Tag: ಅಂತರ್ ಜಾತಿ ಮದುವೆ

  • ಅಂತರ್ಜಾತಿ ಮದ್ವೆಯಾದ ಪ್ರೇಮಿಗಳು- ಯುವತಿಗೆ ಗ್ರಾಮಸ್ಥರಿಂದ ವಿಚಿತ್ರ ಶಿಕ್ಷೆ!

    ಅಂತರ್ಜಾತಿ ಮದ್ವೆಯಾದ ಪ್ರೇಮಿಗಳು- ಯುವತಿಗೆ ಗ್ರಾಮಸ್ಥರಿಂದ ವಿಚಿತ್ರ ಶಿಕ್ಷೆ!

    ಭೋಪಾಲ್: ಯುವತಿಯೊಬ್ಬಳು ಬೇರೆ ಜಾತಿ ಯುವಕನನ್ನು ಮದುವೆಯಾದ ಹಿನ್ನೆಲೆಯಲ್ಲಿ ಸಿಟ್ಟುಗೊಂಡ ಗ್ರಾಮಸ್ಥರು, ಒತ್ತಾಯವಾಗಿ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಶಿಕ್ಷೆಯನ್ನು ಆಕೆಗೆ ನೀಡಿದ ವಿಚಿತ್ರ ಘಟನೆ ಮಧ್ಯಪ್ರದೇಶದ ದೇವಿಘರ್ ನಲ್ಲಿ ನಡೆದಿದೆ.

    ಜಾಬುವ ಜಿಲ್ಲೆಯ ದೇವಿಘರ್ ನಿವಾಸಿಯಾದ 20 ವರ್ಷದ ಯುವತಿಯೊಬ್ಬಳು ಅಂತರ್ಜಾತಿ ವಿವಾಹವಾಗಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಸಿಟ್ಟಿಗೆದ್ದ ಗ್ರಾಮಸ್ಥರು ಮದುವೆಯಾದ ಯುವಕ, ಯುವತಿಗೆ ವಿಚಿತ್ರ ಶಿಕ್ಷೆ ನೀಡಿದ್ದಾರೆ. ಅದೇನಪ್ಪಾ ಅಂದ್ರೆ ಮದುವೆಯಾದ ತಪ್ಪಿಗೆ ಯುವತಿ ತನ್ನ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವಂತೆ ಒತ್ತಾಯಿಸಿ ಶಿಕ್ಷೆ ವಿಧಿಸಿದ್ದಾರೆ.

    ಈ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಈ ರೀತಿ ಯುವತಿಗೆ ಗ್ರಾಮಸ್ಥರು ಶಿಕ್ಷೆ ನೀಡಿದ್ದು ತಪ್ಪು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾಹಿತಿ ಕಲೆ ಹಾಕಿದ ಜಾಬುವ ಪೊಲೀಸರು ಈಗಾಗಲೇ ಘಟನೆಯಲ್ಲಿ ಶಾಮೀಲಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಪಟ್ಟ ಐಪಿಸಿ ಸೆಕ್ಷನ್ ಕಾಯ್ದೆ ಅಡಿಯಲ್ಲಿ ಆರೋಪಿಗಳ ಮೇಲೆ ಕೇಸ್ ದಾಖಲಿಸಲಾಗಿದ್ದು, ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಬ್ರಾಹ್ಮಣ ಯುವಕನನ್ನು ಮದ್ವೆಯಾಗಿದ್ದಕ್ಕೆ ಬಹಿಷ್ಕಾರ- ತಾಯಿಯ ತಿಥಿಗೂ ಬಿಡದ ಕುರುಬ ಮುಖಂಡರು

    ಬ್ರಾಹ್ಮಣ ಯುವಕನನ್ನು ಮದ್ವೆಯಾಗಿದ್ದಕ್ಕೆ ಬಹಿಷ್ಕಾರ- ತಾಯಿಯ ತಿಥಿಗೂ ಬಿಡದ ಕುರುಬ ಮುಖಂಡರು

    ತುಮಕೂರು: ಕುರುಬ ಸಮುದಾಯದ ಯುವತಿ ಬ್ರಾಹ್ಮಣ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಆಕೆಯ ತಾಯಿಯ ತಿಥಿಗೆ ಬರದಂತೆ ಗ್ರಾಮದ ಮುಖಂಡರು ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೀಗೇಬಾಗಿಯಲ್ಲಿ ನಡೆದಿದೆ.

    ಗ್ರಾಮದ ವರದಯ್ಯ ಎಂಬವರ ಮಗಳು ಸರ್ಕಾರಿ ಉದ್ಯೋಗದಲ್ಲಿದ್ದು, ಬ್ರಾಹ್ಮಣ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅಂತರ್ಜಾತಿ ವಿವಾಹವಾಗಿದ್ದರಿಂದ ತಮ್ಮ ಕುರುಬ ಕುಲಕ್ಕೆ ಕೇಡಾಗಿದೆ ಎಂದು ಹೇಳಿ ಕುರುಬ ಸಂಘದವರು ಉಮಾ ದಂಪತಿಗೆ ಊರಿಗೆ ಬರದಂತೆ ನಿರ್ಬಂಧ ಹಾಕಿದ್ದಾರೆ. ಒಂದೊಮ್ಮೆ ತವರು ಮನೆಗೆ ಬಂದರೆ, ತವರು ಮನೆಯವರನ್ನ ಸಮಾಜದಿಂದ ದೂರ ಉಳಿಸಲು ಪಂಚಾಯ್ತಿ ಮಾಡಲಾಗಿದೆ. ಜುಲೈ 16 ರಂದು ವರದಯ್ಯರ ಮನೆಯಲ್ಲಿ ತಿಥಿ ಕಾರ್ಯ ಇದ್ದು ಅದಕ್ಕೆ ಅಂತರ್ಜಾತಿ ವಿವಾಹವಾದ ಉಮಾ ದಂಪತಿಗೆ ನಿರ್ಬಂಧ ಹೇರಲಾಗಿದೆ.

    ಬುಧವಾರ ವರದಯ್ಯನ ಮಗ ಹರೀಶನನ್ನು ಸಂಘದ ಪದಾಧಿಕಾರಿಗಳು ಸಭೆ ಕರೆದು ಬಹಿಷ್ಕಾರದ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಸಂಘದ ಅಧ್ಯಕ್ಷರಾದ ಶಂಕರಪ್ಪ, ಉಪಾಧ್ಯಕ್ಷ ಲೋಕೇಶ್, ಕಾರ್ಯದರ್ಶಿ ನಾರಾಣಪ್ಪ ಸೇರಿದಂತೆ 10 ಜನರು ಸೇರಿ ಈ ರೀತಿಯ ಅಂಧ ದರ್ಬಾರ್ ನಡೆಸುತ್ತಿದ್ದಾರೆ. ತಿಮ್ಮಯ್ಯ ಕುಟುಂಬದವರ ಪಂಪ್ ಸೆಟ್ ವಿದ್ಯುತ್ ವಯರನ್ನು ಶಂಕರಪ್ಪ ಎನ್ನುವವರು ಕಿತ್ತುಹಾಕಿದ್ರು. ಈ ಕಾರಣಕ್ಕೆ ಜಗಳ ನಡೆದಿತ್ತು. ಇದರಲ್ಲಿ ಶಂಕರಪ್ಪನ ತಪ್ಪು ಇದ್ದರೂ ತಿಮ್ಮಯ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ.

    ವರದಯ್ಯ ಕುಟುಂಬ ತಮಗಾಗುತ್ತಿರುವ ಅನ್ಯಾಯದ ಕುರಿತು ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದ್ರೂ ಕೂಡಾ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸುಮಾರು 8 ಕುಟುಂಬಗಳಿಗೆ ಕುರುಬರ ಸಂಘದಿಂದ ಈ ರೀತಿಯ ಬಹಿಷ್ಕಾರ ಹಾಕಲಾಗಿದೆ. ಅದರಲ್ಲಿ ನಾಲ್ಕು ಜನ ಹೆಣ್ಣುಮಕ್ಕಳು ಅಂತರ್ಜಾತಿಯ ವಿವಾಹವಾಗಿದ್ದಾರೆ. ಬಹಿಷ್ಕಾರಕ್ಕೆ ಬೇಸತ್ತು ತವರು ಮನೆಯ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ.