ಸ್ನೇಹಿತನಿಗಾಗಿ ಟ್ವೀಟ್ ಮೂಲಕ ಮೋದಿಗೆ ಮನವಿ ಮಾಡಿದ ಸಾಗರದ ಯುವಕ

ಶಿವಮೊಗ್ಗ: ವಿದೇಶದಲ್ಲಿ ಅಪಘಾತಕ್ಕೀಡಾಗಿರುವ ಸ್ನೇಹಿತನಿಗಾಗಿ ಸಾಗರದ ಯುವಕನೋರ್ವ ಮೋದಿ ಅವರಿಗೆ ಟ್ವೀಟ್ ಮಾಡುವ ಮೂಲಕ ಸಹಾಯ ಕೇಳಿದ್ದಾನೆ.

ಸೌದಿ ಅರೇಬಿಯಾದಲ್ಲಿ ಕಳೆದ 6 ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಯುವಕ ಅಖ್ತರ್ ಅಹಮ್ಮದ್ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಈ ಯುವಕನಿಗೆ ಸಹಾಯ ಮಾಡುವಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ಯುವಕ ಶಕೀಲ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾನೆ.

ಉತ್ತರ ಪ್ರದೇಶ ಲಕ್ನೋ ಮೂಲದ ಅಖ್ತರ್ ಅಹಮ್ಮದ್ ಹಾಗೂ ಸಾಗರದ ಶಕೀಲ್ ಅಹಮ್ಮದ್ ಎಂಬುವರು ಸೌದಿ ಅರೇಬಿಯಾದ ರಿಯಾದ್ ನಗರದಲ್ಲಿ ಹೋಟೆಲ್‍ವೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಇಬ್ಬರು ಸ್ವದೇಶಕ್ಕೆ ಬಂದು ಮತ್ತೆ ವಾಪಸ್ಸಾಗಿದ್ದರು. ಆದರೆ ಕಳೆದ 6 ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಲಕ್ನೋದ ಅಖ್ತರ್ ಅಹಮ್ಮದ್ ತೀವ್ರ ಗಾಯದಿಂದ ನರಳುತ್ತಿದ್ದಾರೆ. ಹೀಗಾಗಿ ಅವರನ್ನು ಸ್ವದೇಶಕ್ಕೆ ಕರೆಯಿಸಿಕೊಳ್ಳಲು ಪ್ರಧಾನಿಯವರು ನೆರವು ನೀಡಲಿ ಎಂದು ಶಕೀಲ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *