ಪಾಕಿಸ್ತಾನದ ನೆಲದಲ್ಲೇ ಉಗ್ರ ಸಂಹಾರ ನಡೆಸಿರೋದರ ಹಿಂದಿದೆ 5 ಪ್ರಮುಖ ಕಾರಣಗಳು

ನವದೆಹಲಿ: ಬಾಲ್‍ಕೋಟ್ ಜೈಷ್ ಉಗ್ರ ಸಂಘಟನೆಯ ಪ್ರಮುಖ ಕೇಂದ್ರ. ಅಲ್ಲಿ ಉಗ್ರರ ತರಬೇತಿ, ತರಬೇತುದಾರರು, ಶಸ್ತ್ರಾಸ್ತ್ರ ಸಂಗ್ರಹ ಮಾಡಲಾಗಿತ್ತು ಅಂತ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದರು. ಅಲ್ಲದೆ ಈ ಕ್ಯಾಂಪನ್ನು ಉಡಾಯಿಸದೇ ಹೋಗಿದ್ದಲ್ಲಿ ಭಾರತದಲ್ಲಿ ಮತ್ತಷ್ಟು ಆತ್ಮಾಹುತಿ ದಾಳಿ ನಡೀತಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದರು. ಪಾಕಿಸ್ತಾನದ ನೆಲದಲ್ಲೇ ಉಗ್ರ ಸಂಹಾರ ನಡೆಸಿರೋದರ ಹಿಂದಿದೆ ಐದು ಪ್ರಮುಖ ಕಾರಣಗಳಿವೆ.

1. ಉಗ್ರರಿಗೆ ಪಾಕಿಸ್ತಾನದ ಯಾವುದೇ ತಾಣ ಸುರಕ್ಷಿತವಲ್ಲ
ಭಾರತ ಇದೇ ಮೊದಲ ಬಾರಿಗೆ ವೈಮಾನಿಕ ದಾಳಿ ಬಗ್ಗೆ ಹಾಕಿಕೊಂಡಿದ್ದ ತನ್ನ ಮಾನಸಿಕ ಬೇಲಿಯನ್ನು ಮೀರಿ ಹೊರ ಬಂತು. 12 ಎಐಎಫ್ ಫೈಟರ್ ಜೆಟ್‍ಗಳು ಪಾಕ್ ವೈಮಾನಿಕ ಪ್ರದೇಶಕ್ಕೆ ನುಗ್ಗಿ ಬಾಲಕೋಟ್, ಚಕೋಟಿ, ಮುಜಾಫರ್‍ಬಾದ್‍ನಲ್ಲಿ ಉಗ್ರರನ್ನು ಸಂಹರಿಸಿದವು. ಅಷ್ಟೇ ಅಲ್ಲ, ಸುರಕ್ಷಿತವಾಗಿ ವಾಪಸ್ ಬಂದವು. ಈ ಮೂಲಕ ಪಾಕಿಸ್ತಾನದಲ್ಲಿರುವ ಯಾವ ಸ್ಥಳವೂ ಉಗ್ರರಿಗೆ ಸುರಕ್ಷಿತವಲ್ಲ. ಅದು ಇಸ್ಲಾಮಾಬಾದ್ ಇರಬೋದು ಅಥವಾ ರಾವಲ್‍ಪಿಂಡಿ ಇರಬೋದು ಅನ್ನೋ ಕಠಿಣ ಸಂದೇಶ ರವಾನಿಸಿತ್ತು.

2. ಯಾವ ಬೆದರಿಕೆಗೂ ಬಗ್ಗಲ್ಲವೆಂದು ಪಾಕ್‍ಗೆ ಪಾಠ
ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ಯಾವುದೇ ಕ್ಷಣದಲ್ಲಿಯೂ ಪ್ರತಿಕಾರ ತೀರಿಸಬಹುದು ಎಂದು 2 ದಿನಗಳ ಹಿಂದಷ್ಟೇ ಪಾಕ್ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಆಸಿಫ್ ಗಫೂರ್ ಹೇಳಿದ್ರು. ಆದರೆ, ಪಾಕ್ ಗಡಿ ದಾಟಿ ಬಂದ ಭಾರತೀಯ ಸೇನೆಯನ್ನು ಸುಮ್ಮನೆ ಬಿಡಲ್ಲ. ನಮ್ಮ ಬಳಿಯೂ ಅಣ್ವಸ್ತ್ರ ಇದೆ ಎಂದು ಬೆದರಿಕೆಯೊಡ್ಡಿದ್ದರು. ಇದ್ಯಾವುದಕ್ಕೂ ಕ್ಯಾರೇ ಎನ್ನದ ವಾಯುಸೇನೆ 12 ಜೆಟ್‍ಗಳ ಮೂಲಕ ಅವರ ನೆಲಕ್ಕೆ ನುಗ್ಗಿ ಉಗ್ರಾಘಾತ ಮಾಡಿ ಬಂದಿವೆ. ಈ ಮೂಲಕ ನೀವು ಏನ್ ಬೇಕಾದರೂ ಮಾಡಿ ಯಾವ ಬೆದರಿಕೆಗೂ ಬಗ್ಗಲ್ಲ ಅಂತ ಸೇನೆ ಹೇಳಿ ಬಂದಿದೆ.

3. ಉಗ್ರರ ಕ್ಯಾಂಪ್‍ಗಳೇ ಟಾರ್ಗೆಟ್
ಪಾಕಿಸ್ತಾನದ ಜೈಷ್ ಉಗ್ರರು ಅಡಗುವ ಪ್ರದೇಶಗಳು ಜನಸಂದಣಿಯಿಂದ ಕೂಡಿರುತ್ತವೆ. ಲಾಹೋರ್ ಬಳಿಯ ಜೈಶ್ ಹೆಡ್‍ಕ್ವಾಟ್ರಸ್ ಮುಂದಕ್ಕೆ ಅಥವಾ ದಕ್ಷಿಣ ಪಂಜಾಬ್‍ನ ಬಹವಾಲ್‍ಪುರದ ಕೇಂದ್ರಗಳು ಇದಕ್ಕೆ ಉದಾಹರಣೆ. ಕೈಬರ್ ಪಖ್ತುಂಖ್ವಾದ ಉಗ್ರ ತರಬೇತಿ ಕೇಂದ್ರ ದಟ್ಟ ಅರಣ್ಯದಲ್ಲಿದೆ. ಹಾಗಾಗಿ ಇದನ್ನೇ ಉಡೀಸ್ ಮಾಡುವ ಎಂದು ತಳಮಟ್ಟದಲ್ಲಿ ದಾಳಿ ನಡೆಸುವ ಸಾಮಥ್ರ್ಯದೊಂದಿಗೆ 12 ಜೆಟ್‍ಗಳು ಉಗ್ರರ ಕ್ಯಾಂಪ್‍ಗಳನ್ನು ಟಾರ್ಗೆಟ್ ಮಾಡಿದವು. ಹೀಗಾಗಿ ಜನರ ಜೀವಹಾನಿಗೆ ಆಸ್ಪದವೇ ಕೊಡಲಿಲ್ಲ.

4. ಭಾರತದ ತಾಂತ್ರಿಕ ಶ್ರೇಷ್ಠತೆ ಪ್ರದರ್ಶನ
ಪಾಕಿಸ್ತಾನದ ಹದ್ದಿನ ಕಣ್ಣನ್ನು ತಪ್ಪಿಸಿ ಒಳನುಗ್ಗಿದ ಭಾರತೀಯ ಸೇನೆಯ ಯಶಸ್ಸಿನ ಜೊತೆಗೆ ನಮ್ಮ ದೇಶದ ಐಎಎಫ್‍ನ ತಾಂತ್ರಿಕ ಶ್ರೇಷ್ಠತೆ ಕೂಡ ಸಾಬೀತಾಗಿದೆ. ಅಮೆರಿಕದಲ್ಲಿ ಸಿದ್ಧಪಡಿಸಲಾದ ಪಾಕಿಸ್ತಾನದ ರಡಾರ್ ರಕ್ಷಣೆಯನ್ನು ಭೇದಿಸಿದ ಮಿರಾಜ್ ಜೆಟ್‍ಗಳು ಕಣ್ಮುಚ್ಚಿ ಕಣ್ತೆರೆಯುವಂತೆ ಮಿಂಚಿನ ಸಂಚಾರದ ದಾಳಿ ಮಾಡಿ ಉಗ್ರರ ಹೆಡೆಮುರಿ ಕಟ್ಟಿದೆ. ಈ ಮೂಲಕ ತನ್ನ ಟೆಕ್ನಿಕಲ್ ಸುಪಿರಿಯಾರಿಟಿಯನ್ನು ಜಗತ್ತಿಗೇ ಪ್ರದರ್ಶಿಸಿದೆ.

5. ಜಾಗತಿಕ ಮಟ್ಟದಲ್ಲಿ ಭಾರತಕ್ಕಿಲ್ಲ ಆತಂಕ
ಜಾಗತಿಕ ಮಟ್ಟದಲ್ಲೂ ವಿರೋಧ ಕಟ್ಟಿಕೊಳ್ಳಬಾರದು. ಉಗ್ರರನ್ನು ಸುಮ್ಮನೆ ಬಿಡಬಾರದು ಎಂದು ನಡೆಸಿದ ಏರ್ ಸ್ಟ್ರೈಕ್ ಸಕ್ಸಸ್ ಆಗಿದೆ. ಯಾಕಂದ್ರೆ, ವಿಶ್ವದ ಯಾವ ದೇಶವೂ ಸಹ ಭಾರತದ ದಾಳಿಯ ಬಗ್ಗೆ ಆಕ್ಷೇಪ ಎತ್ತಿಲ್ಲ. ಜೊತೆಗೆ ಭಾರತ ಈ ದಾಳಿಯನ್ನು ಯುದ್ಧ ಎಂದು ಒಪ್ಪಿಕೊಂಡಿಲ್ಲ. ನಾವು ಯಾವುದೇ ಯುದ್ಧ ಸಾರುತ್ತಿಲ್ಲ, ದಾಳಿಯನ್ನಷ್ಟೇ ಮಾಡಿದ್ದೇವೆ ಎಂದು ಭಾರತ ಸ್ಪಷ್ಟಪಡಿಸಿದೆ. ಅಷ್ಟರ ಮಟ್ಟಿಗೆ ನಮ್ಮ ಯೋಧರು ತಮ್ಮ ಟಾರ್ಗೆಟ್, ಆಪರೇಷನ್ ಅನ್ನು ಫಿನಿಶ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *