ನೆಚ್ಚಿನ ಶಿಕ್ಷಕನ ವರ್ಗಾವಣೆ – ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬಯ್ಯಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಮ್ಮ ನೆಚ್ಚಿನ ಶಿಕ್ಷಕರೊಬ್ಬರಿಗೆ ಬಿಳ್ಕೋಡುವ ಮೂಲಕ ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತು ಶಿಕ್ಷಕನ ಮೇಲಿನ ಪ್ರೀತಿಯನ್ನು ಮೆರೆದರು.

ತಿಪ್ಪಣ್ಣ ತಾವರೆಗೆರಾ ವರ್ಗಾವಣೆಯಾದ ಕನ್ನಡ ಶಿಕ್ಷಕ. ತಿಪ್ಪಣ್ಣರವರು ಶಾಲೆಯ ವಿಷಯಗಳಲ್ಲದೇ ಗ್ರಾಮದ ಅಭಿವೃದ್ಧಿಗೂ ಶ್ರಮಿಸುತ್ತಿದ್ದರು. ಅವರು ಕನ್ನಡ ಬೋಧನೆ ಜೊತೆಗೆ ವಿದ್ಯಾರ್ಥಿಗಳ ಸ್ನೇಹ ಜೀವಿಯಾಗಿದ್ದರು. ನೆಚ್ಚಿನ ಶಿಕ್ಷಕ ತಿಪ್ಪಣ್ಣರ ಕೈ ಕಾಲು ಬಿದ್ದು ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದು, 14 ವರ್ಷದ ಶಿಕ್ಷಕನ ಸೇವೆಗೆ ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ‘ಆಕ್ಟ್ -1978’ ಸಿನಿಮಾ ಪ್ರೇರಣೆ – ಬ್ಯಾಂಕ್ ಮುಂದೆ ಪ್ರತಿಭಟಿಸಿ ನ್ಯಾಯ ಪಡೆದ ಮಹಿಳೆ

ವಿದ್ಯಾರ್ಥಿಗಳ ದು:ಖ ಸಹಿಸಲಾಗದೆ ತಿಪಣ್ಣರವರು ಸಹ ಕಣ್ಣೀರಿಟ್ಟರು. ಬಯ್ಯಾಪುರ ಗ್ರಾಮದಿಂದ ಕೊಪ್ಪಳದ ಕುಷ್ಟಗಿ ತಾಲೂಕಿನ ತಾವರಗೆರಾ ಬಾಲಕಿಯರ ಶಾಲೆಗೆ ತಿಪ್ಪಣ್ಣ ವರ್ಗಾವಣೆಯಾಗಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಟೈರ್ ಬ್ಲಾಸ್ಟ್- ಇಬ್ಬರು ಸಾವು, ಮತ್ತಿಬ್ಬರು ಗಂಭೀರ

 

Comments

Leave a Reply

Your email address will not be published. Required fields are marked *