ಆಸ್ತಿಗಾಗಿ ಅತ್ತೆಯನ್ನೇ ಮನೆಯಿಂದ ಹೊರದಬ್ಬಿದ ಸೊಸೆ – ಮಗನ ಹೆಂಡ್ತಿಯಿಂದಾಗಿ ಬೀದಿಗೆ ಬಿದ್ದ ವೃದ್ಧರು

ಬೆಂಗಳೂರು: ಆಸ್ತಿಗಾಗಿ ಅತ್ತೆ ಮಾವನನ್ನ ಸೊಸೆಯೇ ಮನೆಯಿಂದ ಹೊರದಬ್ಬಿದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕಾಸರಘಟ್ಟ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ನಿವಾಸಿಗಳಾದ ವೃದ್ದ ದಂಪತಿ ನಂಜಪ್ಪ ಮತ್ತು ಚಿಕ್ಕಮ್ಮ, ಆಸ್ತಿಗಾಗಿ ತನ್ನ ಎರಡನೇ ಮಗ ಸುರೇಶ್‍ಕುಮಾರ್ ಹೆಂಡತಿ ಮಂಗಳಾ ತಮ್ಮನ್ನು ಮನೆಯಿಂದ ಹೊರ ಹಾಕಿದ್ದಾಗಿ ಆರೋಪ ಮಾಡಿದ್ದಾರೆ. ವೃದ್ಧೆ ಚಿಕ್ಕಮ್ಮ ತನ್ನ ಕೈನಲ್ಲಿರುವ ಬೆರಳುಗಳನ್ನು ಕಳೆದುಕೊಂಡಿದ್ದು, ಕೈಲಾಗದ ಪರಿಸ್ಥಿತಿಯಲಿದ್ದಾರೆ. ವೃದ್ಧ ನಂಜಪ್ಪನ ಹೆಸರಿನಲ್ಲಿ 1 ಎಕರೆ 7 ಗುಂಟೆ ಜಮೀನಿದೆ. ಈ ಜಮೀನನ್ನು ಸೊಸೆ ಮಂಗಳ ಮಾರಾಟ ಮಾಡಲು ಇಂತಹ ಹೀನ ಕೃತ್ಯಕ್ಕೆ ಮುಂದಾಗಿದ್ದಾಳೆ ಎನ್ನಲಾಗಿದೆ. ಹೀಗಾಗಿ ಕಟ್ಟಿಕೊಂಡ ಗಂಡ ಹಾಗೂ ಅತ್ತೆ ಮಾವರನ್ನು ಸಹ ಮನೆಯಿಂದ ಹೊರಗೆ ಹಾಕಿದ್ದಲ್ಲದೆ ಥಳಿಸಿದ್ದಾಳೆ ಎಂದು ದಂಪತಿಗಳು ಬೀದಿ ಬದಿಯಲ್ಲಿ ಕಣ್ಣೀರಿಡುತ್ತಿದ್ದಾರೆ.

ವೃದ್ಧ ದಂಪತಿ ಡಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ, ಪೊಲೀಸರು ವೃದ್ಧ ದಂಪತಿಯನ್ನೆ ಹೀಯಾಳಿಸಿ, ನಿಮ್ಮ ಸಮಸ್ಯೆಯನ್ನ ನಾವು ಬಗೆಹರಿಸಲು ಆಗುವುದಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ರಕ್ಷಣೆ ನೀಡಬೇಕಾದ ಪೊಲೀಸರೇ ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಅಲ್ಲದೇ ಸೊಸೆ ಮಂಗಳಾ ಅತ್ತೆ ಮಾವ ಹಾಗೂ ಗಂಡನಿಗೆ ತನ್ನ ಸಹೋದರರಿಂದ ಕೊಲೆ ಮಾಡುವುದಾಗಿ ಧಮ್ಕಿ ಹಾಕಿಸುತ್ತಾರಂತೆ ಎಂದು ತಿಳಿಸಿದ್ದಾರೆ.

ಸೊಸೆಯ ಈ ಕೃತ್ಯದಿಂದ ಬೀದಿ ಪಾಲಾಗಿರುವ ವೃದ್ಧೆ ಸದ್ಯ ಮತ್ತೊಬ್ಬ ಮಗನ ಆಶ್ರಯ ಪಡೆದಿದ್ದು, ಬೆಂಗಳೂರಿನ ಜೀವನಕ್ಕೆ ಹೊಂದಿಕೊಳ್ಳಲಾಗದ ಇವರು ತಮ್ಮ ಜೀವನಕ್ಕಾಗಿ ಕೃಷಿ ಮಾಡಲು ಅವಕಾಶ ಕೊಡಬೇಕು ಹಾಗೂ ವಾಸಿಸಲು ಮನೆಯಲ್ಲಿ ಜಾಗ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *