ಉಪಕದನ ಘೋಷಣೆ ಬೆನ್ನಲ್ಲೇ `ಕೈ’ನಲ್ಲಿ ಅಂತರ್ ಯದ್ಧದ ಭೀತಿ- ಮಾಜಿ ಸಿಎಂರಿಂದ 7 ಮೆನ್ ಆರ್ಮಿ ಸಿದ್ಧ

ಬೆಂಗಳೂರು: ಉಪ ಚುನಾವಣೆ ಘೋಷಣೆಯಾಗುತಿದ್ದಂತೆ ಕಾಂಗ್ರೆಸ್‍ನಲ್ಲಿ ಅಂತರ್ ಯುದ್ಧದ ಭೀತಿ ಎದುರಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಾಗಲಕೋಟೆಯ ಜಮಖಂಡಿಯಲ್ಲಿ ಕಾಂಗ್ರೆಸ್ಸಿಗರಿಂದಲೇ ಪ್ಲಾನ್ ಮಾಡಲಾಗ್ತಿದೆ.


ಸಿದ್ದು ವಿರೋಧಿಗಳೆಲ್ಲಾ ಖೆಡ್ಡಾ ತೋಡಲು ಒಳಗೊಳಗೆ ತಂತ್ರ ಹೂಡ್ತಿದ್ದಾರೆ. ಒಳ ರಾಜಕೀಯ ಅರಿತ ಸಿದ್ದರಾಮಯ್ಯ ಅವರು ಸೆವೆನ್ ಮೆನ್ ಆರ್ಮಿಯನ್ನು ಸಿದ್ಧಪಡಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

 ಜಮಖಂಡಿಗೆ ಸಿದ್ದರಾಮಯ್ಯ ‘7’ ಮೆನ್ ಆರ್ಮಿ!
– ಲಿಂಗಾಯತರೇ ಪ್ರಮುಖವಾಗಿರೋ ಜಮಖಂಡಿ ಸಿದ್ದರಾಮಯ್ಯ ಅವರಿಗೆ ಸವಾಲು
– ಲಿಂಗಾಯತ ವಿರೋಧಿ ಹಣೆಪಟ್ಟಿ ಹೊತ್ತಿರೋ ಸಿದ್ದರಾಮಯ್ಯ
– ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಪ್ರಾಬಲ್ಯ ಕಡಿಮೆ ಮಾಡಲು ತಂತ್ರಗಾರಿಕೆ
– ಲಿಂಗಾಯತ, ಕುರುಬ, ದಲಿತ, ನಾಯಕ ಕಾಂಬಿನೇಷನ್
– ಲಿಂಗಾಯತ- ಎಂ.ಬಿ. ಪಾಟೀಲ್, ಎಸ್.ಆರ್. ಪಾಟೀಲ್,
– ಎಸ್ ಸಿ ಸಮುದಾಯ- ಎಚ್.ಸಿ. ಮಹದೇವಪ್ಪ, ಹೆಚ್. ಆಂಜನೇಯ,
– ನಾಯಕ ಸಮುದಾಯ- ಜಾರಕಿಹೊಳಿ ಫೀಲ್ಡಿಗಿಳಿಸಲು ತಂತ್ರಗಾರಿಕೆ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *