ಏನಮ್ಮಾ ಯಾರಾದ್ರೂ ಫೋನ್ ಮಾಡಿದ್ರೆ ರಿಸೀವ್ ಮಾಡಲ್ವಾ..?- ಪಿಎಸ್‍ಐಗೆ ಸಿದ್ದರಾಮಯ್ಯ ತರಾಟೆ

ಬಾಗಲಕೋಟೆ: ಬಾದಾಮಿ ಮಹಿಳಾ ಪಿಎಸ್‍ಐಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನೇತ್ರಾವತಿ ಪಾಟಿಲ್ ತರಾಟೆಗೆ ಒಳಗಾದ ಪಿಎಸ್‍ಐ. ಏನಮ್ಮಾ.. ಯಾರಾದರೂ ಫೋನ್ ಮಾಡಿದರೆ ನೀನು ಫೋನ್ ತೆಗೆಯಲ್ವಾ..? ಇಮ್ಮೀಡಿಯಟ್ ಆಗಿ ಫೋನ್ ರಿಸೀವ್ ಮಾಡ್ಬೇಕು. ಹಾಂ… ನಿಮಗೆ ಫೋನ್ ಕೊಟ್ಟಿರೋದು ಯಾಕೆ ಮತ್ತೆ..? ಅಟೆಂಡ್ ಮಾಡೋಕಲ್ವಾ? ಇಮ್ಮೀಡಿಯಟ್ ಆಗಿ, ಫೋನ್ ತೆಗೆಯಬೇಕು. ಯಾರೇ ಮಾಡಿದದು ಕೂಡ ಕೂಡಲೇ ಫೋನ್ ರಿಸೀವ್ ಮಾಡಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಅಲ್ಲದೆ ಅವರ ಸಮಸ್ಯೆ ಕೇಳಬೇಕು. ಅದು ಲೀಗಲ್ ಇದೆಯಾ ಇಲ್ಲೀಗಲ್ ಇದೆಯಾ ನೋಡಬೇಕು. ಕಾನೂನು ಬಿಟ್ಟು ಏನೂ ಮಾಡಬಾರದು. ಕಾನೂನು ಪ್ರಕಾರವೇ ಎಲ್ಲ ಮಾಡಬೇಕು ಎಂದು ಪಿಎಸ್‍ಐಗೆ ಸಿದ್ದರಾಮಯ್ಯ ಬುದ್ಧಿವಾದ ಹೇಳಿ ಕಳುಹಿಸಿದ ಪ್ರಸಂಗ ನಡೆಯಿತು. ಇದನ್ನೂ ಓದಿ: ಬಿಜೆಪಿ ಅಧಿಕೃತ ಸಭೆ ಅಲ್ಲ ಎಂದಿದ್ದ ಬಾಲಚಂದ್ರ ಜಾರಕಿಹೊಳಿಗೆ ಕತ್ತಿ ಟಾಂಗ್

Comments

Leave a Reply

Your email address will not be published. Required fields are marked *