ಹಾಸ್ಟೆಲ್‍ಗೆ ನುಗ್ಗಿದ್ದವನ ಕಣ್ಣಿಗೆ ಖಾರದಪುಡಿ ಹಾಕಿ ವಿದ್ಯಾರ್ಥಿನಿಯರಿಂದ ಥಳಿತ

ಕಲಬುರಗಿ: ತಡರಾತ್ರಿ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ನುಗ್ಗಿದ ವ್ಯಕ್ತಿಗೆ ವಿದ್ಯಾರ್ಥಿನಿಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕೆಸರಟಗಿ ಗ್ರಾಮದ ನಿವಾಸಿ ಸತೀಶ್ ಹಾಸ್ಟೆಲ್‍ಗೆ ನುಗ್ಗಿದ ವ್ಯಕ್ತಿ. ಪಿಡಿಎ ಎಂಜನಿಯರಿಂಗ್ ಕಾಲೇಜು ಬಳಿಯಿರುವ ಸರ್ಕಾರಿ ಬಾಲಕಿಯರ ಹಾಸ್ಟೆಲ್‍ಗೆ ಆರೋಪಿ ನುಗ್ಗಿದ್ದನು. ತಡರಾತ್ರಿ 2 ಗಂಟೆ ವೇಳೆಗೆ ಕಂಪೌಂಡ್ ಹತ್ತಿ ಹಾಸ್ಟೆಲ್‍ಗೆ ಬಂದಿದ್ದನು. ಈ ವೇಳೆ ಕೆಲ ವಿದ್ಯಾರ್ಥಿನಿಯರು ಆತನನ್ನು ಕಂಡು ಇತರೆ ವಿದ್ಯಾರ್ಥಿನಿಯರನ್ನು ಕರೆದು, ಆರೋಪಿ ಕಣ್ಣಿಗೆ ಖಾರದ ಪುಡಿ ಹಾಕಿ ಗೂಸಾ ಕೊಟ್ಟು ಧೈರ್ಯ ಮೆರೆದಿದ್ದಾರೆ.

ಥಳಿಸಿದ ಬಳಿಕ ಆರೋಪಿಯನ್ನು ವಿದ್ಯಾರ್ಥಿನಿಯರು ಪೊಲೀಸರಿಗೆ ಒಪ್ಪಿಸಿದ್ದು, ಕುಡಿದ ಮತ್ತಿನಲ್ಲಿ ಹಾಸ್ಟೆಲ್‍ಗೆ ಬಂದಿರೋದಾಗಿ ಆರೋಪಿ ಸತೀಶ್ ಹೇಳಿದ್ದಾನೆ. ಸದ್ಯ ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *