ಹಾವಿನ ಮೊಟ್ಟೆಗಳಿಗೆ ಕಾವು ಕೊಟ್ಟು 21 ಮರಿಗಳನ್ನು ಹೊರತೆಗೆದ್ರು ಧಾರವಾಡದ ಸ್ನೇಕ್ ಎಲ್ಲಪ್ಪ

ಧಾರವಾಡ: ಜಿಲ್ಲೆಯಲ್ಲಿ ಸ್ನೇಕ್ ಎಲ್ಲಪ್ಪ ಎಂಬವರು ಹಾವಿನ ಮೊಟ್ಟೆಗಳಿಗೆ ಕಾವು ಕೊಟ್ಟು 21 ಹಾವಿನ ಮರಿಗಳನ್ನ ತೆಗೆದಿದ್ದಾರೆ.

ಧಾರವಾಡ ನಗರದ ನೇಕಾರ ಓಣಿಯಲ್ಲಿ ವಾಸವಿರುವ ಸ್ನೇಕ್ ಎಲ್ಲಪ್ಪ, ಹಾವಿನ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಗಳನ್ನ ಹೊರ ತೆಗೆದಿದ್ದಾರೆ. ಕಳೆದ ತಿಂಗಳು ಎಲ್ಲಪ್ಪ ಜಿಲ್ಲೆಯ ಮರೇವಾಡ ಎಂಬ ಗ್ರಾಮದ ಮನೆಯೊಂದಕ್ಕೆ ಬಂದಿದ್ದ ಕೇರೆ ಹಾವನ್ನ ಹಿಡಿದು ತಂದಿದ್ದರು. ಆ ಹಾವಿನ ಹೊಟ್ಟೆಯಲ್ಲಿ 12 ಮೊಟ್ಟೆ ಇರುವುದನ್ನು ಅರಿತ ಅವರು, ಹಾವು ಮೊಟ್ಟೆ ಹಾಕಿದ ಮೇಲೆ ಆ ಹಾವನ್ನ ಕಾಡಿಗೆ ಬಿಟ್ಟು ಬಂದಿದ್ದರು.

ಇದೇ ರೀತಿ ಇನ್ನೊಂದು ಮನೆಯಲ್ಲಿ ಟ್ರಿನ್ ಕ್ಯಾಟ್ ಹಾವು ಸಿಕ್ಕಿದೆ. ಆ ಹಾವಿನ ಹೊಟ್ಟೆಯಲ್ಲಿ ಕೂಡಾ 9 ಮೊಟ್ಟೆಗಳು ಇದ್ದವು. ಆ ಎರಡು ಹಾವಿನ ಮೊಟ್ಟೆಯನ್ನ 30 ಡಿಗ್ರಿ ಉಷ್ಣಾಂಶ ಮೀರದಂತೆ ಟೆಂಪರೇಚರ್ ಮೈಂಟೇನ್ ಮಾಡಿದ ಎಲ್ಲಪ್ಪ, 21 ಹಾವಿನ ಮರಿಗಳನ್ನ ಮೊಟ್ಟೆಯಿಂದ ಹೊರ ತೆಗೆದಿದ್ದಾರೆ.

ಈ ಮರಿಗಳನ್ನ ಮತ್ತೆ ಕೆರೆಗೆ ಬಿಟ್ಟಿರುವ ಇವರು, ಇದೇ ರೀತಿ ಹಲವು ಬಾರಿ ಹಾವುಗಳನ್ನ ಹೊಡೆಯದಂತೆ ಜಾಗೃತಿ ಮೂಡಿಸುತ್ತಾರೆ. ಇನ್ನು ಯಾರಾದರೂ ಹಾವು ಇದೆ ಎಂದು ಕರೆದರೆ, ತಕ್ಷಣ ಅವರ ಮನೆಗೆ ಹೋಗಿ ಆ ಹಾವನ್ನ ರಕ್ಷಣೆ ಮಾಡುತ್ತಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *