ಕತ್ತಲೆಯಲ್ಲಿಯ ಜನರ ಬಾಳಲ್ಲಿ ಬೆಳಕು ನೀಡುತ್ತಿದೆ ಈ ಕಾರ್ಯಕ್ರಮ: ಸುತ್ತೂರು ಶ್ರೀಗಳು

ಬೆಂಗಳೂರು: ನಾನು ಹೋದರೆ ಜಗತ್ತು ಹೇಗಿರುತ್ತೆಂದು ಸೂರ್ಯ ಯೋಚನೆ ಮಾಡ್ತಾಯಿದ್ದನಂತೆ. ಅವಾಗ ಕೊಠಡಿಯಲ್ಲಿದ್ದ ಸಣ್ಣ ಹಣತೆ ನೀನು ಅಸ್ತ ಆಗಬಹುದು. ನಾನು ಈ ಸಣ್ಣ ಕೊಠಡಿಯನ್ನು ಬೆಳಗ್ತಿನಿ. ಆದರೆ ಇಡೀ ಜನಗತ್ತನ್ನ ನಾನು ಬೆಳಗಲಾರೆ. ನನ್ನ ಸುತ್ತಲಿನ ಜನರಿಗೆ ಬೆಳಕನ್ನ ನೀಡಬಲ್ಲೆ ಎಂಬ ಉದಾಹರಣೆಯೊಂದಿಗೆ ಪಬ್ಲಿಕ್ ಟಿವಿ ಯ ಬೆಳಕು ಕಾರ್ಯಕ್ರಮ ಕತ್ತಲೆ ಯ ಜನರಿಗೆ ಬೆಳಕನ್ನು ನೀಡುವ ಕಾರ್ಯಕ್ರಮ ನೀಡುತ್ತಿದೆ ಎಂದು ಸುತ್ತೂರು ಶ್ರೀಗಳು ಹೇಳಿದ್ರು.

ಕಾರ್ಗಿಲ್ ಯುದ್ಧವಾದ ನಂತರ ಜನರಿಂದ ಧನ ಸಹಾಯ ಕೇಳಲು ಹೊರಟಾಗ ಬೆಳಗ್ಗೆ ಒಂದು ಆಭರಣದ ಅಂಗಡಿಗೆ ಹೋದಾಗ ಅವರು ಇವಾಗ ಅಂಗಡಿ ಓಪನ್ ಮಾಡಿದ್ದೀನಿ.. ಇನ್ನೂ ಬೋನಿಯಾಗಿಲ್ಲ. ಇವಾಗ ಕೊಡಕಾಗಲ್ಲಬ ಎಂದು ಹೇಳಿ ಕಳಿಸದರು. ಮುಂದೆ ಒಬ್ಬ ಗಾಡಿ ಎಳೆಯುವ ಕೂಲಿ ಕಾರ್ಮಿಕ ಮುಂದಾದಗ ಆತ ನಮ್ಮನ್ನ ನೋಡಿ ತನ್ನು ಜೇಬಿನಲ್ಲಿರುವ ಹಿಂದಿನ ದಿನದ ಉಳಿಸಿದ ಹಣವೆನ್ನಲ್ಲಾ ನಮಗೆ ನೀಡಿದ. ವ್ಯಕ್ತಿಗೆ ಕೊಡೋ ಮನಸ್ಸಿರಬೇಕು ಅದು ಎಷ್ಟು ಅನ್ನೋದು ಮಹತ್ವ ಅಲ್ಲ ಎಂದು ಶ್ರೀಗಳು ತಿಳಿಸಿದರು.

ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಒಂದು ಕೆಲಸವನ್ನು ಮಾಡಲು ಅದಕ್ಕೆ ಒಗ್ಗಿಕೊಳ್ಳಬೇಕು. ವ್ಯವಹಾರಿಕವಾಗಿ ಕೆಲಸ ಮಾಡದೇ ಅದನ್ನು ಮನಸ್ಸಿನಿಂದ ಮಾಡಿದಾಗ ಮಾತ್ರ ಅದು ಯಶ್ವಸಿಯಾಗುತ್ತದೆ.

ಕೆಲವ್ರಿಗೆ ಕೊಡೊ ಮನಸ್ಸಿರುತ್ತೆ. ಆದರೆ ಅದು ಸರಿಯಾಗಿ ಉಪಯೋಗ ಆಗಲ್ಲ ಅನ್ನೋ ನಂಬಿಕೆಯಿರುತ್ತದೆ. ಆದರೆ ಇದನ್ನೆಲ್ಲಾ ಮೀರಿ ಬೆಳಕು ಕಾರ್ಯಕ್ರಮ ಮುಂದುವರಿಯುತ್ತದೆ.

Comments

Leave a Reply

Your email address will not be published. Required fields are marked *