Tag: ಅಕ್ರಮ ಕಟ್ಟಡ

  • ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ- ಅಕ್ರಮ ಕಟ್ಟಡ ಮಾಲಿಕರಿಗೆ ಶಾಕ್ ನೀಡಿದ ಅಧಿಕಾರಿಗಳು

    ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ- ಅಕ್ರಮ ಕಟ್ಟಡ ಮಾಲಿಕರಿಗೆ ಶಾಕ್ ನೀಡಿದ ಅಧಿಕಾರಿಗಳು

    ಗದಗ: ಜಿಲ್ಲೆಯ ಮುಂಡರಗಿ (Mundaragi) ತಾಲೂಕಿನ ಶಿಂಗಟಾಲೂರು ಗ್ರಾಮದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯ ಮೂಲಕ ಬೆಳ್ಳಂಬೆಳಿಗ್ಗೆ ಜೆಸಿಬಿ ಘರ್ಜಿಸಿದೆ. ಅಕ್ರಮ ಕಟ್ಟಡ ಮಾಲೀಕರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.

    ಶಿಂಗಟಾಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂತೆ ಬಜಾರ್ ಹಾಗೂ ಪ್ರಾಥಮಿಕ ಶಾಲೆಗೆ ಸಂಪರ್ಕಿಸುವ ರಸ್ತೆಯಲ್ಲಿ ಅಕ್ರಮವಾಗಿ ಮನೆ, ಅಂಗಡಿಗಳನ್ನು ನಿರ್ಮಿಸಲಾಗಿತ್ತು. ನಕ್ಷೆಯ ಪ್ರಕಾರ 30 ಅಡಿ ರಸ್ತೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು. ಸರಿಯಾದ ರಸ್ತೆ ಇಲ್ಲದ ಕಾರಣ, ಆ ಅಕ್ರಮ ಕಟ್ಟಡಗಳ ತೆರವಿಗೆ ಗ್ರಾಮ ಪಂಚಾಯತ್, ತಹಶಿಲ್ದಾರ್, ತಾಲೂಕು ಪಂಚಾಯತ್, ಜಿಲ್ಲಾಡಳಿತಕ್ಕೆ ದಲಿತ ಕಾಲೋನಿ ಜನರಿಂದ ಮನವಿ ಸಲ್ಲಿಸಲಾಗಿತ್ತು. ಎಲ್ಲವನ್ನೂ ಪರಿಶೀಲಿಸಿ ಸಂಬಂಧಿಸಿದ ಕಟ್ಟಡ ಮಾಲಿಕರಿಗೆ ತೆರವು ಬಗ್ಗೆ ನೋಟೀಸ್ ನೀಡಲಾಯಿತು. ಆದರೂ ತೆರವುಗೊಳ್ಳದ ಹಿನ್ನೆಲೆ, ಇಂದು ಮುಂಡರಗಿ ತಹಶಿಲ್ದಾರ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ಗ್ರಾ.ಪಂ ಸಿಬ್ಬಂದಿಗಳ ನೇತೃತ್ವದಲ್ಲಿ ಕಾರ್ಯಾಚರಣೆಗೆ ಮುಂದಾದರು. ಇದನ್ನೂ ಓದಿ: ಸರ್ವರ್ ಸಮಸ್ಯೆಯಿಂದ ಅಕ್ಕಿ ಪಡೆಯಲು ಪರದಾಟ – ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

    ಸಂತೆ ಬಜಾರ, ಪ್ರಾಥಮಿಕ ಶಾಲೆ ಸಂಪರ್ಕಿಸುವ ರಸ್ತೆ 30 ಅಡಿ ಅಗಲ ವಿಸ್ತೀರ್ಣದ ಅಕ್ಕ ಪಕ್ಕದ ಮನೆ, ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯಿತು. ಇದಕ್ಕೆ ಕಟ್ಟಡ ಮಾಲಿಕರು, ಕೆಲ ಸ್ಥಳಿಯರು ವಿರೋಧ ವ್ಯಕ್ತಪಡಿಸಿದರು. ವಸ್ತುಗಳ ಸ್ಥಳಾಂತರಕ್ಕೆ ಇನ್ನು ಕೆಲವು ದಿನ ಕಾಲಾವಕಾಶ ಕೊಡಿ ಎಂದು ಕೇಳಿದರು. ಇನ್ನು ಕೆಲವರು ತೆರವುಗೊಳಿಸುವುದಾದರೆ ಗ್ರಾಮದ ಎಲ್ಲಾ ರಸ್ತೆಗಳ ತೆರವು ಕಾರ್ಯ ನಡೆಯಲಿ ಅಂತ ಪಟ್ಟು ಹಿಡಿದರು. ಇದನ್ನೂ ಓದಿ: ಯೋಗೇಶ್ವರ್ ಬಿಜೆಪಿಯ ಕಟ್ಟಾಳು ಏನಾಗಿರಲಿಲ್ಲ: ಆರ್ ಅಶೋಕ್

    ಕೆಲಕಾಲ ಮಾತಿನ ಚಕಮಕಿ ನಡೆಯಿತು. ಒಟ್ಟಿನಲ್ಲಿ ವಾದ-ವಿವಾದಗಳ ನಡುವೆ ತೆರವು ಕಾರ್ಯಾಚರಣೆ ನಡೆಯಿತು. ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್ ಹೊಸಮನಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅರುಣಾ, ಗ್ರಾಮ ಪಂಚಾಯತ್ ಅಧಿಕಾರಿ, ಸಿಬ್ಬಂದಿಗಳು, ಪೊಲೀಸರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಡಿಕೆಶಿ ನೇತೃತ್ವದಲ್ಲಿ ರಾಜಕೀಯ ಜೀವನ ಆರಂಭಿಸಿದ್ದೆ, ಮರಳಿ ಮನೆಗೆ ಬಂದಿದ್ದೇನೆ: ಸಿಪಿ ಯೋಗೇಶ್ವರ್‌

  • ಬಂಧನದಲ್ಲಿರುವ ರಾಣಾ ದಂಪತಿ ನಿವಾಸದಲ್ಲಿ ಅಕ್ರಮ ಕಟ್ಟಡ – ಬಿಎಂಸಿ ನೋಟೀಸ್

    ಬಂಧನದಲ್ಲಿರುವ ರಾಣಾ ದಂಪತಿ ನಿವಾಸದಲ್ಲಿ ಅಕ್ರಮ ಕಟ್ಟಡ – ಬಿಎಂಸಿ ನೋಟೀಸ್

    ಮುಂಬೈ: ಬಂಧನದಲ್ಲಿರುವ ಸ್ವತಂತ್ರ ಸಂಸದೆ ನವನೀತ್ ರಾಣಾ ಮತ್ತು ಶಾಸಕ ಪತಿ ರವಿ ರಾಣಾ ದಂಪತಿಗೆ ಒಂದಾದಂತೆ ಒಂದು ಅಂಕಷ್ಟಗಳು ಎದುರಾಗುತ್ತಿದ್ದು, ಇದೀಗ ಮುಂಬೈ ನಲ್ಲಿರುವ ತಮ್ಮ ನಿವಾಸದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವುದಾಗಿ ಬೃಹತ್ ಮುಂಬೈ ಮಹಾನಗರಪಾಲಿಕೆ (BMC) ನೋಟಿಸ್ ಜಾರಿಗೊಳಿಸಿದೆ.

    navneet kaur 2

    ನೋಟೀಸ್ ಪ್ರಕಾರ ಅಧಿಕಾರಿಗಳು ಮೇ 4ರಂದು ಯಾವುದೇ ಸಮಯದಲ್ಲಿ, ಯಾವುದೇ ಕಟ್ಟಡಕ್ಕೆ ಭೇಟಿ ನೀಡಿ ತಪಾಸಣೆ ನಡೆಸಬಹುದು. ಅಕ್ರಮ ಆಗಿದ್ದರೆ ಬದಲಾವಣೆ ಮಾಡುವುದಕ್ಕೂ ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗಿದೆ. ಇದನ್ನೂ ಓದಿ: ಸೊಪೋರ್‌ನಲ್ಲಿ ಮೂವರು ಲಷ್ಕರ್ ಉಗ್ರರು ಅರೆಸ್ಟ್

    ಹಿನ್ನೆಲೆ ಏನು?: ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ್ದಾಗಿ ಮಹಾರಾಷ್ಟ್ರದ ಅಮರಾವತಿಯ ಸಂಸದ ಬದ್ನೇರಾ ಶಾಸಕ ರವಿ ರಾಣಾ ಮತ್ತು ಅವರ ಪತ್ನಿ ನವನೀತ್ ರಾಣಾ ಅವರನ್ನು ಏಪ್ರಿಲ್ 23ರಂದು ಬಂಧಿಸಲಾಗಿದೆ. 

    HANUMAN CHALISA PROTEST

    ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಪಠಿಸುವ ಯೋಜನೆಯನ್ನು ಈ ದಂಪತಿ ಹಾಕಿಕೊಂಡಿದ್ದರು. ಆದರೆ ಅವರನ್ನು ಬಂಧಿಸಿದ ಮೇಲೆ ಕಾರ್ಯಕ್ರಮವನ್ನು ರದ್ದುಗೊಳಿಸಿಲಾಯಿತು. ಇದನ್ನೂ ಓದಿ: ದೇಶದ ಪರಿಸ್ಥಿತಿ ಚೆನ್ನಾಗಿಲ್ಲ, ಭಯಪಡಬೇಡಿ, ಹೋರಾಟ ಮುಂದುವರೆಸಿ: ಮಮತಾ ಬ್ಯಾನರ್ಜಿ

    ಪ್ರಸ್ತುತ ದಂಪತಿ ವಿರುದ್ಧ ಸೆಕ್ಷನ್ 153(A) (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 353 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರಿಬ್ಬರನ್ನೂ ಭಾನುವಾರ ಬಾಂದ್ರಾದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇಬ್ಬರನ್ನೂ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

    Navneet Rana Ravi Rana 2

    ಸರ್ಕಾರಿ ಯಂತ್ರಕ್ಕೆ ಸವಾಲು ಹಾಕಿದ ಮತ್ತು ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಟೀಕೆಗಳನ್ನು ಮಾಡಿದ್ದರಿಂದ ಅವರ ವಿರುದ್ಧ ಐಪಿಸಿ ಸೆಕ್ಷನ್ 124-A (ದೇಶದ್ರೋಹ) ಅಡಿಯಲ್ಲಿ ಆರೋಪಗಳನ್ನು ಮಾಡಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘರತ್ ತಿಳಿಸಿದ್ದರು.

  • ಅಕ್ರಮ ಕಟ್ಟಡ ನಿರ್ಮಾಣ ಸರ್ಕಾರದ ವಶಕ್ಕೆ ಪಡೆಯಲು ಅರ್ಜಿ ಸಲ್ಲಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ

    ಅಕ್ರಮ ಕಟ್ಟಡ ನಿರ್ಮಾಣ ಸರ್ಕಾರದ ವಶಕ್ಕೆ ಪಡೆಯಲು ಅರ್ಜಿ ಸಲ್ಲಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ

    ಬೆಂಗಳೂರು/ಆನೇಕಲ್: ಅಕ್ರಮವಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡವನ್ನು ವಶಕ್ಕೆ ಪಡೆಯಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಆನೇಕಲ್‌ನಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ಸೋಂಪುರ ಗ್ರಾಮದ ಸರ್ವೆ ನಂಬರ್ 30/1, 31/1 ಮತ್ತು ಚಿಕ್ಕ ದುನ್ನಸಂದ್ರ ಗ್ರಾಮದ ಮೊದಲ ಸರ್ವೆ ನಂಬರ್ 7/2ರಲ್ಲಿ ಒಟ್ಟು 4 ಎಕರೆ 37 ಗುಂಟೆ ಜಮೀನಿನಲ್ಲಿ ಸರ್ಕಾರದ ಆಸ್ತಿಯನ್ನು ಅಕ್ರಮವಾಗಿ ಮೇ ಡ್ರೀಮ್ಸ್ ಇನ್ ಫ್ರಾ ಇಂಡಿಯಾ ಪ್ರೈ. ಲಿಮಿಟೆಡ್ ಕಂಪನಿಯು ಒತ್ತುವರಿ ಮಾಡಿಕೊಂಡಿದ್ದನ್ನು ಸರ್ಕಾರ ತೆರವು ಮಾಡಿ ಮುಟ್ಟುಗೋಲು ಹಾಕಿಕೊಂಡಿತ್ತು. ಇದನ್ನೂ ಓದಿ:ಬೈಕ್, ಡಬಲ್ ಬ್ಯಾರಲ್ ಕೋವಿ ಕದ್ದಿದ್ದ ಆರೋಪಿ ಅಂದರ್

    ಸರ್ಕಾರದ ಈ ಕ್ರಮವನ್ನು ದಿಕ್ಕರಿಸಿ ಮತ್ತೊಂದು ಸ್ಥಳೀಯ ಮಾಡ್ರನ್ ಸ್ಪೇಸ್ ಕಂಪನಿ (ಯತೀಶ್ ಮತ್ತು ಕಾಡ ಅಗ್ರಹಾರ ಮಂಜುನಾಥ್) ಕಾಮಗಾರಿ ಮುಂದುವರೆಸಿತ್ತು. ಇದನ್ನು ಪ್ರಶ್ನಿಸಿ ಆರ್‌ಟಿಐ ಕಾರ್ಯಕರ್ತ ಮುರಳಿ ಸರ್ಕಾರಕ್ಕೆ ಮಾಹಿತಿ ಕೋರಿ ವಿವರ ಕೇಳಿದ್ದರು. ಇದನ್ನು ಮನಗಂಡ ಆನೇಕಲ್ ತಹಶೀಲ್ದಾರ್ ಪಿ.ದಿನೇಶ್ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ನಿಲ್ಲಿಸಿ ಸರ್ಕಾರದ ಸ್ವತ್ತು ಎಂದು ಎಚ್ಚರಿಕಾ ಫಲಕ ನೆಟ್ಟು ಆಸ್ತಿಯನ್ನು ಮತ್ತೊಮ್ಮೆ ವಶಪಡಿಸಿಕೊಂಡಿತ್ತು. ಇದರಿಂದ ಕೆರಳಿದ ಮಾಡ್ರನ್ ಸ್ಪೇಸ್ ಕಂಪನಿ ಇದೆಲ್ಲದ್ದಕ್ಕೂ ಕಾರಣ ಮುರಳಿಯ ಅರ್ಜಿಯೇ ಎಂದು ಖಾತರಿ ಪಡಿಸಿಕೊಂಡು ಕಂಪೆನಿಯ ಕೇಶವ, ಬಿಕ್ಕನಹಳ್ಳಿಯ ನವೀನ್, ಜಗದೀಶ್ ತಂಡ ಮುರಳಿ ಕಾರನ್ನು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ:ಡ್ರಗ್ಸ್ ಕೇಸ್ – ಉದ್ಯಮಿ, ಸೆಲೆಬ್ರಿಟಿ, ಡಿಜೆ ಮನೆಗಳ ಮೇಲೆ ದಾಳಿ

    ಇದೆಲ್ಲದರ ದೃಶ್ಯಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಂತರ ಗಾಯಾಳು ಆಕ್ರಮಿತರಿಂದ ತಪ್ಪಿಸಿಕೊಳ್ಳಲು ಬೇಕರಿಯಲ್ಲಿ ಆಶ್ರಯ ಪಡೆದಾಗಲೂ ಹಲ್ಲೆ ಮುಂದುವರಿದಾಗ, ಅಲ್ಲಿಯೇ ಇದ್ದ ಬಾಟಲಿಯಿಂದ ಎದುರಾಳಿಗಳಿಂದ ರಕ್ಷಿಸಿಕೊಂಡಿದ್ದಾರೆ. ಆ ನಂತರ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮುರಳಿ ರಕ್ಷಣೆಗಾಗಿ ಮನವಿ ಮಾಡಿದ್ದಾರೆ. ಇದರಿಂದ ಎರೆಡೂ ಕಡೆ ಪ್ರಕರಣ ದಾಖಲಾಗಿದೆ.

  • ಕೊಚ್ಚಿಯಲ್ಲಿ ಧರೆಗುರುಳಿದ ಅಕ್ರಮ ಕಟ್ಟಡಗಳು- ಬೆಂಗ್ಳೂರಲ್ಲಿ ಕೆರೆದಂಡೆಯ ಮನೆಯವರಿಗೆ ಢವ ಢವ

    ಕೊಚ್ಚಿಯಲ್ಲಿ ಧರೆಗುರುಳಿದ ಅಕ್ರಮ ಕಟ್ಟಡಗಳು- ಬೆಂಗ್ಳೂರಲ್ಲಿ ಕೆರೆದಂಡೆಯ ಮನೆಯವರಿಗೆ ಢವ ಢವ

    ಬೆಂಗಳೂರು: ಕೇರಳದ ಕೊಚ್ಚಿಯಲ್ಲಿ ಕೋಟಿಗಟ್ಟಲೇ ಮೌಲ್ಯದ ಕಟ್ಟಡಗಳು ಉರುಳಿವೆ. ಕೊಚ್ಚಿ ಬೆನ್ನಲ್ಲೇ ಬೆಂಗಳೂರಿನಲ್ಲೂ ಕೆರೆ ಭೂಮಿಗಳ್ಳರಿಗೆ ನಡುಕ ಶುರುವಾಗಿದೆಯಾ? ಲೇಕ್ ವ್ಯೂವ್ ಪಾಯಿಂಟ್ ಮೂಡ್ ನಲ್ಲಿದ್ದವರು ಆತಂಕಗೊಂಡಿದ್ದಾರೆ. ಬೆಂಗಳೂರಿನಲ್ಲೂ ಕೊಚ್ಚಿ ಮಾದರಿಯಲ್ಲಿ ಶುರುವಾಗುತ್ತಾ ಎಂಬ ಪ್ರಶ್ನೆಗಳು ಮೂಡಿವೆ.

    ಕೇರಳದಂತೆ ಬೆಂಗಳೂರಿನಲ್ಲೂ ಅಕ್ರಮ ಗಗನಚುಂಬಿ ಕಟ್ಟಡಗಳಿದೆ ಇದೇ ಸ್ಥಿತಿಯಾಗುತ್ತಾ ಎಂಬ ಚರ್ಚೆ ಶುರುವಾಗಿದೆ. ಬೆಂಗಳೂರಿನಲ್ಲಿಯೂ ಸಾಕಷ್ಟು ಕೆರೆಯನ್ನು ನುಂಗಿ ನಿರ್ಮಾಣವಾಗಿರುವ ಕಟ್ಟಡದ ಸಂಖ್ಯೆ ಅತ್ಯಧಿಕವಾಗಿದೆ. ಕೊಚ್ಚಿಯಲ್ಲಿ ನಡೆದ ಘಟನೆ ಬೆನ್ನಲ್ಲೆ ಬೆಂಗಳೂರಿನಲ್ಲಿ ಮೇಯರ್ ಆಯುಕ್ತರ ಜೊತೆ ಸಭೆ ಚರ್ಚೆ ನಡೆಸಿ, ಬಫರ್ ಝೋನ್ ಗೊಂದಲ, ಹಾಗೂ ಕೆರೆಯ ಪಕ್ಕ ನಿರ್ಮಾಣವಾಗಿರುವ ಕಟ್ಟಡಗಳ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

    ಎನ್.ಜಿ.ಟಿ ಆದೇಶದ ಪ್ರಕಾರ ಕೆರೆಯ 72 ಮೀಟರ್ ಪರಿದಿಯಲ್ಲಿ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಆದರೆ ಸುಪ್ರೀಂ ಕೋರ್ಟ್ ನಲ್ಲಿ ಈ ಪರಿದಿ ಬಗ್ಗೆ ಸ್ಟೇ ಇದೆ. ಹಾಗಾಗಿ ಬಿಬಿಎಂಪಿ ಮೂವತ್ತು ಮೀಟರ್ ಅಂತಾನೇ ಪರಿಗಣನೆ ಮಾಡಿದೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಅಸುಪಾಸು ಹತ್ತೊಂಬತ್ತು ಲಕ್ಷ ಕಟ್ಟಡ ಇದೆ. ಅದರಲ್ಲಿ ಬಿಬಿಎಂಪಿ ಅನುಮತಿ ಪಡೆಯದೆ ಬಿ ಖಾತಾ ಇರುವ ಮೂರು ಲಕ್ಷ ಕಟ್ಟಡಗಳು ಹಾಗೂ ಕೃಷಿ ಜಮೀನಿನಲ್ಲೂ ಕಟ್ಟಡವಿದೆ. ಒಟ್ಟು ಮೂರು ಲಕ್ಷ ಅದನ್ನು ಅನಧಿಕೃತ ಎಂದೂ ಪರಿಗಣಿಸಲಾಗಿದೆ. ರಾಜಕಾಲುವೆ ವ್ಯಾಪ್ತಿಯಲ್ಲಿ 2,626 ಅನಧಿಕೃತ ಕಟ್ಟಡವಿದೆ. ಒಟ್ಟು ಹತ್ತು ಕೆರೆಯಲ್ಲಿ ಭೂ ಒತ್ತುವರಿಯ ಸಂಪೂರ್ಣ ಚಿತ್ರಣ ಸಿಕ್ಕಿದ್ದು ಆರು ಕೆರೆಯ ಒತ್ತುವರಿ ಬಿಡಿಸಿ ಪೆನ್ಸಿಂಗ್ ಹಾಕಲಾಗಿದೆ.

    ಸುಪ್ರೀಂ ಕೋರ್ಟ್ ನಲ್ಲಿ ಅಕ್ರಮ – ಸಕ್ರಮದ ತೀರ್ಪಿಗೆ ಬಿಬಿಎಂಪಿ ಕಾಯುತ್ತಿದ್ದು ತದನಂತರ ಕೆರೆಯಂಗಳದಲ್ಲಿ ಅನಧಿಕೃತ ಕಟ್ಟಡ ತೆರವಿನ ಬಗ್ಗೆ ಪ್ಲಾನ್ ರೂಪಿಸಲಿದೆ. ಈಗಾಗಲೇ ಬಿಬಿಎಂಪಿಗೆ ಕೆರೆಯ ಪಕ್ಕ ಕಟ್ಟಡ ನಿರ್ಮಿಸಿದವರಿಗೆ ನೋಟಿಸ್ ಕೊಡಲಾಗಿದೆ. ಆದರೆ ಕೋರ್ಟ್ ನಲ್ಲಿ ಹೋಗಿ ಸ್ಟೇ ತರೋದ್ರಿಂದ ಕಾನೂನಾತ್ಮಕ ತೊಡಕು ಎದುರಾಗುತ್ತಿದೆ. ಈ ಬಾರಿ ಅಕ್ರಮ – ಅಕ್ರಮದ ಸ್ಪಷ್ಟ ಚಿತ್ರಣ, ಬಫರ್ ಝೋನ್ ಗೊಂದಲ ನಿವಾರಣೆಯಾದ ಬಳಿಕ ಸೂಕ್ತ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.

  • ಪ್ರಜ್ವಲ್ ರೇವಣ್ಣ ಮಾಲೀಕತ್ವದ ಕಟ್ಟಡ ತೆರವು

    ಪ್ರಜ್ವಲ್ ರೇವಣ್ಣ ಮಾಲೀಕತ್ವದ ಕಟ್ಟಡ ತೆರವು

    ಹಾಸನ: ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡಿದ್ದ ಲೋಕೋಪಯೋಗಿ ಸಚಿವ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಮಾಲೀಕತ್ವದ ಕಟ್ಟಡಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಇಂದು ತೆರವುಗೊಳಿಸಲಾಯಿತು.

    ನಗರದ ಬಿಎಂ ರಸ್ತೆಯಲ್ಲಿ ಸುಮಾರು 40 ಕಟ್ಟಡಗಳು ನಿರ್ಮಾಣ ಮಾಡಲಾಗಿತ್ತು. ಈ ಸಂಬಂಧ ನಗರಸಭೆ ಈ ಹಿಂದೆಯೇ ಎಲ್ಲಾ ಕಟ್ಟದ ಮಾಲೀಕರಿಗೂ ನೋಟಿಸ್ ಜಾರಿ ಮಾಡಿತ್ತು. 1ನೇ ವಾರ್ಡ್ ವ್ಯಾಪ್ತಿಯ ಬಿಎಂ ರಸ್ತೆಗೆ ಹೊಂದಿಕೊಂಡಂತೆ ಇರುವ ಆಸ್ತಿಯಲ್ಲಿ, 6 ಮೀಟರ್ ಕಟ್ಟಡ ರೇಖೆಯನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸಲಾಗಿತ್ತು.

    ನೋಟಿಸ್ ತಲುಪಿದ 7 ದಿನಗಳ ಒಳಗಾಗಿ ಅತಿಕ್ರಮಿಸಿದ ಜಾಗದ ತೆರವುಗೊಳಿಸಬೇಕು ಇಲ್ಲವೇ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ನಗರಸಭೆಗೆ ಹಾಜರು ಪಡಿಸಬೇಕು ಉಲ್ಲೇಖಿಸಲಾಗಿತ್ತು. ಹಾಸನ ನಗರ ಹೃದಯ ಭಾಗದಲ್ಲಿ ಈ ಕಟ್ಟಡಗಳು ನಿರ್ಮಾಣ ಮಾಡಲಾಗಿದ್ದು, ಇಲ್ಲಿನ ನಿವೇಶನಕ್ಕೆ ಹೆಚ್ಚಿನ ಬೆಲೆ ಇದೆ. ಆದ್ದರಿಂದ ನಗರ ಸಭೆ ನೋಟಿಸ್ ನೀಡಿದ ಬಳಿಕ ತೆರವು ಕಾರ್ಯಾಚರಣೆ ತಡೆ ನೀಡುವಂತೆ ತಡೆಯಾಜ್ಞೆ ತರುವ ಪ್ರಯತ್ನವೂ ನಡೆದಿತ್ತು.ಆದರೆ ಅಧಿಕಾರಿಗಳು ದಿಟ್ಟಕ್ರಮ ಕೈಗೊಳ್ಳುವ ಮೂಲಕ ಇಂದು ಬೆಳಗ್ಗೆಯೇ ಜೆಸಿಬಿ ಯಂತ್ರಗಳ ಮೂಲಕ ಸ್ಥಳಕ್ಕೆ ಆಗಮಿಸಿದ್ದರು. ಪೊಲೀಸ್ ಭದ್ರತೆಯ ನಡುವೆ 10 ಗಂಟೆಗಳ ವೇಳೆಗೆ ತೆರವು ಕಾರ್ಯಾಚರಣೆ ಆರಂಭವಾಗಿತ್ತು. ಸುಮಾರು 40 ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸುತ್ತಿರುವುದರಿಂದ ಶನಿವಾರವೂ ಕಾರ್ಯಾಚರಣೆ ಮುಂದುವರಿಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಿಗರೇ ಎಚ್ಚರ- ಇನ್ಮುಂದೆ ಬೇಕಾಬಿಟ್ಟಿ ಮನೆ ಕಟ್ಟಿದ್ರೆ ಶಿಕ್ಷೆಯ ಜೊತೆಗೆ ಬೀಳತ್ತೆ ಫೈನ್!

    ಬೆಂಗ್ಳೂರಿಗರೇ ಎಚ್ಚರ- ಇನ್ಮುಂದೆ ಬೇಕಾಬಿಟ್ಟಿ ಮನೆ ಕಟ್ಟಿದ್ರೆ ಶಿಕ್ಷೆಯ ಜೊತೆಗೆ ಬೀಳತ್ತೆ ಫೈನ್!

    ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಎಚ್ಚರವಾಗಿರಿ. ಯಾಕಂದ್ರೆ ಇನ್ನುಮುಂದೆ ಬೇಕಾಬಿಟ್ಟಿಯಾಗಿ ಮನೆ ಕಟ್ಟಿದ್ರೆ ಫೈನ್ ಕಟ್ಟೋಕೆ ಮತ್ತು ಶಿಕ್ಷೆ ಅನುಭವಿಸೋಕೆ ರೆಡಿಯಾಗಿರಿ.

    ಅಧಿಕಾರಿಗಳ ಜೊತೆ ಶಾಮೀಲಾಗಿ ಅಕ್ರಮ ಕಟ್ಟಡ ಕಟ್ಟಿ ತೆರಿಗೆ ವಂಚನೆ ಜೊತೆ ನಕ್ಷೆ ಉಲ್ಲಂಘನೆ ಮಾಡುತ್ತಿದ್ದ ಬಿಲ್ಡರ್‍ಗಳು ಮತ್ತು ಅಧಿಕಾರಿಗಳಿಗೆ ಹೈಕೋರ್ಟ್ ಸರಿಯಾಗಿ ಚಾಟಿ ಬೀಸಿದೆ. ಹೈಕೋರ್ಟ್ ಚಾಟಿಗೆ ಹೆದರಿದ ಸರ್ಕಾರ ಕೆಎಂಸಿ ಕಾಯ್ದೆ ತಿದ್ದುಪಡಿ ತಂದು ಹೊಸ ಅಧಿಸೂಚನೆ ಕರುಡು ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

    1 ತಿಂಗಳ ಕಾಲ ಸಾರ್ವಜನಿಕರ ಆಕ್ಷೇಪಣೆಗಳಿಗೆ ಸಮಯಾವಕಾಶ ನೀಡಿದ್ದು ಆಕ್ಷೇಪಣೆಗಳನ್ನು ನೋಡಿಕೊಂಡು ಅಂತಿಮ ಅಧಿಸೂಚನೆ ಹೊರಡಿಸುವುದಾಗಿ ಹೇಳಿದೆ. ಅಷ್ಟೇ ಅಲ್ಲದೇ ಕೇವಲ ಅಧಿಕಾರಿಗಳಿಗೆ ಮಾತ್ರವಲ್ಲದೇ ಅಕ್ರಮ ಕಟ್ಟಡ ಕಟ್ಟುವವರಿಗೂ ದಂಡ ಸಹಿತ ಶಿಕ್ಷೆ ಪ್ರಮಾಣದ ನಿಯಮಗಳು ರೆಡಿಯಾಗುತ್ತಿದೆ. ಮುಂದಿನ ವಿಚಾರಣೆ ವೇಳೆ ಅದರ ಪ್ರತಿಯನ್ನು ಸಹ ನೀಡುವುದಾಗಿ ಸರ್ಕಾರ ಹೇಳಿದೆ.

    ಶಿಕ್ಷೆಯೇನು?:
    2 ಸಾವಿರದಿಂದ 50 ಸಾವಿರದವರೆಗೆ ದಂಡ ವಿಧಿಸಲಾಗುವುದು. 3 ತಿಂಗಳಿಂದ 2 ವರ್ಷದವರೆಗೆ ಶಿಕ್ಷೆ ನೀಡಲಾಗುವುದು. ಅಲ್ಲದೇ ಕೆಲಸದಿಂದ ಶಾಶ್ವತ ವಜಾ, ಇತರೆ ಸೌಲಭ್ಯಗಳಿಗೆ ಕತ್ತರಿ ಹಾಕಲಾಗುವುದು. ಈ ಶಿಕ್ಷೆ ಕೇವಲ ಅಧಿಕಾರಿಗಳಿಗೆ ಮಾತ್ರವಲ್ಲ, ಅಕ್ರಮ ಕಟ್ಟಡ ಕಟ್ಟುವವರಿಗೂ ಇದೇ ಪ್ರಮಾಣದ ಶಿಕ್ಷೆ ವಿಧಿಸಲಾಗುವುದು.

    ಅಕ್ರಮ ಕಟ್ಟಡ ಅಂತ ಸಾಬೀತಾದ್ರೆ ಇಡೀ ಕಟ್ಟಡ ಡೆಮಾಲಿಷನ್ ಮಾಡುವ ಸಾಧ್ಯತೆಗಳಿವೆ. ಅಲ್ಲದೆ ಶಾಶ್ವತ ನೀರು ಸಂಪರ್ಕ ಕರೆಂಟ್ ಸಂಪರ್ಕ ಬಂದ್ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಹೀಗೆ ಒಟ್ಟು 52 ಬಗೆಯ ನಿಯಮ ಉಲ್ಲಂಘನೆಗೆ ಶಿಕ್ಷೆ ಪ್ರಮಾಣ ಘೋಷಣೆಗೆ ತಿದ್ದುಪಡಿ ಮಾಡಬಹುದು. ಈ ಬಗ್ಗೆ ಮುಂದಿನ ವಿಚಾರಣೆ ವೇಳೆ ಕರುಡು ಪ್ರತಿ ಸಿದ್ಧಪಡಿಸುವುದಾಗಿ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv