ಕೆಜಿಎಫ್ ಚಿತ್ರ ಬಿಡುಗಡೆಗೆ ತಡೆಯಾಜ್ಞೆ- ಕೋರ್ಟ್ ಆದೇಶದಲ್ಲೇನಿದೆ?

ಬೆಂಗಳೂರು: ಕೆಜಿಎಫ್ ಚಿತ್ರ ಬಿಡುಗಡೆ ಬಗ್ಗೆ 10 ನೇ ಸಿಟಿ ಸಿವಿಲ್ ನ್ಯಾಯಾಲಯದ ಆದೇಶದ ಪ್ರತಿ ಲಭ್ಯವಾಗಿದೆ.

ಕೋರ್ಟ್ ಆದೇಶದಲ್ಲಿ, ಹಕ್ಕುಚ್ಯುತಿ ಸಂಬಂಧಪಟ್ಟಂತೆ ವೆಂಕಟೇಶ್ ಹಾಗೂ ಆನಂದ್ ಎಂಬವರು ಚಿತ್ರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಚಲನಚಿತ್ರಕ್ಕೆ ಸಂಬಂದಪಟ್ಟ ಆರ್. ಲಕ್ಷ್ಮೀನಾರಾಯಣ್ ಹಾಗೂ ವಿಜಯ್ ಕಿರಗಂದೂರು ಇದೂವರೆಗೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಹೀಗಾಗಿ ಮುಂದಿನ ವಿಚಾರಣೆವರೆಗೂ ಚಲನಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಲಾಗಿದೆ.

ಅರ್ಜಿದಾರರ ಹೆಸರು:
1. ವೆಂಕಟೇಶ್ ಜಿ.
ವಕೀಲರು ಕೆ. ರಘುನಾಥ್
2. ಆನಂದ್ ಎಸ್
ಮಾಲೀಕರು, ಅಶ್ವಿನಿ ಫಿಲಂಸ್ , ನಂ 29/1, 1ನೇ ಮುಖ್ಯ ರಸ್ತೆ, 1ನೇ ಕ್ರಾಸ್, ಅಜಾದ್ ನಗರ, ಬೆಂಗಳೂರು.

ಪ್ರತಿವಾದಿಗಳು:
1. ಲಕ್ಷ್ಮೀನಾರಾಯಣ ಆರ್ ಅಲಿಯಾಸ್ ಲಕ್ಷ್ಮೀ ನಾರಾಯಣ ಗೌಡ
2. ವಿಜಯ್ ಕಿರಗಂದೂರ್
ಮಾಲೀಕರು, ಹೊಂಬಾಳೆ ಫಿಲಂಸ್, ನಂ 1312, 2ನೇ ಮಹಡಿ, 11ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು.
ನಂ 45/11 3ನೇ ಮಹಡಿ, ಕುಮಾರಕೃಪ, ಉತ್ತರ ಉದ್ಯಾನವನ ರಸ್ತೆ, ಗಾಂಧಿಭವನ, ಬೆಂಗಳೂರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *