ಸಿದ್ದರಾಮಯ್ಯ ಭೇಟಿಯ ಕಾರಣ ರಿವೀಲ್ ಮಾಡಿದ್ರು ಸುಮಲತಾ

ಬೆಂಗಳೂರು: ಇತ್ತೀಚೆಗಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸುಮಲತಾ ಅಂಬರೀಶ್ ಭೇಟಿ ಮಾಡಿದ್ದು, ತೀವ್ರ ಕತೂಹಲ ಹುಟ್ಟಿಸಿತ್ತು. ಇದೀಗ ತಾನು ಯಾಕೆ ಮಾಜಿ ಸಿಎಂ ಅವರನ್ನು ಭೇಟಿ ಮಾಡಿದ್ದೇನೆ ಎಂಬುದನ್ನು ಸ್ವತಃ ಸುಮಲತಾ ಅವರೇ ರಿವೀಲ್ ಮಾಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ನನ್ನ ಬಗ್ಗೆ ಒಂದು ಹೇಳಿಕೆ ನೀಡಿದ್ದರು. ಈ ಕಾರಣಕ್ಕೆ ನಾನು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದಾಗಿ ತಿಳಿಸಿದ್ರು.

ಕುಮಾರಸ್ವಾಮಿಯವರು ಹೇಳಿಕೆ ಕೊಟ್ಟು ಬಹಳ ದಿನಗಳು ಆದ ಬಳಿಕ ನಾನು ಸಿದ್ದರಾಮಯ್ಯ ಅವರ ಮನೆಗೆ ಭೇಟಿ ಕೊಟ್ಟಿರುವುದು. ಎರಡೂವರೆ ತಿಂಗಳ ಹಿಂದೆ ಎಚ್‍ಡಿಕೆ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆಯನ್ನು ಅವರು ತುಂಬಾ ಮುಕ್ತವಾಗಿಯೇ ಹೇಳಿದ್ದರು ಅಂದ್ರು.

ಎಚ್‍ಡಿಕೆ ಏನ್ ಹೇಳಿದ್ದರು..?
ಸುಮಲತಾ ಅವರು ನಮ್ಮ ಪಕ್ಷದವರು ಅಲ್ವಲ್ಲ. ಅವರಿಗೆ ಯಾಕೆ ಟಿಕೆಟ್ ಕೊಡಬೇಕು. ಸುಮಲತಾ ಅವರಿಗೆ ಏನೇ ಇದ್ರೂ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಬಹುದೇನೋ. ಅವರನ್ನೇ ಹೋಗಿ ಕೇಳಲಿ. ನಮ್ಮದೇ ಆದ ಶಕ್ತಿ ಮಂಡ್ಯದಲ್ಲಿದೆ. ಹೀಗಾಗಿ ನಾವು ನಮ್ಮದೇ ಅಭ್ಯರ್ಥಿಯನ್ನು ಅಲ್ಲಿ ನಿಲ್ಲಿಸ್ತೀವಿ. ನಾವು ಬೇರೆ ಯಾರಿಗೂ ಟಿಕೆಟ್ ಕೊಡಲ್ಲ ಎನ್ನುವ ಮಾತನ್ನು ಎಚ್ ಡಿಕೆ ಹೇಳಿದ್ದರು.

ಅದಾದ ಬಳಿಕ ಮಂಡ್ಯಕ್ಕೆ ಸುಮಲತಾ ಅವರ ಕೊಡುಗೆ ಏನು ಎಂದು ಕೇಳಿದ್ರು. ಅಂಬರೀಶ್ ಅವರ ಕೊಡುಗೆ ಏನು..? ಅದೂ ಶೂನ್ಯ ಎಂದು ಹೇಳಿದ್ದರು. ಇದನ್ನೆಲ್ಲಾ ಇಟ್ಟುಕೊಂಡು ಹೇಗೆ ನಾನು ಅವರನ್ನು ಅಪ್ರೋಚ್ ಮಾಡಲಿ. ನಿಮ್ಮದೇನೂ ಇಲ್ಲ. ನೀವು ಯಾರೂ ಇಲ್ಲ ಅನ್ನೋವಾಗ ನಾನು ಅವರ ಕಡೆ ಹೋಗಿ ಕೇಳೋದ್ರಲ್ಲಿ ಅರ್ಥನೇ ಇಲ್ಲ ಎಂದರು.

Comments

Leave a Reply

Your email address will not be published. Required fields are marked *