ಆರೋಪಿ ಕಾಶಿ ವಿಶ್ವನಾಥ ದೇವಾಲಯ ಇರುವ ಬೆಟ್ಟದ ದೊಡ್ಡ ಬಂಡೆಯೊಂದರ ಮೇಲೆ ಹಸಿರು ಬಿಳಿ ಬಣ್ಣ ಬಳಸಿ ಪಾಕಿಸ್ತಾನದ ಬಾವುಟದ ಮಾದರಿಯ ಚಿತ್ರ ಬಿಡಿಸಿದ್ದ. ಅಲ್ಲದೇ ಅದರ ಮೇಲೆ ಉರ್ದು ಅಕ್ಷರಗಳನ್ನು ಬರೆದಿದ್ದ. 786 ಎಂದು ಧ್ವಜದ ಮೇಲೆ ಬರೆಯಲಾಗಿದ್ದು, ಅದರ ಪಕ್ಕದಲ್ಲೆ ಭಾರತದ ಬಾವುಟವನ್ನು ಸಹ ಬಿಡಿಸಿದ್ದ. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಕೋಲಾರ: ಅವರಿಬ್ಬರು ಸ್ನೇಹಿತರು ಆದ್ರೂ ಅವರಿಬ್ಬರಿಗೆ ಬೇರೆಯವರೊಂದಿಗೆ ಮದುವೆಯಾಗಿ ವಿಚ್ಚೇದನ ವಿವಾದ ಇನ್ನೂ ಕೋರ್ಟ್ನಲ್ಲಿ ನಡೆಯುತ್ತಿತ್ತು. ಹೀಗಿರುವಾಗ ಆ ಇಬ್ಬರು ಸ್ನೇಹಿತರು ಕದ್ದುಮುಚ್ಚಿ ಸೇರ್ತಾ ಇದ್ರು. ಆದರೆ ಅಲ್ಲೇನಾಗಿದೆ ಗೊತ್ತಾಗಿಲ್ಲ, ಕೊಲೆಯಂತೆ ಅನುಮಾನ ಹುಟ್ಟಿಸುವ ಅಪಘಾತವೊಂದು ನಡೆದು ಆಕೆ ಸಾವನ್ನಪ್ಪಿದ್ದಾಳೆ.
ಹೌದು ನಿನ್ನೆ ತಸ್ಮಿಯಾ ಹಾಗೂ ಆಕೆ ಸ್ನೇಹಿತ ಮುಜ್ಜು ಅಂತರಗಂಗೆ ಬೆಟ್ಟಕ್ಕೆ ಬಂದಿದ್ದರು. ಸುಂದರ ವಾತಾವರಣದಲ್ಲಿ ಕೆಲ ಹೊತ್ತು ಕಾಲ ಕಳೆದ ನಂತರ ಇಬ್ಬರು ವಾಪಸ್ಸಾಗುವ ವೇಳೆ ಅಲ್ಲಿ ನಡೆಯಬಾರದೊಂದು ಘಟನೆ ನಡೆದು ಹೋಗಿತ್ತು. ಮುಜ್ಜು ಜೊತೆಗೆ ಹೋಗಿದ್ದ ತಸ್ಮಿಯಾಬಾನು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾಳೆ. ಇಬ್ಬರೂ ಅಂತಗಂಗೆ ಬೆಟ್ಟಕ್ಕೆ ಇನ್ನೋವಾ ಕಾರ್ನಲ್ಲಿ ಹೋಗಿ ವಾಪಸ್ ಬರುವಾಗ ಯಾರಾದರೂ ನೋಡಿದ್ರೆ ಅಂತ ತಸ್ಮಿಯಾಬಾನು ಕಾರ್ನ ಹಿಂಬದಿ ಸೀಟ್ನಲ್ಲಿ ಮಲಗಿದ್ದಳಂತೆ.
ಈ ವೇಳೆ ಮುಜ್ಜು ಕಾರ್ ಚಲಾಯಿಸುತ್ತಿದ್ದ ಆಗ ಅಂತರಗಂಗೆ ರಸ್ತೆಯ ಕೀಲುಕೋಟೆ ತಿರುವಿನಲ್ಲಿ ರೋಡ್ ಹಂಪ್ ಇದ್ದ ಕಾರಣಕ್ಕೆ ಸಡನ್ ಆಗಿ ಬ್ರೇಕ್ ಹೊಡೆದಿದ್ದಾನೆ. ಆಗ ಹಿಂದೆ ಸೀಟ್ನಲ್ಲಿ ಮಲಗಿದ್ದ ತಸ್ಮಿಯಾಬಾನು ಒಂದೆ ಬಾರಿ ಮುಂದೆ ಬಿದ್ದಿದಾಳೆ ಅದೇ ಹೊತ್ತಿಗೆ ಮದ್ಯದ ಪೋಲ್ಡಿಂಗ್ ಸೀಟ್ ಮುಂದಕ್ಕೆ ಹೋಗಿ ಹಿಂದಕ್ಕೆ ಬಂದು ಸೀಟ್ ಕೆಳಗಿದ್ದ ಹರಿತವಾದ ಮೊಳೆ ಅವಳ ಕುತ್ತಿಗೆ ಭಾಗಕ್ಕೆ ಚುಚ್ಚಿದೆ. ಇದರಿಂದ ಉಸಿರಾಟದ ಸಮಸ್ಯೆಯಾಗಿದೆ ತಕ್ಷಣ ಅದೇ ಕಾರ್ನಲ್ಲಿ ಕೋಲಾರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಸೂಕ್ತ ಚಿಕಿತ್ಸೆ ಸಿಗದಿದ್ದರಿಂದ ಹೆಚ್ಚುವರಿ ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ವೈದ್ಯಕೀಯ ಕಾಲೇಜಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತಸ್ಮಿಯಾಬಾನು ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಒಂದು ಹುಡುಗಿ ನಿಮ್ಮೊಂದಿಗೆ ಸೆಕ್ಸ್ ಮಾಡಬೇಕು ಅಂದ್ರೆ..? – ಶಕ್ತಿಮಾನ್ ಖ್ಯಾತಿಯ ಮುಖೇಶ್ ವಿವಾದಾತ್ಮಕ ಹೇಳಿಕೆ
ತಸ್ಮಿಯಾಬಾನುಗೆ ಮದುವೆಯಾಗಿದ್ದು ಒಂದು ಮಗು ಕೂಡಾ ಇದೆ. ಈ ನಡುವೆ ತಸ್ಮಿಯಾಬಾನು ಗಂಡನೊಂದಿಗೆ ವಿರಸ ಉಂಟಾಗಿ ವಿಚ್ಚೇದನ ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ತಸ್ಮಿಯಾಗೆ ಕೋಲಾರ ತಾಲ್ಲೂಕು ಮಹಾಲಕ್ಷ್ಮೀ ಬಡಾವಣೆಯಲ್ಲೇ ವಾಸವಿದ್ದ ಮುಜ್ಜು ಎಂಬುವನ ಜೊತೆಗೆ ಸ್ನೇಹ, ಅಕ್ರಮ ಸಂಬಂಧ ಕೂಡಾ ಇತ್ತು ಎನ್ನಲಾಗುತ್ತಿದೆ. ಆಗಾಗ ಇಬ್ಬರು ಕೆಲವೊಂದು ಸ್ಥಳಗಳಿಗೆ ಹೋಗಿ ಬರ್ತಾ ಇದ್ದರು ಎಂದು ಹೇಳಲಾಗಿದೆ.
ನಿನ್ನೆಯೂ ಹೀಗೆ ಅಂತರಗಂಗೆ ಬೆಟ್ಟಕ್ಕೆ ಹೋಗಿ ಬರುವಾಗ ಅಚಾನಕ್ಕಾಗಿ ನಡೆದ ಘಟನೆಯಿಂದ ಕುತ್ತಿಗೆ ಬಳಿ ಹರಿತವಾದ ಕಂಬಿ ತಗುಲಿ ಸಾವನ್ನಪ್ಪಿದ್ದಾಳೆ ಎಂದು ಮುಜ್ಜು ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಆದರೆ ತಸ್ಮಿಯಾ ಬಾನು ಸಂಬಂಧಿಕರು ಇದು ಅಪಘಾತವಲ್ಲ ಇದು ಕೊಲೆ ಎಂದು ಹೇಳುತ್ತಿದ್ದಾರೆ. ಅಪಘಾತವಾದರೆ ಕಾರ್ಗೆ ಏನೂ ಆಗಿಲ್ಲ ಕಾರ್ ಚಲಾಯಿಸುತ್ತಿದ್ದ ಮುಜ್ಜುಗೂ ಏನೂ ಆಗಿಲ್ಲ ಆದರೆ ಈಕೆಗೆ ಮಾತ್ರ ಸಾಯುವಷ್ಟು ಗಾಯವಾಗಿದೆ. ಘಟನೆಯಾದ ನಂತರ ಆಸ್ಪತ್ರೆಗೆ ದಾಖಲು ಮಾಡಿ ಆರೋಪಿ ಮುಜ್ಜು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎಂದು ಕೋಲಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮುಜ್ಜುವನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿದಿದೆ.
Live Tv
[brid partner=56869869 player=32851 video=960834 autoplay=true]
ಕೋಲಾರ: ಕುಡುಕ ಗಂಡ ಹಾಗೂ ಸಂಬಂಧಿಕರ ಕಿರುಕುಳ ತಾಳಲಾರದೇ ತನ್ನ ಇಬ್ಬರು ಹೆಣ್ಣು ಮಕ್ಕಳ ಜೊತೆ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಮುಂದಾದ ಘಟನೆ ಕೋಲಾರದಲ್ಲಿ ನಡೆದಿದೆ. ಸ್ಥಳೀಯರು ಮಹಿಳೆಯ ರಕ್ಷಣೆ ಮಾಡಿದ್ದಾರೆ.
ಆಂಧ್ರಪ್ರದೇಶ ಮೂಲದ ಕವಿತಾ(21) 4 ವರ್ಷಗಳ ಹಿಂದೆ ಕೋಲಾರದ ಕುಂಬಾರಹಳ್ಳಿ ಮೂಲದ ವಿನೋದ್ ಕುಮಾರ್ ಎಂಬಾತನನ್ನು ಮದುವೆಯಾಗಿದ್ದರು. ಚಾಲಕ ವೃತ್ತಿ ಮಾಡುತ್ತಿದ್ದ ಪತಿಯೊಂದಿಗೆ ಆರಂಭದಲ್ಲಿ ಕವಿತಾ ಅನ್ಯೋನ್ಯವಾಗಿದ್ದರು. ಮದುವೆಯಾದ 3 ತಿಂಗಳ ಬಳಿಕ ವಿನೋದ್ ಪತ್ನಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ.
3 ವರ್ಷದ ಹಾಗೂ 9 ತಿಂಗಳ ಮಕ್ಕಳಿರುವ ಕವಿತಾಗೆ ಪತಿ ಪ್ರತೀ ದಿನ ಕಂಠ ಪೂರ್ತಿ ಕುಡಿದು ಚಿತ್ರ ಹಿಂಸೆ ಕೊಡುತ್ತಿದ್ದ. ಇದರಿಂದ ಮನನೊಂದ ಕವಿತಾ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಕಾಳಿ ನದಿಯಲ್ಲಿ ಕೈ ತೊಳೆಯಲು ಹೊದ ಯುವಕನನ್ನು ಎಳೆದೊಯ್ದ ಮೊಸಳೆ
ಕವಿತಾ ಮಕ್ಕಳೊಂದಿಗೆ ಕೋಲಾರದ ಅಂತರಗಂಗೆ ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ಆಕೆಯನ್ನು ಕಂಡು ಅನುಮಾನಗೊಂಡ ಸ್ಥಳೀಯರು ವಿಚಾರಣೆ ಮಾಡಿ ರಕ್ಷಿಸಿದ್ದಾರೆ. ಬಳಿಕ ಅಂತರಗಂಗೆ ಬುದ್ಧಿಮಾಂದ್ಯ ಶಾಲೆಯಲ್ಲಿರಿಸಿ ಆಶ್ರಯ ನೀಡಿದ್ದಾರೆ.
ಬಳಿಕ ಮನೆ ಬಿಟ್ಟು ಬಂದಿದ್ದ ಕವಿತಾ ಪತಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಲು ಮುಂದಾಗಿದ್ದ ಬಗ್ಗೆ ತಿಳಿಸಿದ್ದಳು. ಆದರೆ ವಿನೋದ್ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದಿದ್ದಾಗ ಕವಿತಾ ಮತ್ತಷ್ಟು ನೊಂದು ಮತ್ತೆ ಆತ್ಮಹತ್ಯೆಗೆ ಅಂತರಗಂಗೆ ಬೆಟ್ಟದ ಕಡೆಗೆ ಮಕ್ಕಳೊಂದಿಗೆ ಹೋಗಿದ್ದಾರೆ. ಇದನ್ನು ಕಂಡ ಕೃಷ್ಣ ಎಂಬ ಸ್ಥಳೀಯ ಆಕೆಯನ್ನು ವಿಚಾರಿಸಿ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ- ಒತ್ತಾಯ ಮಾಡಿ ಆ್ಯಸಿಡ್ ಕುಡಿಸಿದ ಪತಿ, ಕುಟುಂಬಸ್ಥರು
ದಿಕ್ಕು ದೆಸೆ ಇಲ್ಲದೆ ಅನಾಥ ಸ್ಥಿತಿಯಲ್ಲಿರುವ ಕವಿತಾ ಅಂತರಗಂಗೆ ಬುದ್ಧಿಮಾಂದ್ಯ ಶಾಲೆಯಲ್ಲಿ ಆಶ್ರಯ ಪಡೆದಿದ್ದು, ಪೊಲೀಸರ ಮೊರೆ ಹೋಗಿದ್ದಾರೆ.
ಕೋಲಾರದ ದಕ್ಷಿಣ ಕಾಶಿ ಅಂತರಗಂಗೆಯಲ್ಲಿ ಶಿವದೀಪೋತ್ಸವದ ಬೆಗರು
ಕೋಲಾರ: ಜಿಲ್ಲೆಯ ದಕ್ಷಿಣ ಕಾಶಿ ಅಂತರಗಂಗೆಯ ಬೆಟ್ಟದಲ್ಲಿ ಹುಣ್ಣಿಮೆಯ ರಾತ್ರಿಯನ್ನು ಮತ್ತಷ್ಟು ಉಜ್ವಲಗೊಳಿಸಿದ್ದು ಶುಕ್ರವಾರದಂದು ನಡೆದ ದಕ್ಷಿಣಕಾಶಿ ಶ್ರೀಕಾಶಿವಿಶ್ವೇಶ್ವರಸ್ವಾಮಿ ದೇವಾಲಯದ ಶಿವದೀಪೋತ್ಸವ.
ದಕ್ಷಿಣಕಾಶಿ ಶ್ರೀಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಶಿವದೀಪೋತ್ಸವವನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯ್ತು. ಈ ದೇವಾಲಯದ ವಿಶೇಷವೇನೆಂದ್ರೆ ಕಾಶಿಗೆ ಹೋಗದವರು ದಕ್ಷಿಣಕಾಶಿ ಅಂತರಗಂಗೆಗೆ ಬಂದು ಬಸವನ ಬಾಯಲ್ಲಿ ಕಾಶಿಯಿಂದಲೇ ಹರಿದು ಬರುವ ಆ ಗಂಗೆಯನ್ನು ಕುಡಿದು ಪುನೀತರಾಗುತ್ತಾರೆ. ಕಾರ್ತಿಕ ಮಾಸದಲ್ಲಿ ಬರುವ ಹುಣ್ಣಿಮೆ ದಿನದಂದು ಶಿವನು ರಾಕ್ಷಸರನ್ನು ಸಂಹರಿಸಿದ್ದನು ಎಂದು ಪುರಾಣದಲ್ಲಿದೆ. ಆ ಕಾರಣಕ್ಕೆ ಪ್ರತಿವರ್ಷ ಕಾರ್ತಿಕ ಮಾಸದ ಹುಣ್ಣಿಮೆ ದಿನದಂದು ಕಾಶಿ ವಿಶ್ವೇಶ್ವರನಿಗೆ ವಿಶೇಷವಾಗಿ ವಜ್ರಾಲಂಕಾರ ಮಾಡಿ ಶಿವ ದೀಪೋತ್ಸವವನ್ನು ಆಚರಿಸಲಾಗುತ್ತದೆ. ಈ ದಿನದಂದು ಬೆಟ್ಟದಲ್ಲಿ ಎತ್ತ ನೋಡಿದರತ್ತ ದೀಪಗಳ ಸಾಲು, ಇಲ್ಲಿ ಬಂದವರಿಗಂತೂ ಇದೇನು ಭೂ ಲೋಕವೋ ಇಲ್ಲಾ, ದೇವಲೋಕವೋ ಎಂಬ ಅನುಮಾನ. ಕತ್ತಲ ಲೋಕದಲ್ಲಿ ಬಂಗಾರದ ದೀಪಗಳು ಅಂತರಗಂಗೆಯ ಬೆಟ್ಟದಲ್ಲಿ ಪ್ರಜ್ವಲಿಸುತ್ತಿತ್ತು.
ಕಳೆದ ಹಲವು ವರ್ಷಗಳಿಂದ ಪೊಲೀಸ್ ಪೇದೆ ಗೋಪಾಲ್ ಕಾಶಿವಿಶ್ವೇಶ್ವರನ ಅನುಗ್ರಹದಿಂದ ಅಂತರಗಂಗೆಯಲ್ಲಿ ಲಕ್ಷ ದೀಪೋತ್ಸವವನ್ನು ಮಾಡುವ ಮೂಲಕ ಶಿವನಿಗೆ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ವರ್ಷದ ಇಡೀ ಸಂಬಳವನ್ನು ತನ್ನ ಖರ್ಚಿಗೆ ಬೇಕಾದಷ್ಟು ಬಳಸಿಕೊಂಡು ಉಳಿದ ಸಂಬಳವನ್ನು ದೇವರ ಸೇವೆಗೆ ಮುಡುಪಾಗಿಟ್ಟಿದ್ದಾರೆ.
ಈ ವಿಶೇಷ ದಿನದಂದು ಲಕ್ಷ ದೀಪ ಹಚ್ಚಿ ಶಿವನನ್ನು ಪ್ರಾರ್ಥನೆ ಮಾಡಿದ್ರೆ ಜನರ ಇಷ್ಟಾರ್ಥಗಳು ಈಡೇರುತ್ತವೆ ಅನ್ನೋ ನಂಬಿಕೆ ಇಲ್ಲಿದೆ. ಹಾಗಾಗಿ ಇಂಥಾದೊಂದು ಸುಂದರ ಕ್ಷಣಗಳನ್ನು ಸವಿಯಲು ಕೋಲಾರ ಸೇರಿದಂತೆ ಇತರ ತಾಲೂಕು ಹಾಗೂ ಅಕ್ಕ ಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಜನರು ಅಂತರಗಂಗೆ ಬೆಟ್ಟಕ್ಕೆ ಬಂದು ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಹಾಗೆಯೇ ಬಂದ ಸಾವಿರಾರು ಜನಕ್ಕೂ ಇಲ್ಲಿ ಪ್ರಸಾದ, ಕುಡಿಯುವ ನೀರು, ಸೇರಿದಂತೆ ಸಕಲ ವ್ಯವಸ್ಥೆಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ದೀಪೋತ್ಸವದ ಸುಂದರ ದೃಶ್ಯಗಳು ಎಂತಹವರನ್ನು ಮಂತ್ರ ಮುಗ್ಧಗೊಳಿಸಿತ್ತು, ಭಕ್ತಿಯ ಪರಾಕಾಷ್ಠೆ ಹುಕ್ಕಿ ಆಕಾಶದ ಬೆಳ್ಳಿ ಚುಕ್ಕಿಯ ಸಾಲಿನಂತಿದ್ದ ದೀಪಗಳ ಸಾಲು ಕಂಡು ಭಕ್ತಾಧಿಗಳು ಸಂತೋಷಪಟ್ಟರು.