ಪ್ಯಾಲೇಸ್‍ನಲ್ಲಿ ಮಗಳಿಗಾಗಿ ಸ್ವರ್ಗ ಧರೆಗಿಳಿಸಿದ ಸಚಿವ ಶ್ರೀರಾಮುಲು

– ಏನ್ ಕಾಸ್ಟ್ಲಿ ಮ್ಯಾರೇಜ್ ಗುರೂ..

ಬೆಂಗಳೂರು: ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಅವರು 2016ರಲ್ಲಿ ತಮ್ಮ ಮಗಳ ಮದುವೆಯನ್ನು ಎಲ್ಲರ ಹುಬ್ಬೇರಿಸುವಂತೆ ಅದ್ಧೂರಿಯಾಗಿ ನಡೆಸಿದ್ದರು. ಇದೀಗ ಸಚಿವ ಶ್ರೀರಾಮುಲು ತಮ್ಮ ಮಗಳ ಮದುವೆಗಾಗಿ ಕೋಟಿ ಕೋಟಿ ವೆಚ್ಚದಲ್ಲಿ ಬೆಂಗಳೂರು ಪ್ಯಾಲೇಸ್‍ನಲ್ಲಿ ಮದುವೆ ಮಂಟಪ ಸಿದ್ಧ ಮಾಡಿಸುತ್ತಿದ್ದಾರೆ.

ಒಂಬತ್ತು ದಿನಗಳ ಕಾಲ ರಾಮುಲು ಮಗಳ ಮದುವೆ ನಡೆಯಲಿದ್ದು, ಮಾರ್ಚ್ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ರಾಮುಲು ಪ್ಯಾಲೇಸ್ ನಲ್ಲಿ ಸ್ವರ್ಗ ಧರೆಗಿಳಿಸಿದ್ದಾರೆ. ಸುಮಾರು 200 ಸಿಬ್ಬಂದಿ ಮದುವೆ ಸಿದ್ಧತೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಪ್ಯಾಲೇಸ್‍ನಲ್ಲಿ ಅದ್ಭುತ ಮಂಟಪ ರೆಡಿಯಾಗುತ್ತಿದ್ದು, ಇನ್ನೊಂದು ಐಷಾರಾಮಿ ಮದುವೆಗೆ ವೇದಿಕೆ ರೆಡಿಯಾಗುತ್ತಿದೆ. ಹಂಪಿ ವಿರೂಪಾಕ್ಷ ದೇಗುಲ ಸೇರಿದಂತೆ ಕರ್ನಾಟಕದ ಅನೇಕ ದೇಗುಲದ ಸೆಟ್ ರಾಮುಲು ಮಗಳ ವಿವಾಹದಲ್ಲಿ ಅನಾವರಣಗೊಳ್ಳಲಿದೆ. ಏನಿಲ್ಲ ಅಂದರೂ ಒಂಬತ್ತು ದಿನದ ಮದುವೆಗೆ ಬರೋಬ್ಬರಿ 500 ಕೋಟಿ ಖರ್ಚು ಮಾಡಲಾಗುತ್ತಿದೆ ಎನ್ನಲಾಗಿದೆ. ಆದರೆ ಶ್ರೀರಾಮುಲು ಮಾತ್ರ ಇದು ಸಿಂಪಲ್ ಮ್ಯಾರೇಜ್ ಎಂದು ಹೇಳಿಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *