Tag: ಅಕ್ರಮ ಸಂಬಂಧ

  • 11 ಬಾರಿ ಇರಿದು, ಪತಿಯ ಕತ್ತು ಸೀಳಿದ ಪತ್ನಿ

    11 ಬಾರಿ ಇರಿದು, ಪತಿಯ ಕತ್ತು ಸೀಳಿದ ಪತ್ನಿ

    ಮುಂಬೈ: ಪರ ಸ್ತ್ರೀಯೊಂದಿಗೆ ಸಂಬಂಧ ಬೆಳೆಸಿದ್ದ ಪತಿಯನ್ನು ಪತ್ನಿ 11 ಬಾರಿ ಚಾಕುವಿನಿಂದ ಇರಿದು ಅಮಾನುಷವಾಗಿ ಕೊಂದಿದ್ದಾಳೆ. ಮೊದಲು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ ಪತ್ನಿ ನಂತರ ತಪ್ಪೊಪ್ಪಿಕೊಂಡಿದ್ದಾಳೆ.

    ಮುಂಬೈನ ನಲಸೋಪರದ ಗಾಲಾ ನಗರದಲ್ಲಿ ಈ ಘಟನೆ ನಡೆದಿದೆ. ಸುನೀಲ್ ಕದಮ್(36) ಮೃತ ದುರ್ದೈವಿ, ಆತನ ಪತ್ನಿ ಪ್ರಣಾಲಿ(33) ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಸುನೀಲ್ ತಂದೆ-ತಾಯಿ, ಇಬ್ಬರು ಮಕ್ಕಳು ಹಾಗೂ ಪತ್ನಿ ಜೊತೆ ವಾಸವಾಗಿದ್ದನು. ಬುಧವಾರ ಪತಿ-ಪತ್ನಿ ಮಧ್ಯೆ ಗಲಾಟೆ ನಡೆದಿತ್ತು, ಈ ವೇಳೆ ಮಾತಿಗೆ ಮಾತು ಬೆಳೆದು ಸಿಟ್ಟಿಗೆದ್ದ ಪತ್ನಿ ಅಡುಗೆ ಮನೆಯಿಂದ ಚಾಕು ತಂದು ಪತಿ ಮೇಲೆ 11 ಬಾರಿ ದಾಳಿ ನಡೆಸಿದ್ದಾಳೆ. ನಂತರ ಪತಿ ಕತ್ತು ಸೀಳಿದ್ದಾಳೆ.

    ಕೊಲೆ ಮಾಡಿದ ಬಳಿಕ ಲಿವಿಂಗ್ ರೂಮಿನಲ್ಲಿ ಮಲಗಿದ್ದ ಅತ್ತೆ-ಮಾವನಿಗೆ ಸುನೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಥೆ ಕಟ್ಟಿದ್ದಾಳೆ. ಸತ್ಯಾಂಶ ತಿಳಿಯದ ಅತ್ತೆ- ಮಾವ ಪಾಪ ಸೊಸೆಯ ಮಾತನ್ನೇ ನಂಬಿದ್ದಾರೆ.

    ವ್ಯಕ್ತಿ ತನ್ನ ಹೊಟ್ಟೆಗೆ, ಕತ್ತಿಗೆ ತಾನಾಗಿಯೇ ಈ ರೀತಿ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಅನುಮಾನ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಅನುಮಾನ ಮೂಡಿದೆ. ಈ ಹಿನ್ನೆಲೆ ಪತ್ನಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆಕೆ ಸತ್ಯ ಒಪ್ಪಿಕೊಂಡಿದ್ದಾಳೆ.

    ಆರೋಪಿ ಹಾಗೂ ಸುನೀಲ್ ಪ್ರೀತಿಸಿ, 2011ರಲ್ಲಿ ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಸುನೀಲ್ ಬೇರೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಬಗ್ಗೆ ಆರೋಪಿಗೆ ತಿಳಿದಿದೆ. ಈ ವಿಚಾರಕ್ಕೆ ಅವರಿಬ್ಬರ ನಡುವೆ ಜಗಳವಾಗುತ್ತಿತ್ತು. ಆದ್ದರಿಂದ ಮೋಸ ಮಾಡಿದ ಪತಿ ಕೊಲೆ ಮಾಡಿದ್ದೇನೆ ಎಂದು ಪತ್ನಿ ಹೇಳಿದ್ದಾಳೆ.

  • ಅಕ್ರಮ ಸಂಬಂಧದಿಂದ ಮಗು ಜನನ- ಕತ್ತು ಹಿಸುಕಿ ಕೊಂದ ತಾಯಿ

    ಅಕ್ರಮ ಸಂಬಂಧದಿಂದ ಮಗು ಜನನ- ಕತ್ತು ಹಿಸುಕಿ ಕೊಂದ ತಾಯಿ

    ಗಾಂಧಿನಗರ: ಅಕ್ರಮ ಸಂಬಂಧದಿಂದ ಜನಿಸಿದ ಒಂದೂವರೆ ತಿಂಗಳ ಮಗುವನ್ನು ಕೊಂದು ಕಾಲುವೆಗೆ ಬಿಸಾಡಿದ್ದ ತಾಯಿಯನ್ನು ಬಂಧಿಸುವಲ್ಲಿ ಗುಜರಾತಿನ ಪೊಲೀಸರು ಯಶಸ್ವಿಯಾಗಿದ್ದಾರೆ.

    ಮಗುವಿನ ಮೃತ ದೇಹ ಮೇ 23ರಂದು ಕೈರಾ ಜಿಲ್ಲೆಯ ಕಾಲುವೆ ಬಳಿ ಪತ್ತೆಯಾಗಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು, ಸುತ್ತಮುತ್ತಲಿನ ಆಸ್ಪತ್ರೆಯಲ್ಲಿ ಜನನ ದಾಖಲಾತಿಗಳನ್ನು ಪರಿಶೀಲನೆ ಮಾಡುವಾಗ ಈ ಮಗು ನಾಡಿಯಾಡ್‍ನ ಸಿವಿಲ್ ಆಸ್ಪತ್ರೆಯಲ್ಲಿ ಜನಿಸಿದೆ ಇದರ ತಾಯಿ ಆಶಾ ರಾಥೋಡ್ ಎಂದು ತಿಳಿದು ಬಂದಿದೆ.

    ಈ ವಿಚಾರದ ಬಗ್ಗೆ ಮಾತನಡಿರುವ ಕ್ಯಾಥ್ಲಾನ್ ಪೊಲೀಸ್ ಠಾಣೆಯ ಅಧಿಕಾರಿ ಡಿ.ಕೆ ರಾಲ್, ಈ ಮಹಿಳೆಗೆ 2009ರಲ್ಲಿ ವಿವಾಹವಾಗಿದ್ದು, ಆಗಲೇ ಇಬ್ಬರು ಮಕ್ಕಳಿದ್ದಾರೆ. ಆದರೆ ಪತಿಯೊಂದಿಗೆ ವಿಚ್ಛೇದನ ಬಯಸಿದ್ದ ಆಶಾ 2015 ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎಂದು ಹೇಳಿದ್ದಾರೆ.

    ಆಸ್ಪತ್ರೆಯಿಂದ ದಾಖಲೆ ಪಡೆದ ಪೊಲೀಸರು ಆರೋಪಿ ಮನೆಗೆ ಹೋಗಿ ಮಗು ಎಲ್ಲಿ ಎಂದು ವಿಚಾರಿಸಿದ್ದಾರೆ. ಈ ವೇಳೆ ಸುಳ್ಳು ಮಾಹಿತಿ ನೀಡಲು ಮುಂದಾದ ಆಶಾ ರಾಥೋಡ್ ನನ್ನು ಮಗು ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ಹೇಳಿದ್ದಾಳೆ. ಪೊಲೀಸರ ನಿರಂತರ ವಿಚಾರಣೆಯ ನಂತರ ಆ ಮಗು ಅಕ್ರಮ ಸಂಬಂಧದಿಂದ ಜನಿಸಿತ್ತು. ಸಮಾಜದಲ್ಲಿ ಅದನ್ನು ಮುಚ್ಚಿಡಲು ನಾನೇ ಮಗುವನ್ನು ಕತ್ತು ಹಿಸುಕಿ ಕೊಂದು ನಂತರ ಕಾಲುವೆಯಲ್ಲಿ ಬಿಸಾಡಿ ಬಂದೆ ಎಂದು ಒಪ್ಪಿಕೊಂಡಿದ್ದಾಳೆ.

    ಈಗ ಆಶಾ ರಾಥೋಡ್ ಮೇಲೆ ಕೊಲೆ ಕೇಸ್ ಹಾಕಲಾಗಿದ್ದು, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ವಿವಾಹಿತರ ನಡುವೆ ಅಕ್ರಮ ಸಂಬಂಧ – ರೆಡ್ ಹ್ಯಾಂಡ್ ಆಗಿ ಸಿಕ್ಕಿಬೀಳುವ ಭಯದಲ್ಲಿ ಜೋಡಿ ಆತ್ಮಹತ್ಯೆ

    ವಿವಾಹಿತರ ನಡುವೆ ಅಕ್ರಮ ಸಂಬಂಧ – ರೆಡ್ ಹ್ಯಾಂಡ್ ಆಗಿ ಸಿಕ್ಕಿಬೀಳುವ ಭಯದಲ್ಲಿ ಜೋಡಿ ಆತ್ಮಹತ್ಯೆ

    ಮೈಸೂರು: ರೆಡ್‍ಹ್ಯಾಂಡ್ ಆಗಿ ಸಿಕ್ಕಿ ಬೀಳುವ ಭಯದಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಜೋಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ರಮಾಬಾಯಿ ನಗರದಲ್ಲಿ ನಡೆದಿದೆ.

    ಸಂತೋಷ್ ಕುಮಾರ್ (34) ಹಾಗೂ ಸುಮಿತ್ರ(35) ಆತ್ಮಹತ್ಯೆ ಮಾಡಿಕೊಂಡ ಜೋಡಿ. ಸಂತೋಷ್ ಕುಮಾರ್ ಮನೆಯಲ್ಲೆ ಇಬ್ಬರು ಆತ್ಮಹತ್ಯಗೆ ಶರಣಾಗಿದ್ದಾರೆ.

    ಸಂತೋಷ್ ಕುಮಾರ್, ಅರ್ಚನಾ ಜೊತೆ ಮದುವೆ ಆಗಿದ್ದರೆ, ಸುಮಿತ್ರ, ಸಿದ್ದರಾಜು ಎಂಬವರನ್ನು ಮದುವೆ ಆಗಿದ್ದಳು. ಸುಮಿತ್ರ ಹಾಗೂ ಸಂತೋಷ್ ಒಂದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಸುಮಿತ್ರ ಹಾಗೂ ಸಂತೋಷ್ ಜೊತೆಯಲ್ಲಿ ಇರುವ ವಿಷಯ ಸಿದ್ದರಾಜುನಿಗೆ ತಿಳಿದಿದೆ.

    ಸಿದ್ದರಾಜು ರೆಡ್ ಹ್ಯಾಂಡಾಗಿ ಹಿಡಿಯಲು ಪೊಲೀಸರ ಜೊತೆ ಸಂತೋಷ್ ಮನೆಗೆ ಹೋಗಿದ್ದಾನೆ. ಈ ವಿಷಯ ತಿಳಿದು ಸಂತೋಷ್ ಹಾಗೂ ಸುಮಿತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತಿಯನ್ನು ಬಿಡಲು ನಿರಾಕರಿಸಿದ್ದಕ್ಕೆ ಲವ್ವರ್‌ನಿಂದ ಎದೆ, ಸೊಂಟಕ್ಕೆ ಚಾಕು ಇರಿತ

    ಪತಿಯನ್ನು ಬಿಡಲು ನಿರಾಕರಿಸಿದ್ದಕ್ಕೆ ಲವ್ವರ್‌ನಿಂದ ಎದೆ, ಸೊಂಟಕ್ಕೆ ಚಾಕು ಇರಿತ

    – ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ

    ನವದೆಹಲಿ: ಪತಿಗೆ ಡಿವೋರ್ಸ್ ನೀಡಲು ಒಪ್ಪದಿದ್ದಕ್ಕೆ ಪ್ರಿಯತಮೆಯ ಸೊಂಟ ಹಾಗೂ ಎದೆಗೆ ಮನಬಂದಂತೆ ಚಾಕು ಇರಿದು, ಬಳಿಕ ವ್ಯಕ್ತಿಯೊಬ್ಬ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

    5 ವರ್ಷಗಳ ಹಿಂದೆ ಪಿಂಕಿಯನ್ನು ಸಂಬಂಧಿಕರೊಬ್ಬರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆಗ ಆಕೆಗೆ 19 ವರ್ಷ ವಯಸ್ಸಾಗಿತ್ತು. ಹಾಗೆಯೇ ದಂಪತಿಗೆ ಗಂಡು ಮಗುವೂ ಜನಿಸಿತ್ತು. ನಂತರ ದಂಪತಿ ಆರ್ಥಿಕವಾಗಿ ಸದೃಢವಾಗುವಲ್ಲಿ ನಿರತರಾಗಿದ್ದು, ಪಿಂಕಿ ಬ್ಯೂಟಿ ಪಾರ್ಲರ್ ತೆರೆಯುವ ಮೂಲಕ ಜೀವನ ಸಾಗುತಿತ್ತು.

    ಕಳೆದ ಪ್ರೇಮಿಗಳ ದಿನದಿಂದ ಪಿಂಕಿ ಜೀವನದಲ್ಲಿ ಮಹತ್ತರ ಟ್ವಿಸ್ಟ್ ಸಿಕ್ಕಿದೆ. ಗೆಳತಿಯೊಬ್ಬಳ ಮುಖಾಂತರ ದಕ್ಷಿಣ ದೆಹಲಿಯ ದೆವ್ಲಿ ನಿವಾಸಿ 26 ವರ್ಷದ ಸನ್ನಿ ಎಂಬಾತನ ಪರಿಚಯವಾಗಿದೆ. ಮೊದಲು ಇಬ್ಬರು ಗೆಳೆಯರಾಗಿದ್ದು, ಕ್ರಮೇಣ ಗೆಳೆತನ ಪ್ರೇಮಕ್ಕೆ ತಿರುಗಿತ್ತು. ಅಲ್ಲದೆ ಮುಂದುವರಿದು ಸನ್ನಿ, ಪಿಂಕಿಯನ್ನು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಇಬ್ಬರೂ ಸುತ್ತಾಡಲು ಪ್ರಾರಂಭಿಸಿದರು. ಪಿಂಕಿಗೆ ಚಾಕಲೇಟ್ಸ್ ನೀಡುವುದರಿಂದ ಹಿಡಿದು ದಿನದ ಹೆಚ್ಚಿನ ಸಮಯವನ್ನು ಸನ್ನಿ ಜೊತೆಯೇ ಕಳೆಯಲು ಆರಂಭಿಸಿದ್ದಳು.

    ಇಷ್ಟೆಲ್ಲಾ ಆದ ಇವರ ಪ್ರೇಮ ಪ್ರಸಂಗ ಜಾಸ್ತಿ ದಿನ ಗುಟ್ಟಾಗಿ ಉಳಿಯಲಿಲ್ಲ. ಇವರಿಬ್ಬರು ಹಲವಾರು ಸ್ಥಳಗಳಿಗೆ ತಿರುಗಾಡುತ್ತಿರುವ ವಿಚಾರ ಪಿಂಕಿ ಪತಿ ಗಮನಕ್ಕೆ ಬಂದಿದೆ. ಈ ವಿಚಾರ ಪತಿಗೆ ತಿಳಿಯುತ್ತಿದ್ದಂತೆಯೇ ಪಿಂಕಿ ಜೀವನದಲ್ಲಿ ತೊಂದರೆ ಆರಂಭವಾಗಿದೆ. ಪತ್ನಿಯ ಅಕ್ರಮ ಸಂಬಂಧದ ವಿಚಾರ ತಿಳಿಯುತ್ತಿದ್ದಂತೆಯೇ ಪತಿ ತಮ್ಮ ಮನೆಯನ್ನು ದೆವ್ಲಿಯಿಂದ ಚಿರಾಗ್ ದಿಲ್ಲಿಗೆ ಕಳೆದ ತಿಂಗಳಲ್ಲಿ ಶಿಫ್ಟ್ ಮಾಡಿದರು. ಆದರೆ ಈ ವೇಳೆ ಪಿಂಕಿ ನಾನು ಮನೆಯಲ್ಲೇ ಇದ್ದು, ಕುಟುಂಬಸ್ಥರನ್ನು ನೋಡಿಕೊಳ್ಳುವುದಾಗಿ ತನ್ನ ಗಂಡನಲ್ಲಿ ಹೇಳಿದ್ದಾಳೆ. ಆ ಬಳಿಕ ಪಿಂಕಿ ಪತಿ ಕೆಲಸದ ನಿಮಿತ್ತ ಹೊರಗಡೆ ಹೋದ ನಂತರ ಸನ್ನಿ ಆಗಾಗ ಮನೆಗೆ ಬರುತ್ತಿದ್ದನು. ಸನ್ನಿಯ ಈ ನಡತೆಯಿಂದ ಪಿಂಕಿಗೆ ತಾನು ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ತಪ್ಪಿನ ಅರಿವಾಯಿತು. ಹೀಗಾಗಿ ಸನ್ನಿಯನ್ನು ದೂರ ಮಾಡಲು ಪ್ರಯತ್ನಿಸುತ್ತಾಳೆ.

    ಪಿಂಕಿಯ ನಡವಳಿಕೆಯಲ್ಲಿ ವ್ಯತ್ಯಾಸ ಕಂಡ ಸನ್ನಿಗೆ ಸಿಟ್ಟು ನೆತ್ತಿಗೇರಿತ್ತು. ಪರಿಣಾಮ ಆಗಾಗ ಪಿಂಕಿಗೆ ಕರೆ ಮಾಡಿ ಗಂಡನಿಗೆ ಡಿವೋರ್ಸ್ ನೀಡುವಂತೆ ಒತ್ತಾಯಿಸಿದ್ದಾನೆ. ಆದರೆ ಸನ್ನಿಯ ಮಾತನ್ನು ನಿರಾಕರಿಸಿದ ಪಿಂಕಿ, ತಮ್ಮಿಬ್ಬರ ಸಂಬಂಧವನ್ನು ಕೊನೆಗೊಳಿಸುವಂತೆ ಕೇಳಿಕೊಂಡಿದ್ದಾಳೆ. ಆದರೆ ಯಾವುದೇ ಕಾರಣಕ್ಕೂ ಪಿಂಕಿಯನ್ನು ಬಿಡಲ್ಲ ಎಂದು ಸನ್ನಿ ದಿಟ್ಟ ನಿರ್ಧಾರ ತೆಗೆದುಕೊಂಡನು. ಕಳೆದ ವಾರ ಪಿಂಕಿ, ಹೀಗೆ ನೀನು ನನ್ನ ಹಿಂದೆ ಬಿದ್ದರೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಕೋಪೋದ್ರಿಕ್ತನಾದ ಸನ್ನಿ, ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಕೈಯಲ್ಲಿ ಚಾಕು ಹಿಡಿದುಕೊಂಡು ನೇರವಾಗಿ ಪಿಂಕಿ ಮನೆಗೆ ತೆರಳಿದ್ದಾನೆ. ಅಲ್ಲದೆ ನಾವಿಬ್ಬರು ಓಡಿಹೋಗುವಂತೆ ಪಿಂಕಿಯಲ್ಲಿ ಹೇಳಿದ್ದಾನೆ. ಆದರೆ ಸನ್ನಿಯ ಈ ಮನವಿಯನ್ನು ಪಿಂಕಿ ನಿರಾಕರಿಸಿ, ಮನೆಯಿಂದ ಹೊರ ನಡೆಯುವಂತೆ ಗದರಿಸಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.

    ಇಬ್ಬರ ನಡುವೆ ನಡೆದ ಮಾತಿನ ಚಕಮಕಿಯ ವೇಳೆ ಸನ್ನಿ `ದಯವಿಟ್ಟು ನನ್ನ ಲೈಫ್ ಗೆ ಬಾ’ ಎಂದು ಪದೇ ಪದೇ ಬೇಡಿಕೊಂಡಿದ್ದಾನೆ. ಒಂದು ವೇಳೆ ನನ್ನೊಂದಿಗೆ ಜೀವನ ಮಾಡಲು ಬರದಿದ್ದರೆ ನಿನ್ನನ್ನು ಸಾಯಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದಾನೆ. ಆದರೆ ಸನ್ನಿ ಮಾತುಗಳನ್ನೆಲ್ಲಾ ಪಿಂಕಿ ನಿರಾಕರಿಸುತ್ತಲೇ ಬಂದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಸನ್ನಿ, ತನ್ನ ಕೈಯಲಿದ್ದ ಚಾಕುವಿನಿಂದ ಪಿಂಕಿ ಎದೆ ಹಾಗೂ ಸೊಂಟಕ್ಕೆ 12ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. ಈ ವೇಳೆ ತಾನು ಪರಾರಿಯಾಗದೇ ಅಲ್ಲೇ ಇದ್ದು, ತನ್ನ ಕುತ್ತಿಗೆಯನ್ನೂ ಸೀಳಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ.

    ಈ ವೇಳೆ ಪಿಂಕಿ ಇದ್ದ ಮನೆ ಮಾಲೀಕ ಮಹಿಪಾಲ್ ಸಿಂಗ್ ಅನುಮಾನಗೊಂಡು ತನ್ನ ಪತ್ನಿಯನ್ನು ಪಿಂಕಿ ಇದ್ದ ಫ್ಲಾಟ್ ಗೆ ಹೋಗಲು ಹೇಳಿದ್ದಾರೆ. ಹೀಗೆ ಹೋದಾಗ ಪಿಂಕಿ ಹಾಗೂ ಇನ್ನೊಬ್ಬ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಓಡಿ ಬಂದ ಪತ್ನಿ, ಮಹಿಪಾಲ್ ಸಿಂಗ್ ಜೊತೆ ಪೊಲೀಸರಿಗೆ ಕರೆ ಮಾಡುವಂತೆ ಹೇಳಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಇಬ್ಬರನ್ನೂ ನಗರದ ಏಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಅದಾಗಲೇ ಪಿಂಕಿ ಮೃತಪಟ್ಟಿದ್ದು, ಸನ್ನಿಯನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಆತನ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

  • ಚಿಗುರು ಮೀಸೆ ಹುಡುಗನೊಂದಿಗೆ ಆಂಟಿಯ ಲವ್ವಿ ಡವ್ವಿ – ಪತಿ ಪ್ರಶ್ನಿಸಿದ್ದೇ ತಪ್ಪಾಯ್ತು

    ಚಿಗುರು ಮೀಸೆ ಹುಡುಗನೊಂದಿಗೆ ಆಂಟಿಯ ಲವ್ವಿ ಡವ್ವಿ – ಪತಿ ಪ್ರಶ್ನಿಸಿದ್ದೇ ತಪ್ಪಾಯ್ತು

    ಬೆಂಗಳೂರು: ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಮಹಿಳೆ ಪತಿಯನ್ನೇ ಹತ್ಯೆ ಮಾಡಿರುವ ಘಟನೆ ನಗರದ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಶಾಂತಿ (29) ಬಂಧಿತ ಮಹಿಳೆಯಾಗಿದ್ದು, ಈಕೆ ತನ್ನ ಪ್ರಿಯಕರನೊಂದಿಗೆ ಸೇರಿ ಪತಿ ಕಣ್ಣಪ್ಪನನ್ನು ಕೊಲೆ ಮಾಡಿದ್ದಳು. ಗಂಡನನ್ನು ಕೊಲೆ ಮಾಡಲು ಶಾಂತಿ ಆತನ ಪ್ರಿಯಕರ 18 ವರ್ಷದ ಕಹಿಮುದ್ದೀನ್‍ಗೆ ಸಹಕಾರ ನೀಡಿದ್ದಳು.

    ಜೂನ್ 22 ರಂದು ನಗರದ ಕೂಡ್ಲುಗೇಟ್ ಬಳಿ ಕಣ್ಣಪ್ಪನನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆತನ ಗುರುತು ಪತ್ತೆ ಮಾಡಿದ್ದರು. ಆ ಬಳಿಕ ಕೊಲೆ ಹಿಂದಿನ ರಹಸ್ಯ ತನಿಖೆ ಮುಂದುವರಿಸಿದ ಪೊಲೀಸರು ಕಣ್ಣಪ್ಪನ ಪತ್ನಿ ಶಾಂತಿ ಹಾಗೂ ಕಹಿಮುದ್ದೀನ್‍ನನ್ನು ಬಂಧಿಸಿದ್ದಾರೆ.

    ಕಹಿಮುದ್ದೀನ್ ಮೂಲತಃ ಅಸ್ಸಾಂನಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ. ಫ್ಲೈವುಡ್ ಕೆಲಸ ಮಾಡುತ್ತಿದ್ದ ಆರೋಪಿ ನಗರದ ಕೂಡ್ಲುಗೇಟ್ ಬಳಿ ವಾಸವಿದ್ದ. ಈತ ಮನೆ ಕೆಲಸ ಮಾಡುತ್ತಿದ್ದ ಶಾಂತಿಯೊಂದಿಗೆ ಕಹಿಮುದ್ದೀನ್‍ಗೆ ಪರಿಚಯವಾಗಿ ಸ್ನೇಹವಾಗಿತ್ತು. ಆ ಬಳಿಕ ಇಬ್ಬರ ನಡುವೆ ದೈಹಿಕ ಸಂಬಂಧ ಏರ್ಪಟ್ಟಿತ್ತು. ಈ ವಿಚಾರ ತಿಳಿದ ಕಣ್ಣಪ್ಪ ಮನೆಯಲ್ಲಿ ಪತ್ನಿಯನ್ನು ಪ್ರಶ್ನಿಸಿ ಎಚ್ಚರಿಕೆ ನೀಡಿದ್ದ. ಇದರಿಂದ ಪತಿಯನ್ನೇ ಮುಗಿಸಲು ಸ್ಕೇಚ್ ಹಾಕಿದ್ದ ಶಾಂತಿ, ಕಹಿಮುದ್ದೀನ್ ನೊಂದಿಗೆ ಸೇರಿ ಕಣ್ಣಪ್ಪನನ್ನು ಕೊಲೆ ಮಾಡಿದ್ದಳು. ಸದ್ಯ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • ಆಗಿದ್ದನ್ನ ಮರೆತು ನಿನ್ನ ಜೊತೆಗೆ ಬದುಕುತ್ತೇನೆ ಎಂದು ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಪತಿ

    ಆಗಿದ್ದನ್ನ ಮರೆತು ನಿನ್ನ ಜೊತೆಗೆ ಬದುಕುತ್ತೇನೆ ಎಂದು ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಪತಿ

    ಧಾರವಾಡ: ಆಗಿದ್ದನ್ನು ಮರೆತು ನಿನ್ನ ಜೊತೆಗೆ ಬದುಕುತ್ತೇನೆ ಎಂದು ಹೇಳಿದ ಪತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ನವಲಗುಂದ ತಾಲೂಕು ಶಲವಡಿ ಗ್ರಾಮದಲ್ಲಿ ನಡೆದಿದೆ.

    ವಿಶ್ವನಾಥ ಚಿಗರಿ ಕೊಲೆ ಮಾಡಿದ ಆರೋಪಿ. ಲಕ್ಷ್ಮಿ ಕೊಲೆಯಾದ ಪತ್ನಿ. ಘಟನೆಯಲ್ಲಿ ಲಕ್ಷ್ಮಿಯ ತಾಯಿ ದೇವಕ್ಕ ಗಂಭೀರವಾಗಿ ಗಾಯಗೊಂಡಿದ್ದಾರೆ.

    ವಿಶ್ವನಾಥ ಚಿಗರಿ ಹಾಗೂ ನರಗುಂದ ತಾಲೂಕಿನ ಕಲಕೇರಿ ಗ್ರಾಮದ ಲಕ್ಷ್ಮಿ 2010ರಲ್ಲಿ ವಿವಾಹವಾಗಿದ್ದರು. ಲಕ್ಷ್ಮಿ ಹೆಚ್ಚಾಗಿ ತವರು ಮನೆಗೆ ಹೋಗುತ್ತಿದ್ದಳು. ಈ ವಿಚಾರವಾಗಿ ವಿಶ್ವನಾಥ ಲಕ್ಷ್ಮಿ ನಡುವೆ ಆಗಾಗ ಜಗಳವಾಗುತಿತ್ತು. ಅಷ್ಟೇ ಅಲ್ಲದೆ ಕಲಕೇರಿ ಗ್ರಾಮದಲ್ಲಿ ಲಕ್ಷ್ಮಿ ಬೇರೊಬ್ಬನ ಜೊತೆಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ವಿಶ್ವನಾಥನಲ್ಲಿ ಮೂಡಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

    ವಿಶ್ವನಾಥ ಇತ್ತೀಚಿಗೆ ಕಲಕೇರಿಗೆ ಹೋಗಿದ್ದ. ಈ ವೇಳೆ ಪತ್ನಿ ಕಟ್ಟಿಗೆ ತರುವುದಾಗಿ ಹೇಳಿ ಹಳ್ಳದ ಕಡೆಗೆ ಹೋಗುತ್ತಿದ್ದಳು. ಮೊದಲೇ ಸಂಶಯ ವ್ಯಕ್ತಪಡಿಸಿದ್ದ ವಿಶ್ವನಾಥ ಆಕೆಗೆ ತಿಳಿಯದಂತೆ ಹಿಂಬಾಲಿಸಿದ್ದ. ಹಳ್ಳದ ಪೊದೆಯಲ್ಲಿ ಕಾಯುತ್ತಿದ್ದ ಪ್ರಿಯಕರನನ್ನು ಸೇರಿದ ಲಕ್ಷ್ಮಿ ಲೈಂಗಿಕ ಕ್ರಿಯೆ ನಡೆಸಿದ್ದಳು. ಇದನ್ನು ದೂರದಿಂದಲೇ ನೋಡಿದ ವಿಶ್ವನಾಥ ತನ್ನ ಮೊಬೈಲ್‍ನಲ್ಲಿ ದೃಶ್ಯ ಸೆರೆ ಹಿಡಿದಿದ್ದ ಎಂದು ದೂರಿದ್ದಾರೆ.

    ಕಟ್ಟಿಗೆ ಹೊತ್ತು ಮನೆಗೆ ಬಂದ ಲಕ್ಷ್ಮಿ ಜೊತೆಗೆ ಜಗಳವಾಡಿದ ವಿಶ್ವನಾಥ, ಹಲ್ಲೆ ಮಾಡಿದ್ದ. ಬಳಿಕ ಇಬ್ಬರೂ ದೂರವಾಗಿದ್ದರೂ ಹಾಗೂ ವಿಚ್ಛೇದನಕ್ಕೆ ಮುಂದಾಗಿದ್ದರು. ಹೀಗಾಗಿ ಲಕ್ಷ್ಮಿ ಸುಮಾರು ದಿನಗಳಿಂದ ತವರು ಮನೆಯಲ್ಲಿ ಉಳಿದುಕೊಂಡಿದ್ದಳು.

    ನಾನು ಮನಸ್ಸು ಬದಲಾಯಿಸಿದ್ದೇನೆ. ಆಗಿದ್ದು ಆಗಿ ಹೋಯಿತು. ಇಬ್ಬರೂ ಕೂಡಿ ಬದುಕೋಣ ಎಂದು ವಿಶ್ವನಾಥ ಪತ್ನಿ ಲಕ್ಷ್ಮಿಗೆ ಕೇಳಿಕೊಂಡಿದ್ದ. ಅಷ್ಟೇ ಅಲ್ಲದೆ ಬುಧವಾರ ಕಲಕೇರಿಗೆ ಹೋಗಿ ಪತ್ನಿಯನ್ನು ಶಲವಡಿಗೆ ಕರೆದುಕೊಂಡು ಬಂದಿದ್ದ. ಮಗಳಿಗೆ ಏನಾದರೂ ಮಾಡಿದರೆ ಎಂಬ ಭಯದಿಂದ ದೇವಕ್ಕ ಕೂಡ ಲಕ್ಷ್ಮಿಯ ಜೊತೆಗೆ ಬಂದಿದ್ದರು.

    ಲಕ್ಷ್ಮಿ ಬುಧವಾರ ರಾತ್ರಿ 10:30ಕ್ಕೆ ಊಟ ಮಾಡಿ ಮಲಗಿದ್ದಳು. ಈ ವೇಳೆ ಹೊರಗಿನಿಂದ ಕಂದಲಿ ಹಿಡಿದು ಬಂದ ವಿಶ್ವನಾಥ ಲಕ್ಷ್ಮಿಯ ಕಣ್ಣಿಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಲಕ್ಷ್ಮಿ ಮನೆಯಿಂದ ಹೊರ ಬಂದಿದ್ದಾಳೆ. ಅಷ್ಟಕ್ಕೆ ಬಿಡದ ವಿಶ್ವನಾಥ ಲಕ್ಷ್ಮಿಯ ಕುತ್ತಿಗೆ, ಕೈಗೆ ಹೊಡೆದಿದ್ದಾನೆ. ಈ ವೇಳೆ ಮಗಳನ್ನು ರಕ್ಷಿಸಲು ಬಂದಿದ್ದ ದೇವಕ್ಕನ ಮೇಲೆ ಹಲ್ಲೆ ಮಾಡಿದ್ದಾನೆ.

    ಗಲಾಟೆಯನ್ನು ಕೇಳಿಸಿಕೊಂಡ ನೆರೆಮನೆಯವನ್ನು ಹೊರಗೆ ಬಂದು ಲಕ್ಷ್ಮಿ ರಕ್ತಸ್ರಾವದಿಂದ ಕೆಳಗೆ ಬಿದ್ದಿದ್ದನ್ನು ನೋಡಿ, ಪೊಲೀಸರಿಗೆ ಹಾಗೂ ಅಂಬುಲನ್ಸ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಲಕ್ಷ್ಮಿ ಹಾಗೂ ದೇವಕ್ಕರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ಸಾಗಿಸಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲಿಯೇ ಲಕ್ಷ್ಮಿ ಮೃತಪಟ್ಟಿದ್ದಾಳೆ. ದೇವಕ್ಕಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ವಿಶ್ವನಾಥ ವಿರುದ್ಧ ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಚಿಕ್ಕಮ್ಮನ ಅಕ್ರಮ ಸಂಬಂಧ ನೋಡಿದ್ದೇ ತಪ್ಪಾಯ್ತು – 3ರ ಕಂದಮ್ಮನನ್ನು ಸುಟ್ಟು ಹಾಕ್ದ!

    ಚಿಕ್ಕಮ್ಮನ ಅಕ್ರಮ ಸಂಬಂಧ ನೋಡಿದ್ದೇ ತಪ್ಪಾಯ್ತು – 3ರ ಕಂದಮ್ಮನನ್ನು ಸುಟ್ಟು ಹಾಕ್ದ!

    ಕೋಲಾರ: ಗುರುವಾರ ಸಂಜೆ ಕಾಣೆಯಾಗಿದ್ದ ಮೂರು ವರ್ಷದ ಮಗು ಎರಡು ದಿನಗಳ ನಂತರ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮಾಲೂರು ಹುಲ್ಕೂರು ಗ್ರಾಮದಲ್ಲಿ ನಡೆದಿದೆ.

    ಮೂರು ವರ್ಷದ ವೇದ ಕೊಲೆಯಾದ ಕಂದಮ್ಮ. ಈಕೆ ಗ್ರಾಮದ ಪಚ್ಚಪ್ಪ ಹಾಗೂ ಕವಿತಾ ದಂಪತಿಯ ಮಗಳಾಗಿದ್ದು, ಗುರುವಾರ ಸಂಜೆ ಈಕೆ ಕಾಣೆಯಾಗಿದ್ದಳು. ಆದರೆ ವೇದ ಶನಿವಾರ ಅರ್ಧ ಸುಟ್ಟು ಹೋಗಿರುವ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

    ಅದೇ ಗ್ರಾಮದ ನಿವಾಸಿ ಮುನಿರಾಜು ಎಂಬವನು ವೇದಳನ್ನು ಕೊಂದು ಸುಟ್ಟು ಹಾಕಿದ್ದಾನೆ. ಆರೋಪಿ ಮುನಿರಾಜು ಮಗುವಿನ ಚಿಕ್ಕಮ್ಮನ ಜೊತೆಯಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು. ಇದನ್ನು ವೇದ ನೋಡಿದ್ದಾಳೆ. ಹೀಗಾಗಿ ಈ ಬಗ್ಗೆ ಮನೆಯವರಿಗೆ ಹೇಳುತ್ತಾಳೆ ಎಂಬ ಭಯದಿಂದ ಆರೋಪಿ ಮುನಿರಾಜು ಮಗುವನ್ನು ಕಿಡ್ನಾಪ್ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಂದಿದ್ದಾನೆ. ಬಳಿಕ ತಾನೇ ಸುಟ್ಟು ಹಾಕಿದ್ದಾನೆ.

    ಮಗು ನಾಪತ್ತೆಯಾದ ನಂತರ ಗ್ರಾಮಸ್ಥರು ಈತನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬಳಿಕ ಪೊಲೀಸರು ಆರೋಪಿ ಮುನಿರಾಜುನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

    ಈ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪ್ರಿಯಕರನ ಜೊತೆ ಸೇರಿ ಮಗನನ್ನೇ ಕೊಲೆ ಮಾಡಿ, ಹೂತ್ತಿದ್ದ ತಾಯಿ ಅರೆಸ್ಟ್

    ಪ್ರಿಯಕರನ ಜೊತೆ ಸೇರಿ ಮಗನನ್ನೇ ಕೊಲೆ ಮಾಡಿ, ಹೂತ್ತಿದ್ದ ತಾಯಿ ಅರೆಸ್ಟ್

    ರಾಮನಗರ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನ ಜೊತೆ ಸೇರಿ ಮಗನನ್ನೇ ಕೊಲೆ ಮಾಡಿದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

    ರಾಮನಗರ ತಾಲೂಕಿನ ಜಾಲಮಂಗಲ ಗ್ರಾಮದ ಪ್ರಜ್ವಲ್ ಕೊಲೆಯಾದ ಬಾಲಕ. ಪ್ರಜ್ವಲ್ ತಾಯಿ ವರಲಕ್ಷ್ಮಿ ಹಾಗೂ ಪ್ರಿಯಕರ ಕುಮಾರ್ ಕೊಲೆ ಮಾಡಿ, ಮೃತ ದೇಹವನ್ನು ಹೂತಿಟ್ಟಿದ್ದ ಆರೋಪಿಗಳು. ಈ ಘಟನೆಯು ಇದೇ ತಿಂಗಳ 4ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿದೆ ಬಂದಿದೆ.

    ಆಗಿದ್ದೇನು?:
    ವರಲಕ್ಷ್ಮಿ ಪತಿ ಮೃತಪಟ್ಟಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಆಕೆ ಕುಮಾರ್ ಜೊತೆಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಳು. ಯಾರಿಗೂ ಗೊತ್ತಾಗದಂತೆ ಇವರಿಬ್ಬರು ಜಾಲಮಂಗಲ ಸಮೀಪದ ತೋಟವೊಂದರಲ್ಲಿ ಮಾರ್ಚ್ 4ರಂದು ಕುಳಿತಿದ್ದರು. ತಾಯಿಯ ಜೊತೆಗೆ ಕುಮಾರ್ ಕುಳಿತಿದ್ದನ್ನು ಬಾಲಕ ಪ್ರಜ್ವಲ್ ನೋಡಿದ್ದ. ಇದೇ ವೇಳೆ ಅಲ್ಲಿಗೆ ಬಂದಿದ್ದ ಪ್ರಜ್ವಲ್‍ನನ್ನು ನೋಡಿದ ಕುಮಾರ್, ಓಡಿ ಬಂದು ಹಿಡಿದುಕೊಂಡಿದ್ದ. ಹಾಗೇ ಬಿಟ್ಟರೆ ನಮ್ಮ ಸಂಬಂಧದ ಮನೆಯವರಿಗೆ ತಿಳಿಯುತ್ತದೆ ಎಂದು ಪ್ರಜ್ವಲ್ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಅಸ್ವಸ್ಥಗೊಂಡು ಬಿದ್ದಿದ್ದ ಪ್ರಜ್ವಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಇದರಿಂದ ಗಾಬರಿಗೊಂಡ ಆರೋಪಿಗಳು ತಕ್ಷಣವೇ ಪ್ರಜ್ವಲ್ ಮೃತದೇಹವನ್ನು ತೋಟದಲ್ಲಿ ಹೂತು ಅಲ್ಲಿಂದ ಪರಾರಿಯಾಗಿದ್ದರು.

    ಮೊಮ್ಮಗ ಪ್ರಜ್ವಲ್ ಮನೆಗೆ ಬಾರದೇ ಇದ್ದಾಗ ಜಯಮ್ಮನಿಗೆ ಅನುಮಾನ ಬಂದಿದೆ. ಈ ಸಂಬಂಧ ಜಯಮ್ಮ ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.

    ಅಕ್ಕನ ಮನೆಯಲ್ಲಿ ಇದ್ದೇನೆ. ಇಲ್ಲಿಯೇ ಕೆಲಸ ಮಾಡುತ್ತಿದ್ದೇನೆ ಎಂದು ಸೊಸೆ ವರಲಕ್ಷ್ಮಿ ಹೇಳುತ್ತಿದ್ದಳು. ಆದರೆ ಕುಮಾರ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪ್ರಜ್ವಲ್‍ನ ತಮ್ಮ ಮನೆಗೆ ಬಂದು ಹೇಳಿದಾಗ ಸೊಸೆಯ ಕೃತ್ಯ ನನಗೆ ತಿಳಿಯಿತು ಎಂದು ಅಜ್ಜಿ ಜಯಮ್ಮ ದೂರಿದ್ದಾರೆ.

    ಆರೋಪಿಗಳನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಮ್ಮುಖದಲ್ಲಿ ಪೊಲೀಸರು ಪ್ರಜ್ವಲ್ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಾಲಕನನ್ನು ತುಂಡು ತುಂಡಾಗಿ ಕತ್ತರಿಸಿ, ಆ್ಯಸಿಡ್‍ನಿಂದ ಮೃತದೇಹ ಸುಟ್ಟ ಡಾಕ್ಟರ್!

    ಚಾಲಕನನ್ನು ತುಂಡು ತುಂಡಾಗಿ ಕತ್ತರಿಸಿ, ಆ್ಯಸಿಡ್‍ನಿಂದ ಮೃತದೇಹ ಸುಟ್ಟ ಡಾಕ್ಟರ್!

    ಭೋಪಾಲ್: ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಚಾಲಕನನ್ನು ವೈದ್ಯನೊಬ್ಬ ತುಂಡು ತುಂಡಾಗಿ ಕತ್ತರಿಸಿ ಕೊಲೆಗೈದ ಬಳಿಕ ಮೃತದೇಹವನ್ನು ಆ್ಯಸಿಡ್ ಹಾಕಿ ಸುಟ್ಟು ಹಾಕಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಹೋಶಂಗಾಬಾದಿನಲ್ಲಿ ನಡೆದಿದೆ.

    ಡಾ. ಸುನಿಲ್ ಮಂತ್ರಿ(56) ಕೊಲೆ ಮಾಡಿರುವ ಆರೋಪಿ ವೈದ್ಯ. ವಿರೇಂದ್ರ ಪಾಚೌರಿ(30) ಕೊಲೆಯಾದ ದುದೈರ್ವಿ. ವೈದ್ಯ ಸುನಿಲ್ ಮನೆಯಲ್ಲಿ ವೀರೇಂದ್ರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದನು. ವೈದ್ಯನ ಪತ್ನಿ ತೀರಿಹೋದ ನಂತರ ಅವರು ನಡೆಸುತ್ತಿದ್ದ ಬಟ್ಟೆ ಅಂಗಡಿಯನ್ನು ಚಾಲಕನ ಪತ್ನಿ ವಹಿಸಿಕೊಂಡಿದ್ದಳು. ಅಲ್ಲದೆ ಚಾಲಕನ ಪತ್ನಿ ಜೊತೆ ವೈದ್ಯ ಬಹಳ ಆತ್ಮೀಯವಾಗಿದ್ದನು. ಆದ್ದರಿಂದ ಬಹುದಿನಗಳಿಂದ ತನ್ನ ಪತ್ನಿ ಜೊತೆ ವೈದ್ಯ ಸುನಿಲ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎನ್ನುವ ಅನುಮಾನ ಚಾಲಕ ವೀರೇಂದ್ರನಿಗೆ ಬಂದಿತ್ತು.

    ಅನುಮಾನ ಬಂದ ಹಿನ್ನೆಲೆಯಲ್ಲಿ ವೈದ್ಯನಿಂದ ವೀರೇಂದ್ರ ತನ್ನ ಪತ್ನಿಯನ್ನು ದೂರವಿಟ್ಟಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಸೋಮವಾರದಂದು ವೈದ್ಯ ಮನೆಯಲ್ಲಿಯೇ ಚಾಲಕನನ್ನು ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿದ್ದಾನೆ. ಬಳಿಕ ತನ್ನ ವಿರುದ್ಧ ಯಾವುದೇ ಸಾಕ್ಷಿ ಸಿಗಬಾರದೆಂದು ಮೃತದೇಹವನ್ನು ಆ್ಯಸಿಡ್ ಹಾಕಿ ಸುಟ್ಟುಹಾಕಿದ್ದಾನೆ.

    ಮಂಗಳವಾರದಂದು ವೈದ್ಯನ ಮನೆಯಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತುಂಡು ತುಂಡಾಗಿ ಕತ್ತರಿಸಿದ ಮೃತದೇಹದ ಭಾಗಗಳನ್ನು ಆ್ಯಸಿಡ್‍ನಲ್ಲಿ ವೈದ್ಯ ಹಾಕುತ್ತಿರುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ನಂತರ ವೈದ್ಯನನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಹಾಕಿದ್ದಾನೆ.

    ಆರೋಪಿ ವೈದ್ಯನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಮ್ಮಡಿ ಮಹದೇವ ಸ್ವಾಮಿಯ ಮತ್ತೊಂದು ಕಾಮ ಪುರಾಣ ಬಯಲು

    ಇಮ್ಮಡಿ ಮಹದೇವ ಸ್ವಾಮಿಯ ಮತ್ತೊಂದು ಕಾಮ ಪುರಾಣ ಬಯಲು

    – ಎರಡು ಮಕ್ಕಳ ತಾಯಿಯನ್ನು ಬಿಡಲಿಲ್ಲ

    ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಎ1 ಆರೋಪಿಯಾಗಿರುವ ಇಮ್ಮಡಿ ಮಹದೇವ ಸ್ವಾಮೀಜಿ ಅಲಿಯಾಸ್ ಚಿಕ್ಕ ಬುದ್ದಿಯ ಮತ್ತೊಂದು ರಂಗಿನಾಟ ಬೆಳಕಿಗೆ ಬರುತ್ತಿವೆ.

    ಸಾಲೂರು ಮಠದ ಇಮ್ಮಡಿ ಮಹದೇವ ಸ್ವಾಮಿಯ ಮತ್ತೊಂದು ಕಾಮ ಪುರಾಣ ಬಯಲಾಗಿದ್ದು, ಕಳೆದ ಆರು ತಿಂಗಳ ಹಿಂದೆ ಎರಡು ಮಕ್ಕಳ ತಾಯಿಯನ್ನ ಮಹದೇವ ಸ್ವಾಮಿ ಕರೆದುಕೊಂಡು ಹೋಗಿದ್ದನು ಎಂದು ತಿಳಿದು ಬಂದಿದೆ. ಹನೂರು ತಾಲೂಕಿನ ಗ್ರಾಮವೊಂದರ ಮಹಿಳೆ ಎರಡು ಮಕ್ಕಳನ್ನ ಕಟ್ಟಿಕೊಂಡು ಸಂಸಾರ ನಡೆಸಲು ಪರದಾಡುತ್ತಿದ್ದಳು. ಆಗ ಈ ಸ್ವಾಮೀಜಿ ಆಕೆಯನ್ನು ಕರೆದುಕೊಂಡು ಹೋಗಿ ಕೊಳ್ಳೇಗಾಲ ಪಟ್ಟಣದ ಬಡಾವಣೆಯಲ್ಲಿ ಇಟ್ಟು ಸಾಕುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಹೊರಗೆ ಕಾವಿ..ಒಳಗೆ ಕಾಮಿ-ಸುಂದರಿಯರನ್ನೇ ಮಾತ್ರ ಮಠಕ್ಕೆ ಬಿಡು!

    ಈ ಸಂಬಂಧ ಕಳೆದ ಆರು ತಿಂಗಳ ಹಿಂದೆ ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ ಇಲ್ಲಿಯವರೆಗೆ ಸ್ವಾಮೀಜಿ ಬಗ್ಗೆ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ. ಆರು ತಿಂಗಳಲ್ಲಿ ಮೂರು ಬಾರಿ ದೂರು ಕೊಟ್ಟರು ಪೊಲೀಸರು ಕ್ರಮ ತೆಗೆದುಕೊಂಡಿಲ್ಲ. ಈ ಸ್ವಾಮೀಜಿಯ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ಮಹಿಳೆಯ ಪೋಷಕರು ಗುರುವಾರ ಮೂರನೇ ಬಾರಿಗೆ ಸ್ವಾಮೀಜಿ ಬಗ್ಗೆ ವಿರುದ್ಧ ದೂರು ನೀಡಿದ್ದಾರೆ. ಆದರೆ ಈ ವೇಳೆ ಪೊಲೀಸರು ಇನ್ನು ಎರಡು ದಿನ ಸುಮ್ಮನಿರುವಂತೆ ಹೇಳಿ ಕಳುಹಿಸಿದ್ದಾರೆ.

    ಈ ಹಿಂದೆ ಮಹದೇವ ಸ್ವಾಮೀಜಿ ಐವರು ಮಹಿಳೆಯರ ಸಹವಾಸ ಹೊಂದಿದ್ದಾನೆ ಎಂದು ಆರೋಪ ಮಾಡಲಾಗಿತ್ತು. ಸಾಲೂರು ಮಠದ ಪಕ್ಕದ ಗ್ರಾಮದ ಮಂಜುಳಾ ಎಂಬ ಮಹಿಳೆ ವಾರಕ್ಕೆ ಎರಡು ಬಾರಿ ಮಠಕ್ಕೆ ಬಂದು ಹೋಗುತ್ತಿದ್ದಳಂತೆ. ಸರ್ಕಾರಿ ಶಾಲೆಯ ಟೀಚರ್ ಮಹದೇವಮ್ಮ ಭಾನುವಾರ ಮಿಸ್ ಮಾಡುತ್ತಿರಲಿಲ್ಲ. ಒಂದು ವೇಳೆ ಇವರಿಬ್ಬರು ಮಠಕ್ಕೆ ಬರದಿದ್ದರೆ ಮಹದೇವನೇ ಫೋನ್ ಮಾಡಿ ಕರೆಸುತ್ತಿದ್ದನಂತೆ. ಸರ್ಕಾರಿ ರಜೆ ಬಂದರೆ ಸಾಕು ಟೀಚರ್ ಮಿಸ್ ಮಾಡ್ದೆ ಮಠಕ್ಕೆ ಹಾಜರಾಗುತ್ತಿದ್ದಳು ಎಂದು ಹೇಳಲಾಗುತ್ತಿದೆ. ಮಹದೇವ ಸ್ವಾಮೀಜಿ ಪ್ರಕರಣದಲ್ಲಿ ಬಂಧಿತಳಾಗಿರುವ ಎ2 ಆರೋಪಿ ಅಂಬಿಕಾಳೊಂದಿಗೂ ಅಕ್ರಮ ಸಂಬಂಧ ಹೊಂದಿದ್ದಾನೆ.

    ವಿಷ ಪ್ರಸಾದ ಪ್ರಕರಣದಲ್ಲಿ ಈವರೆಗೆ ಒಬ್ಬಳು ಬಾಲಕಿ, 5 ಜನ ಮಹಿಳೆಯರು ಸೇರಿದಂತೆ 16 ಜನ ಮೃತಪಟ್ಟಿದ್ದಾರೆ. ಸುಮಾರು 100 ಕ್ಕೂ ಹೆಚ್ಚು ಜನರು ಕರ್ನಾಟಕ ಮತ್ತು ತಮಿಳುನಾಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಳ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸೌಲಭ್ಯ ದೊರಕುವಂತೆ ಆರೋಗ್ಯ ಇಲಾಖೆಯೊಂದಿಗೆ ಪೊಲೀಸ್ ಇಲಾಖೆಯು ನಿರಂತರವಾಗಿ ಕೆಲಸ ಮಾಡುತ್ತಿದೆ.

    https://www.youtube.com/watch?v=WP4XJddApD4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv