ಬಯಲಾಯ್ತು `ಯಜಮಾನ’ದಲ್ಲಿ ದರ್ಶನ್ ಪಾತ್ರದ ಮಹಾರಹಸ್ಯ !

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದ ಮಹಾರಹಸ್ಯ ರಿವೀಲ್ ಆಗಿದ್ದು, ಯಜಮಾನ ಸಿನಿಮಾದಲ್ಲಿ ದರ್ಶನ್ ಅವರ ಪಾತ್ರದ ಬಗ್ಗೆ ಗಾಂಧಿನಗರದಲ್ಲೊಂದು ಸುದ್ದಿ ಹರಿದಾಡುತ್ತಿದೆ.

ಕುರುಕ್ಷೇತ್ರ ಮುಗಿಸಿಕೊಂಡು ದರ್ಶನ್ ನೇರವಾಗಿ ಯಜಮಾನನ ಅಡ್ಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಅದ್ದೂರಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಸಿನಿಮಾದ ಶೂಟಿಂಗ್ ಕೊನೆಯ ಹಂತ ತಲುಪುತ್ತಿದೆ. ಸದ್ಯಕ್ಕೆ ದರ್ಶನ್ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ನಿರ್ದೇಶಕ ಪೋನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ದರ್ಶನ್ ಗೆ ಇಬ್ಬರು ನಾಯಕಿಯರು ಸಾಥ್ ನೀಡುತ್ತಿದ್ದಾರೆ. ಆದರೆ ಚಿತ್ರತಂಡ ಇದುವರೆಗೂ ದರ್ಶನ್ ಪಾತ್ರದ ಬಗ್ಗೆ ಮಾತ್ರ ರಿವೀಲ್ ಮಾಡಿರಲಿಲ್ಲ. ಇದೀಗ ಯಜಮಾನ ಸಿನಿಮಾದಲ್ಲಿ ದರ್ಶನ್ ಪಾತ್ರದ ಕುರಿತಾಗಿ ಸುಳಿವು ಸಿಕ್ಕಿದೆ.

ದರ್ಶನ್ ಬೃಂದಾವನ ಸಿನಿಮಾದಲ್ಲಿ ಮಾಡ್ರನ್ ಶ್ರೀಕೃಷ್ಣನಾಗಿ ಕಮಾಲ್ ಮಾಡಿದ್ದರು. ಈಗ ಯಜಮಾನ ಸಿನಿಮಾದಲ್ಲಿ ಮುರಾರಿ ಅವತಾರವೆತ್ತಿದ್ದಾರೆ ಎಂದು ತಿಳಿದು ಬಂದಿದೆ. ದರ್ಶನ್ ಕ್ಲೀನ್ ಶೇವ್ ಲುಕ್‍ನಲ್ಲಿ ಯಜಮಾನ ಸೆಟ್‍ ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಶ್ರೀಕೃಷ್ಣನಾಗಿರಬಹುದು ಎಂಬ ಅನುಮಾನ ಮೂಡಿಸಿದೆ.

ಸಂಗೊಳ್ಳಿ ರಾಯಣ್ಣ ಸಿನಿಮಾ ನಂತರ ದಚ್ಚು ದುರ್ಯೋಧನನ ಪಾತ್ರ ನಿರ್ವಹಿಸುತ್ತಾರೆ ಅನ್ನೋ ಸುದ್ದಿ ಕೇಳಿದ ಕೂಡಲೇ ಗಂಡೆದೆಯ ಗಂಡು ಜಗ್ಗುದಾದನಿಗೆ ಜೈಕಾರ ಹಾಕಿದ್ದರು. ಟೀಸರ್ ರಿಲೀಸ್ ಆದ ಮೇಲೆ ದುಯೋರ್ಧನನ ದೃಶ್ಯ ಕಂಡು ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ಇದೀಗ ಯಜಮಾನ ಶ್ರೀಕೃಷ್ಣನಾಗಿದ್ದಾರೆ ಎಂಬ ಸುದ್ದಿ ತಿಳಿದ ಮೇಲೆ ಸಿನಿಮಾ ಹೇಗಿರಬಹುದು? ಯಾವ್ ಆ್ಯಂಗಲ್‍ನಲ್ಲಿ ಯಜಮಾನ ಸಿನಿಮಾದ ಚಿತ್ರಕತೆ ಹೆಣೆದಿರಬಹುದು ಅಂತ ಅಭಿಮಾನಿಗಳು ಪ್ರಶ್ನೆ ಹಾಕಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *