ಕಪ್ಪೆಯನ್ನು ನುಂಗಲು ಹೋಗಿ ಗಾಳದಲ್ಲಿ ಸಿಲುಕಿ ಒದ್ದಾಡಿದ ನಾಗರಾಜ!

ಹಾವೇರಿ: ಮೀನಿನ ಗಾಳಕ್ಕೆ ಸಿಕ್ಕಿ ನಾಗರಹಾವು ವಿಲವಿಲ ಒದ್ದಾಡಿದ ಘಟನೆ ಜಿಲ್ಲೆಯ ಕಾಗಿನೆಲೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮೇವಿನ ಬಣವೆ ಬಳಿ ಮೀನಿನ ಗಾಳವೊಂದನ್ನು ಯಾರೋ ಎಸೆದು ಹೋಗಿದ್ದರು. ಈ ಮೀನಿನ ಗಾಳದಲ್ಲಿ ಕಪ್ಪೆಯೊಂದು ಸಿಲುಕಿ ಒದ್ದಾಡುತ್ತಿತ್ತು. ಕಪ್ಪೆಯನ್ನು ನೋಡಿದ ಹಾವು ಕಪ್ಪೆಯನ್ನು ನುಂಗಲು ಬಂದು ಗಾಳಕ್ಕೆ ಸಿಕ್ಕಿಹಾಕಿಕೊಂಡಿದೆ. ಪರಿಣಾಮ ಹಾವು ಸಾವು ಬದುಕಿನ ಮಧ್ಯೆ ಹೋರಾಡುತ್ತಿತ್ತು.

ಹಾವು ಮೀನಿನ ಗಾಳದಲ್ಲಿ ಸಿಲುಕಿದ್ದನ್ನು ಕಂಡ ಸ್ಥಳೀಯರು ಉರಗ ತಜ್ಞ ಮಣಿ ಎಂಬವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಮಣಿ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಗಾಳದಿಂದ ನಾಗರಹಾವನ್ನು ರಕ್ಷಿಸಿದ್ದಾರೆ.

https://youtu.be/usl_5aKr5sI

Comments

Leave a Reply

Your email address will not be published. Required fields are marked *