ನಾಗರ ಪಂಚಮಿ ದಿನವೇ ಮನೆಗೆ ಬಂದ ನಾಗಪ್ಪ!

ಧಾರವಾಡ: ನಾಗರ ಪಂಚಮಿ ದಿನ ಎಲ್ಲರೂ ಮಣ್ಣಿನ ಹುತ್ತಕ್ಕೆ ಹಾಲೆರೆಯುತ್ತಾರೆ. ಆದರೆ ನಿಜವಾಗಿಯೂ ಈ ಹಬ್ಬದ ದಿನವೇ ಮನೆಗೆ ನಾಗಪ್ಪ ಬಂದ್ರೆ ಹೇಗಾಗಬಾರದು ಹೇಳಿ.

ಹೌದು. ನಾಗರ ಪಂಚಮಿ ದಿನವೇ ಧಾರವಾಡದ ಗರಗ ಗ್ರಾಮದ ಮಡಿವಾಳೆಪ್ಪ ಎಂಬವರ ಮನೆಗೆ ನಾಗಪ್ಪ ಬಂದಿದ್ದಾನೆ. ಇದನ್ನ ಕಂಡು ಮೊದಲು ಭಯ ಪಟ್ಟ ಈ ಕುಟುಂಬದವರು ನಂತರ ಇದು ದೈವ ಸ್ವರೂಪ ಅಂತಾ ಹೇಳಿ ನಾಗಪ್ಪನಿಗೆ ಪೂಜೆ ಕೂಡ ಮಾಡಿದ್ದಾರೆ. ಪಂಚಮಿಯ ದಿನವೇ ಮನೆಗೆ ಈ ನಾಗಪ್ಪ ಬಂದಿದ್ದರಿಂದ ಆ ಮನೆ ಮಹಿಳೆಯರು ಆರತಿ ಬೆಳಗಿ ನಂತರ ಸ್ನೇಕ್ ತಜ್ಞ ಎಲ್ಲಪ್ಪ ಅವರನ್ನು ಕರೆಸಿ ನಾಗರಹಾವನ್ನ ಕಾಡಿಗೆ ಬಿಡಿಸಿದ್ದಾರೆ.

ಇದನ್ನ ನೋಡಲು ಗ್ರಾಮದ ಜನರು ಕೂಡಾ ಮುಗಿ ಬಿದ್ದಿದ್ರು. ಇನ್ನೂ ಕೆಲವರು ಈ ಎಲ್ಲಾ ದೃಶ್ಯವನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

ಹಾಗೆ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕೂಡ ನಾಗರ ಪಂಚಮಿ ಸಂಭ್ರಮ ಜೋರಾಗಿದೆ. ನಾಗಪ್ರತಿಷ್ಟಾ ಮಂಟಪದಲ್ಲಿ ನಾಗನ ವಿಗ್ರಹಕ್ಕೆ ಭಕ್ತರು ಹಾಲನ್ನು ಎರೆದರು. ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಹರಿದುಬರುತ್ತಿದೆ.

Comments

Leave a Reply

Your email address will not be published. Required fields are marked *