Tag: ಅಂತಿಮ ನಮನ

  • ಆಸ್ಪತ್ರೆಯಲ್ಲಿದ್ದ ಅಭಿಷೇಕ್ ಕಣ್ಣಲ್ಲಿ ಒಂದು ತೊಟ್ಟು ನೀರಿರಲಿಲ್ಲ ಏಕೆ ಅನ್ನೋದನ್ನು ರಿವೀಲ್ ಮಾಡಿ ಭಾವುಕರಾದ ಸಿಎಂ

    ಆಸ್ಪತ್ರೆಯಲ್ಲಿದ್ದ ಅಭಿಷೇಕ್ ಕಣ್ಣಲ್ಲಿ ಒಂದು ತೊಟ್ಟು ನೀರಿರಲಿಲ್ಲ ಏಕೆ ಅನ್ನೋದನ್ನು ರಿವೀಲ್ ಮಾಡಿ ಭಾವುಕರಾದ ಸಿಎಂ

    ಬೆಂಗಳೂರು: ನಟ, ರೆಬೆಲ್ ಸ್ಟಾರ್ ಸಾವಿನ ಸುದ್ದಿ ನನಗೆ ಅಘಾತ ತಂದಿತ್ತು. ಕೂಡಲೇ ನಾನು ಆಸ್ಪತ್ರೆ ಬಳಿ ತೆರಳಿದೆ. ಆಗ ಅಭಿಷೇಕ್ ಅವರ ಕಣ್ಣಲ್ಲಿ ಒಂದು ತೊಟ್ಟು ನೀರು ಇರಲಿಲ್ಲ ಎಂದು ಅಂದಿನ ದಿನವನ್ನು ಸಿಎಂ ಕುಮಾರಸ್ವಾಮಿ ನೆನಪು ಮಾಡಿಕೊಂಡು ಭಾವುಕರಾದರು.

    ನಗರದ ಅಂಬೇಡ್ಕರ್ ಭವನದಲ್ಲಿ ಅಂಬಿ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನು ಸಿಎಂ ಆಗಿದ್ದಾಗ ಇಬ್ಬರು ಗಣ್ಯರು ನಮ್ಮನ್ನು ಬಿಟ್ಟು ಹೋದರು. ಇಬ್ಬರ ಅಂತಿಮ ಕಾರ್ಯ ನಡೆಸುವ ಅವಕಾಶ ನನಗೆ ಲಭಿಸಿತು. ಇದು ಅದೃಷ್ಟವೋ, ಶಾಪವೋ ಗೊತ್ತಿಲ್ಲ. ನನ್ನ ತಂದೆ ತಾಯಿ ಬಿಟ್ಟರೆ ನನಗೆ ನನ್ನ ಜೀವನದಲ್ಲಿ ಪ್ರೇರಣೆಯಾಗಿದ್ದು ರಾಜ್ ಸಿನಿಮಾಗಳು. ಡಾ. ರಾಜ್‍ಕುಮಾರ್ ನಿಧನರಾದಾಗಲೂ ಹಲವು ಗೊಂದಲಗಳಿದ್ದವು. ಆಸ್ಪತ್ರೆಯಿಂದ ನನ್ನ ಗಮನಕ್ಕೆ ಯಾವುದೇ ಸುದ್ದಿ ತಿಳಿದಿರಲಿಲ್ಲ. ಅಷ್ಟರಲ್ಲೇ ಸುದ್ದಿ ಕಾಡ್ಗಿಚ್ಚಿನಂತೆ ಹರಿದು ರಾಜ್ ನಿವಾಸದ ಮುಂದೆ ಅಭಿಮಾನಿಗಳ ಸಾಗರವೇ ಸೇರಿತ್ತು. ಹಾಗೇ ಅಂಬರೀಶ್ ಸಾವಿನ ಸುದ್ದಿ ಕೇಳಿ ಅಘಾತಗೊಂಡು ಆಸ್ಪತ್ರೆಗೆ ತೆರಳಿದೆ. ಆಗ ಅಭಿಷೇಕ್ ಅವರ ಕಣ್ಣಲ್ಲಿ ಒಂದು ತೊಟ್ಟು ನೀರಿರಲಿಲ್ಲ. ಧೈರ್ಯವಾಗಿ ನಿಂತಿದ್ದರು. ನಾನು ಏಕೆ ಇಷ್ಟು ಧೈರ್ಯವಾಗಿ ಇದ್ದೀಯಾ ಎಂದು ಅಭಿಷೇಕ್‍ಗೆ ಕೇಳಿದೆ. ಅದಕ್ಕೆ ನಾನು ಜಾಸ್ತಿ ರೋಧಿಸಿದ್ರೆ ಅಮ್ಮನಿಗೆ ಮತ್ತಷ್ಟು ದುಃಖವಾಗುತ್ತದೆ ಎಂದು ಹೇಳಿದರು. ಈ ಮಾತು ಕೇಳಿ ನಾನು ಮತ್ತಷ್ಟು ಭಾವುಕನಾದೆ ಎಂದರು.

    ನಾನು ಚಿತ್ರರಂಗದಿಂದ ಬಂದವನು. ಅಂಬರೀಶ್ ನಮಗೆ ಅಣ್ಣನಂತೆ ಇದ್ದರು. ಸ್ನೇಹ ಎಂದರೆ ಅಂಬಿ ಅವರಿಂದಲೇ ನನಗೆ ತಿಳಿಯಿತು. ಅವರ ಅಂತಿಮ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿದ್ದು, ಇದಕ್ಕೆ ಕಾರಣ ಅಂಬಿ ಒಳ್ಳೆಯ ಗುಣ ಕಾರಣ. ಅದ್ದರಿಂದಲೇ ಎಲ್ಲವೂ ಸುಸೂತ್ರವಾಗಿ ನಡೆಯಿತು. ನನಗೆ ನಿಖಿಲ್ ಮತ್ತು ಅಂಬರೀಶ್ ಸೇರಿಸಿ ಒಟ್ಟಿಗೆ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಆದರೆ ರಾಜಕೀಯ ಒತ್ತಡಗಳಿಂದ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ ಎಂದರು.

    ಅಂಬಿ ನನಗೆ ಫೋನ್ ಮಾಡಿ ನನ್ನ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡಿದ್ದರು. ಆಗ ನಾನು ಅವರ ಆರೋಗ್ಯ ಬಗ್ಗೆ ನೋಡಿಕೊಳ್ಳುವಂತೆ ಸಲಹೆ ನೀಡಿದ್ದೆ ಎಂದರು. ಇದೇ ವೇಳೆ ಅಂಬರೀಶ್ ಅವರ ಅಂತಿಮ ಕಾರ್ಯಗಳು ಯಾವುದೇ ಗೊಂದಲವಿಲ್ಲದೇ ನಡೆಯಲು ಪ್ರಮುಖ ಕಾರಣ ಅವರ ಅಭಿಮಾನಿಗಳು. ಮಂಡ್ಯದಲ್ಲೂ ಅಭಿಮಾನಿಗಳು ಶಾಂತಿಯಿಂದ ವರ್ತನೆ ಮಾಡಿದರು. ಅಲ್ಲದೇ ಬೆಂಗಳೂರಿನ ಅಭಿಮಾನಿಗಳು ಮೆರವಣಿಗೆ ವೇಳೆಯೂ ಸಹಕಾರ ನೀಡಿದರು. ಅವರ ಈ ಸಹಕಾರಕ್ಕೆ ಧನ್ಯವಾದ ಎಂದು ತಿಳಿಸಿದರು.

    ಮೈಸೂರಿನಲ್ಲೇ ಫಿಲ್ಮ್ ಸಿಟಿ: ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾತನ್ನು ಪ್ರಸ್ತಾಪಿಸಿದ ಸಿಎಂ ಎಚ್‍ಡಿಕೆ ಅವರು, ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಆಗಬೇಕು ಎಂದು ಮನವಿ ಮಾಡಿದ್ದಾರೆ. ಹಲವರ ಬೇಡಿಕೆ ಇದಾಗಿದೆ. ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡುವ ಯೋಚನೆ ನಮ್ಮ ಮುಂದಿದೆ. ಅದನ್ನು ಬದಲಾವಣೆ ಮಾಡಿಲ್ಲ. ಆದರೆ ರಾಮನಗರದಲ್ಲಿ ಫಿಲ್ಮ್ ವಿಶ್ವವಿದ್ಯಾಲಯ ಮಾಡೋಣ ಎಂಬ ಚಿಂತನೆ ಇದೆ. ಕನ್ನಡ ಸಿನಿಮಾ ರಂಗದ ಬಗ್ಗೆ ನನಗೆ ಬಹಳ ದೂರಾಲೋಚನೆ ಇದೆ. ಬೇರೆ ಭಾಷೆಗಳಿಗೆ, ಭಾರತದಲ್ಲಿ ಕನ್ನಡ ಸಿನಿಮಾ ಮತ್ತಷ್ಟು ಉತ್ತಮ ಯಶಸ್ಸು ಗಳಿಸಬೇಕು. ಆ ಕುರಿತು ನಮ್ಮ ಸರ್ಕಾರದ ಕಾರ್ಯ ಮುಂದುವರಿಯುತ್ತದೆ ಎಂದು ಆಶ್ವಾಸನೆ ನೀಡಿದರು.

    ವಿಷ್ಣು, ರಾಜ್‍ಕುಮಾರ್, ಅಂಬಿ ಅವರ ವ್ಯಕ್ತಿತ್ವ ಒಂದೇ ರೀತಿ ಇತ್ತು. ಅದ್ದರಿಂದ ಎಲ್ಲರಿಗೂ ಸಮಾನ ಗೌರವ ನೀಡಲಾಗುವುದು. ಇದರಲ್ಲಿ ಸರ್ಕಾರದಿಂದ ಲೋಪ ಆಗುವುದಿಲ್ಲ. ಆದರೆ ಈ ಕುರಿತು ಸರ್ಕಾರವನ್ನು ಪ್ರಶ್ನೆ ಮಾಡುವ ವೇಳೆ ಸ್ವಲ್ಪ ತಾಳ್ಮೆ ವಹಿಸಿ ಅಷ್ಟೇ. ಸರ್ಕಾರ ಎಂದಿಗೂ ಈ ವಿಚಾರದಲ್ಲಿ ಹಿಂದೆ ಉಳಿಯುದಿಲ್ಲ. ಅದಷ್ಟು ಶೀಘ್ರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾವುದು ಎಂದರು.

    https://www.youtube.com/watch?v=-LM0X2q1GO8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಕಲ ಸರ್ಕಾರಿ ಗೌರವಗಳೊಂದಿಗೆ ಜಾಫರ್ ಶರೀಫ್‍ಗೆ ವಿದಾಯ

    ಸಕಲ ಸರ್ಕಾರಿ ಗೌರವಗಳೊಂದಿಗೆ ಜಾಫರ್ ಶರೀಫ್‍ಗೆ ವಿದಾಯ

    ಬೆಂಗಳೂರು: ಕೇಂದ್ರ ಮಾಜಿ ಸಚಿವ ಜಾಫರ್ ಶರೀಫ್‍ ಅವರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಅಂತಿಮ ನಮನ ಸಲ್ಲಿಸಲಾಯಿತ್ತು.

    ಇಂದು ಬೆಳಗ್ಗೆ ಜಾಫರ್ ಶರೀಫ್ ನಿವಾಸದಿಂದ ಹೊರಟ ಅವರ ಪಾರ್ಥಿಕ ಶರೀರವನ್ನು ಕೆಪಿಸಿಸಿ ಕಚೇರಿಯಲ್ಲಿ ಕೆಲಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡುರಾವ್ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗುಲಾಂ ನಬಿ ಅಜಾದ್ ಸೇರಿದಂತೆ ಮುಸ್ಲಿಂ ಸಮುದಾಯದ ಹಲವು ಮುಖಂಡರು ಅಂತಿಮ ದರ್ಶನ ಪಡೆದರು.

    ಬಳಿಕ ಮೆರವಣಿಗೆಯಲ್ಲಿ ಕೊಂಡ್ಯೊಯುದು ಸಕಲ ಸರ್ಕಾರಿ ಗೌರವನ್ನು ಸಲ್ಲಿಸಲಾಯಿತು. ನಗರದ ನಂದಿದುರ್ಗ ರಸ್ತೆಯಲ್ಲಿರುವ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ಸಾಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ನಂತರ ಮಸೀದಿಯಿಂದ ಮೆರವಣಿಗೆ ಮೂಲಕ ಮಿಲ್ಲರ್ಸ್ ರಸ್ತೆಯಲ್ಲಿರುವ ಖಬರಸ್ತಾನ ಸ್ಮಶಾನಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತ್ತು. ಅಂತ್ಯಕ್ರಿಯೆಯಲ್ಲಿ ಶಾಸಕ ಹ್ಯಾರೀಸ್, ರೋಷನ್‍ಬೇಗ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಜಾಫರ್ ಷರೀಫ್ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಲ್ಲ ಕಷ್ಟಗಳನ್ನು ನಿವಾರಿಸಿ ಅಪ್ಪಾಜಿ ನೋಡಲು ಸ್ವೀಡನ್‍ನಿಂದ ಬಂದ ದರ್ಶನ್!

    ಎಲ್ಲ ಕಷ್ಟಗಳನ್ನು ನಿವಾರಿಸಿ ಅಪ್ಪಾಜಿ ನೋಡಲು ಸ್ವೀಡನ್‍ನಿಂದ ಬಂದ ದರ್ಶನ್!

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನ ಸುದ್ದಿ ಕೇಳಿ ವಿದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಚಿತ್ರೀಕರಣವನ್ನು ನಿಲ್ಲಿಸಿ ಬಹಳ ಅಡೆ ತಡೆಗಳನ್ನು ದಾಟಿ ಬೆಂಗಳೂರಿಗೆ ಲ್ಯಾಂಡ್ ಆಗಿದ್ದಾರೆ.

    ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಕಂಠೀರವ ಸ್ಟೇಡಿಯಂಗೆ ಅಂಬುಲೆನ್ಸ್ ಮೂಲಕ ಮೃತ ಶರೀರ ಬಂದ ಬಳಿಕ ದರ್ಶನ್ ಅಂಬಿ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ ಅಂಬಿ ಮೃತದೇಹಕ್ಕೆ ದರ್ಶನ್ ಹೆಗಲು ನೀಡಿದರು.

    ಅಂಬರೀಶ್ ಅವರ ನಿಧನದ ಸುದ್ದಿ ಕೇಳಿ ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ ,”ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ” ಎಂದು ಟ್ವೀಟ್ ಮಾಡಿದ್ದರು.

    ತಡವಾಗಿದ್ದು ಯಾಕೆ?
    ಭಾರತ ಹಾಗೂ ಸ್ವೀಡನ್ ದೇಶಕ್ಕೆ ನೇರವಾದ ವಿಮಾನವಿಲ್ಲ. ದುಬೈ ಮೂಲಕ ಭಾರತಕ್ಕೆ ಪ್ರಯಾಣ ಮಾಡಬೇಕು. ಸ್ವೀಡನ್‍ನಿಂದ ಭಾರತಕ್ಕೆ ಅಂದಾಜು 7 ಸಾವಿರ ಕಿ.ಮೀ ದೂರವಿದೆ. ಹೀಗಾಗಿ ದರ್ಶನ್ ಸ್ವೀಡನ್‍ನಿಂದ ದುಬೈಗೆ ಬಂದು, ದುಬೈನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಬಂದಿದ್ದಾರೆ.

    ಸ್ವೀಡನ್‍ನಿಂದ ದುಬೈ, ಟರ್ಕಿ, ಇರಾಕ್, ರೋಮೆನಿಯಾ, ಪೋಲೆಂಡ್ ಸೇರಿದಂತೆ ಹಲವು ದೇಶಗಳನ್ನು ದಾಟಿ ಭಾರತಕ್ಕೆ ಬರಬೇಕು. ಮೊದಲೇ ಟಿಕೆಟ್ ಬುಕ್ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಶನಿವಾರ ರಾತ್ರಿಯೇ ತುರ್ತಾಗಿ ಭಾನುವಾರ ವಿಮಾನ ಟಿಕೆಟ್ ಬೇಕಾದರೆ ಅಷ್ಟು ಸುಲಭವಾಗಿ ಸಿಗುವುದಿಲ್ಲ. ನಮಗೆ ಬೇಕಾದ ಸಮಯಕ್ಕೆ ಸಿಗುವುದು ಬಹಳ ಕಷ್ಟ. ಈ ಎಲ್ಲ ಕಷ್ಟಗಳನ್ನು ನಿವಾರಿಸಿ ದರ್ಶನ್ ಸೋಮವಾರ ಬೆಳಗ್ಗೆ 9.20ಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿದರು.

    ಅಂಬಿ ನಿಧನದ ಸುದ್ದಿ ಕೇಳಿ ಚಿತ್ರತಂಡದ ಎಲ್ಲ ಸದಸ್ಯರು ಬೆಂಗಳೂರಿಗೆ ಬರುತ್ತೇವೆ ಎಂದು ದರ್ಶನ್ ಹೇಳಿದ್ದರು. ಆದರೆ ಇಂದು ದರ್ಶನ್ ಒಬ್ಬರೇ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಭಾರತದ ಸಮಯಕ್ಕೂ ಸ್ವೀಡನ್ ಸಮಯಕ್ಕೂ 4.30 ಗಂಟೆ ವ್ಯತ್ಯಾಸವಿದೆ. ಅಂಬರೀಶ್ ನಿಧನದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದು ರಾತ್ರಿ 9.50ರ ವೇಳೆಗೆ. ಭಾರತದಲ್ಲಿ ರಾತ್ರಿ 10 ಗಂಟೆಯಾದರೆ ಸ್ವೀಡನ್ ನಲ್ಲಿ ಸಂಜೆ 5.30 ಸಮಯ ಆಗಿರುತ್ತದೆ.

    ದರ್ಶನ್ ಹಾಗೂ ಅಂಬರೀಶ್ ಅವರ ಸಂಬಂಧ ತಂದೆ-ಮಗವಿನ ರೀತಿ ಇತ್ತು. ಅಂಬರೀಶ್ ಅವರ ಪ್ರತಿಯೊಂದು ಹುಟ್ಟುಹಬ್ಬಕ್ಕೆ ದರ್ಶನ್ ಮೊದಲ ಕೇಕ್ ತರುತ್ತಿದ್ದರು. ಅಲ್ಲದೇ ದರ್ಶನ್, ಅಂಬರೀಶ್ ಅವರ ಮಾತನ್ನು ಪಾಲಿಸುತ್ತಿದ್ದರು. ಸದ್ಯ ಇಂದು ಬೆಳಗ್ಗೆ ದರ್ಶನ್ ಬೆಂಗಳೂರಿಗೆ ಆಗಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಜಾತ ಶತ್ರು ನಿಧನಕ್ಕೆ ಸಂತಾಪ ಕೋರಿದ ಕ್ರೀಡಾ ದಿಗ್ಗಜರು

    ಅಜಾತ ಶತ್ರು ನಿಧನಕ್ಕೆ ಸಂತಾಪ ಕೋರಿದ ಕ್ರೀಡಾ ದಿಗ್ಗಜರು

    ನವದೆಹಲಿ: ಮಾಜಿ ಪ್ರಧಾನಿ ಅಟಲ್ ಮರಣದ ಬಳಿಕ ಕ್ರೀಡಾ ಲೋಕದಲ್ಲಿ ದುಃಖದ ಅಲೆ ಕಂಡು ಬಂದಿದ್ದು, ಹಲವು ಸ್ಟಾರ್ ಕ್ರೀಡಾ ಪಡುಗಳು ಅಟಲ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    ದೇಶದಕ್ಕೆ ತುಂಬಲಾರದ ನಷ್ಟವಾಗಿದ್ದು, ಇಡೀ ದೇಶಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರು ನೀಡಿದ ಕೊಡುಗೆಗಳು ಅಪಾರ. ಅವರ ಪ್ರೀತಿ ಪಾತ್ರರಿಗೆ ನನ್ನ ಸಂತ್ವಾನ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.

    ಘನತೆ ಹಾಗೂ ಗಾಂಭೀರ್ಯದ ವ್ಯಕ್ತಿಯಾದ ಅಟಲ್ ಬಿಹಾರಿ ವಾಜಪೇಯಿಗೆ ಎಲ್ಲಕ್ಕಿಂತ ಭಾರತವೇ ಮೊದಲಾಗಿತ್ತು ಎಂದು ಕ್ರಿಕೆಟ್ ವಿಕ್ಷಣೆಗಾರ ಹರ್ಷ ಭೋಗ್ಲೆ ಹೇಳಿದ್ದಾರೆ.

    ಭಾರತದಲ್ಲಿ ಹೆಚ್ಚು ಜನ ಪ್ರೀತಿಸಲ್ಪಟ್ಟ ಪ್ರಧಾನಿ, ಕವಿಯನ್ನು ಕಳೆದುಕೊಂಡಿದ್ದೇವೆ. ಅವರ ಪ್ರೀತಿ ಪಾತ್ರರಿಗೆ ಹಾಗೂ ಅಭಿಮಾನಿಗಳಿಗೆ ನನ್ನ ಸಂತ್ವಾನ ಎಂದು ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

    ಪೋಖ್ರಾನ್ ಸಂಭಾವ್ಯ ನಾಯಕರಾಗಿದ್ದ ಧೈರ್ಯಶಾಲಿ ಅಟಲ್‍ಜೀ, ಸಿದ್ಧಾಂತದ ರಾಜಕಾರಣಿ, ಸ್ಫೂರ್ತಿದಾಯಕ ಕವಿ, ಪಕ್ಷದ ಉದ್ದಕ್ಕೂ ಮೆಚ್ಚುಗೆ ಪಡೆದ ನಾಯಕರ ಮರಣ ಸರಿಪಡಿಸಲಾಗಷ್ಟು ನಷ್ಟ ತಂದಿದ್ದು, ಒಂದು ಯುಗಾಂತ್ಯವನ್ನು ಗುರುತಿಸಿದೆ ಎಂದು ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.

    ದೇಶದ ಕಂಡ ಅತ್ಯುತ್ತಮ ಪ್ರಧಾನಿ, ದಾರ್ಶನಿಕ, ಕವಿ, ರಾಜಕಾರಣಿ, ಕೋಟ್ಯಾಂತರ ವ್ಯಕ್ತಿಗಳ ಮನಗೆದ್ದ ವ್ಯಕ್ತಿ. ಗೌರವವನ್ನು ಬಿಟ್ಟು ಏನು ಸಂಪಾದಿಸದ ನಾಯಕರು ಅಟಲ್ ಎಂದು ಬಾಕ್ಸರ್ ವಿಜೇಂದರ್ ಸಿಂಗ್ ಬರೆದುಕೊಂಡಿದ್ದಾರೆ.

    ಇಂದು ಅಟಲ್ ಜೀ ಅವರ ಅಂತಯ ಸಂಸ್ಕಾರ ನಡೆಯಲಿದ್ದು, ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯುತ್ತಿದೆ. ಅಂತಿಮ ಯಾತ್ರೆ ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಇಂದು ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್‍ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಒಟ್ಟಿನಲ್ಲಿ ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv