Tag: ಅಕ್ರಮ ಕಸಾಯಿಖಾನೆ

  • ಅಕ್ರಮ ಕಸಾಯಿಖಾನೆ ಮೇಲೆ ಕೆರೂರು ಪೊಲೀಸರ ದಾಳಿ, ಪ್ರಕರಣ ದಾಖಲು

    ಅಕ್ರಮ ಕಸಾಯಿಖಾನೆ ಮೇಲೆ ಕೆರೂರು ಪೊಲೀಸರ ದಾಳಿ, ಪ್ರಕರಣ ದಾಖಲು

    ಬಾಗಲಕೋಟೆ: ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆ (Illegal Slaughter House) ಮೇಲೆ ಕೆರೂರು ಪೊಲೀಸರು (Kerur Police) ದಾಳಿ ನಡೆಸಿ 12 ಗೋವುಗಳನ್ನು ರಕ್ಷಿಸಿದ್ದಾರೆ.

    ಬಾದಾಮಿ (Badami) ತಾಲೂಕಿನ ಕೆರೂರು ಪಟ್ಟಣದ ಹಜರತ್ ನಿಬಿಸಾಬ್ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ. ಸಾರ್ವಜನಿಕರು ಎಷ್ಟೇ ಹೇಳಿದರೂ ಅಕ್ರಮ ಕಸಾಯಿಖಾನೆ ನಡೆಸುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: 25 ವರ್ಷದ ಬಳಿಕ ವಿದ್ಯಾರ್ಥಿಗಳ ಸಮಾಗಮ – ತರಗತಿಯಲ್ಲಿ ಗುರುಗಳ ಪಾಠ!

    ಇಂದು ಖಚಿತ ಮಾಹಿತಿ‌ ಮೇರೆಗೆ ಕೆರೂರು ಪಿಎಸ್‌ಐ ನೇತೃತ್ವದಲ್ಲಿ ಅಕ್ರಮ ಕಸಾಯಿಖಾನೆಗೆ ದಾಳಿ ಮಾಡಿದ ಪೊಲೀಸರು ಅಲ್ಲಿರುವ ಗೋವುಗಳನ್ನು ರಕ್ಷಿಸಿದ್ದಾರೆ.

    ಗೋವುಗಳನ್ನ ಕೆರೂರು ಸಂತೆಯಲ್ಲಿ ಖರೀದಿಸುತ್ತಿದ್ದ ಹಜರತ್ ನಬಿಸಾಬ್ ನಂತರ ಅವುಗಳನ್ನು ಕತ್ತರಿಸಿ ಮಾಂಸಗಳನ್ನು ಬೇರೆಡೆಗೆ ಸಾಗಾಟ ಮಾಡುತ್ತಿದ್ದ. ಪೊಲೀಸರು ದಾಳಿ ನಡೆಸಿದ ವೇಳೆ ಕಸಾಯಿಖಾನೆಯಲ್ಲಿ 7 ಹಸು, 4 ಕರು ಸೇರಿದಂತೆ 12 ಹಸುಗಳು ಇರುವುದು ಬೆಳಕಿಗೆ ಬಂದಿದೆ.

    ಹಸುಗಳನ್ನು ರಕ್ಷಣೆ ಮಾಡಿ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಹಜರತ್ ನಿಬಿಸಾಬ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

     

  • ಉಡುಪಿ: ಹಸುವನ್ನು ಕೊಂದು, ಮಾಂಸ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಮೂವರ ಬಂಧನ

    ಉಡುಪಿ: ಹಸುವನ್ನು ಕೊಂದು, ಮಾಂಸ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಮೂವರ ಬಂಧನ

    ಉಡುಪಿ: ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಮೊವಾಡಿ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿದ್ದಾರೆ.

    ಶ್ರೀಕಾಂತ್, ಹರೀಶ್, ಮಹೇಶ್ ಬಂಧಿತರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮೊವಾಡಿ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆ ಕಾರ್ಯಾಚರಿಸುತ್ತಿರುವ ಬಗ್ಗೆ ಪೊಲೀಸರಿಗೆ ಸೋಮವಾರ ರಾತ್ರಿ ಮಾಹಿತಿ ರವಾನೆಯಾಗಿತ್ತು. ಮಾಹಿತಿ ಪಡೆದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಹಸುವನ್ನು ಕೊಂದು ಮಾಂಸ ಮಾಡಿ, ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಹಸುವಿನ ಮೃತದೇಹದ ಜೊತೆ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಸಮಾರಂಭಕ್ಕೋ? ವ್ಯಾಪಾರಕ್ಕೋ?: ಮೊವಾಡಿ ವಸಮೀಪದ ಮನೆಯ ಕಾರ್ಯಕ್ರಮವೊಂದಕ್ಕೆ ಹಸುವನ್ನು ಕದ್ದು ತಂದು ಮಾಂಸ ಮಾಡುತ್ತಿದ್ದರು ಎಂಬ ಮಾಹಿತಿಯಿದೆ. ಅಲ್ಲದೇ ಹಸುವಿನ ಮಾಂಸವನ್ನು ಮಾರಾಟ ಮಾಡಲು ತರಲಾಗಿತ್ತು ಅಂತ ಕೂಡ ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು ಇನ್ನಷ್ಟೇ ನಿಜಾಂಶ ಹೊರಬರಲಿದೆ.