ಗೌರಿ ಕೇಸ್ – ಎರಡೂವರೆ ವರ್ಷದ ಬಳಿಕ ರಿವಾಲ್ವರ್ ನಾಶ ಮಾಡಿದವ ಸಿಕ್ಕಿಬಿದ್ದ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊರ್ವ ಆರೋಪಿಯನ್ನು ಎಸ್‍ಐಟಿ(ವಿಶೇಷ ತನಿಖಾ ದಳ) ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹತ್ಯೆ ನಡೆದು ಎರಡೂವರೆ ವರ್ಷದ ಬಳಿಕ ಬಂಧನವಾಗಿದೆ.

ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್‍ಗಳನ್ನ ನಾಶ ಮಾಡಿದ್ದ 18ನೇ ಆರೋಪಿ ರಿಶಿಕೇಶ್ ದೇವಾಡಿಕರ್(44) ನನ್ನು ಜಾರ್ಖಂಡಿನ ಧನ್‍ಬಾದ್ ಜಿಲ್ಲೆಯ ಕತ್ರಾದಲ್ಲಿ ಬಂಧಿಸಲಾಗಿದೆ. ಬಂಧಿಸಿರುವ ಎಸ್‍ಐಟಿ ಶುಕ್ರವಾರ ಸ್ಥಳೀಯ ಕೋರ್ಟಿಗೆ ಹಾಜರುಪಡಿಸಿ ಬಳಿಕ ಟ್ರಾನ್ಸಿಟ್ ವಾರೆಂಟ್ ಮೇಲೆ ಬೆಂಗಳೂರಿಗೆ ಕರೆತರಲು ತಯಾರಿಯನ್ನು ಮಾಡಿಕೊಂಡಿದೆ.

ಸಾಕ್ಷ್ಯ ನಾಶ ಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ರಿಷಿಕೇಶ್ ಕೃತ್ಯಕ್ಕೆ ಬಳಸಿದ್ದ ನಾಲ್ಕು ಪಿಸ್ತೂಲ್‍ಗಳ ನಾಶ ಮಾಡಿದ್ದ. ಪಿಸ್ತೂಲ್‍ಗಳ ಬ್ಯಾರಲ್ ಮತ್ತು ಸ್ಲೈಡ್ ಬದಲಿಸಿ ನೀರಿಗೆ ಎಸೆದು ನಾಶ ಮಾಡಿದ್ದಾನೆ. ಮುಂಬೈ-ನಾಸಿಕ್ ಹೈವೆಯ ಉಲ್ಲಾಸ್ ನದಿಗೆ ಎಸೆದು ಸಾಕ್ಷ್ಯ ನಾಶ ಮಾಡಿದ್ದ ವಿಚಾರ ತನಿಖೆಯಿಂದ ತಿಳಿದು ಬಂದಿತ್ತು.

Comments

Leave a Reply

Your email address will not be published. Required fields are marked *