ಶ್ರೀಲಂಕಾ ಬಾಂಬ್ ದಾಳಿ: ಬೆಂಗ್ಳೂರಿಗೂ ಆಗಮಿಸಿದ್ದ ಉಗ್ರರು

ಕೋಲಂಬೊ: ಶ್ರೀಲಂಕಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿ ರಕ್ತದೊಕುಳಿಯನ್ನ ಹರಿಸಿದ್ದ ಉಗ್ರರರು ತರಬೇತಿಗಾಗಿ ಭಾರತದ ಕೇರಳ, ಬೆಂಗಳೂರು ಹಾಗು ಕಾಶ್ಮೀರಕ್ಕೆ ಭೇಟಿ ನೀಡಿದ್ದರು ಎಂದು ಶ್ರೀಲಂಕಾ ಸೇನೆ ಮುಖ್ಯಸ್ಥರು ತಿಳಿಸಿದ್ದಾರೆ.

ಈಸ್ಟರ್ ದಾಳಿಯ ಕುರಿತು ತನಿಖೆ ನಡೆಸುತ್ತಿರುವ ಶ್ರೀಲಂಕಾ ತನಿಖಾ ತಂಡ ಈ ಕುರಿತು ಮಾಹಿತಿ ಪಡೆದಿದ್ದರು. ದಾಳಿ ಮುಖ್ಯ ಸಂಚುಕೋರ ಅಬ್ದುಲ್ ಜಮೀಲ್ ಲತೀಫ್ ಸೇರಿದಂತೆ ದಾಳಿಕೋರರು ಕೇರಳದ ಕೆಲ ಪ್ರದೇಶಗಳು, ಕರ್ನಾಟಕದ ಬೆಂಗಳೂರು, ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನ 2015ರಲ್ಲಿ ಸಿರಿಯಾಗೆ ತೆರಳಿ ಐಸಿಸ್ ಉಗ್ರ ಸಂಘಟನೆ ಸೇರ್ಪಡೆ ಆಗಿದ್ದರು. ಆ ಬಳಿಕ ಇತರೇ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದರು ಎಂದು ಸೇನೆ ಮುಖ್ಯಸ್ಥರು ತಿಳಿಸಿದ್ದಾರೆ.

ಶ್ರೀಲಂಕಾ ಸೇನಾ ಮುಖ್ಯಸ್ಥರಾಗಿರುವ ಮಹೇಶ್ ಸೇನಾ ನಾಯಕ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಬೇರೆ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸಿವುದು ಹಾಗೂ ದಾಳಿ ನಡೆಸಲು ಹೆಚ್ಚಿನ ತರಬೇತಿ ಪಡೆಯುವುದು ಅವರ ಉದ್ದೇಶವಾಗಿತ್ತು ಎಂಬುದು ಸದ್ಯಕ್ಕೆ ತಿಳಿದು ಬಂದಿದೆ ಎಂದಿದ್ದಾರೆ. ಅಲ್ಲದೇ ಸಂವಹನ ಕೊರತೆಯಿಂದಲೇ ದಾಳಿಗಳನ್ನು ತಡೆಯಲು ವಿಫಲರಾಗಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

ಈಸ್ಟರ್ ಭಾನುವಾರದ ದಿನ ಸಂಭವಿಸಿದ್ದ ಆತ್ಮಾಹುತಿ ದಾಳಿಯಲ್ಲಿ ಒಟ್ಟು 250 ಮಂದಿ ಬಲಿಯಾಗಿದ್ದರು. ಇದರಲ್ಲಿ ಕರ್ನಾಟಕದ 7 ಮಂದಿ ಕೂಡ ಪ್ರಾಣ ತೆತ್ತಿದ್ದರು. ಈ ದಾಳಿ ಬಗ್ಗೆ ಭಾರತ ರಾಷ್ಟ್ರೀಯ ತನಿಖಾ ಸಂಸ್ಥೆ ಮೂರು ಬಾರಿ ಎಚ್ಚರಿಕೆಯ ಸಂದೇಶ ರವಾನೆ ಮಾಡಿತ್ತು. ಅಲ್ಲದೇ ಮೌಲ್ವಿ ಜಹ್ರಾನ್ ಬಿನ್ ಹಶೀಮ್ ವಿಡಿಯೋ ಮಾಹಿತಿ ಅನ್ವಯ ಸೂಕ್ಷ್ಮ ರೀತಿಯಲ್ಲಿ ಮಾಹಿತಿ ರವಾನೆ ಮಾಡಿತ್ತು. ಆದರೆ ಎಚ್ಚರಿಕೆಯ ಬಳಿಕವೂ ಶ್ರೀಲಂಕಾ ಪೊಲೀಸರು ದಾಳಿಯನ್ನ ತಡೆಯಲು ವಿಫಲರಾಗಿದ್ದರು. ಭದ್ರತೆ ವಿಫಲವಾದ ಕಾರಣ ಶ್ರೀಲಂಕಾ ಆಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಅಸಮಧಾನ ವ್ಯಕ್ತಪಡಿಸಿದ್ದರು.

Comments

Leave a Reply

Your email address will not be published. Required fields are marked *