ಮೊಬೈಲ್‍ನಲ್ಲಿ ಮಗನ ಜೊತೆ ಮಾತನಾಡುತ್ತಲೇ ನದಿಗೆ ಹಾರಿ ತಾಯಿ ಆತ್ಮಹತ್ಯೆ!

ಶಿವಮೊಗ್ಗ: ಗಂಡನ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದ ಮಹಿಳೆಯೊಬ್ಬರು ತನ್ನ ಮಗನ ಜೊತೆ ಮಾತನಾಡುತ್ತಲೇ ತುಂಬಿ ಹರಿಯುತ್ತಿದ್ದ ತುಂಗಾ ನದಿಗೆ ಹಾರಿದ ಘಟನೆ ಶಿವಮೊಗ್ಗದ ಕೋರ್ಪಳಯ್ಯ ಛತ್ರದ ಬಳಿ ನಡೆದಿದೆ.

ಸಾವಿತ್ರಮ್ಮ(58) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇಂದು ಬೆಳ್ಳಗ್ಗೆ 11 ಗಂಟೆಯ ಹೊತ್ತಿಗೆ ಮಗ ಕಿರಣ್‍ಗೆ ಫೋನ್ ಮಾಡಿ, ಪತಿ ಇಲ್ಲದೇ ಬದುಕಲು ನನಗೆ ಇಷ್ಟವಿಲ್ಲ. ನೀವೆಲ್ಲರೂ ಚೆನ್ನಾಗಿ ಬಾಳಿ- ಬದುಕಿ ಎಂದು ಮಾತನಾಡುತ್ತಲೇ ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗ ಕಿರಣ್ ಹಾಗೂ ಆತನ ಗೆಳೆಯರು ತಕ್ಷಣ ತುಂಬಿ ಹರಿಯುತ್ತಿದ್ದ ತುಂಗಾ ನದಿ ದಡಕ್ಕೆ ಬಂದು ಶೋಧಿಸಿದ್ದಾರೆ.

ಒಂದು ವರ್ಷದ ಹಿಂದೆ ಸಾವಿತ್ರಮ್ಮ ಅವರ ಪತಿ ಮೃತಪಟ್ಟಿದ್ದರು. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಕ್ಕಾಗಿ ಶೋಧ ನಡೆದಿದ್ದು, ನದಿ ತುಂಬಿ ಹರಿಯುತ್ತಿದ್ದ ಕಾರಣ ಶೋಧ ಕಾರ್ಯಕ್ಕೆ ಹಿನ್ನಡೆಯಾಗಿದೆ.

Comments

Leave a Reply

Your email address will not be published. Required fields are marked *