ಶ್ರುತಿ ಹರಿಹರನ್ ಬದಲಿಗೆ ರಾಶಿ ಮಹದೇವ್?

ಬೆಂಗಳೂರು: ಮೀಟೂ ಗಲಾಟೆಯ ನಡುವಲ್ಲಿ ಶ್ರುತಿ ಹರಿಹರನ್ ಕೈಲಿದ್ದ ಕನ್ನಡದ ಅವಕಾಶಗಳೆಲ್ಲವೂ ಜಾರಿ ಹೋಗುತ್ತಿದೆ. ಇದರೊಂದಿಗೇ ಶ್ರುತಿ ಕನ್ನಡ ಚಿತ್ರರಂಗದಿಂದ ಕಣ್ಮರೆಯಾಗಿ ಬಿಡುತ್ತಾರಾ ಎಂಬ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ. ಹೀಗಿರುವಾಗಲೇ ಶ್ರುತಿ ನಟಿಸಬೇಕಿದ್ದ ಚಿತ್ರವೊಂದಕ್ಕೆ ಬೇರೊಬ್ಬ ನಟಿಯ ಆಗಮನವಾದ ಸುದ್ದಿ ಹರಿದಾಡುತ್ತಿದೆ.

ಬಿ.ಎಸ್. ಲಿಂಗದೇವರು ದಾರಿ ತಪ್ಪಿಸು ದೇವರೇ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿರೋ ವಿಚಾರ ಈ ಹಿಂದೆಯೇ ಹೊರ ಬಿದ್ದಿತ್ತು. ಇದರ ಜೊತೆ ಜೊತೆಗೆ ಈ ಚಿತ್ರದಲ್ಲಿ ಶ್ರುತಿ ಹರಿಹರನ್ ನಾಯಕಿಯಾಗಿ ನಟಿಸಲಿದ್ದಾರೆಂಬುದನ್ನು ನಿರ್ದೇಶಕರೇ ಹೇಳಿಕೊಂಡಿದ್ದರು. ಆದರೆ ಮೀಟೂ ವಿವಾದದ ನಂತರ ಶ್ರುತಿಯನ್ನು ಈ ಚಿತ್ರದಿಂದ ಕೈ ಬಿಡಲಾಗಿದೆ ಅಂತಲೂ ರೂಮರ್ ಹಬ್ಬಿಕೊಂಡಿತ್ತು.

ಇದೀಗ ಅದು ನಿಜವಾದಂತಿದೆ. ದಾರಿ ತಪ್ಪಿಸು ದೇವರೇ ಚಿತ್ರಕ್ಕೆ ನಾಯಕಿಯಾಗಿ ರಾಶಿ ಮಹದೇವ್ ಆಗಮಿಸಿದ್ದಾರೆ. ವಿಜಯ್ ರಾಘವೇಂದ್ರ ನಾಯಕರಾಗಿರೋ ಪರದೇಸಿ ಕೇರಾಫ್ ಲಂಡನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರೋ ರಾಸಿ ಮಹದೇವ್ ಪಾಲಿಗೆ ದಾರಿ ತಪ್ಪಿಸು ದೇವರೇ ಕನ್ನಡದಲ್ಲಿ ಎರಡನೇ ಚಿತ್ರ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *