ಬೆಂಗಳೂರು: ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿರುವ ಪುಣ್ಯ ಕ್ಷೇತ್ರ, ಬಯಲು ಸೀಮೆಯಲ್ಲಿದ್ದರು ಮಲೆನಾಡ ಸೊಬಗನ್ನು ಶಿವಗಂಗೆ ಗಿರಿಯಲ್ಲಿ ಕಾಣಬಹುದು. ಶಿವಗಂಗೆ ಸಂಪೂರ್ಣ ಚುಮುಚುಮು ಚಳಿ ಹಾಗೂ ಮಂಜಿನಿಂದ ಆವೃತ್ತವಾಗಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಇತಿಹಾಸ ಪ್ರಸಿದ್ದ, ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ಮಂಜಿನ ಮಳೆಯಂತೆ ಆವೃತ್ತವಾಗಿರುವ ದೃಶ್ಯ ಸೆರೆಯಾಗಿದೆ. ಎತ್ತ ನೋಡಿದ್ರೂ ಮಂಜು, ಮುಗಿಲೆತ್ತರ ನಿಂತಿರುವ ಗಿರಿ ಶಿಖರ. ಇಂತಹ ದೃಶ್ಯಗಳನ್ನ ನೋಡೋಕೆ ಕರಾವಳಿ ಪ್ರದೇಶಕ್ಕೆ ಹೋಗಬೇಕಾಗುತ್ತದೆ. ಆದರೆ ಬೆಂಗಳೂರಿನ ಕೂಗಳತೆ ದೂರದಲ್ಲೇ ಇಂತಹ ರೋಮಾಂಚನವನ್ನು ಕಣ್ತುಂಬಿಕೊಳ್ಳಬಹುದು.

ಗಿರಿಯ ತುತ್ತತುದಿ ಮಂಜಿನಿಂದ ಸ್ನಾನ ಮಾಡಿಸಿದ ರೀತಿ ಗಿರಿಯ ವಿಹಂಗಮ ನೋಟ ಕಂಡುಬಂದಿದೆ. ಒಟ್ಟಾರೆ ಆಕರ್ಷಕವಾದ ಗಿರಿಯ ಮೇಲ್ಭಾಗದಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದ್ದು, ಚಾರಣಿಗರಿಗೆ ಮಲೆನಾಡಿನ ಅನುಭವ ಶಿವಗಂಗೆ ಬೆಟ್ಟದಲ್ಲಿ ಸಿಗುವುದರಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=y9NLIZzBlj0&feature=youtu.be

Leave a Reply