ಬಹುಮತ ಸಾಬೀತು ಪಡಿಸದಿದ್ದರೆ ನಾನೇ ರಾಜೀನಾಮೆ ಕೊಡ್ತೀನಿ- ಸಿಎಂಗೆ ಸ್ಪೀಕರ್ ಎಚ್ಚರಿಕೆ

ಬೆಂಗಳೂರು: ವಿಶ್ವಾಸ ಮತಯಾಚನೆಯ ಚರ್ಚೆಯ ವೇಳೆ ಸದನದಲ್ಲಿ ಗದ್ದಲ ಎದ್ದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಕಲಾಪ ಮುಂದೂಡಿದ್ದು, ಇಂದು ರಾತ್ರಿ 9 ಗಂಟೆವರೆಗೆ ಡೆಡ್ ಲೈನ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

9 ಗಂಟೆಯಷ್ಟರಲ್ಲಿ ವಿಶ್ವಾಸ ಮತ ಸಾಬೀತು ಪಡಿಸಿ ಇಲ್ಲವೆಂದಲ್ಲಿ ನಾನೇ ಸ್ಪೀಕರ್ ಹುದ್ದೆಗೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಸಿಎಂ ಗೆ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಧಾನಸಭೆಯಲ್ಲಿ ನಡೆಯುತ್ತಿದ್ದ ದೋಸ್ತಿಗಳ ಚರ್ಚೆ ನಾಲ್ಕನೇ ದಿನವಾದ ಇಂದೂ ಮುಂದುವರಿದಿತ್ತು. ಇಂದು ಕೂಡ ದೋಸ್ತಿಗಳೇ ಸದನದಲ್ಲಿ ಚರ್ಚೆ ಮಾಡಿದ್ದಾರೆ. ಆದರೆ ಬಿಜೆಪಿ ಇಂದೂ ಮೌನಕ್ಕೆ ಶರಣಾಗಿತ್ತು.

ಈ ಹಿಂದೆ ರಾಜ್ಯಪಾಲರು ಗಡುವು ನೀಡಿದ್ದರೂ ದೋಸ್ತಿಗಳು ಕ್ಯಾರೇ ಎಂದಿಲ್ಲ. ಅಲ್ಲದೆ ವಿಧಾನಸಭೆಯಲ್ಲಿ ಚರ್ಚೆ ಮಾಡುವ ಮೂಲಕ ದಿನ ದೂಡಿದ್ದರು. ಆದರೆ ಈ ಚರ್ಚೆ ಇಂದು ಕೂಡ ಮುಂದುವರಿದಿದ್ದರಿಂದ ಸಿಟ್ಟಾದ ಸ್ಪೀಕರ್ ವಿಧಾನಸಭೆಯಿಂದ ಹೊರ ನಡೆದು 9 ಗಂಟೆಯ ವರೆಗೆ ಗಡುವು ನೀಡಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *