ಸ್ಯಾಂಡಲ್‍ವುಡ್ ಸ್ಟಾರ್ ನಟನ ಹತ್ಯೆಗೆ ನಡೆದಿತ್ತು ಪ್ಲಾನ್..!

ಬೆಂಗಳೂರು: ರೌಡಿಶೀಟರ್ ಗೆ ಸುಪಾರಿ ನೀಡಿ ಸದ್ದಿಲ್ಲದೆ ಸ್ಯಾಂಡಲ್‍ವುಡ್ ನ ಸ್ಟಾರ್ ನಟನ ಹತ್ಯೆಗೆ ಪ್ಲಾನ್ ನಡೆದಿರುವ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ.

ಹೌದು. ಆಶ್ಚರ್ಯ ಅನಿಸಿದರೂ ನೀವು ನಂಬಲೇಬೇಕು. ಏಕೆಂದರೆ ಆ ನಟ ಖುದ್ದಾಗಿ ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್ ಮುಂದೆ ಕೂತು ಜೀವಭಯವಿರುವ ಬಗ್ಗೆ ಮಾತನಾಡಿದ್ದಾರೆ. ಸುಪಾರಿ ಕೊಟ್ಟವರು ಯಾರು ಗೊತ್ತಿಲ್ಲ. ಆದರೆ ರೌಡಿಶೀಟರ್ ಒಬ್ಬ ನನ್ನ ಮುಗಿಸೋಕೆ ಪ್ಲಾನ್ ಮಾಡಿದ್ದಾನೆ ಎಂದು ನಟ ಹೇಳಿದ್ದಾರೆ.

ನಟ ರೌಡಿಶೀಟರ್ ಭರತ್ ಅಲಿಯಾಸ್ ಸ್ಲಂ ಭರತನ ಮೇಲೆ ಬೊಟ್ಟು ಮಾಡಿದ್ದಾರೆ. ಸ್ಲಂ ಭರತ್ ಅಂಡ್ ಗ್ಯಾಂಗ್, ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ನಟ ಹೇಳಿದ್ದಾರೆ. ರೌಡಿ ಪೆರೇಡ್ ಮಾಡಿ ವಾರ್ನ್ ಮಾಡಿದರೂ ಈತ ಕಸುಬು ಬಿಡುತ್ತಿಲ್ಲ ಎಂದು ಭರತನ ಕಾಲಿಗೆ ಗುಂಡಿಕ್ಕಿ ಅರೆಸ್ಟ್ ಮಾಡಿದ್ದಾರೆ ಎನ್ನಲಾಗ್ತಿದೆ.

ಅಸಲಿಗೆ ಭರತನೇ ಡೀಲ್‍ಗೆ ಇಳಿದಿದ್ನಾ ಅಥವಾ ಭರತನ ಹೆಸರೇಳಿಕೊಂಡು ಬೇರೆ ಯಾರಾದರೂ ಈ ಕೃತ್ಯ ಮಾಡಿದ್ದಾರಾ ಅನ್ನೋದು ಗೊತ್ತಿಲ್ಲ. ನಟನ ಹೆಸರೇಳಿದರೆ ಬೇರೆಯವರು ಆ ನಟನ ಹಿಂದೆ ಬೀಳಬಹುದು ಎನ್ನುವ ಕಾರಣಕ್ಕೆ ಪೊಲೀಸರು ಹೆಸರು ರಿವೀಲ್ ಮಾಡಲು ಒಪ್ಪುತ್ತಿಲ್ಲ. ಸದ್ಯ ಪರಪ್ಪನ ಅಗ್ರಹಾರ ಜೈಲಲ್ಲಿರುವ ಭರತ್ ರಿಲೀಸ್ ಆದ ನಂತರ ಇದಕ್ಕೆಲ್ಲಾ ಸ್ಪಷ್ಟ ಉತ್ತರ ಸಿಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *