ನಾನು ಆ್ಯಸಿಡ್ ಹಾಕೋಕೆ ಯುವತಿನೇ ಕಾರಣ – ಕಿರಾತಕ ನಾಗೇಶ್ ಆರೋಪ

Young, Acid, Nagesh,

ಬೆಂಗಳೂರು: ನಾನು ಆ್ಯಸಿಡ್ ಹಾಕುವುದಕ್ಕೆ ಯುವತಿನೇ ಕಾರಣ ಎಂದು ಆ್ಯಸಿಡ್ ನಾಗೇಶ್ ಉಡಾಫೆ ಮಾತುಗಳನ್ನು ಆಡಿದ್ದಾನೆ.

ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ಕಳೆದ 11 ದಿನಗಳಿಂದ ಆಶ್ರಮವೊಂದರಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ನಾಗೇಶ್‍ನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆ್ಯಸಿಡ್ ನಾಗೇಶ್ ನಾನೇನು ತಪ್ಪು ಮಾಡಿದೆ ಸರ್.. ಆ್ಯಸಿಡ್ ತಾನೇ ಹಾಕಿದ್ದೇನೆ ಸಣ್ಣ ತಪ್ಪು ಮಾಡಿದ್ದೇನೆ ಅಷ್ಟೇ. ಆಯ್ತು ನನ್ನನ್ನು ಬಿಡಿ. ಠಾಣೆಗೆ ಬರುತ್ತೇನೆ ಎಂದು ಪೊಲೀಸರ ಜೊತೆಗೆ ಬೆಂಗಳೂರಿಗೆ ಬಂದಿದ್ದಾನೆ. ಇದನ್ನೂ ಓದಿ: ನನ್ನ ಕಣ್ಣ ಮುಂದೆಯೇ ಅವನಿಗೆ ಶಿಕ್ಷೆ ಆಗಬೇಕು – ಸಂತ್ರಸ್ತ ಯುವತಿ ಕಣ್ಣೀರು

ಇದೇ ವೇಳೆ ಆ್ಯಸಿಡ್ ಹಾಕುವುದಕ್ಕೂ ಮುನ್ನ ಹೆದರಿಸುವುದಕ್ಕೆ ಮಾತ್ರ ಆ್ಯಸಿಡ್ ಹಾಕುತ್ತೇನೆ ಅಂದಿದ್ದೆ. ಆದರೆ ಅವಳು ಇದೇ ವಿಚಾರವನ್ನು ದೊಡ್ಡದು ಮಾಡಿ ಅವರ ದೊಡ್ಡಪ್ಪನ ಮೂಲಕ ನಮ್ಮ ಅಣ್ಣನಿಗೆ ಹೇಳಿಸಿದ್ದಳು. ನಮ್ಮ ಅಣ್ಣ ನನಗೆ ಬೈದಿದ್ದ, ಇದರಿಂದ ಕೋಪಗೊಂಡ ಆ್ಯಸಿಡ್ ಹಾಕಿಯೇ ಬಿಡೋಣ ಅಂತಾ ತೀರ್ಮಾನ ಮಾಡಿದೆ ಎಂದು ಪೊಲೀಸರ ಮುಂದೆ ಆ್ಯಸಿಡ್ ನಾಗನ ಸ್ಟೋಟಕ ಹೇಳಿಕೆ ನೀಡಿದ್ದಾನೆ. ಇದನ್ನೂ ಓದಿ: ಆ್ಯಸಿಡ್ ನಾಗನನ್ನು ಹಿಡಿಯಲು ಸ್ವತಃ ಖಾವಿ ಧರಿಸಿದ್ದ ಪೊಲೀಸರು

ಆ್ಯಸಿಡ್ ಹಾಕುವ ಹಿಂದಿನ ದಿನ ಅವಳನ್ನ ಭೇಟಿಯಾಗಿದ್ದೆ. ಏಳು ವರ್ಷದಿಂದ ಕಾಯುತ್ತಿದ್ದೇನೆ. ಮದುವೆಯಾಗೋಣ ಅಂತಾ ಕೇಳಿದೆ. ನನ್ನನ್ನು ಅಣ್ಣ ಅಂದುಬಿಟ್ಟಳು. ಜೊತೆಗೆ ನನಗೆ ಮದುವೆ ಸೆಟ್ಟಾಗಿದೆ ಅಂದಳು. ಇದರಿಂದ ನನಗೆ ಕೋಪ ಬಂದಿತ್ತು. ಅವತ್ತೇ ಆ್ಯಸಿಡ್ ಖರೀದಿ ಮಾಡಿದ್ದೆ. ಆದರೆ ಹಾಕಬೇಕು ಅಂದುಕೊಂಡಿರಲಿಲ್ಲ. ಯಾವಾಗ ಅವರ ಮನೆಯವರು ಆ್ಯಸಿಡ್ ಹಾಕುವುದಕ್ಕೆ ಪ್ರಚೋದನೆ ಮಾಡಿದರೋ ಆಗ ಹಾಕಿದೆ ಎಂದು ಸಂತ್ರಸ್ತೆ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಆರೋಪಿಸಿದ್ದಾನೆ.

Comments

Leave a Reply

Your email address will not be published. Required fields are marked *