‘ಪದ್ಮಾವತಿ’ ಚಿತ್ರದ ನಂತರ ತನ್ನ ಹೆಸರನ್ನೇ ಬದಲಿಸಿಕೊಂಡ ಶಾಹಿದ್!

ಮುಂಬೈ: ಶಾಹಿದ್ ಕಪೂರ್ ಪದ್ಮಾವತಿ ಸಿನಿಮಾ ಬಳಿಕ ತಮ್ಮ ಹೆಸರನ್ನೇ ಬದಲಿಸಿಕೊಂಡಿದ್ದಾರೆ. ಈಗ ಅವರು ತಮ್ಮ ಹೆಸರನ್ನು ಮಹಾರಾವಲ್ ರತನ್ ಸಿಂಗ್ ಎಂದು ಬದಲಾಯಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲೂ ಕೂಡ ಮಹಾರಾವಲ್ ರತನ್ ಸಿಂಗ್ ಎಂದು ಹಾಕಿಕೊಂಡಿದ್ದಾರೆ.

ಪದ್ಮಾವತಿ ಚಿತ್ರದಲ್ಲಿ ಶಾಹಿದ್ ಕಪೂರ್ ರಾಣಿ ಪದ್ಮಾವತಿಯ ಪತಿ ರಾಜಾ ಮಹಾರಾವಲ್ ರತನ್ ಸಿಂಗ್ ಪಾತ್ರದಲ್ಲಿ ನಟಿಸುತ್ತಿದ್ದು ಈ ಪಾತ್ರ ಅವರಿಗೆ ತುಂಬಾ ಇಷ್ಟವಾಗಿರೋ ಕಾರಣ ತಮ್ಮ ಟ್ವಿಟ್ಟರ್ ನಲ್ಲಿನ ಹೆಸರನ್ನೇ ಚೇಂಜ್ ಮಾಡಿದ್ದಾರೆ.

ಪದ್ಮಾವತಿ ಚಿತ್ರದಲ್ಲಿ ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ, ರಾಜಾ ಮಹಾರಾವಲ್ ರತನ್ ಸಿಂಗ್ ಆಗಿ ಶಾಹಿದ್ ಕಪೂರ್ ಕಾಣಿಸಿಕೊಂಡರೆ, ಅಲ್ಲಾವುದ್ದಿನ್ ಖಲ್ಜಿಯಾಗಿ ರಣ್‍ವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಸ್ಟಾರ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿದ್ದು ಡಿಸೆಂಬರ್ 1 ರಂದು ದೇಶಾದ್ಯಾಂತ ಬಿಡುಗಡೆಯಾಗಲಿದೆ.

https://twitter.com/deepikapadukone/status/910668862336544768

https://twitter.com/deepikapadukone/status/910673498376364033

https://twitter.com/deepikapadukone/status/912123492979564544

https://twitter.com/deepikapadukone/status/912118818012512256

Comments

Leave a Reply

Your email address will not be published. Required fields are marked *