ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರ ಆಗುತ್ತಾ?

-ಸ್ಪೀಕರ್ ಅಂಗಳದಲ್ಲಿ ಜಾಧವ್ ಚೆಂಡು!

ಬೆಂಗಳೂರು: ಚಿಂಚೋಳಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರೋ ಉಮೇಶ್ ಜಾಧವ್, ಬುಧವಾರ ಕಲಬುರಗಿಯಲ್ಲಿ ನಡೆಯೋ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ಕಮಲ ಹಿಡಿಯಲು ಸಜ್ಜಾಗಿದ್ದಾರೆ. ಈ ಸಮಯದಲ್ಲಿ ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರವಾಗುತ್ತಾ ಎಂಬ ಅನುಮಾನಗಳು ಮೂಡಿವೆ.

ಉಮೇಶ್ ಜಾಧವ್ ವಿರುದ್ಧ ವಾಗ್ದಾಳಿ ನಡೆಸಿರೋ ಮಾಜಿ ಸಿಎಂ ಸಿದ್ದರಾಮಯ್ಯ, ಜಾಧವ್ ಸೇರಿ ನಾಲ್ವರ ಶಾಸಕರನ್ನು ಅನರ್ಹಗೊಳಿಸುವಂತೆ ದೂರು ನೀಡಿದ್ದೇವೆ. ಅದು ಇತ್ಯರ್ಥವಾಗುವವರೆಗೂ ಜಾಧವ್ ರಾಜೀನಾಮೆ ಅಂಗೀಕಾರವಾಗುವಂತಿಲ್ಲ. ಈ ಬಗ್ಗೆ ಸ್ಪೀಕರ್ ಏನು ನಿರ್ಣಯ ತೆಗೆದುಕೊಳ್ಳುತ್ತಾರೋ ನೋಡೋಣ. ಜಾಧವ್ ಆಪರೇಷನ್ ಕಮಲದ ದಾಳಕ್ಕೆ ಸಿಲುಕಿರೋದು ಸ್ಪಷ್ಟವಾಗಿ ಗೊತ್ತಾಗ್ತಿದೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯರ ಹೇಳಿಕೆಗೆ ಕಲಬುರಗಿಯಲ್ಲಿ ತಿರುಗೇಟು ನೀಡಿದ ಉಮೇಶ್ ಜಾಧವ್, ನಾಳೆ ಬಿಜೆಪಿ ಸೇರುತ್ತಿದ್ದು, ಯಾರೇನೇ ಮಾಡಿದರೂ ಏನು ಆಗೋದಿಲ್ಲ ಅಂದ್ರು. ಸ್ಪೀಕರ್ ಪ್ರಾಮಾಣಿಕರಿದ್ದು, ಅವರು ನಮ್ಮ ರಾಜೀನಾಮೆ ಅಂಗೀಕಾರ ಮಾಡುವ ಬಗ್ಗೆ ವಿಶ್ವಾಸವಿದೆ. ಉಮೇಶ್ ಜಾಧವ್, ಬಿಜೆಪಿಗೆ ಸೇರ್ಪಡೆ ಆಗ್ತಿರೋದನ್ನು ಕಲಬರಗಿಯ ಬಿಜೆಪಿ ಮುಖಂಡ ಸುನಿಲ್ ವಲ್ಯಾಪುರೆ ಸ್ವಾಗತಿಸಿದ್ದಾರೆ. ನನಗೆ ಯಾವ ಅಸಮಾಧಾನವೂ ಇಲ್ಲ ಎಂದಿದ್ದಾರೆ.

ಉಮೇಶ್ ಜಾಧವ್ ಭವಿಷ್ಯ ಸ್ಪೀಕರ್ ರಮೇಶ್ ಕುಮಾರ್ ಕೈಯಲ್ಲಿದೆ. ರಮೇಶ್ ಕುಮಾರ್ ಕೈಗೊಳ್ಳುವ ನಿರ್ಧಾರದ ಮೇಲೆ ನಾಳೆ ಉಮೇಶ್ ಜಾಧವ್, ಬಿಜೆಪಿ ಸೇರ್ಪಡೆ ಆಗ್ತಾರೋ ಇಲ್ವೋ ಅನ್ನೋದು ನಿರ್ಧಾರ ಆಗಲಿದೆ.

ಸ್ಪೀಕರ್ ಅಂಗಳದಲ್ಲಿ ಚೆಂಡು: ನಾಳೆಯೊಳಗೆ ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡುತ್ತಾರಾ ಎಂಬ ಅನುಮಾನ ಮೂಡಿದೆ. ಈ ಮೊದಲೇ ಕಾಂಗ್ರೆಸ್ ಜಾಧವ್ ಸೇರಿ ನಾಲ್ವರ ಶಾಸಕರನ್ನು ಅನರ್ಹಗೊಳಿಸುವಂತೆ ದೂರು ನೀಡಿದೆ. ಕಾಂಗ್ರೆಸ್ ದೂರಿನ ಆಧಾರದ ಮೇಲೆ ಶಾಸಕರಿಗೆ ನೋಟಿಸ್ ನೀಡಬೇಕಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಬಗ್ಗೆ ಎಲ್ಲರಿಂದ ವಿವರಣೆ ಪಡೆಯಬೇಕಿದೆ. ಅನರ್ಹತೆ ದೂರಿನ ವಿಚಾರಣೆಯ ಕಾರಣ ನೀಡಿ ರಾಜೀನಾಮೆ ಸ್ವೀಕೃತಿ ವಿಳಂಬವಾಗುವ ಸಾಧ್ಯತೆಗಳಿವೆ. ಒಂದು ವೇಳೆ ರಾಜೀನಾಮೆ ಅಂಗೀಕಾರವಾಗದೇ ಇದ್ದಲ್ಲಿ ಉಮೇಶ್ ಜಾಧವ್ ಬಿಜೆಪಿ ಸೇರೋದು ವಿಳಂಬ ಆಗಬಹುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *