ಬಿಎಸ್‍ವೈ ಹುಟ್ಟಿದ್ದಾಗ ಅವರ ನಾಲಿಗೆ ಮೇಲಿಂದ ವಿಷ ತೆಗೆದಿಲ್ಲ: ಖರ್ಗೆ

ಕಲಬುರಗಿ: ಹುಟ್ಟಿದ ಮಗುವಿಗೆ ಹೊಟ್ಟೆಯೊಳಗೆ ವಿಷ ಹೋಗಬಾರದು ಅಂತಾ ನಾಲಿಗೆ ಮೇಲಿನ ವಿಷ ತೆಗೆಯುತ್ತಾರೆ. ಬಿಎಸ್ ಯಡಿಯೂರಪ್ಪ ಹುಟ್ಟಿದ್ದಾಗ ಅವರ ನಾಲಿಗೆ ಮೇಲಿಂದ ವಿಷ ತೆಗೆದಿರಲಿಕ್ಕಿಲ್ಲ. ಅದಕ್ಕೆ ಹೋದಕಡೆಯಲ್ಲ ಸುಳ್ಳು ಹೇಳುತ್ತಾ ತಿರುಗಾಡುತ್ತಿರುತ್ತಾರೆ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯವಾಡಿದ್ದಾರೆ.

ಅಫಜಲ್ಪುರದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಗ್ಗೆ ಬಿಎಸ್‍ವೈ ಕೀಳಾಗಿ ಮಾತನಾಡುತ್ತಾರೆ. ಆರ್ ಎಸ್‍ ಎಸ್ ಹಿನ್ನೆಲೆಯುಳ್ಳವರ ಬಾಯಲ್ಲಿ ಇದೆಂಥ ಮಾತು, ಇದೆನಾ ಶಿಸ್ತಿನ ಪಕ್ಷ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

ಅಹಿಂದ ವರ್ಗದ ಜನರ ಬಗ್ಗೆ ಕಾಳಜಿಯುಳ್ಳ ಏಕೈಕ ಪಕ್ಷ ಕಾಂಗ್ರೆಸ್. ಸಿದ್ದರಾಮಯ್ಯ ಮತ್ತೆ ಸಿಎಂ ಆಗಿ ನಿಮಗೆ ಎಲ್ಲಾ ಸೌಲಭ್ಯ ಕೊಡುತ್ತಾರೆ. ಈಗಿರುವ ಸೌಲಭ್ಯಗಳು ಮುಂದುವರೆಯುತ್ತವೆ. ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತಾ ಗುತ್ತೇದಾರ್ ನನ್ನ ಮೇಲೆ ಸಿಟ್ಟು ಮಾಡಿಕೊಂಡರು. ಸಿಎಂ ಸಿದ್ದರಾಮಯ್ಯ ಮೇಲೆ ಯಾಕೆ ಅವರು ಸಿಟ್ಟು ಮಾಡಿಕೊಳ್ಳಬೇಕಿತ್ತು ಎಂದು ಪ್ರಶ್ನಿಸಿದರು.

ಬಿಜೆಪಿಯವರು ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಅಂಬೇಡ್ಕರ್ ನೀಡಿದ ಹಕ್ಕುಗಳನ್ನ ಕಿತ್ತುಕೊಳ್ಳಲು ಬಿಜೆಪಿಯವರು ಹೊರಟಿದ್ದಾರೆ. ಮೋದಿ, ಶಾ ಹೋದ ಕಡೆಯಲ್ಲ ಸುಳ್ಳು ಹೇಳೋದೆ ಮಾಡುತ್ತಿದ್ದಾರೆ. ಹರ್ ಏಕ್ ಜೇಬ್‍ಮೆ ಪಂದ್ರ ಪಂದ್ರ ಲಾಕ್ ಜಮಾ ಕರ್ತೆ ಅಂತಾ ಮೋದಿ ಹೇಳಿದ್ದರು. ಲೇಕಿನ್ ಏಕ್ ಪೈಸೆಬಿ ಜಮಾ ನಹಿ ಹುವಾ ರೈತರಿಗಾಗಿ ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದ್ದಾರೆ. ಆದರೆ ಕೇಂದ್ರ ಮಾಡಲಿಲ್ಲ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

Comments

Leave a Reply

Your email address will not be published. Required fields are marked *