‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು’

ಬೆಂಗಳೂರು: ಪ್ರತಿ ಬಾರಿಯೂ ಅಪ್ಪು ಜೊತೆ ದಿ. ಡಾ. ರಾಜ್ ಕುಮಾರ್ ಸಮಾಧಿ ನೋಡಲು ಬರುತ್ತಿದ್ದೆವು. ಆದರೆ ಈಗ ಅವರದ್ದೇ ಸಮಾಧಿ ನೋಡಲು ಬರವಂತೆ ಆಗಿದೆ ಎಂದು ನಟ ತಬಲಾ ನಾಣಿ ಕಣ್ಣೀರು ಹಾಕಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪು ಅವರನ್ನು ಮರೆಯೋಕೆ ಆಗುತ್ತಿಲ್ಲ. ಅವರು ವಾಪಾಸ್ ಬರಲ್ಲ ಅನ್ನೋದು ಗೊತ್ತು. ಆದರೂ ಮನಸ್ಸು ಕೇಳುತ್ತಿಲ್ಲ. ಪುನೀತ್ ನಮ್ಮ ನಾಡಿನ ಹೆಮ್ಮೆ, ಎಷ್ಟು ಜನರನ್ನ ಸಂಪಾದನೆ ಮಾಡಿದ್ದಾರೆ. ಎಷ್ಟೋ ಸಮಾಜಮುಖಿ ಕೆಲಸ ಮಾಡಿದ್ದಾರೆ. ಅವರು ಇದ್ದಾಗ ಇವೆಲ್ಲ ಗೊತ್ತೇ ಆಗಿಲ್ಲ ಎಂದರು. ಇದನ್ನೂ ಓದಿ: ಅಪ್ಪು ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋದ್ರು: ಜಯಪ್ರದಾ

ಈಗ ಅವರು ಏನೇಲ್ಲ ಮಾಡಿದ್ರು ಅನ್ನೋದು ನೋಡಿದ್ರೇ ಹೆಮ್ಮೆ ಅನಿಸುತ್ತಿದೆ. ಅಪ್ಪು ತರ ನಿಮ್ಮ ಮಕ್ಕಳನ್ನ ಬೆಳೆಸಿ. ಅಪ್ಪು ರೀತಿ ಡ್ಯಾನ್ಸ್, ಆಕ್ಟಿಂಗ್ ಕಲಿಸಿ, ಅಪ್ಪುಗೆ ಸಾವಿಲ್ಲ. ಅವರು ನಮ್ಮ ಜೊತೆಯೇ ಇರುತ್ತಾರೆ, ಅಪ್ಪುಗೆ ಮರಣವಿಲ್ಲ. ಅಪ್ಪು ಅಮರ ನಟ ಎಂದು ನಾಣಿ ಬಣ್ಣಿಸಿದರು. ಇದನ್ನೂ ಓದಿ: ಅಪ್ಪು ಸಮಾಧಿ ಬಳಿಯೇ ಮದುವೆಯಾಗಲು ಆಗಮಿಸಿದ ಪ್ರೇಮಿಗಳು

Comments

Leave a Reply

Your email address will not be published. Required fields are marked *