ನಾಲ್ವರು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- 9 ತಿಂಗಳ ಕಂದಮ್ಮನನ್ನು ಕತ್ತು ಹಿಸುಕಿ ಕೊಂದಿದ್ದ ತಾಯಿ

– ಮಗುವನ್ನು ಕೊಂದು ಬಳಿಕ ತಾನು ಆತ್ಮಹತ್ಯೆ

ಬೆಂಗಳೂರು: ನಾಲ್ವರು ಆತ್ಮಹತ್ಯೆ ಹಾಗೂ ಒಂದು ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಗೆದಷ್ಟು ಮಾಹಿತಿ ಲಭ್ಯವಾಗುತ್ತಿದೆ. ತಾಯಿ ಸಿಂಧು ರಾಣಿಯೇ 9 ತಿಂಗಳ ತನ್ನ ಮಗುವನ್ನು ಕತ್ತುಹಿಸುಕಿ ಕೊಲೆ ಮಾಡಿ, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.


ತಿಗಳರಪಾಳ್ಯದಲ್ಲಿ ಸಾಮೂಹಿಕ ಆತ್ಮಹತ್ಯೆ ಕೇಸ್ ಬೆಚ್ಚಿ ಬೀಳಿಸಿತ್ತು. ಒಬ್ಬೊಬ್ಬರು ಒಂದೊಂದು ಕಾರಣ ನೀಡಿ ಕುಟುಂಬಸ್ಥರು ಸಾಯಲು ನಿರ್ಧರಿಸಿದ್ದರು. ಒಬ್ಬ ಅಪ್ಪ ಸರಿ ಇಲ್ಲ ಅಂದ, ಮತ್ತಿಬ್ಬಿರು ಗಂಡ ಸರಿ ಇಲ್ಲ ಅಂದಿದ್ದರು. ಹೀಗೆ ಒಂದೀಡಿ ಕುಟುಂಬವೇ ಸಾವನ್ನಪ್ಪಿತ್ತು. ಆದರೆ ಇದೀಗ ಸತ್ತವಳ ಕಟುಕುತನ ಹೇಗಿತ್ತು ಎಂಬುದು ಅನಾವರಣ ಆಗಿದೆ. ಸಿಂಧು ರಾಣಿ ತಾನು ಸಾಯುವ ಮೊದಲು 9 ತಿಂಗಳ ತನ್ನ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂಬುದು ಇದೀಗ ಬಹಿರಂಗವಾಗಿದೆ. ಇದನ್ನೂ ಓದಿ: ನನ್ನ ಮಗ ಡೆತ್ ನೋಟ್‍ನಲ್ಲಿ ಹೇಳಿರುವುದೆಲ್ಲಾ ಸುಳ್ಳು: ಶಂಕರ್


ಮಗುವಿನ ಕತ್ತಿನ ಬಳಿ ಹುಳು ಬಂದಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣ ಆಗಿತ್ತು. ಅನುಮಾನ ಈಗ ದೃಢ ಆಗಿದ್ದು, ವೈದ್ಯಕೀಯ ಮೂಲಗಳು ಇದು ಕೊಲೆ ಎಂದು ಮಾಹಿತಿ ನೀಡಿವೆ. ಪೊಲೀಸರಿಗೆ ಈ ಮಾಹಿತಿ ಮೌಖಿಕವಾಗಿ ಬಂದಿದ್ದು, ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಐವರು ಆತ್ಮಹತ್ಯೆ ಪ್ರಕರಣ- ಶಂಕರ್ ಮನೆಯಲ್ಲಿ 15 ಲಕ್ಷ ನಗದು, ಎರಡು ಕೆಜಿಯಷ್ಟು ಚಿನ್ನಾಭರಣ ಪತ್ತೆ


ವೈದ್ಯಕೀಯ ಮಾಹಿತಿ ಏನು?
ಘಟನೆ ಬೆಳಕಿಗೆ ಬರುವುದಕ್ಕೂ ಮೊದಲು ಐದು ದಿನದ ಹಿಂದೆಯೇ ಮಗು ಸಾವನ್ನಪ್ಪಿದೆ. ಸಿಂಧು ರಾಣಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಮಗುವಿನ ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿರೋದು ಸಾಬೀತಾಗಿದೆ. ಕತ್ತಿನ ಭಾಗದಲ್ಲಿ ಹುಳು ಬಿದ್ದಿದ್ದು, ಇದರ ಆಧಾರದ ಮೇಲೆ ವೈದ್ಯಕೀಯ ತಂಡ ಮಗುವಿನ ಕೊಲೆ ಆಗಿರುವುದನ್ನು ಪತ್ತೆ ಹಚ್ಚಿದೆ. ಮನುಷ್ಯನ ಸಾವಿನ ಬಳಿಕ ದೇಹದಲ್ಲಿ ಕಾಣಿಸುವ ಹುಳುಗಳ ಆಧಾರದ ಮೇಲೆ ಎಷ್ಟು ದಿನದ ಹಿಂದೆ ಸಾವನ್ನಪ್ಪಿದೆ ಎಂದು ಗೊತ್ತಾಗಿದೆ. ಇದನ್ನೂ ಓದಿ: ಐವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಡೆತ್ ನೋಟ್‍ನಲ್ಲಿ ಅಪ್ಪನ ವಿರುದ್ಧವೇ ಮಕ್ಕಳ ಆರೋಪ

Comments

Leave a Reply

Your email address will not be published. Required fields are marked *