Tag: ಅಂಬಾಲಾ

  • ಮದ್ವೆಗೆ ಟೈಂ ಆಯ್ತು ಡ್ಯಾನ್ಸ್ ಬೇಡ ಎಂದಿದಕ್ಕೆ ಚಾಕು ಇರಿತ

    ಮದ್ವೆಗೆ ಟೈಂ ಆಯ್ತು ಡ್ಯಾನ್ಸ್ ಬೇಡ ಎಂದಿದಕ್ಕೆ ಚಾಕು ಇರಿತ

    ಅಂಬಾಲಾ: ಮದುವೆಯ ಸಂದರ್ಭದಲ್ಲಿ ಡ್ಯಾನ್ಸ್ ಬೇಡ ಎಂದಿದಕ್ಕೆ ವರನ ಕಡೆಯವರು ವಧುವಿನ ಸಂಬಂಧಿಕನ ಮೇಲೆ ಚಾಕು ಇರಿದ ಘಟನೆ ಶುಕ್ರವಾರ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ.

    ವಿಕಾಸ್ ಕೊಲೆಯಾದ ವ್ಯಕ್ತಿ. ಮದುವೆಯ ಮೆರವಣಿಗೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವರನನ್ನು ಮದುವೆಗೆ ಕರೆದುಕೊಂಡು ಬರುವಾಗ ರಸ್ತೆ ಉದ್ದಕ್ಕೂ ನೃತ್ಯ ಮಾಡುವ ಸಂಪ್ರದಾಯವಿದೆ. ಹೀಗೆ ಗುರುವಾರ ರಾತ್ರಿ ವರನ ಕಡೆಯವರು ಮದುವೆ ಮಂಟಪಕ್ಕೆ ಬಂದಿದ್ದಾರೆ. ರಾತ್ರಿ 10 ಗಂಟೆಯಾದರೂ ಅವರು ಡ್ಯಾನ್ಸ್ ಮಾಡುತ್ತಲೇ ಇದ್ದರು.

    ಈ ವೇಳೆ ಮದುವೆಗೆ ತಡವಾಗುತ್ತಿದೆ. ಹೀಗಾಗಿ ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿ ಎಂದು ವಧುವಿನ ಕಡೆಯವರಾದ ವಿಕಾಸ್ ವರನ ಸಂಬಂಧಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ವಿಕಾಸ್ ಮನವಿಗೆ ಸ್ಪಂದಿಸದೇ ವರನ ಕಡೆಯವರು ಡ್ಯಾನ್ಸ್ ಮಾಡುತ್ತಿದ್ದರು.

    ವಿಕಾಸ್ ಡ್ಯಾನ್ಸ್ ಬೇಡವೆಂದು ಹೇಳಿದಕ್ಕೆ ವರ ಹಾಗೂ ವಧುವಿನ ಕುಟುಂಬಸ್ಥರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ವರನ ಸಂಬಂಧಿಕ ಸಂಜಯ್, ವಿಕಾಸ್‍ಗೆ ಚಾಕುಯಿಂದ ಇರಿದಿದ್ದಾನೆ. ಪರಿಣಾಮ ವಿಕಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಆರೋಪಿ ಸಂಜಯ್ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 11 ವರ್ಷದ ಮಲಮಗಳ ಗುಪ್ತಾಂಗಕ್ಕೆ ಮೆಣಸಿನಪುಡಿ ಹಾಕಿದ ಕ್ರೂರಿ ತಂದೆ!

    11 ವರ್ಷದ ಮಲಮಗಳ ಗುಪ್ತಾಂಗಕ್ಕೆ ಮೆಣಸಿನಪುಡಿ ಹಾಕಿದ ಕ್ರೂರಿ ತಂದೆ!

    ಅಂಬಾಲಾ: ಮಲತಂದೆಯೊಬ್ಬ ತನ್ನ 11 ವರ್ಷದ ಮಲಮಗಳ ಗುಪ್ತಾಂಗಕ್ಕೆ ಮೆಣಸಿನಪುಡಿ ಹಾಕಿ ಲೈಂಗಿಕ ಕಿರುಕುಳ ನೀಡಿದ ಘಟನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ.

    ಆರೋಪಿ ತಂದೆ 11 ವರ್ಷದ ಬಾಲಕಿಗೆ ದೇಹದ ಮೇಲೆ ಗಾಯ ಮಾಡುವ ಮೂಲಕ ಹಾಗೂ ಆಕೆಯ ಗುಪ್ತಾಂಗಕ್ಕೆ ಮೆಣಸಿನಪುಡಿ ಹಾಕುವ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಸದ್ಯ ಬಾಲಕಿಯನ್ನು ಮಹಿಳಾ ರಕ್ಷಣಾ ಇಲಾಖೆ ಮತ್ತು ಚೈಲ್ಡ್ ಲೈನ್ ತಂಡ ರಕ್ಷಣೆ ಮಾಡಿದೆ.

    ಬಾಲಕಿಗೆ ತನ್ನ ಮಲತಂದೆ ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ನೋಡಿದ ಅಕ್ಕಪಕ್ಕದ ಮನೆಯವರು ಚೈಲ್ಡ್ ಲೈನ್‍ಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದರು. ಮಕ್ಕಳ ರಕ್ಷಣಾ ಇಲಾಖೆ ಹಾಗೂ ಪೊಲೀಸರ ಜೊತೆ ಸೇರಿ ಚೈಲ್ಡ್ ಲೈನ್ ಹಿರಾನಗರ್ ನಲ್ಲಿರುವ ಆರೋಪಿ ಮನೆ ಮೇಲೆ ಮಧ್ಯರಾತ್ರಿ ದಾಳಿ ನಡೆಸಿದ್ದರು.

    ಆರೋಪಿ ಮನೆ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಮಲತಂದೆ ನೀಡಿದ ಕಿರುಕುಳದಿಂದ ಬಾಲಕಿಗೆ ಸರಿಯಾಗಿ ನಡಿಯಲು ಸಾಧ್ಯವಾಗುತ್ತಿರಲಿಲ್ಲ. ಆರೋಪಿ ಬಾಲಕಿಗೆ ತುಂಬ ಹೊಡೆಯುತ್ತಿದ್ದನು. ಹಾಗಾಗಿ ಬಾಲಕಿಗೆ ನಡಿಯಲು ಸಾಧ್ಯವಾಗುತ್ತಿಲ್ಲ ಎಂದು ಅಕ್ಕಪಕ್ಕದ ಮನೆಯವರು ಆರೋಪಿಸಿದ್ದಾರೆ.

    ಬಾಲಕಿ ತಾಯಿ 3 ವರ್ಷದಿಂದ ತನ್ನ ಗಂಡನ ಜೊತೆ ಸಂಬಂಧವನ್ನು ಕಡಿತಗೊಂಡಿದ್ದಳು. ನಂತರ ಬಾಲಕಿಯ ಮಲತಂದೆ ಜೊತೆ ವಾಸಿಸುತ್ತಿದ್ದಳು. ಸ್ನಾನ ಮಾಡುವ ವೇಳೆ ಬಾಗಿಲು ಮುಚ್ಚಬಾರದು, ಅದನ್ನು ತೆರೆದಿರಬೇಕು ಎಂದು ಬಾಲಕಿಗೆ ಆರೋಪಿ ತಂದೆ ಎಚ್ಚರಿಸುತ್ತಿದ್ದನು.

    ವೈದ್ಯಕೀಯ ಪರೀಕ್ಷೆ ಹಾಗೂ ವಿಚಾರಣೆ ನಡೆಸಿದ ಮೇಲೆ ಆರೋಪಿ ತಂದೆ ವಿರುದ್ಧ ಕ್ರಮಕೈಗಳ್ಳಲಾಗುತ್ತದೆ ಎಂದು ಪೊಲೀಸ್ ಐಒ ಮೆಹಲ್ ಸಿಂಗ್ ತಿಳಿಸಿದ್ದಾರೆ.