Tag: ಅಂಜೂರ

  • ಸಾಲ ಪಡೆದು ಬೆಳೆದ ಲಕ್ಷಾಂತರ ರೂ. ಮೌಲ್ಯದ ಅಂಜೂರ ತಿಪ್ಪೆಪಾಲು

    ಸಾಲ ಪಡೆದು ಬೆಳೆದ ಲಕ್ಷಾಂತರ ರೂ. ಮೌಲ್ಯದ ಅಂಜೂರ ತಿಪ್ಪೆಪಾಲು

    ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕಾತರಕಿ ಗ್ರಾಮದಲ್ಲಿ ಸಾಲ ಮಾಡಿ ಬೆಳೆದ ಅಂಜೂರ ಬೆಳೆಯನ್ನ ಸ್ವತಃ ರೈತರೊಬ್ಬರು ತಿಪ್ಪೆಗೆ ಸುರಿದಿದ್ದಾರೆ. ರೈತ ಮಲ್ಲಿಕಾರ್ಜುನ ಗೌಡ ಅವರು ಬಹಳ ನಿರೀಕ್ಷೆಗಳೊಂದಿಗೆ ಅಂಜೂರ ಬೆಳೆದಿದ್ದರು. ಆದರೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ಇಲ್ಲದೇ ನಿತ್ಯ ಮೂರರಿಂದ ನಾಲ್ಕು ಕ್ವಿಂಟಾಲ್ ಅಂಜೂರ ಮಣ್ಣು ಪಾಲಾಗುತ್ತಿದೆ.

    25 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ 20ಎಕರೆಯಲ್ಲಿ ಅಂಜೂರ ಬೆಳೆದಿರುವ ರೈತ ಮಲ್ಲಿಕಾರ್ಜುನ ಗೌಡ ಅನಿವಾರ್ಯವಾಗಿ ತಿಪ್ಪೆಗೆ ಸುರಿಯುತ್ತಿದ್ದಾರೆ. ಲಾಕ್‍ಡೌನ್‍ಗಿಂತ ಮುಂಚೆ ಬೆಂಗಳೂರು ಸೇರಿದಂತೆ ಬೇರೆಡೆ ಮಾರುಕಟ್ಟೆಗಳಿಗೆ ಅಂಜೂರ ಕೊಂಡೊಯ್ಯಲಾಗುತ್ತಿತ್ತು. ಸದ್ಯ ಲಾಕ್‍ಡೌನ್‍ನಿಂದಾಗಿ ಸೂಕ್ತ ಬೆಲೆ ಇಲ್ಲದೇ ಕಂಗಾಲಾಗಿರುವ ರೈತ ಸರ್ಕಾರ ನೆರವಿಗೆ ಧಾವಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಪ್ರತಿ ದಿನ ಅಂಜೂರ ಹಾಳಾಗುತ್ತಿದ್ದು, ಈಗಲಾದ್ರೂ ಸರ್ಕಾರ ಸಹಾಯಕ್ಕೆ ಬಂದರೆ ಮಲ್ಲಿಕಾರ್ಜುನ ಗೌಡ ಅವರು ಸೇರಿದಂತೆ ಅಂಜೂರ ಬೆಳೆದ ರೈತರು ಬದುಕಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ಹಾಪ್ ಕಾಮ್ಸ್ ಇಲ್ಲದೆ ಇರುವುದರಿಂದ ತೋಟಗಾರಿಕಾ ಬೆಳೆಗಾರರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ.

  • ಕೊರೊನಾ ಎಫೆಕ್ಟ್- ಕೊಳೆಯುತ್ತಿದೆ ಲಕ್ಷಾಂತರ ರೂ. ಅಂಜೂರ ಬೆಳೆ

    ಕೊರೊನಾ ಎಫೆಕ್ಟ್- ಕೊಳೆಯುತ್ತಿದೆ ಲಕ್ಷಾಂತರ ರೂ. ಅಂಜೂರ ಬೆಳೆ

    ರಾಯಚೂರು: ಕೊರೊನಾ ಲಾಕ್ ಡೌನ್ ಹಿನ್ನೆಲೆ ಕೊಳ್ಳುವವರೇ ಇಲ್ಲದಂತಗಿದ್ದು, ಲಕ್ಷಾಂತರ ರೂಪಾಯಿ ಅಂಜೂರ ಬೆಳೆ ಕೊಳೆತು ಹೋಗುತ್ತಿದೆ.

    ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಕಾತರಕಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಅಂಜೂರ ಬೆಳೆ ಹೊಲದಲ್ಲಿಯೇ ಕೊಳೆಯುತ್ತಿದೆ. ಕಾತರಕಿ ಗ್ರಾಮದ ರೈತ ಚನ್ನಬಸನಗೌಡ ಸುಮಾರು 20 ಲಕ್ಷ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ.

    ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ಭಾಗದ ರೈತ ಚನ್ನಬಸನಗೌಡ 20 ಎಕರೆ ಪ್ರದೇಶದಲ್ಲಿ ಅಂಜೂರ ಬೆಳೆಯುತ್ತಿದ್ದಾರೆ, ಅವರ ಹೊಲದಲ್ಲಿ ನಿತ್ಯ 4 ಕ್ವಿಂಟಾಲಿಗೂ ಅಧಿಕ ಅಂಜೂರ ಹಣ್ಣು ಬರುತ್ತಿದೆ. ಆದರೆ ಲಾಕ್‍ಡೌನ್ ಆದ ನಂತರ ಹಣ್ಣು ಹರಿಯಲು ಕೂಲಿಯಾಳುಗಳು ಬರುತ್ತಿಲ್ಲ. ಇನ್ನೊಂದು ಕಡೆ ಹಣ್ಣುಗಳನ್ನು ಕೊಳ್ಳುವವರೇ ಇಲ್ಲದಂತಾಗಿದ್ದು, ಬೆಂಗಳೂರು ಸೇರಿದಂತೆ ಇತರೆ ಕಡೆ ಕಳುಹಿಸಲು ಸಾಗಿಸಲು ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

    ಇದರಿಂದಾಗಿ ಅಪಾರ ಪ್ರಮಾಣದ ಅಂಜೂರ ಹೊಲದಲ್ಲಿಯೇ ಕೊಳೆಯುತ್ತಿದೆ. ಲಕ್ಷಾಂತರ ರೂಪಾಯಿ ಹಾನಿ ಸಂಭವಿಸುತ್ತಿದೆ. ಅಂಜೂರ ಹಣ್ಣನ್ನು ಸರ್ಕಾರವೇ ಖರೀದಿಸಿ, ನೆರವಿಗೆ ಬರಬೇಕು ಎಂದು ರೈತ ಚನ್ನಬಸನಗೌಡ ಆಗ್ರಹಿಸಿದ್ದಾರೆ.