ದಕ್ಷಿಣಕ್ಕೊಂದು ತಿರುಪತಿ, ಉತ್ತರಕ್ಕೊಂದು ತಿರುಪತಿ – ಭಕ್ತರಿಗಾಗಿ ಟಿಟಿಡಿಯಿಂದ ಹೊಸ ಪ್ಲಾನ್

ಹೈದರಾಬಾದ್: ದೇಶದ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪ ದೇವಸ್ಥಾನ ಮತ್ತರೆಡು ಆಗಲಿದ್ದು, ಇನ್ನೊಂದು ತಿಂಗಳಿನಲ್ಲಿ ದೇವಾಲಯ ಕಾರ್ಯಪೂರ್ಣಗೊಳ್ಳುವ ಸಾಧ್ಯತೆ ಇದೆ.

ಆಂಧ್ರಪ್ರದೇಶದಲ್ಲಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿರುವ ಭಕ್ತಗಣ ಹೆಚ್ಚಾಗ್ತಿದ್ದು, ತಿಮ್ಮಪ್ಪನ ದರ್ಶನಕ್ಕಾಗಿ ದಿನಗಟ್ಟಲೆ ಕಾಯಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಹೀಗಾಗಿ, ಟಿಟಿಡಿ ಈಗ ಹೊಸ ಪ್ಲಾನ್ ಮಾಡಿದ್ದು, ಅದರಂತೆ ಉತ್ತರ ಭಾರತದ ಹರ್ಯಾಣದ ಕುರುಕ್ಷೇತ್ರದಲ್ಲೂ, ದಕ್ಷಿಣ ಭಾರತೀಯರಿಗಾಗಿ ಕನ್ಯಾಕುಮಾರಿಯಲ್ಲಿ ತಿಮ್ಮಪ್ಪನ ದೇವಸ್ಥಾನ ನಿರ್ಮಾಣ ನಡೆಯುತ್ತಿದೆ. ಕುರುಕ್ಷೇತ್ರದಲ್ಲಿ 2012 ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಯೋಜನೆ ಚಾಲನೆ ನೀಡಿತ್ತು, ಅಂದು ಸಿಎಂ ಆಗಿದ್ದ ಭೂಪಿಂದರ್ ಸಿಂಗ್ ಹೂಡಾ ದೇವಾಲಯ ನಿರ್ಮಾಣ ಮಾಡುವ ಕ್ಷೇತ್ರವನ್ನು ಪ್ರಮುಖ ಪ್ರವಾಸಿ ಧಾರ್ಮಿಕ ಕೇಂದ್ರವಾಗಿ ರೂಪಿಸಲಾಗುವುದು ಎಂದು ಹೇಳಿದ್ದರು.

ಕುರುಕ್ಷೇತ್ರದಲ್ಲೇ ನಿರ್ಮಾಣ ಮಾಡುವ ಹಿಂದಿನ ಉದ್ದೇಶ ಬಿಚ್ಚಿಟ್ಟ ಟಿಟಿಡಿ ಸಮಿತಿ ವಕ್ತಾರರು, ಶ್ರೀ ಕೃಷ್ಣನ ಜನ್ಮಸ್ಥಾನವಾಗಿರುವ ಈ ಪ್ರದೇಶ ದೇವಾಲಯ ನಿರ್ಮಾಣ ಮಾಡಲು ಸೂಕ್ತವಾಗಿದ್ದು ಎಂಬ ಉದ್ದೇಶದಿಂದ ಈ ಕಾರ್ಯ ನಡೆಸುತ್ತಿರುವುದುದಾಗಿ ತಿಳಿಸಿದ್ದರು.

ಈ ಕುರಿತು ಈಗಾಗಲೇ ಕಾರ್ಯ ಪ್ರವೃತ್ತವಾಗಿರುವ ಟಿಟಿಡಿ ಕುರುಕ್ಷೇತ್ರದಲ್ಲಿ ನಿರ್ಮಾಣ ಮಾಡುತ್ತಿರುವ ದೇಗುಲ ಅಂತಿಮ ಹಂತಕ್ಕೆ ಬಂದಿದೆ. ನೋಡಲು ತಿರುಪತಿ ತಿರುಮಲ ದೇಗುಲದಂತೆಯೇ ಈ ದೇವಾಲಯಗಳು ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ ದಕ್ಷಿಣ ಭಾರತದ ಕಲ್ಲುಗಳನ್ನು ಬಳಸಿ ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದೆ.

ಭಾರತದ ಪ್ರಮುಖ ನಗರಗಳಲ್ಲಿಯೂ ಟಿಟಿಡಿ ಸಮಿತಿ ದೇವಾಲಯಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದು, ಪ್ರಮುಖವಾಗಿ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ದೇವಾಲಯ ನಿರ್ಮಾಣ ನಡೆಸುವ ಕುರಿತು ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *