ಕಾರು ಡಿಕ್ಕಿಯಾಗಿ ಕರ್ತವ್ಯನಿರತ ಪೇದೆ, ಐಆರ್‌ಬಿ ಜವಾನ ಸಾವು

ಪಣಜಿ: ವೇಗವಾಗಿ ಬಂದ ಕಾರ್‍ವೊಂದು ಮಧ್ಯರಾತ್ರಿ ನಾಕಾಬಂದಿ ಕರ್ತವ್ಯ ನಿರತ ಕಾನ್‍ಸ್ಟೇಬಲ್ ಮತ್ತು (ಐಆರ್‌ಬಿ) ಭಾರತೀಯ ರಿಸರ್ವ್ ಬೆಟಾಲಿಯನ್ ಜವಾನ್‍ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ದಕ್ಷಿಣ ಗೋವಾದ ಸೆರೌಲಿಮ್ ಗ್ರಾಮದ ಪೊಲೀಸ್ ಚೆಕ್‍ ಪೋಸ್ಟ್‌ ನಲ್ಲಿ ನಡೆದಿದೆ.

ಕಾನ್‍ಸ್ಟೇಬಲ್ ಶೈಲೇಶ್ ಗಾಂವ್ಕರ್ ಮತ್ತು (ಐಆರ್‌ಬಿ) ಜವಾನ್ ವಿಶ್ವಾಸ್ ಡೇಕರ್ ಮೃತ ದುರ್ದೈವಿಗಳು. ಕಾನ್‍ಸ್ಟೇಬಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಜವಾನ್ ವಿಶ್ವಾಸ್‍ರನ್ನು (ಜಿಎಂಸಿ) ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸುವಾಗ ರಸ್ತೆ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಕಾರ್ ಚಾಲಕನನ್ನು ಸಿರಾಗ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ಬಿಜೆಪಿಯ ದ್ವೇಷದ ರಾಜಕಾರಣ ಭಾರತಕ್ಕೆ ಹಾನಿಕಾರಕ: ರಾಹುಲ್ ಗಾಂಧಿ

ಕೊಲ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಸೆರೌಲಿಮ್ ಗ್ರಾಮದಲ್ಲಿ ಕಾನ್‍ಸ್ಟೇಬಲ್, (ಐಆರ್‌ಬಿ) ಜವಾನ್ ಮತ್ತು ಹೋಮ್ ಗಾರ್ಡ್ ‘ನಾಕಾಬಂದಿ’ ಕರ್ತವ್ಯ ನಿರತರಾಗಿದ್ದಾಗ ಶನಿವಾರ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ಘಟನೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಮಲಯಾಳಂ ನಟ ಮಮ್ಮುಟ್ಟಿಗೆ ಕೋವಿಡ್-19 ಪಾಸಿಟಿವ್

Comments

Leave a Reply

Your email address will not be published. Required fields are marked *