ಮಹಾಶಿವರಾತ್ರಿಗೆ ಕೋಟಿಲಿಂಗೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜಾ ಅಲಂಕಾರ

ಕೋಲಾರ: ಇಂದು ಮಹಾಶಿವರಾತ್ರಿ. ರಾಜ್ಯದೆಲ್ಲೆಡೆ ಶಿವನ ನಾಮ ಜಪ, ವ್ರತಾಚರಣೆಯಲ್ಲಿ ಜನರು ತೊಡಗಿದ್ದಾರೆ. ಶಿವರಾತ್ರಿ ಪ್ರಯುಕ್ತ ಕೋಲಾರದ ಬಂಗಾರಪೇಟೆ ತಾಲೂಕು ಕಮ್ಮಸಂದ್ರ ಕೋಟಿಲಿಂಗೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜಾ ಅಲಂಕಾರಗಳನ್ನ ಮಾಡಲಾಗಿದೆ.

ಶಿವನ ನಾಮ ಸ್ಮರಿಸಿ ಕೋಟಿ ಶಿವಲಿಂಗ ದರ್ಶನ ಪಡೆದ್ರೆ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಇಂದು ನೆರೆಯ ಆಂಧ್ರ, ತಮಿಳುನಾಡು ಸೇರಿದಂತೆ ಇನ್ನಿತರ ರಾಜ್ಯಗಳಿಂದ ಭಕ್ತರು ಆಗಮಿಸಿ, ಪುಣ್ಯ ಕ್ಷೇತ್ರದಲ್ಲಿ ಶಿವರಾತ್ರಿ ಆಚರಿಸುತ್ತಾರೆ. ರಾತ್ರಿಯಿಂದ ವ್ರತಾಚರಣೆ ಮಾಡಿ, ನಂತರ ಇಲ್ಲಿ ಬಂದು ದೇವರಿಗೆ ಪೂಜೆ ಸಲ್ಲಿಸಿದ ನಂತರವೇ ಹಬ್ಬ ಆಚರಣೆ ಮಾಡೋದು ಇಲ್ಲಿನ ವಿಶೇಷ.

ಮತ್ತೊಂದು ವಿಶೇಷತೆ ಅಂದ್ರೆ 108 ಅಡಿ ಶಿವಲಿಂಗ ಹಾಗೂ ಬೃಹದಾಕಾರದ ಬಸವ ಮೂರ್ತಿ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಸಾವಿರಾರು ಜನ ಕೋಟಿಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಾರೆ.

Comments

Leave a Reply

Your email address will not be published. Required fields are marked *