ಇಂದಿನಿಂದ ಶ್ರೀಮನ್ನಾರಾಯಣನ ದರ್ಶನ- ಪ್ರೀಮಿಯರ್ ಶೋನಲ್ಲಿ ರಕ್ಷಿತ್ ಶೆಟ್ಟಿಗೆ ಶಹಬ್ಬಾಷ್

ಬೆಂಗಳೂರು: `ಅವನೇ ಶ್ರೀಮನ್ನಾರಾಯಣ’ನ ಅವತಾರದಲ್ಲಿ ಲಕ್ಷ್ಮೀ ಸಮೇತ ಇಂದು ರಕ್ಷಿತ್ ಶೆಟ್ಟಿ ರಾಜಾದ್ಯಂತ ಥಿಯೇಟರ್‍ಗೆ ಎಂಟ್ರಿಕೊಡುತ್ತಿದ್ದಾರೆ. ವಿಭಿನ್ನ ಕಥೆಯ ಮೂಲಕ ಅದೃಷ್ಟ ಪರೀಕ್ಷೆಗಿಳಿದಿರುವ ಸಿಂಪಲ್‍ಸ್ಟಾರ್ ಬಂಪರ್ ಫಲಿತಾಂಶಕ್ಕೆ ಎದುರು ನೋಡುತ್ತಿದ್ದಾರೆ.

ಹೌದು. ಇಂದಿನಿಂದ ಶ್ರೀಮನ್ನಾರಾಯಣ ದರ್ಶನ ಕೊಡುತ್ತಿದ್ದಾನೆ. ಹ್ಯಾಟ್ಸಪ್ ಸಾಂಗ್ ಮೂಲಕ ಕಿಕ್ಕೇರಿಸಿದ್ದ ರಕ್ಷಿತ್ ಶೆಟ್ಟಿಯ ಕಲ್ಪನೆಯ ಕೂಸು ಅವನೇ ಶ್ರೀಮನ್ನಾರಾಯಣ ಇಂದು 10 ಗಂಟೆಯಿಂದ ಬೆಳ್ಳಿತೆರೆಯ ಮೇಲೆ ರಾರಾಜಿಸಲಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿರೋ ಸಿಂಪಲ್ ಸ್ಟಾರ್ ನ ಸಕ್ಸಸ್ ಯಾತ್ರೆ ಇಂದು 450ಕ್ಕೂ ಹೆಚ್ಚಿನ ಚಿತ್ರಮಂದಿರಲ್ಲಿಂದು ಮೆರವಣಿಗೆ ಹೊರಡಲಿದೆ.

ಅಂದಹಾಗೇ ಅವನೇ ಶ್ರೀಮನ್ನಾರಾಯಣನ ರಕ್ಷಿತ್ ಶೆಟ್ಟಿಯ ಮೂರು ವರ್ಷದ ತಪಸ್ಸು. ಈಗಾಗಲೇ ಇನ್ಸ್ ಸ್ಟಾಗ್ರಾಂ, ಫೇಸ್‍ಬುಕ್, ಟ್ವಿಟ್ಟರ್ ನಲ್ಲಿ ಶ್ರೀಮನ್ನಾರಾಯಣ ಭಜನೆ ಜೋರಾಗಿದೆ. ಚಿತ್ರಮಂದಿರದ ಮುಂದೆ ಅವನೇ ಶ್ರೀಮನ್ನಾರಾಯಣನ ಕಟೌಟ್‍ಗಳು ರಾರಾಜಿಸ್ತಿದ್ದು, ಗ್ರ್ಯಾಂಡಾಗಿ ನಾರಾಯಣನನ್ನು ವೆಲ್‍ಕಂ ಮಾಡಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ.

ಗುರುವಾರ ಊರ್ವಶಿ ಚಿತ್ರಮಂದಿರದಲ್ಲಿ ಅದ್ಧೂರಿ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಕಲರ್‍ಫುಲ್ ಪ್ರಿಮಿಯರ್ ಶೋನಲ್ಲಿ ಶಿವರಾಜ್ ಕುಮಾರ್, ರವಿಚಂದ್ರನ್, ರಿಷಬ್ ಶೆಟ್ಟಿ, ಅನೂಪ್ ಭಂಡಾರಿ, ನಿರೂಪ್ ಭಂಡಾರಿ, ಗುರುದತ್ತ್, ವಸಿಷ್ಠ, ಇಮ್ರಾನ್ ಸರ್ದಾರಿಯಾ, ಕೆ.ಮಂಜು ಸೇರಿದಂತೆ ಚಿತ್ರರಂಗ ಕಲಾವಿದರು, ತಂತ್ರಜ್ಞರು ಭಾಗಿಯಾಗಿದ್ರು. ಚಿತ್ರ ನೋಡಿದವರೆಲ್ಲಾ ಶೆಟ್ರಿಗೆ ಹ್ಯಾಟ್ಸಪ್ ಹೇಳಿದ್ದಾರೆ.

1980ರ ಕಾಲಘಟ್ಟದ ಕಥೆ ಇದಾಗಿದೆ. ಸೂಪರ್ ಹಿಟ್ ಚಿತ್ರ ಕಿರಿಕ್ ಪಾರ್ಟಿ ವೇಳೆ ಹೊಳೆದ ಅವನೇ ಶ್ರೀಮನ್ನಾರಾಯಣ ಕಥೆಯನ್ನ ಸ್ವತಃ ರಕ್ಷಿತೇ ಬರೆದಿದ್ದಾರೆ. ರಕ್ಷಿತ್ ಶೆಟ್ಟಿ ಚಿತ್ರ ಅಂದ್ರೆ ಅದರಲ್ಲೇನೋ ವಿಶೇಷ ಇದ್ದೇ ಇರುತ್ತೆ. ಫ್ಯಾನ್ ಇಂಡಿಯಾ ರಿಲೀಸ್ ಆಗಲಿರುವ ಚಿತ್ರಕ್ಕೆ ಸಚಿನ್ ನಿರ್ದೇಶನವಿದೆ, ರಕ್ಷಿತ್ ಶೆಟ್ಟಿ- ಶಾನ್ವಿ ಜೋಡಿಯನ್ನು ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಳ್ಳುವ ಕಾತರತೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಪ್ರಕಾಶ್ ಗೌಡ ನಿರ್ಮಿಸಿರೋ 30 ಕೋಟಿ ವೆಚ್ಚದ `ಅವನೇ ಶ್ರೀಮನ್ನಾರಾಯಣ’ ದರ್ಶನಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಒಟ್ಟಿನಲ್ಲಿ ಸಿನಿರಸಿಕರೇ ಚರಿತ್ರೆ ಸೃಷ್ಠಿಸುವ ಅವತಾರದಲ್ಲಿ `ಅವನೇ ಶ್ರೀಮನ್ನಾರಾಯಣ’ ಮತ್ತು ಅಮರಾವತಿಯಿಂದ ಬಂದಿರೋ ಲಕ್ಷ್ಮೀಯ ದರ್ಶನನ್ನ ಥಿಯೇಟರ್‍ನಲ್ಲೇ ಪಡೆಯಿರಿ.

Comments

Leave a Reply

Your email address will not be published. Required fields are marked *