲು ಮಾಡಿದ್ದಕ್ಕೆ ಸಿಟ್ಟಾಗಿ ಆಕೆಗೆ ಚಾಕು ಇರಿದ ಘಟನೆಯೊಂದು ಬಳ್ಳಾರಿಯಲ್ಲಿ ನಡೆದಿದೆ.

    ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಪ್ರಶಾಂತ್ ತನ್ನ ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಸ್ನೇಹಿತ ಮನೆಯಲ್ಲಿ ಇಲ್ಲದ ವೇಳೆ ಮನೆಗೆಲ್ಲಾ ಹೋಗಿ ಬರುತ್ತಿದ್ದ. ಈ ವಿಚಾರವನ್ನು ಪಕ್ಕದ ಮನೆಯಲ್ಲಿದ್ದ ಉಪನ್ಯಾಸಕಿ ಸುಧಾರಾಣಿಯೇ ತನ್ನ ಅಕ್ರಮ ಸಂಬಂಧದ ಬಗ್ಗೆ ಸ್ನೇಹಿತನಿಗೆ ಚಾಡಿ ಹೇಳಿದ್ದಾಳೆ ಎಂದು ರೊಚ್ಚಿಗೆದ್ದು ಉಪನ್ಯಾಸಕಿಗೆ ಚಾಕು ಇರಿದಿದ್ದಾನೆ.

    ಗುಡೇಕೋಟೆಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಸುಧಾರಾಣಿ ಮಂಗಳವಾರ ಸಂಜೆ ಕಾಲೇಜು ಮುಗಿಸಿ ಮನೆಗೆ ತೆರಳುವ ವೇಳೆ ಪ್ರಶಾಂತ್ ದಾಳಿ ಮಾಡಿ ಚಾಕು ಇರಿದಿದ್ದಾನೆ. ಘಟನೆಯನ್ನು ನೋಡಿದ ಸ್ಥಳೀಯರು ಪ್ರಶಾಂತ್‍ಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಸದ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದ ಉಪನ್ಯಾಸಕಿಯನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ದಾಖಲಿಸಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಿರುವ ಗುಡೇಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗನಿಂದಾಗಿ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು, ಕತ್ತು ಸೀಳಿ ಕೊಂದು ಪತಿ ಎಸ್ಕೇಪ್!

    ಮಗನಿಂದಾಗಿ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು, ಕತ್ತು ಸೀಳಿ ಕೊಂದು ಪತಿ ಎಸ್ಕೇಪ್!

    ನವದೆಹಲಿ: ಮಗನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ತಾರಕಕ್ಕೇರಿ ಪತಿ ತನ್ನ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆಗೈದ ಘಟನೆ ನವದೆಹಲಿಯಲ್ಲಿ ನಡೆದಿದೆ.

    28 ವರ್ಷದ ದಿವ್ಯ ತನ್ನ ಪತಿ ಅಫ್ತಬ್ ಅಹ್ಮದ್(32) ನಿಂದ ಕೊಲೆಗೀಡಾಗಿದ್ದಾಳೆ. ಪತಿಗೆ ಅಕ್ರಮ ಸಂಬಂಧ ಇರುವ ಶಂಕೆಯೇ ಈಕೆಯ ಕೊಲೆಗೆ ಕಾರಣವಾಗಿದೆ.

    ಘಟನೆ ವಿವರ:
    ದಿವ್ಯಾ ಹಾಗೂ ಅಫ್ತಬ್ ಮನೆಯ ವಿರೋಧದ ನಡುವೆಯೇ ಮದುವೆಯಾಗಿದ್ದು, ಬಳಿಕ ದೆಹಲಿಯ ನಜಾಫ್ ಗ್ರಹ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆಲ ದಿನಗಳವರೆಗೆ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಕ್ಲುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಮಾತುಕತೆಗಳು ನಡೆಯುತ್ತಿತ್ತು. ತದನಂತರ ದಿವ್ಯ, ಪತಿಗೆ ಅಕ್ರಮ ಸಂಬಂಧವಿರುವ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾಳೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದಿನಕಳೆದಂತೆ ಇಬ್ಬರ ಮಧ್ಯೆ ಮೈನಸ್ಸು ಮೂಡಿತ್ತು. ಹೀಗಾಗಿ ಬುಧವಾರ ರಾತ್ರಿ ಅಕ್ರಮ ಸಂಬಂಧ ವಿಚಾರವಾಗಿ ನಡೆದ ಗಲಾಟೆ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು, ಕತ್ತು ಸೀಳಿ ಕೊಲೆ ಮಾಡುವಲ್ಲಿ ಅಂತ್ಯವಾಗಿದೆ.

    ಪ್ರಕರಣ ಸಂಬಂಧ ಆರೋಪಿ ಪತಿ ಅಫ್ತಬ್ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಘಟನೆ ಬಳಿಕ ಆತ ತಲೆಮರೆಸಿಕೊಂಡಿದ್ದು, ಅಫ್ತಬ್ ಪತ್ತೆಗೆ ಬಲೆ ಬೀಸಲಾಗಿದೆ. ಈ ಘಟನೆ ನಜಾಫ್ ಗ್ರಹ್ ನ ರಣಜಿ ಎನ್ಕ್ಲೇವ್ ಎಂಬ ಪ್ರದೇಶದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ. ಆರೋಪಿ ಅಫ್ತಬ್ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದನು.

    ದಂಪತಿಗೆ 3 ವರ್ಷದ ಮಗನಿದ್ದಾನೆ. ಅಫ್ತಬ್ ಗೆ ಅಕ್ರಮ ಸಂಬಂಧವಿದೆಯೆಂದು ದಿವ್ಯ ಸಂಶಯ ವ್ಯಕ್ತಪಡಿಸಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ಮಧ್ಯೆ ಆಗಾಗ ಜಗಳ ನಡೆಯುತಿತ್ತು. ಕಳೆದ ಎರಡು ವಾರಗಳ ಹಿಂದೆ ತನ್ನ ಮಗನನ್ನ ಅಫ್ತಬ್ ತಂದೆ-ತಾಯಿ ಮನೆಯಲ್ಲಿ ಬಿಟ್ಟು ಮಂಗಳವಾರವಷ್ಟೇ ವಾಪಸ್ಸಾಗಿದ್ದನು. ಆದ್ರೆ ಮಗನನ್ನು ತನ್ನ ಹೆತ್ತವರ ಮನೆಯಲ್ಲಿ ಬಿಟ್ಟು ಬಂದಿರೋ ವಿಚಾರವನ್ನು ಅಫ್ತಬ್, ಪತ್ನಿ ದಿವ್ಯಳ ಬಳಿ ಹೇಳಿರಲಿಲ್ಲ ಅಂತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಅಫ್ತಬ್ ಮಂಗಳವಾರ ಮನೆಗೆ ವಾಪಸ್ಸಾಗುತ್ತಿದ್ದಂತೆಯೇ ಜೊತೆ ಮಗ ಇಲ್ಲದಿರುವುದನ್ನು ಕಂಡು ರೊಚ್ಚಿಗೆದ್ದ ದಿವ್ಯ, ಪತಿ ಜೊತೆ ಖ್ಯಾತೆ ತೆಗೆದಿದ್ದಾಳೆ. ಅಲ್ಲದೇ ನನ್ನ ಮಗನನ್ನು ಮಾರಾಟ ಮಾಡಿದ್ದಿ ಅಂತ ಹೇಳಿ ತಗಾದೆ ತೆಗೆದಿದ್ದಾಳೆ. ಪತ್ನಿಯ ಗಲಾಟೆಯಿಂದ ಬೇಸತ್ತ ಅಫ್ತಬ್, ಪಕ್ಕದಲ್ಲೇ ಇದ್ದ ಸುತ್ತಿಗೆಯನ್ನು ತೆಗೆದುಕೊಂಡು ದಿವ್ಯ ತಲೆಗೆ ಹೊಡೆದಿದ್ದಾನೆ. ಅಲ್ಲದೇ ಚಾಕುವಿನಿಂದ ಕುತ್ತಿಗೆಯನ್ನು ಸೀಳಿದ್ದಾನೆ. ಪರಿಣಾಮ ದಿವ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಬಳಿಕ ಆತ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

    ಬುಧವಾರ ಸಂಜೆಯಾಗುತ್ತಿದ್ದಂತೆಯೇ ದಿವ್ಯ ಕಾಣದಿದ್ದರಿಂದ ಸಂಶಯಗೊಂಡ ನೆರೆಮನೆಯವರು ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮನೆ ಬಾಗಿಲು ಒಡೆದು ನೋಡಿದಾಗ ದಿವ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಈ ಮೂಲಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ವಿವಾಹೇತರ ಸಂಬಂಧ ಅಪರಾಧವಲ್ಲ- ಗಂಡನ ವಾದಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ

    ವಿವಾಹೇತರ ಸಂಬಂಧ ಅಪರಾಧವಲ್ಲ- ಗಂಡನ ವಾದಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ

    ಚೆನ್ನೈ: ವಿವಾಹೇತರ ಸಂಬಂಧ ಅಪರಾಧವಲ್ಲ ಎಂದು ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ ತೀರ್ಪು ನೀಡಿದ ಬೆನ್ನಲ್ಲೇ ತಮಿಳುನಾಡಿನಲ್ಲಿ ಮಹಿಳೆಯೊಬ್ಬರು ಪತಿ ಬೇರೊಬ್ಬ ಮಹಿಳೆಯ ಜೊತೆಗೆ ಸಂಬಂಧ ಹೊಂದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ತಮಿಳನಾಡಿನ ಚೆನ್ನೈನ ಪುಷ್ಪಲತಾ (24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಜಾನ್ ಪೌಲ್ ಫ್ರಾಂಕ್ಲಿನ್ (27) ಮತ್ತು ಪುಷ್ಪಲತಾ 2 ವರ್ಷಗಳ ಹಿಂದೆಯೇ ಇಬ್ಬರು ಪ್ರೀತಿಸಿ, ಪೋಷಕರ ವಿರೋಧದ ನಡುವೆ ವಿವಾಹವಾಗಿದ್ದರು.

    ಜಾನ್ ಪೌಲ್ ಫ್ರಾಂಕ್ಲಿನ್ ಚೆನ್ನೈ ನಗರದ ಪಾರ್ಕ್ ಒಂದರಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಪುಷ್ಪಲತಾ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದರಿಂದ ಒಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ತಪಾಸಣೆ ಮಾಡಿದ ವೈದ್ಯರು, ಪುಷ್ಪಲತಾಗೆ ಕ್ಯಾನ್ಸರ್ ಇರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಪತ್ನಿಯ ಜೊತೆಗೆ ಹಂತ ಹಂತವಾಗಿ ದೂರ ಉಳಿಯುತ್ತ ಬಂದ ಜಾನ್ ಪೌಲ್ ಫ್ರಾಂಕ್ಲಿನ್ ಮತ್ತೊಬ್ಬ ಮಹಿಳೆಯ ಜೊತೆಗೆ ಸಂಬಂಧ ಬೆಳೆಸಿದ್ದ.

    ಪುಷ್ಪಲತಾ ಎಷ್ಟೇ ಕೇಳಿಕೊಂಡರೂ, ಜಾನ್ ಪೌಲ್ ಫ್ರಾಂಕ್ಲಿನ್ ತನ್ನ ಸಂಬಂಧವನ್ನು ಬಿಟ್ಟಿರಲಿಲ್ಲ. ಬದಲಾಗಿ ‘ಮತ್ತೊಬ್ಬರ ಜೊತೆಗೆ ಸಂಬಂಧ ಹೊಂದುವುದನ್ನು ತಡೆಯುವ ಹಕ್ಕು ನಿನಗಿಲ್ಲ ಎಂದು ಪತಿ ವಾದಿಸಿದ್ದಾನೆ. ಇದರಿಂದಾಗಿ ಬೇರೆ ದಾರಿ ತೋಚದೆ ಪುಷ್ಪಲತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಪೊಲೀಸರು ಜಾನ್ ಪೌಲ್ ಫ್ರಾಂಕ್ಲಿನ್ ನನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ.

    ಸುಪ್ರೀಂ ಕೋರ್ಟ್ ಹೇಳಿದ್ದು ಏನು?
    ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸಿ ಪುರುಷನಿಗೆ ಮಾತ್ರ ಶಿಕ್ಷೆ ವಿಧಿಸುವ ಐಪಿಸಿ ಸೆಕ್ಷನ್ 497 ಅಸಾಂವಿಧಾನಿಕ. ವ್ಯಭಿಚಾರ ಅಪರಾಧವಾಗು ವುದಕ್ಕೆ ಸಾಧ್ಯವಿಲ್ಲ. ಆದರೆ ಅದು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದರೆ ಮಾತ್ರ ಅಪರಾಧವಾಗುತ್ತದೆ ಎಂದು ಸುಪ್ರೀಂ ತನ್ನ ತೀರ್ಪಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv