ತೆಲುಗಿನ ಹೆಸರಾಂತ ನಟ ಬಾಲಕೃಷ್ಣ (Balakrishna) ‘ಗ್ಯಾಂಗ್ಸ್ ಆಫ್ ಗೋದಾವರಿ’ (Gangs of Godavari) ಸಿನಿಮಾ ಇವೆಂಟ್ ವೇಳೆ ನಟಿ ಜೊತೆ ದುರ್ವರ್ತನೆ ತೋರಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೇದಿಕೆಯ ಮೇಲೆ ಬಂದ ಬಾಲಕೃಷ್ಣ ನಟಿ ಅಂಜಲಿಯನ್ನು (Anjali) ತಳ್ಳಿದರು. ಕ್ಷಣ ಹೊತ್ತು ಅಂಜಲಿ ಶಾಕ್ ಒಳಗಾಗಿ ಆಮೇಲೆ ಸುಧಾರಿಸಿಕೊಳ್ಳುತ್ತಾರೆ. ಈ ವಿಡಿಯೋ ಕುರಿತು ಪರ ವಿರೋಧ ಚರ್ಚೆ ಶುರುವಾಗಿತ್ತು.

ಬಾಲಕೃಷ್ಣ ವೇದಿಕೆಗೆ ಬರುವ ಮುಂಚೆ ವೇದಿಕೆಯ ಮುಂಭಾಗದಲ್ಲಿ ಕೂತಿದ್ದರು. ಅಲ್ಲಿ ಅವರಿಗೆ ಕುಡಿಯಲು ಮದ್ಯ ಇಡಲಾಗಿತ್ತು. ಮದ್ಯವನ್ನು ನೀರಿನೊಂದಿಗೆ ಬೆರೆಸಿದ್ದ ಬಾಟಲ್ ಪತ್ತೆಯಾಗಿತ್ತು. ಹಾಗಾಗಿ ಕುಡಿದು ಬಾಲಕೃಷ್ಣ ಅವರು ಆ ರೀತಿ ನಡೆದುಕೊಂಡಿದ್ದಾರೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು.
ಈ ಕುರಿತಂತೆ ಸಿನಿಮಾ ನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದು, ಬಾಲಕೃಷ್ಣ ಅವರು ಕುಡಿದಿರಲಿಲ್ಲ. ಗ್ರಾಫಿಕ್ಸ್ ಮಾಡಿ ಬಾಟಲ್ ಇಡಲಾಗಿದೆ ಎಂದಿದ್ದಾರೆ. ನಟಿ ಅಂಜಲಿ ಕೂಡ ಪ್ರತಿಕ್ರಿಯೆ ನೀಡಿ, ಬೇಕು ಅಂತ ಬಾಲಕೃಷ್ಣ ಅವರು ನನ್ನನ್ನು ತಳ್ಳಿಲ್ಲ. ಅದೊಂದು ಫನ್ನಿ ಸನ್ನಿವೇಶ ಎಂದಿದ್ದಾರೆ. ಈ ಇಬ್ಬರೂ ಬಾಲಕೃಷ್ಣ ಪರವಾಗಿಯೇ ಮಾತನಾಡಿದ್ದಾರೆ.











ಸದ್ದಿಲ್ಲದೇ ನಟಿ ಅಂಜಲಿ ಮದುವೆ ಮ್ಯಾಟರ್ ಹರಿದಾಡುತ್ತಿದೆ. ಈಗಾಗಲೇ ಒಂದು ಮದುವೆ ಆಗಿ ಡಿವೋರ್ಸ್ ಆಗಿರುವ ತೆಲುಗು ನಿರ್ಮಾಪಕರೊಬ್ಬರನ್ನು (Producer) ನಟಿ ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಅವರ ಜೊತೆ ನಟಿ ಮದುವೆ (Wedding) ಆಗಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ನಿಜನಾ ಎಂಬುದರ ಬಗ್ಗೆ ಅಂಜಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸೌತ್ ನಟಿ ಅಂಜಲಿ(Anjali) ಅವರು ಹೊಸ ಹೊಸ ಪ್ರಾಜೆಕ್ಟ್ಗಳನ್ನು ಒಪ್ಪುವ ಮೂಲಕ ಟಾಕ್ನಲ್ಲಿದ್ದಾರೆ. ಹೊಸ ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ನಟಿ ರಾಂಗ್ ಆಗಿದ್ದಾರೆ. ಶ್ರೀಲೀಲಾ ಮತ್ತು ಅವರ ಸಿನಿಮಾ ಕೆರಿಯರ್ ಸಂಬಂಧಿಸಿದ ಕೆಲ ಪ್ರಶ್ನೆಗಳು ಅಂಜಲಿಗೆ ಕೇಳಲಾಗಿದೆ. ಈ ವೇಳೆ, ನಟಿ ಗರಂ ಆಗಿದ್ದಾರೆ.




