ಮೊಟ್ಟೆ ಹೊಡೆದ ಸಂಪತ್ ಕಾಂಗ್ರೆಸ್‌ನವನಲ್ಲ – ಪಕ್ಕಾ RSS ಕಾರ್ಯಕರ್ತ: ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ: ಮಡಿಕೇರಿಯಲ್ಲಿ ನನ್ನ ಕಾರಿನ ಮೇಲೆ ಮೊಟ್ಟೆ ಹೊಡೆದ ಸಂಪತ್ ಕಾಂಗ್ರೆಸ್ ಕಾರ್ಯಕರ್ತ ಅಲ್ಲ. ಅವನು ಪಕ್ಕಾ ಆರ್‌ಎಸ್‌ಎಸ್‌ ಕಾರ್ಯಕರ್ತ ಎಂದು ಚಿಕ್ಕಬಳ್ಳಾಪುರ ದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಮೊಟ್ಟೆ ಹೊಡೆದದ್ದು ಕಾಂಗ್ರೆಸ್ ಕಾರ್ಯಕರ್ತ ಸಂಪತ್ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಕಾರ್ಯಕರ್ತ ಎಂದು ಅವನ ಕೈಯಲ್ಲಿ ಹೇಳಿಸಿದ್ದಾರೆ. ಹಾಗಾದ್ರೆ ಅವನು ಆರ್‌ಎಸ್‌ಎಸ್‌ ಶಾಖಾ ಸಭೆಗೆ ಯಾಕೆ ಹೋಗಿದ್ದ? ಅದು 15-20 ವರ್ಷದ ಹಿಂದೆ ಅಲ್ಲ ಮೊನ್ನೆ ಹೋಗಿದ್ದಾನೆ ಎಂದರು. ಇದನ್ನೂ ಓದಿ: ಮಧ್ಯಾಹ್ನ ಮಾಂಸಾಹಾರ ತಿಂದು ಸಂಜೆ ದೇವಸ್ಥಾನಕ್ಕೆ ಹೋಗಬಾರದಾ : ಸಿದ್ದರಾಮಯ್ಯ ಪ್ರಶ್ನೆ

ಅವನು ಜೀವಿಜಯ ಜೊತೆ ಬಂದಿದ್ದ ಅಂತ ಹೇಳಿದ್ದಾನೆ. ಹಾಗಾದ್ರೆ ಜೀವಿಜಯ ಹೇಳಬೇಕಲ್ವಾ? ಜೀವಿಜಯ ಹೇಳ್ತಾನೆ ಅವನು ಯಾರು ಅಂತ ನಾನು ನೋಡೆ ಇಲ್ಲ. ಅವನು ಆರ್‌ಎಸ್‌ಎಸ್‌ನವನು ಅಂತಾನೆ. ನಾನು ಜೀವಿಜಯನ ನಂಬಬೇಕಾ ಅಥವಾ ಟೂ ಥರ್ಡ್ ಸ್ಟೇಟ್ ಮೆಂಟ್ ಒಪ್ಪಿಕೊಳ್ಳಬೇಕಾ? ಬಲವಂತವಾಗಿ ಅವನ ಕೈಯಲ್ಲಿ ಹೇಳಿಸಿದ್ದಾರೆ. ಅವನು ಪಕ್ಕಾ ಆರ್‌ಎಸ್‌ಎಸ್‌ ಕಾರ್ಯಕರ್ತ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಮಧ್ಯಾಹ್ನ ನಾಟಿ ಕೋಳಿ ಊಟ ಮಾಡಿ ಸಂಜೆ ದೇವಸ್ಥಾನಕ್ಕೆ ಭೇಟಿ ಕೊಟ್ರಾ ಸಿದ್ದರಾಮಯ್ಯ?

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *