ಶಿಕಾರಿಪುರದಿಂದ ಶಿವಮೊಗ್ಗದವರೆಗೆ ಕಾರಿನಲ್ಲೇ ಪ್ರಯಾಣಿಸಿದ ಹಾವು!

ಶಿವಮೊಗ್ಗ: ಶಿಕಾರಿಪುರದಿಂದ ಶಿವಮೊಗ್ಗದ ವರೆಗೆ ಕಾರಿನಲ್ಲೇ ಪ್ರಯಾಣಿಸಿದ್ದ ಹಾವನ್ನು ಉರಗ ತಜ್ಞರಾದ ಕಿರಣ್ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಶಿಕಾರಿಪುರ ತಾಲೂಕಿನ ಬಿದರಕೊಪ್ಪದ ಶಿವಕುಮಾರ್ ನಾಯ್ಕ ಎಂಬವರು ತಮ್ಮ ತೋಟದಿಂದ ಬಾಳೆಗೊನೆ ಹಾಕಿಕೊಂಡು ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದರು. ಶಿವಮೊಗ್ಗಕ್ಕೆ ತಲುಪುತ್ತಿದ್ದಂತೆ ಕಾರಿನಲ್ಲಿ ಹಾವು ಅವಿತುಗೊಂಡಿರುವುದು ಅವರ ಗಮನಕ್ಕೆ ಬಂದಿದೆ. ಕೂಡಲೇ ಉರಗ ತಜ್ಞರಿಗೆ ವಿಷಯ ಮುಟ್ಟಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಕಿರಣ್ ಎಂಬವರು, ಮೆಕ್ಯಾನಿಕ್ ಸಹಾಯದಿಂದ ಕಾರಿನ ಡ್ಯಾಶ್ ಬೋರ್ಡ್ ಹಾಗೂ ಸೀಟನ್ನು ತೆಗೆದು ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾವನ್ನು ಹತ್ತಿರದ ಕಾಡಿನಲ್ಲಿ ಬಿಟ್ಟಿದ್ದು, ಕಾಡಿನಲ್ಲಿ ಕಂಡು ಬರುವ ಕ್ಯಾಟ್ ಸ್ನೇಕ್ ಇದಾಗಿದೆ ಎಂದು ಕಿರಣ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *