ಟ್ರ್ಯಾಕ್ಟರ್ ಸ್ಪೀಕರ್‌ ಸೌಂಡ್ ಕಡಿಮೆ ಮಾಡಿ ಎಂದಿದ್ದಕ್ಕೆ ಸ್ವಾಮೀಜಿ ಮೇಲೆಯೇ ಹಲ್ಲೆ

ಹಾವೇರಿ: ಸ್ವಾಮೀಜಿಯೊಬ್ಬರು ಟ್ರ್ಯಾಕ್ಟರ್ ಸ್ಪೀಕರ್‌ ಸೌಂಡ್ ಕಡಿಮೆ ಇಟ್ಟುಕೊಂಡು ಹೋಗುವಂತೆ ಹೇಳಿದ್ದಕ್ಕೆ ಅವರ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿರುವ ಬಂಜಾರ ಗುರುಪೀಠದ ಕುಮಾರ ಮಹಾರಾಜ ಸ್ವಾಮೀಜಿ ಮೇಲೆ ಹಲ್ಲೆಯಾಗಿದೆ. ಟ್ರ್ಯಾಕ್ಟರ್ ಸ್ಪೀಕರ್‌ನಲ್ಲಿ ಹೆಚ್ಚು ಸೌಂಡ್ ಇಟ್ಟುಕೊಂಡು ಗುರುಪೀಠದ ಮುಂದೆಯೇ ಹೋಗುತ್ತಿತ್ತು. ಈ ವೇಳೆ ಮಹಾರಾಜ ಸ್ವಾಮೀಜಿ ಟ್ರ್ಯಾಕ್ಟರ್‌ನಲ್ಲಿನ ಸ್ಪೀಕರ್ ಸೌಂಡ್ ಕಡಿಮೆ ಇಟ್ಟುಕೊಂಡು ಹೋಗಿ. ಇದರಿಂದ ಪೂಜೆಗೆ ತೊಂದರೆ ಆಗುತ್ತದೆ ಎಂದು ಬುದ್ಧಿವಾದ ಹೇಳಿದ್ದಾರೆ.

ಈ ಹಿನ್ನೆಲೆ ಟ್ರ್ಯಾಕ್ಟರ್‌ನಲ್ಲಿದ್ದವರು ಸ್ವಾಮೀಜಿಯನ್ನು ಗುರುಪೀಠದ ಪಕ್ಕದ ಜಮೀನಿಗೆ ಕರೆಯಿಸಿ ಅವಾಚ್ಯ ಪದಗಳಿಂದ ಬೈದಾಡಿ, ದೂಡಾಡಿ, ಹಲ್ಲೆ ಮಾಡಿದ್ದಾರೆ. ಪರಿಣಾಮ ಸ್ವಾಮೀಜಿ ಅವರು ಹಲ್ಲೆ ಮಾಡಿದ ನಾಲ್ವರ ವಿರುದ್ಧ ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ. ಇದನ್ನೂ ಓದಿ: 2030ರ ವೇಳೆಗೆ ಭಾರತಕ್ಕೆ 6ಜಿ ನೆಟ್‌ವರ್ಕ್ – ಪ್ರಧಾನಿ ಮೋದಿ

ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಸ್ತುತ ಕೃಷ್ಣಾ, ಸುರೇಶ್, ಪುಟ್ಟಪ್ಪ ಮತ್ತು ದ್ಯಾಮಣ್ಣ ಎನ್ನುವವರ ವಿರುದ್ಧ ಮಹಾರಾಜ ಸ್ವಾಮೀಜಿ ದೂರು ದಾಖಲಿಸಿದ್ದಾರೆ.

Comments

Leave a Reply

Your email address will not be published. Required fields are marked *