ಗೌತಮ್ ಗಂಭೀರ್ ಓರ್ವ ‘ಅವಿವೇಕಿ’: ಶಾಹಿದ್ ಅಫ್ರಿದಿ

ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದಿಂದ ಭಾರೀ ಅಂತರದಲ್ಲಿ ಎದುರಾಳಿ ವಿರುದ್ಧ ಜಯ ಪಡೆದು ಸಂಸದರಾಗಿ ಆಯ್ಕೆ ಆಗಿದ್ದು, ಇದೇ ಸಂದರ್ಭದಲ್ಲಿ ಗಂಭೀರ್ ರನ್ನ ಒಬ್ಬ ಅವಿವೇಕಿ, ಆತನಿಗೆ ಪ್ರಜ್ಞೆ ಏನಾದರು ಇದೆಯಾ ಎಂದು ಪಾಕಿಸ್ತಾನ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಟೀಕಿಸಿದ್ದಾರೆ.

ಮಾಧ್ಯಮ ಪತ್ರಿಕಾಗೋಷ್ಠಿ ವೇಳೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅಫ್ರಿದಿ, ಆತಗೇನಾದರೂ ಪ್ರಜ್ಞೆ ಇದೆಯಾ? ಗಂಭೀರ್ ಒಬ್ಬ ಅವಿವೇಕಿ, ವಿದ್ಯಾವಂತರು ಇಂತಹ ಮಾತುಗಳನ್ನ ಆಡುತ್ತರಾ? ಎಂದಿದ್ದಾರೆ.

ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ, ಪಾಕಿಸ್ತಾನದ ವಿರುದ್ಧ ಆಡಬಾರದು ಎಂಬ ಗಂಭೀರ್ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಅಫ್ರಿದಿ ಪ್ರತಿಕ್ರಿಯೆ ನೀಡಿದ್ದಾರೆ. ಪುಲ್ವಾಮಾ ದಾಳಿ ಬಳಿಕ ದೇಶಾದ್ಯಂತ ಪಾಕಿಸ್ತಾನ ನಡುವೆ ಯಾವುದೇ ಕ್ರಿಕೆಟ್ ಸಂಬಂಧಗಳನ್ನು ಬೆಳೆಸುವುದು ಬೇಡ. ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲೂ ಟೀಂ ಇಂಡಿಯಾ, ಪಾಕ್ ವಿರುದ್ಧ ಆಡಬಾರದು ಎಂಬ ಮಾತು ಕೇಳಿ ಬಂದಿತ್ತು.

ಈ ಹಿಂದೆಯೂ ಕೂಡ ಅಫ್ರಿದಿ ಹಾಗೂ ಗಂಭೀರ್ ನಡುವೆ ಟ್ವಿಟ್ಟರ್ ವಾರ್ ನಡೆದಿತ್ತು, ಅಫ್ರಿದಿ ತಮ್ಮ ಆಟೋಬಯೋಗ್ರಾಫಿಯಲ್ಲಿ ಗಂಭೀರ್ ವಿರುದ್ಧ ಕಿಡಿಕಾರಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ್ದ ಗಂಭೀರ್, ಅಫ್ರಿದಿ ನೀನೊಬ್ಬ ವಿಚಿತ್ರ ವ್ಯಕ್ತಿ. ವೈದ್ಯಕೀಯ ಕಾರಣಕ್ಕಾಗಿ ನಾವು ಈಗಲೂ ಪಾಕಿಸ್ತಾನಿಯರಿಗೆ ವೀಸಾ ನೀಡುತ್ತಿದ್ದೇವೆ. ನಿನ್ನನ್ನು ನಾನೇ ಸ್ವತಃ ಮನೋತಜ್ಞರ ಬಳಿ ಕರೆದ್ಯೊಯುತ್ತೇನೆ ಎಂದು ವ್ಯಂಗ್ಯವಾಡಿದ್ದರು. ಗಂಭೀರ್ ಹಾಗೂ ಅಫ್ರಿದಿ ನಡುವೆ ಹಲವು ಕಿತ್ತಾಟಗಳು ನಡೆದಿದ್ದು, ಕ್ರೀಡಾಂಗಣದ ಹೊರಗು, ಒಳಗೂ ಈ ಜಗಳಕ್ಕೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *