ಸಭೆಯಲ್ಲಿ ಕೌನ್ಸಿಲರ್ ನೋಡಿ ಕಣ್ಣು ಮಿಟುಕಿಸಿದ ಮೇಯರ್ ಪುತ್ರ

-ನ್ಯಾಯಕ್ಕಾಗಿ ಸಿಎಂ ಮೊರೆಹೋದ ಕೌನ್ಸಿಲರ್

ಪಾಟ್ನಾ: ಬಿಹಾರದ ಪಾಟ್ನಾದ ವಾರ್ಡ್ ಕೌನ್ಸಿಲರ್ ಗೆ ಮೇಯರ್ ಪುತ್ರನೋರ್ವ ಹೊಡೆಯುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಸಂಬಂಧ ಕೌನ್ಸಿಲರ್ ನ್ಯಾಯಕ್ಕಾಗಿ ಸಿಎಂ ಮೊರೆ ಹೋಗಿದ್ದಾರೆ.

ಪಾಟ್ನಾ ನಗರ ನಿಗಮ ಮಂಡಳಿಯ ಸಭೆಯಲ್ಲಿ ಮೇಯರ್ ಸೀತಾ ಸಾಹು ಪುತ್ರ ಶಿಶಿರ್ ನನ್ನನ್ನು ನೋಡಿ ಕಣ್ಣು ಹೊಡೆಯುತ್ತಿದ್ದನು. ಈ ರೀತಿಯ ವರ್ತನೆ ತಪ್ಪು ಎಂದು ತಿಳಿ ಹೇಳಿದ್ರೂ ಆತನ ಯಾವ ಬದಲಾವಣೆಯೂ ಆಗಿಲ್ಲ ಎಂದು ವಾರ್ಡ್ ಸದಸ್ಯೆ ಪಿಂಕಿ ದೇವಿ ಆರೋಪಿಸಿದ್ದಾರೆ.

ನಗರ ನಿಗಮ ಮಂಡಳಿ ಸಭೆಯಲ್ಲಿ ಮೇಯರ್ ಪುತ್ರ ಶಿಶಿರ್ ನನ್ನನ್ನು ನೋಡಿ ಮೊದಲಿಗೆ ಮುಗುಳ್ನಗೆ ಬೀರಿ ಕಣ್ಣು ಹೊಡೆದನು. ಹೀಗೆ ಸತತವಾಗಿ ಕಣ್ಣು ಮಿಟುಕಿಸತೊಡಗಿದನು. ನಾನು ಆತನಿಗೆ ಎಚ್ಚರಿಕೆ ನೀಡಿದ್ರೂ ಆತ ಬದಲಾಗಿಲ್ಲ. ಹಾಗಾಗಿ ಮೇಯರ್ ಅವರಿಗೆ ದೂರು ನೀಡಿದೆ. ನಾನು ದೂರು ನೀಡಿದರೂ ಆತನ ಮುಖದಲ್ಲಿ ಯಾವುದೇ ಭಯ ಕಾಣಿಸಿಲಿಲ್ಲ ಎಂದಿದ್ದಾರೆ.

ದೂರು ಸಲ್ಲಿಸಿದ ಬಳಿಕ ಶಿಶಿರ್ ನಿಮಗೆ ತೋಚಿದ ಹಾಗೆ ನನಗೆ ಯಾವುದೇ ಭಯವಿಲ್ಲ ಎಂದು ಹೇಳಿದ. ಇತ್ತ ಮೇಯರ್ ಸಹ ನನ್ನ ಮೇಲೆಯೇ ಗಂಭೀರ ಆರೋಪ ಮಾಡಲಾರಂಭಿಸಿದರು. ಹಾಗಾಗಿ ಈ ಪ್ರಕರಣದಲ್ಲಿ ಸಿಎಂ ನಿತೀಶ್ ಕುಮಾರ್ ಮಧ್ಯಸ್ಥಿಕೆ ವಹಿಸಬೇಕೆಂದು ಪಿಂಕಿ ದೇವಿ ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *