ರಾಜ್ಯದ ಹವಾಮಾನ ವರದಿ: 20-01-2022

Karnataka weather report

ಕ್ಷಿಣ ಕರ್ನಾಟಕ ಮತ್ತು ಒಳನಾಡು ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಿದೆ. ಕಳೆದ ನಾಲ್ಕೈದು ದಿನಗಳಿಂದ ಬದಲಾಗುತ್ತಿರುವ ಹವಾಮಾನದಿಂದ ಜನರು ಶೀತ ಮತ್ತು ಕೆಮ್ಮು ಸಂಬಂಧಿತ ರೋಗಕ್ಕೆ ತುತ್ತಾಗುತ್ತಿದ್ದಾರೆ. ಎಂದಿನಂತೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಮೈ ಕೊರೆಯವ ಚಳಿ ಇರಲಿದ್ದು, ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ. ನಂತರ ಸಂಜೆ ವೇಳೆಗೆ ಮೋಡ ಮುಸುಕಿದ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್‍ನಿಂದ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 29-15
ಮಂಗಳೂರು: 32-21
ಶಿವಮೊಗ್ಗ: 33-16
ಬೆಳಗಾವಿ: 32-16
ಮೈಸೂರು: 31-16

ಮಂಡ್ಯ: 31-16
ರಾಮನಗರ: 31-16
ಹಾಸನ: 30-15
ಚಾಮರಾಜನಗರ: 31-17
ಚಿಕ್ಕಬಳ್ಳಾಪುರ: 29-15
ಕೋಲಾರ: 29-14

ತುಮಕೂರು: 30-15
ಉಡುಪಿ: 33-22
ಕಾರವಾರ: 32-22
ಚಿಕ್ಕಮಗಳೂರು: 30-15
ದಾವಣಗೆರೆ: 32-16

ಚಿತ್ರದುರ್ಗ: 31-17
ಹಾವೇರಿ: 33-17
ಬಳ್ಳಾರಿ: 32-17
ಗದಗ: 32-16
ಕೊಪ್ಪಳ: 32-17

ರಾಯಚೂರು: 32-17
ಯಾದಗಿರಿ: 32-16
ವಿಜಯಪುರ: 29-14
ಬೀದರ್: 30-15
ಕಲಬುರಗಿ: 32-16
ಬಾಗಲಕೋಟೆ: 33-17

Comments

Leave a Reply

Your email address will not be published. Required fields are marked *