ಮನೆ ಮನೆಗೆ ತೆರಳಿ ಅರಿಶಿನ, ಕುಂಕಮ ಕೊಟ್ಟು ಆನೆಗುಂದಿ ಉತ್ಸವಕ್ಕೆ ಆಹ್ವಾನಿಸಿದ ಡಿಸಿ

– ಜಿಲ್ಲಾಡಳಿತದ ಕೆಲಸಕ್ಕೆ ಸಾಥ್ ಕೊಟ್ಟ ಶ್ರೀ ಕೃಷ್ಣದೇವರಾಯ ವಂಶಸ್ಥರು

ಕೊಪ್ಪಳ: ಐತಿಹಾಸಿಕ ಆನೆಗುಂದಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ದಿನೆ ದಿನೇ ಹೊಸ ಹೊಸ ಕಾರ್ಯಕ್ರಮಗಳು ಮತ್ತು ಕ್ರೀಡೆಗಳನ್ನು ನಡೆಸುತ್ತಿದೆ.

ಇಂದು ಸಹ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಮತ್ತು ಜಿಲ್ಲಾಡಳಿತ ಆನೆಗುಂದಿಯಲ್ಲಿ ನೆಲೆಸಿರುವ ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯ ವಂಶಸ್ಥರ ಮನೆಗೆ ತೆರಳಿ ಆನೆಗುಂದಿ ಉತ್ಸವಕ್ಕೆ ಹಣ್ಣು ಹಂಪಲು ಜೊತೆಗೆ ತಾಂಬೂಲವನ್ನು ನೀಡಿದರು. ಸಾಂಪ್ರದಾಯಿಕವಾಗಿ ಮೆರವಣಿಗೆ ಮೂಲಕ ಮನೆ ಮನೆಗೆ ತೆರಳಿ ಉತ್ಸವಕ್ಕೆ ಆಹ್ವಾನವನ್ನು ನೀಡಿದರು. ಅಷ್ಟೆ ಅಲ್ಲದೆ ಆನೆಗುಂದಿಯಲ್ಲಿ ನೆಲಸಿರುವ ಪ್ರತಿಯೊಬ್ಬರ ಮನೆಗೆ ತೆರಳಿ ಅರಿಶಿನ, ಕುಂಕಮ, ಎಲೆ-ಅಡಿಕೆ ನೀಡಿ ಆಹ್ವಾನಿಸಿದ್ದು ವಿಶೇಷವಾಗಿತ್ತು.

ಅಷ್ಟೇ ಅಲ್ಲದೆ ಆನೆಗುಂದಿ ಉತ್ಸವದ ಹಿನ್ನೆಲೆ ವಿಶೇಷ ಚೇತನರಿಗಾಗಿ ಕಬಡ್ಡಿ ಸ್ಪರ್ಧೆಯನ್ನು ಇಂದು ಆಯೋಜಿಸಲಾಗಿತ್ತು. ನಾನಾ ಜಿಲ್ಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು ಹುಮ್ಮಸ್ಸಿನಿಂದಾನೆ ಕಬಡ್ಡಿಯನ್ನು ಆಡಿದರು. ನಂತರ ಮಹಿಳಾ ವಾಲಿಬಾಲ್ ಪಂದ್ಯಾವಳಿಯನ್ನು ಆನೆಗುಂದಿಯಲ್ಲಿ ಆಯೋಜನೆ ಮಾಡಲಾಗಿತ್ತು. ಬೆಂಗಳೂರಿನಿಂದ ಬಂದಿದ್ದ ತಂಡದ ಜೋತೆಗೆ ಸ್ಥಳೀಯ ಗ್ರಾಮೀಣ ಭಾಗದ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.

ಈ ಸ್ಪರ್ಧೆಗಳಿಗೂ ಮುನ್ನ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಿದ ಜಿಲ್ಲಾಧಿಕಾರಿಗಳು ಕ್ರೀಡಾಪಟುಗಳ ಜೊತೆ ಒಂದು ಪಂದ್ಯವನ್ನು ಸಹ ಆಡಿದ್ದರು. ಜಿಲ್ಲಾಧಿಕಾರಿಗಳ ಜೊತೆಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಹಾಗೂ ಸಿಇಒ ಮತ್ತು ತಾಲೂಕು ಪಂಚಾಯ್ತಿ ಅಧಿಕಾರಿ, ತಹಶೀಲ್ದಾರ್ ಸೇರಿ ವಾಲಿಬಾಲ್ ಪಂದ್ಯವಳಿಯನ್ನು ಆಡಿದ್ದು ಕ್ರೀಡಾಸ್ಪೂರ್ತಿಗೆ ಸಾಕ್ಷಿಯಾಯಿತು.

Comments

Leave a Reply

Your email address will not be published. Required fields are marked *